ಬೆಂಗಳೂರು : ಖಾಕಿ ಮೇಲೆ ಕೈ ಹಾಕಿ ಮಸಣ ಸೇರಿದ್ನಾ ದರ್ಶನ್.! ಲಾಕಪ್ನಲ್ಲಿ ಹೆಣವಾದ್ನಾ .!?
ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪದ ಮೇಲೆ ವಶಕ್ಕೆ ಪಡೆದಿದ್ದ ದರ್ಶನ್ ಎಂಬ ಯುವಕ, ಪೊಲೀಸ್ ಕಸ್ಟಡಿಯಲ್ಲಿದ್ದ ಬಳಿಕ ಪುನರ್ವಸತಿ ಕೇಂದ್ರದಲ್ಲಿ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆಯಾಗಿರುವುದು ದೃಢಪಟ್ಟಿದ್ದು, ವಿವೇಕನಗರ ಪೊಲೀಸರ ವಿರುದ್ಧ ಲಾಕಪ್ ಡೆತ್ ಆರೋಪ ಕೇಳಿಬಂದಿದೆ….!!
news.ashwasurya.in
ಅಶ್ವಸೂರ್ಯ/ಬೆಂಗಳೂರು : ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪದ ಮೇಲೆ ವಶಕ್ಕೆ ಪಡೆದಿದ್ದ ದರ್ಶನ್ ಎಂಬ ಯುವಕ, ಪೊಲೀಸ್ ಕಸ್ಟಡಿಯಲ್ಲಿದ್ದ ನಂತರದಲ್ಲಿ ಪುನರ್ವಸತಿ (ರಿಹ್ಯಾಬಿಲಿಟೇಶನ್)
ಕೇಂದ್ರಕ್ಕೆ ಸೇರಿಸಿದ ಸಂಧರ್ಭದಲ್ಲಿ ಉಸಿರು ಚಲ್ಲಿದ್ದಾನೆ ಎನ್ನುವ ಮಾತು ಕೇಳಿಬರುತ್ತಿದೆ.! ಮರಣೋತ್ತರ ಪರೀಕ್ಷೆಯಲ್ಲಿ ದರ್ಶನ್ ಮೇಲೆ ಹಲ್ಲೆಯಾಗಿರುವುದು ದೃಢಪಟ್ಟಿದ್ದು.! ವಿವೇಕನಗರ ಪೊಲೀಸರ ವಿರುದ್ಧ ಲಾಕಪ್ ಡೆತ್ ಆರೋಪ ಕೇಳಿಬಂದಿದೆ.!? ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ದರ್ಶನ್ ಎಂಬ ಯುವಕನನ್ನು ಪೊಲೀಸರು ನ.15ರಂದು ಪೊಲೀಸ್ ಸ್ಟೇಷನ್ಗೆ ಕರೆತಂದಿದ್ದರಂತೆ. ಈ ವೇಳೆ ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ ಎರಡು ದಿನ ಕಸ್ಟಡಿಯಲ್ಲಿಟ್ಟುಕೊಂಡು ಆತನನ್ನು ಮನಸ್ಸೊ ಇಚ್ಚೆ ಥಳಿಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಇದಾದ ಬಳಿಕ ಆತನನ್ನು ಬಿಟ್ಟು ಕಳಿಸಿದ್ದು, ಮಾದನಾಯಕನಹಳ್ಳಿ ಬಳಿ ಇರುವ ಯುನಿಟಿ ರಿಹ್ಯಾಬಿಲಿಟೇಶನ್
ಸೆಂಟರ್ಗೆ (ಪುನರ್ವಸತಿ ಕೇಂದ್ರದಲ್ಲಿ) ಸೇರಿಸಲಾಗಿತ್ತು. ಆದರೆ, ದರ್ಶನ್ ಮೊನ್ನೆ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆಯ ವೇಳೆ ಮೃತ ದರ್ಶನ್ ಮೇಲೆ ಹಲ್ಲೆ ನಡೆಸಿರೋದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಇದೀಗ ವಿವೇಕನಗರ ಠಾಣೆ ಪೊಲೀಸರ ವಿರುದ್ದ ಲಾಕಪ್ ಡೆತ್ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
ಪೊಲೀಸರ ಕಸ್ಟಡಿಯಲ್ಲಿದ್ದವನನ್ನು
ರಿಹ್ಯಾಬಿಲಿಟೇಶನ್
ಸೆಂಟರ್ಗೆ ಸೇರಿಸಲು ಕಾರಣವೇನು.? ಕಸ್ಟಡಿಯಲ್ಲಿ ಮನಸ್ಸೊ ಇಚ್ಚೆ ಥಳಿಸಿ ಅತ ಸಾಯುತ್ತಾನೆ ಎನ್ನುವಾಗ ಎಸ್ಕೇಪ್ ಪ್ಲಾನ್ ಮಾಡಿದ್ರಾ..? ಯುವಕನ ಮೇಲೆ ಖಾಕಿ ಸಾಯುವ ಮಟ್ಟಿಕ್ಕೆ ಬಲ ಪ್ರಯೋಗ ಮಾಡಿದ್ರಾ.!? ಪೊಲೀಸರಿಂದ ಥಳಿತಕ್ಕೆ ಒಳಗಾಗಿದ್ದ ಯುವಕ ದರ್ಶನ್ ಸಾವಿನ ಮನೆಯ ಕದ ತಟ್ಟಿದ್ನಾ.!? ಬೆಂಗಳೂರಿನ ಅಡಕಮಾರನಹಳ್ಳಿ ರಿಹ್ಯಾಬ್ ಸೆಂಟರ್ನಲ್ಲಿ ದರ್ಶನ್ ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ :
ಸೊಣ್ಣೇನಹಳ್ಳಿಯ ಯುವಕ ದರ್ಶನ್ (22) ಸಾವಿಗೆ ಸಂಭವಿಸಿದಂತೆ ನವೆಂಬರ್ 15ರಂದು ಕುಡಿದು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದ ದರ್ಶನ್ಗೆ ಪೊಲೀಸರು ವಿಚಾರಣೆ ಮಾಡುವ ಸಂಧರ್ಭದಲ್ಲಿ ಆತ ಪೊಲೀಸರಿಗೆ ಮಚ್ಚು ತೋರಿಸಿ ಹಲ್ಲೆಗೆ ಮುಂದಾಗಿದ್ದಾನೆ. ಆಗ ಆತನನ್ನು ಪೊಲೀಸರು ಠಾಣೆಗೆ ಕರತಂದಿದ್ದರಂತೆ ಪೊಲೀಸರು,ಅ ನಂತರ
ರಿಹ್ಯಾಬಿಲಿಟೇಶನ್
ಸೆಂಟರ್ಗೆ ಸೇರಿಸಿದ್ದರು. ಆದರೆ, ಗಾಯದಿಂದ ನರಳುತ್ತಿದ್ದ ದರ್ಶನ್ಗೆ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ರಿಹ್ಯಾಬಿಲಿಟೇಶನ್
ಸೆಂಟರ್ ಮಾಲೀಕರ ಮೇಲೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಪೊಲೀಸರ ಹಲ್ಲೆಯಿಂದ ಯುವಕ ಸಾವು ಎಂದು ಆರೋಪ.?

ವಿವೇಕನಗರ ಪೊಲೀಸರು ಹಲ್ಲೆ ಮಾಡಿದ್ದರಿಂದ 22 ವರ್ಷದ ದರ್ಶನ್ ಸಾವನ್ನಪ್ಪಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲು ಆಗಿದೆ.

ಕುಡಿದು ಗಲಾಟೆ ಮಾಡುತ್ತಿದ್ದ ದರ್ಶನ್ನನ್ನು ವಶಕ್ಕೆ ಪಡೆದಿದ್ದ ವಿವೇಕನಗರ ಪೊಲೀಸರು ಎರಡು ದಿನ ಠಾಣೆಯಲ್ಲಿ ಇಟ್ಟುಕೊಂಡು ಹಲ್ಲೆ ಮಾಡಿದ್ದರು. ಈ ವೇಳೆ ದರ್ಶನ್ ತಾಯಿ ತನ್ನ ಮಗನನ್ನು ಬಿಡಲು ಕೇಳಿದಾಗ ಪೊಲೀಸರು ಬಿಟ್ಟಿರಲಿಲ್ಲ. ಇದಾದ ಬಳಿಕ ಆತನನ್ನು ಯುನಿಟಿ ರಿಹ್ಯಾಬ್ ಸೆಂಟರ್ಗೆ ದಾಖಲಿಸಲಾಗಿತ್ತು. ದರ್ಶನ್ ತಾಯಿ ರಿಹ್ಯಾಬಿಲಿಟೇಶನ್ ಸೆಂಟರ್ ಗೆ
ಕರೆ ಮಾಡಿದಾಗ ನಿಮ್ಮ ಮಗ ಚೆನ್ನಾಗಿದ್ದಾನೆ ಎಂದು ಹೇಳುತ್ತಿದ್ದರು. ಆದರೆ, ಮಗನ ಜೊತೆ ಮಾತನಾಡಲು ಅವಕಾಶ ಕೊಟ್ಟಿರಲಿಲ್ಲ.
ಆದರೆ ನ. 26ರಂದು ಬೆಳಗ್ಗೆ ಕರೆಮಾಡಿದ್ದ
ರಿಹ್ಯಾಬಿಲಿಟೇಶನ್
ಸೆಂಟರ್ನ ಸಿಬ್ಬಂದಿ ನಿಮ್ಮ ಮಗ ಸಾವನ್ನಪ್ಪಿದ್ದಾನೆ ಎಂದಿದ್ದರು. ಆಗ ಪುನರ್ವಸತಿ ಕೇಂದ್ರಕ್ಕೆ ಹೋದಾಗ ಆತನ ಶವವನ್ನು ನೆಲಮಂಗಲ ಆಸ್ಪತ್ರೆಯಲ್ಲಿ ಅನಾಥ ಶವದಂತೆ ಬಿಟ್ಟು ಬದಿದ್ದರು ಎಂಬುದು ತಿಳಿದುಬಂದಿದೆ. ದರ್ಶನ್ ಸಾವಿನ ಬಗ್ಗೆ ಮಾಹಿತಿ ಕೇಳಿದರೆ ಆತನಿಗೆ ಉಸಿರಾಟ ಸಮಸ್ಯೆಯಿದ್ದರಿಂದ ಸಾವು ಸಂಭವಿಸಿದೆ ಎಂದಿದ್ದಾರೆ. ಆದರೆ ದರ್ಶನ್ ಮೃತದೇಹ ನೋಡಿದಾಗ ಗಾಯದ ಗುರುತು ಪತ್ತೆಯಾಗಿವೆ. ಹೀಗಾಗಿ ಮಗನ ಸಾವಿನಲ್ಲಿ ಅನುಮಾನ ಇದೆ ಎಂದು ಪೋಷಕರು ದೂರು ನೀಡಿದ್ದರು. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರು ಮೊದಲು UDR ದಾಖಲಿಸಿದ್ದರು. ನಂತರ ದರ್ಶನ್ ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆ ಮಾಡಿರೋದು ಬೆಳಕಿಗೆ ಬಂದಿದ್ದು, ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ.

ದರ್ಶನ್ ನನ್ನು ಪೊಲೀಸರೇ ರಿಹ್ಯಾಬಿಲಿಟೇಶನ್ ಸೆಂಟರ್ಗೆ ಸೇರಿಸಿದ್ದರಂತೆ.? :
ಮೃತ ದರ್ಶನ್ ತಾಯಿ ಆಧಿಲಕ್ಷ್ಮಿ ಅವರು ಮಾಧ್ಯಮದವರ ಜೋತೆಗೆ ಮಾತನಾಡಿ, ನನ್ನ ಮಗ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಕುಡಿದು ಗಲಾಟೆ ಮಾಡಿದ್ದಾನೆ ಅಂತ ಕರೆದುಕೊಂಡು ಹೋಗಿದ್ದರು. ಆತನ ಮೇಲೆ ಎಫ್ಐಆರ್ ಮಾಡಿ ಜೈಲಿಗೆ ಕಳಿಸುತ್ತೇವೆ ಅಂತ 3 ದಿನ ಠಾಣೆಯಲ್ಲಿ ಇಟ್ಟು ಕೊಂಡಿದ್ದರು. ನಾನು ಠಾಣೆಗೆ ಹೋಗಿ ಜೈಲಿಗೆ ಕಳಿಸಬೇಡಿ ಅಂತ ಕೇಳಿಕೊಂಡು, ಆತನನ್ನು ರಿಹ್ಯಾಬಿಲಿಟೇಶನ್ ಸೆಂಟರ್ಗೆ ಹಾಕ್ತಿನಿ ಸಹಾಯ ಮಾಡಿ ಎಂದು ಪೊಲೀಸರಿಗೆ ಕೇಳಿಕೊಂಡಿದ್ದೆ. ಬಳಿಕ ಪೊಲೀಸರೇ ನನ್ನ ಮಗನನ್ನು ನೆಲಮಂಗಲ ಬಳಿಯ ರಿಹ್ಯಾಬಿಲಿಟೇಶನ್ ಸೆಂಟರ್ ನವರು ಯಾರು ಇರಲಿಲ್ಲ.
ಡಾಕ್ಟರ್ ಇಲ್ಲಿ ಬರೋದಕ್ಕೂ ಮುನ್ನ ಸಾವನಪ್ಪಿದ್ದಾನೆ ಎಂದು ಹೇಳಿದರು. ಆತನಿಗೆ ಹೊಡೆದಿರೋ ಗಾಯಗಳು ಇದೆ. ಅವನಿಗೆ ಏನಾಗಿದೆ ಅಂತ ಗೊತ್ತಗಬೇಕಿದೆ.
ರಿಹ್ಯಾಬಿಲಿಟೇಶನ್
ಸೆಂಟರ್ಗೆ ಹೋಗುವಾಗ ಸ್ವಲ್ಪ ನಡಿಯೋಕೆ ಆಗ್ತಿರಲಿಲ್ಲ, ಆದರೆ ಸಾಯುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.


