
Gold man :ನಿತ್ಯ 3.5 ಕೆಜಿ ಆಭರಣ ಧರಿಸುವ ಗೋಲ್ಡ್ ಮ್ಯಾನ್ ಕನ್ಹಯ್ಯಾಲಾಲ್ ಖಾತಿಕ್ಗೆ ಜೀವ ಬೆದರಿಕೆ.!
news.ashwasurya.in
ಅಶ್ವಸೂರ್ಯ/ ಚಿತ್ತೋರ್ಗಢ : ಪ್ರತಿ ನಿತ್ಯ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಭರಣಗಳನ್ನು ಧರಿಸುವ ಉದ್ಯಮಿ ಕನ್ಹಯ್ಯಾಲಾಲ್ ಖಾತಿಕ್ ಚಿತ್ತೋರ್ಗಢದ ಬಾಂಗರದ ಮನುಷ್ಯ ಎಂದೆ ಖ್ಯಾತಿ ಪಡೆದಿದ್ದಾರೆ. ಅಂತೆಯೇ ಇತ್ತೀಚೆಗಷ್ಟೇ ಅವರಿಗೆ ದರೋಡೆಕೋರ ರೋಹಿತ್ ಗೋದಾರರ ಸಹಚರರಿಂದ ಹಣಕ್ಕೆ ಬೆಡಿಕೆ ಇಟ್ಟು ಧಮ್ಕಿ ಕಾಲ್ಗಳು ಬರುತ್ತಿವೆಯಂತೆ. ಈ ಹಿನ್ನಲೆಯಲ್ಲಿ ಅವರು ತಮ್ಮ ಸರಹದ್ದಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ದೂರು ದಾಖಲಾದ ತಕ್ಷಣವೇ ತನಿಖೆ ಮುಂದಾಗಿದ್ದಾರೆ.
ಅದೃಷ್ಟ ಎನ್ನುವುದು ಯಾರಿಗೆ ಯಾವ ಸಂದರ್ಭದಲ್ಲಿ ಹೇಗೆ ಬೇಕಾದರೂ ಒಲಿಯಬಹುದು ಮತ್ತು ಕೆಲವೊಂದು ಸಲ ಯಾವುದೇ ವ್ಯಕ್ತಿಯ ಬದುಕನ್ನೇ ಬದಲಾಯಿಸಬಹುದು. ಒಂದು ಕಾಲದಲ್ಲಿ ಬಡತನದ ಜೀವನ ನಡೆಸುತ್ತಿದ್ದವರು ಬಳಿಕ ಅದೃಷ್ಟ ಬೆನ್ನೇರಿದ ನಂತರದಲ್ಲಿ ಶ್ರೀಮಂತರಾದ ಜೀವಂತ ಸಾಕ್ಷಿಗಳು ನಮ್ಮ ಕಣ್ಣಮುಂದಿದೆ.! ಅಂತವರಲ್ಲಿ ಉದ್ಯಮಿ ಕನ್ಹಯ್ಯಾಲಾಲ್ ಖಾತಿಕ್ ಕೂಡ ಒಬ್ಬರಾಗಿದ್ದಾರೆ. ಒಂದು ಕಾಲದಲ್ಲಿ ಹಣ್ಣು ತರಕಾರಿ ಮಾರುತ್ತಿದ್ದ ವ್ಯಕ್ತಿ ಈಗ ಕೋಟ್ಯಾಂತರ ಮೌಲ್ಯದ ಚಿನ್ನದ ಅಂಗಡಿಯ ಮಾಲೀಕರಾಗಿದ್ದಾರೆ. ನಿತ್ಯವು ಬೆಲೆ ಬಾಳುವ ಆಭರಣಗಳನ್ನು ತೋಡುವುದು ಇವರ
ಖಯಾಲಿಯಾಗಿದೆ.

ಚಿತ್ತೋರ್ಗಢದ ಗೋಲ್ಡ್ ಮ್ಯಾನ್ ಎಂದೆ ಖ್ಯಾತಿ ಪಡೆದಿದ್ದಾರೆ. ಅಂತೆಯೇ ಇತ್ತೀಚೆಗಷ್ಟೇ ಉದ್ಯಮಿ ಕನ್ಹಯ್ಯಾಲಾಲ್ ಖಾತಿಕ್ ಅವರಿಗೆ ದರೋಡೆಕೋರ ರೋಹಿತ್ ಗೋದಾರರ ಸಹಚರರಿಂದ ಹಣಕ್ಕೆ ಬೇಡಿಕೆಯೊಡ್ಡಿ ಕರೆಗಳು ಬರುತ್ತಿವೆಯಂತೆ. ಒಂದಷ್ಟು ಚಿಂತೆಗೆ ಒಳಗಾಗಿರುವ ಕನ್ಹಯ್ಯಾಲಾಲ್ ಅವರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಮುಂದ್ದಾಗಿದ್ದಾರೆ.
ರಾಜಸ್ಥಾನದ ಚಿತ್ತೋರ್ಗಢದ ಉದ್ಯಮಿ ಕನ್ಹಯ್ಯಾಲಾಲ್ ಖಾತಿಕ್ ಅವರಿಗೆ ಎರಡು ದಿನಗಳ ಹಿಂದೆ ಮಿಸ್ಡ್ ಕಾಲ್ ಒಂದು ಬಂದಿತ್ತು. ಬಳಿಕ ಅದೇ ಸಂಖ್ಯೆಯಿಂದ ವಾಟ್ಸ್ ಆ್ಯಪ್ ಕರೆ ಕೂಡ ಬಂದಿದ್ದು ಅದೇ ನಂಬರ್ ನಿಂದ ಆಡಿಯೋ ರೆಕಾರ್ಡಿಂಗ್ ಒಂದು ಕಳಿಸಲಾಗಿದೆ. 5 ಕೋಟಿ ರೂ. ಬೇಡಿಕೆ ಇಟ್ಟು ಬೇದರಿಕೆ ಹಸಕಲಾಗಿದೆ.ಹಣ ಕೊಡದಿದ್ದರೆ ಸುಲಿಗೆ ಮಾಡುದಾಗಿ ಆಡಿಯೋ ರೆಕಾರ್ಡಿಂಗ್ ನಲ್ಲಿ ಇದೆ ಎನ್ನಲಾಗಿದೆ. ಹೀಗಾಗಿ ಕನ್ಹಯ್ಯಾಲಾಲ್ ಅವರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.
ದರೋಡೆಕೋರ ರೋಹಿತ್ ಗೋದಾರ ಜೊತೆ ಸಂಪರ್ಕ ಹೊಂದಿರುವುದಾಗಿ ಹೇಳಿಕೊಳ್ಳುವ ಕೆಲವೊಬ್ಬರಿಂದ ತನಗೆ ಸುಲಿಗೆ ಕರೆ ಬಂದಿದೆ ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಆಡಿಯೋ ರೆಕಾರ್ಡ್ ಮಾಡಿದ್ದ ವ್ಯಕ್ತಿ ತಾನು ಹೇಳುವುದನ್ನು ನೀವು ಪಾಲಿಸದಿದ್ದರೆ ಚಿನ್ನ ಧರಿಸುವ ಸ್ಥಿತಿಯಲ್ಲಿ ನೀನೇ ಇರುವುದಿಲ್ಲ ಎಂದು ಎಚ್ಚರಿಕೆ ಕೂಡ ಹಾಕಿದ್ದಾನಂತೆ.! ಹೀಗಾಗಿ ಪೊಲೀಸರು ವಿವಿಧ ಆಯಾಮದಲ್ಲಿ ಈ ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ.
ರೋಹಿತ್ ಗೋದಾರ ಈ ಹಿಂದೆಯೇ ಅನೇಕ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ವ್ಯಕ್ತಿ ನಟೋರಿಯಸ್ ಕ್ರಿಮಿನಲ್ ಆಗಿರುವ ರೋಹಿತ್ ಗೋದಾರ ರಾಜಸ್ಥಾನದಲ್ಲಿ ಉದ್ಯಮಿಗಳ ವಿರುದ್ಧ ಸುಲಿಗೆ ದಂಧೆ ನಡೆಸುತ್ತಿದ್ದಾನಂತೆ. ರ್ಯಾಪರ್ ಸಿಧ್ದು ಮೂಸೆ ವಾಲಾ ಅವರ ಕೊಲೆ ಪ್ರಕರಣದಲ್ಲಿ ಕೂಡ ಇವನು ಪ್ರಮುಖ ಆರೋಪಿ ಗಳಲ್ಲಿ ಒಬ್ಬರಾಗಿದ್ದಾನಂತೆ. ಸಿಕಾರ್ನಲ್ಲಿ ನಡೆದ ದರೋಡೆಕೋರ ರಾಜು ತೆಹತ್ ಹತ್ಯೆಯಲ್ಲೂ ಈತ ಪ್ರಮುಖ ಆರೋಪಿಯಾಗಿದ್ದಾನೆ. 2022 ರಲ್ಲಿ ಆರೋಪಿ ರೋಹಿತ್ ಗೋದಾರ ಪವನ್ ಕುಮಾರ್ ಎಂಬ ಹೆಸರಿನಲ್ಲಿ ನಕಲಿ ಪಾಸ್ಪೋರ್ಟ್ ಬಳಸಿ ನವ ದೆಹಲಿಯಿಂದ ದುಬೈಗೆ ತೆರಳಿದ್ದ ಇತನ ವಿರುದ್ಧ ಇಂಟರ್ಪೋಲ್ ರೆಡ್ ನೋಟಿಸ್ ಸುತ್ತೋಲೆ ಹೊರಡಿಸಲಾಗಿದೆ. ಈ ಮೂಲಕ ಭಾರತದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ 32 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
50 ವರ್ಷ ಪ್ರಾಯದ ಕನ್ಹಯ್ಯಾಲಾಲ್ ಖಾತಿಕ್ ಅವರು ಆರಂಭದಲ್ಲಿ ಕೈಗಾಡಿಯಲ್ಲಿ ತರಕಾರಿ ಗಳನ್ನು ಮಾರುತ್ತಿದ್ದರು. ವ್ಯಾಪಾರ ಚೆನ್ನಾಗಾಗಿ ಒಂದಷ್ಟು ಹಣ ಕೈಸೇರಿದ ನಂತರ ಅವರ ಅದೃಷ್ಟ ಬದಲಾಗಿದೆ. ಕೆಲವೇ ವರ್ಷಗಳಲ್ಲಿ ದೊಡ್ಡ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ.! ಅದೇನು ಹುಚ್ಚು ಪ್ರೀತಿಯೋ ಅವರಿಗೆ ದಿನನಿತ್ಯ ಮೈಮೇಲೆ 3.5. Kg ಚಿನ್ನದ ಆಭರಣಗಳನ್ನು ಧರಿಸಿಕೊಂಡು ಒಡಾಡುತ್ತಾರೆ. ಚಿನ್ನದ ಮೋಹ ಇರುವ ಕಾರಣಕ್ಕೆ ತಮಗಿಷ್ಟವಾದ ಆಭರಣಗಳನ್ನು ಸಂಗ್ರಹಮಾಡಿ ನಿತ್ಯ ಅವರು ಧರಿಸುತ್ತಿದ್ದಾರೆ. 15 ವರ್ಷದ ಹಿಂದೆ ಸ್ನೇಹಿತ ರೊಬ್ಬರು 10 ತೊಲ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದು ಅಂದಿನಿಂದ ನಿತ್ಯವು ದೊಡ್ಡ ದೊಡ್ಡ ಆಭರಣವನ್ನು ಧರಿಸಿಕೊಂಡು ಸಾರ್ವಜನಿಕವಾಗಿ ಓಡಾಡುವುದನ್ನು ರೂಢಿಸಿಕೊಂಡಿದ್ದಾರೆ. ಅವರು ಪ್ರಸ್ತುತ ಸುಮಾರು 3.5 ಕೆಜಿ ಚಿನ್ನವನ್ನು ಧರಿಸುತ್ತಿದ್ದು ಚಿತ್ತೋರ್ಗಢದಲ್ಲಿ ಅವರಿಗೆ ‘ಗೋಲ್ಡ್ಮ್ಯಾನ್’ ಎಂದೆ ಖ್ಯಾತಿ ಪಡೆದಿದ್ದಾರೆ.ಈಗ ಗೋಲ್ಡ್ ಮ್ಯಾನ್ ಕನ್ಹಯ್ಯಾಲಾಲ್ಗೆ ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಲಾಗಿದೆ….ಮುಂದೇನು ಎನ್ನುವುದನ್ನು ಕಾದುನೋಡಬೇಕಿದೆ..


