ರಾಜಸ್ಥಾನ : ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿಯಾಗಿ ಡಂಪರ್ ಚಲಾಯಿಸಿದ ಡ್ರೈವರ್, ರಸ್ತೆಯಲ್ಲೇ ಹೆಣವಾದ ಅಮಾಯಕ 19 ಮಂದಿ ಬಲಿ.!
news.ashwasurya.in
ಅಶ್ವಸೂರ್ಯ/ರಾಜಸ್ಥಾನ : ರಾಜಸ್ಥಾನದ ಜೈಪುರದಲ್ಲಿ ಕುಡಿದ ನಶೆಯಲ್ಲಿದ್ದ ಡಂಪರ್ ಚಾಲಕನೊಬ್ಬ ಡಂಪರ್ ಚಲಾಯಿಸಿ ನಿಯಂತ್ರಣ ತಪ್ಪಿ ಸರಣಿ ಅಪಘಾತಕ್ಕೆ ಕಾರಣನಾಗಿ 19 ಜನರ ಸಾವಿಗೆ ಕಾರಣನಾಗಿದ್ದಾನೆ.! ಒಬ್ಬ ಚಾಲಕನ ಕುಡುಕುತನದಿಂದ ಈ ಭೀಕರ ದುರಂತ ನೆಡೆದಿದ್ದು 19 ಜನರು ಉಸಿರು ಚಲ್ಲಿದ್ದಾರೆ, ಸಾಕಷ್ಟು ಅಮಾಯಕ ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸೋಮವಾರ ಮಧ್ಯಾಹ್ನ ಈ ಘಟನೆಯಿಂದ ರಾಜಸ್ಥಾನದ ರಾಜಧಾನಿ ಜೈಪುರ ನಗರಕ್ಕೆ ನಗರವೇ ಬೆಚ್ಚಿಬಿದ್ದಿದೆ.! ಸ್ಥಳದಲ್ಲಿದ್ದು ಈ ಅಪಘಾತವನ್ನು ಕಣ್ಣಾರೆ ಕಂಡ ಸ್ಥಳೀಯರ ಎದೆಬಡಿತ ಜೋರಾಗಿದೆ. ಹರ್ಮಾರ ಪೊಲೀಸ್ ಠಾಣೆ ಪ್ರದೇಶದ ಲೋಹಾ ಮಂಡಿ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಡಂಪರ್ ಟ್ರಕ್ ಭೀಕರ ಅಪಘಾತಕ್ಕೆ ಕಾರಣವಾಯಿತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಡಂಪರ್ ಚಾಲಕ ಕುಡಿದಿದ್ದ ಮತ್ತು ಕಣ್ಣಿಗೆ ಬಿದ್ದವರ ಮೇಲೆಲ್ಲಾ ಟ್ರಕ್ ಹರಿಸಿದ್ದ ಎನ್ನಲಾಗಿದೆ. ಈ ಅಪಘಾತದಲ್ಲಿ ಇಲ್ಲಿಯವರೆಗೆ 19 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

“ಡಂಪರ್” ಮುಂದೆ ಬಂದ ಯಾರಿಗೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜನರು ರಸ್ತೆಯಲ್ಲಿ ಓಡುತ್ತಿದ್ದರು, ಆದರೆ ಅದು ಮುಂದೆ ಚಲಿಸುತ್ತಲೇ ಇತ್ತು, ಕೆಲವರು ಚಕ್ರದಡಿ ಬಿದ್ದು ಪ್ರಾಣ ಕಳೆದುಕೊಂಡರು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು. ಕೆಲವರು ಡಂಪರ್ ಚಾಲಕನ ನಿಯಂತ್ರಣ ತಪ್ಪಿದೆ ಎಂದು ಹೇಳಿದರೆ, ಇನ್ನು ಕೆಲವರು ಅವನು ಪದೇ ಪದೇ ಹಾರ್ನ್ ಮಾಡುತ್ತಿದ್ದ. ಆದರೆ ಡಂಪರ್ ನಿಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲವೂ ಕೆಲವೇ ಸೆಕಂಡ್ಗಳಲ್ಲಿ ಮುಗಿದು ಹೋಗಿತ್ತು.! ಎಂದಿದ್ದಾರೆ.
ಡಂಪರ್ ನಿಲ್ಲುವ ಹೊತ್ತಿಗೆ, ರಸ್ತೆಗಳಲ್ಲಿ ವಾಹನಗಳು ಚೆಲ್ಲಾಪಿಲ್ಲಿಯಾಗಿದ್ದವು.

ಗಾಯಗೊಂಡ ಜನರು ಮತ್ತು ನೋವಿನ ಕೂಗುಗಳಿಂದ ತುಂಬಿದ್ದವು. ಹತ್ತಿರದ ನಿವಾಸಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಫೋನ್ಗಳನ್ನು ಹೊಂದಿದ್ದವರು ತಮ್ಮ ಕುಟುಂಬಗಳಿಗೆ ಮಾಹಿತಿ ನೀಡಿದರು. ಆಂಬ್ಯುಲೆನ್ಸ್ ಸಿಬ್ಬಂದಿ ಅವರನ್ನು ಹೊತ್ತೊಯ್ಯುವ ಮೊದಲು ಕೆಲವರು ರಸ್ತೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದರು.
ಕುಡಿದ ಮತ್ತಿನಲ್ಲಿದ್ದ ಡಂಪರ್ ಚಾಲಕ
ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರದೇಶವನ್ನು ಸುತ್ತುವರೆದರು. ಪ್ರಾಥಮಿಕ ತನಿಖೆಯಲ್ಲಿ ಡಂಪರ್ ಚಾಲಕ ಕುಡಿದಿದ್ದ ಎಂದು ತಿಳಿದುಬಂದಿದೆ. ಈ ಅಪಘಾತವು ಪ್ರದೇಶದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಅಂತಹ ಚಾಲಕರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಜನರು ಒತ್ತಾಯಿಸಿದ್ದು, ಇಂಥ ಕೃತ್ಯಕ್ಕೆ ಮತ್ತೆ ಯಾರೂ ಕೂಡ ಪ್ರಯತ್ನ ಕೂಡ ಮಾಡಬಾರದು ಅಂಥ ಶಿಕ್ಷೆ ನೀಡುವಂತೆ ಆಗ್ರಹ ಕೇಳಿ ಬಂದಿದೆ.
ಸ್ಥಳೀಯ ನಿವಾಸಿಗಳು ಡಂಪರ್ ಮಾಲೀಕರು ಮತ್ತು ಚಾಲಕ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ. ಆಡಳಿತಾತ್ಮಕ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಆರೋಪಿಸಿ ಕೆಲವರು ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು.
ಕುಡಿದು ಚಾಲನೆ ಮಾಡಿದ ಚಾಲಕರಿಂದ ಭಾರತದಲ್ಲಿ ದೊಡ್ಡ ದೊಡ್ಡ ಅಪಘಾತಗಳು ಸಂಭವಿಸಿವೆ. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಕುಡಿದು ವಾಹನ ಚಲಾಯಿಸುವುದರಿಂದ ಪ್ರತಿ ವರ್ಷ ನೂರಾರು ಜನರು ಸಾಯುತ್ತಾರೆ. ಇದರ ಹೊರತಾಗಿಯೂ, ಚಾಲಕರಲ್ಲಿನ ಈ ಅಜಾಗರೂಕತೆಯು ನಿರಂತರವಾಗಿ ಮುಂದುವರಿಯುತ್ತಲೆ ಇದೆ ಹೊರತು ಬದಲಾಗಲಿಲ್ಲ.ಕುಡಿದು ವಾಹನ ಚಲಾಯಿಸುವುದರಿಂದ ಕುಡಿದ ವ್ಯಕ್ತಿಯ ಸಮತೋಲನ, ಆಲೋಚನೆ ಎಲ್ಲವೂ ದುರ್ಬಲಗೊಳ್ಳುತ್ತದೆ. ಅದೇ ವ್ಯಕ್ತಿ ಭಾರೀ ವಾಹನವನ್ನು ಚಾಲನೆ ಮಾಡುವಾಗ, ಅವರು ತಮ್ಮ ಸ್ವಂತ ಜೀವವನ್ನು ಮಾತ್ರವಲ್ಲದೆ ಇತರರ ಜೀವವನ್ನೂ ಅಪಾಯಕ್ಕೆ ಸಿಲುಕಿಸುತ್ತಾರೆ.
ಸರ್ಕಾರ ಮತ್ತು ಪೊಲೀಸರು ನಿರಂತರವಾಗಿ ಜನರು ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರು ಕೇಲವರ ಬೇಜವಾಬ್ದಾರಿ ತನಕ್ಕೆ ಅದೇಷ್ಟೊ ಜೀವಗಳು ರಸ್ತೆಯಲ್ಲಿ ಬಲಿಯಾಗುತ್ತಿವೆ ಈ ಬಾರಿಯೂ ಸಹ, ಕುಡಿದು ವಾಹನ ಚಲಾಯಿಸಿದ ಚಾಲಕನಿಂದ 19 ಜೀವಗಳು ಬಲಿಯಾಗಿವೆ.!
ಕುಟುಂಬಗಳ ಕೂಗು ಮತ್ತು ನಗರದ ಮೌನ
ಅಪಘಾತದ ಸುದ್ದಿ ಕುಟುಂಬಗಳಿಗೆ ತಲುಪಿದ ತಕ್ಷಣ, ನಗರಕ್ಕೆ ನಗರವೆ ಸ್ಮಶಾನ ಮೌನಕ್ಕೆ ಜಾರಿದೆ. ಕೆಲವರು ತಮ್ಮ ಗಂಡು ಮಕ್ಕಳನ್ನು, ಕೆಲವರು ತಂದೆಯನ್ನು ಮತ್ತು ಕೆಲವರು ಸಹೋದರರನ್ನು ಕಳೆದುಕೊಂಡಿದ್ದಾರೆ. ಗಾಯಾಳುಗಳು ಇನ್ನೂ ಜೈಪುರದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.ಇನ್ನಷ್ಟು ಸಾವಿನ ಸಂಖ್ಯೆ ಜಾಸ್ತಿಯಾಗುವ ಸಾಧ್ಯತೆ ಇದೆ…


