ತೀರ್ಥಹಳ್ಳಿ: ಮಾಳುರು ಠಾಣಾ ವ್ಯಾಪ್ತಿಯ ಹೋಳೆಕೊಪ್ಪ ಗ್ರಾಮ, ಕಲ್ಕೊಪ್ಪ ತುಂಗೆಯ ತಟದಲ್ಲಿ ಅಕ್ರಮ ಮರಳು ದಂಧೆ..! ಅಕ್ರಮ ಹಣ ಮಾಡಲು ವೈಲೆಂಟ್ ಅದ್ನಾ ಎಸ್ಪಿ ಡ್ಯೂಟಿ ಪೊಲೀಸಪ್ಪ.!?
ASHWASURYA/SHIVAMOGGA
ಅಶ್ವಸೂರ್ಯ/ತೀರ್ಥಹಳ್ಳಿ: ಆಗುಂಬೆ ಮತ್ತು ಮಾಳುರು ಸುತ್ತಮುತ್ತ ಅಕ್ರಮ ಮರಳು ಸಾಗಟ ಅಬ್ಬರಕ್ಕೆ ಗ್ರಾಮಕ್ಕೆ ಗ್ರಾಮವೆ ಬೆಚ್ಚಿಬಿದ್ದು ಹೋಗಿದೆ.ದಂಧೆ ಕೋರರ ಅಕ್ರಮ ಮರಳು ಸಾಗಾಟದ ಲಾರಿಗಳ ಕರ್ಕಶ ಶಬ್ಧ ಮತ್ತು ದೂಳಿನ ರಭಸಕ್ಕೆ ರೈತಾಪಿ ಜನರ ಬದುಕು ಛಿದ್ರವಾಗಿದೆ.ಮರಳು ಲಾರಿಗಳ ರಭಸದ ಓಡಾಟದಿಂದ ಶಾಲೆಗೆ ಮಕ್ಕಳನ್ನು ಕಳಿಸಲಾಗದ ಸ್ಥಿತಿಯಿಂದ ಹುಣಸೆಕೊಪ್ಪ ಗ್ರಾಮದಲ್ಲಿದ್ದ ಇದ್ದೊಂದ ಸರ್ಕಾರಿ ಶಾಲೆಗೂ ಬೀಗ ಬಿದ್ದಿದೆ ಗ್ರಾಮದಲ್ಲಿ ಇದ್ದೊಂದ ಶಾಲೆಗೂ ಬೀಗ ಬಿದ್ದಿದೆ.ಭರ್ಜರಿ ಅಕ್ರಮವಾಗಿ ಮರಳು ಸಾಗಾಟ ನೆಡೆಯುತ್ತಿರುವುದು ಹೆದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೋಳೆಕೊಪ್ಪ ಗ್ರಾಮದ ಕಲ್ಕೊಪ್ಪ ಎಂಬಲ್ಲಿ ರೈತನೊಬ್ಬನಿಗೆ ಬಿಡಿಗಾಸು ಕೊಟ್ಟು ಗದ್ದೆಯ ಮದ್ಯದಲ್ಲೆ ಅಕ್ರಮವಾಗಿ ಮರಳನ್ನು ಸಾಗಾಟ ಮಾಡಲು ರಸ್ತೆ ಮಾಡಿಕೊಂಡಿದ್ದಾರೆ. ಇಲ್ಲಿ ಸ್ವಲ್ಪ ಮಟ್ಟಿಗೆ ತಣ್ಣಗೆ ಹರಿಯುತ್ತಿದ್ದ ತುಂಗೆ ಅಕ್ರಮ ಮರಳು ದಂಧೆಕೋರರ ಆರ್ಭಟಕ್ಕೆ ನಲುಗಿ ಹೋಗಿದ್ದಾಳೆ.ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ದಂಧೆಕೋರರ ಕಾರ್ಯಚರಣೆ ಆರಂಭವಾಗುತ್ತದೆ. ಸಂಜೆ 5 ಆರಂಭವಾಗಿವ ಅಕ್ರಮ ಮರಳು ಸಾಗಾಟ ಮುಂಜಾನೆ ಏಳು ಗಂಟೆಯವರೆಗೂ ಯಾರ ಭಬಯವಿಲ್ಲದೆ ಭರ್ಜರಿಯಾಗಿ ನೆಡೆದುತ್ತಿದೆ.
ಅ ಮಟ್ಟಕ್ಕೆ ಮರಳು ದಂಧೆಕೋರರ ಜೆಸಿಬಿ, ಲಾರಿ ಮತ್ತು ಪಿಕಪ್ ವಾಹನಗಳು ರಾತ್ರಿಹಗಲೆನ್ನದೆ ಆರ್ಭಟಿಸುತ್ತಿರುವ ಕಾರಣಕ್ಕೆ ಗ್ರಾಮದ ಜನರ ಬದುಕು ಬಿದಿಗೆ ಬಿದ್ದಿದೆ.ಈ ಅಕ್ರಮ ಮರಳು ದಂಧೆಕೋರರನ್ನು ಮಟ್ಟ ಹಾಕುವ ತಾಕತ್ತು ಯಾರಿಗೂ ಇಲ್ಲದಂತಾಗಿದೆ.ಎನಾದರು ಗ್ರಾಮದ ಅಮಾಯಕ ಮಂದಿ ಪ್ರಶ್ನಿಸಲು ಹೋದರೆ ತಮ್ಮ ರೌಡಿಸಮ್ ವರೆಸೆ ತೋರಿಸಿ ಅಮಾಯಕ ಜನರನ್ನು ಹೇದರಿಸಿ ಬಿಟ್ಟಿದ್ದಾರೆ. ಅತ್ತ ಮಾಳುರು ಪೋಲಿಸ್ ಠಾಣೆಯ ಕಥೆ ಬೇರೆಯದೆ ಇದೆ. ಇತ್ತ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಂಬಂದ ಪಟ್ಟ ಅಧಿಕಾರಿ ಬಂದಷ್ಟು ಗೆಬರಿಕೊಂಡು ಸಂಪೂರ್ಣ ನಿದ್ರೆಗೆ ಜಾರಿದ್ದಾರೆ.ಅ ಮಟ್ಟದ ಹಸಿವು ಗಣಿ ಇಲಾಖೆಯನ್ನು ಆವರಿಸಿದೆ.!? ಈ ಕಾರಣದಿಂದಲೇ ದಂಧೆಕೋರರ ಸಾಗಾಟ ಭರ್ಜರಿಯಾಗಿದೆ.ಇನ್ನೂ ಈ ವಿಷಯವಾಗಿ ಕಂಪ್ಲೇಂಟ್ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಫೋನ್ ಮಾಡಿದರೆ ರೀಸಿವ್ ಮಾಡುವ ವ್ಯವದಾನವಿಲ್ಲ ಇಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮ ಮರಳು ದಂಧೆಯವರ ಹಣದ ಪಿಂಡಿಗೆ ತಲೆಬಾಗಿದ್ದಾರಾ ಎನ್ನುವಂತೆ ಬಾಸವಾಗುತ್ತದೆ. ಇವರೆಲ್ಲ ಸರ್ಕಾರಿ ಅಧಿಕಾರಿಗಳ ಅಥವಾ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಜೋಳಿಗೆ ಹಿಡಿದು ಬಂದವರ ಎನ್ನುವುದು ಅರ್ಥವೆ ಆಗುತ್ತಿಲ್ಲ.? ಪೋಲಿಸ್ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ನಿದ್ರೆಗೆ ಜಾರಿರುವುದರಿಂದಲೆ ತೀರ್ಥಹಳ್ಳಿ ತಾಲ್ಲೂಕಿನಾದ್ಯಾಂತ ಅಕ್ರಮ ಮರಳು ದಂಧೆಯವರ ಭರಾಟೆ ಮುಗಿಲು ಮುಟ್ಟಿದೆ.ಇನ್ನೂ ಮಾಳುರು ಪೊಲೀಸ್ ಠಾಣೆಗೆ ತಿಳಿಸಿದರೆ ಅವರಲ್ಲೆ ಒಬ್ಬ ಅಕ್ರಮ ಮರಳು ದಂಧೆಕೋರರ ಜೋತೆಗೆ ಕೈಜೋಡಿಸಿ ಮಂತ್ಲಿ ಮಾಮೂಲಿಗೆ ಬಾಯಿತೆಗೆದವ ಅಧಿಕಾರಿಗಳು ರೈಡು ಬೀಳುವ ಮುನ್ನವೆ ಮರಳು ದಂಧೆಕೋರರಿಗೆ ಮಾಹಿತಕೊಟ್ಟು ಬಚಾವ್ ಮಾಡುತ್ತಾನಂತೆ.?
ಒಟ್ಟಿನಲ್ಲಿ ಮಾಳುರು ಠಾಣಾ ವ್ಯಾಪ್ತಿಯ ಹೆದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೋಳೆಕೊಪ್ಪ ಗ್ರಾಮದ ಕಲ್ಕೊಪ್ಪದ ತುಂಗೆಯ ಓಡಲಲ್ಲಿ ಅಕ್ರಮ ಮರಳು ದಂಧೆಕೋರರ ರಣಕೆಕೆ ಮುಗಿಲು ಮುಟ್ಟಿದೆ.ಒಂದು ಕಡೆ ತುಂಗೆಯ ಒಡಲನ್ನು ಜೆಸಿಬಿ ಬಗೆದು ಬಗೆದು ಹಾಕುತ್ತಿದ್ದರೆ ಟಿಪ್ಪರ್ ಮತ್ತು ಪಿಕಪ್ ವಾಹನಗಳು ರಾತ್ರಿ ಹಗಲೆನ್ನದೆ ರಸ್ತೆ ಉದ್ದಕ್ಕೂ ಹೊಂಕರಿಸುತ್ತ ಅಕ್ರಮ ಮರಳು ಸಾಗಾಟಕ್ಕೆ ಮುಂದಾಗಿವೆ. ಇಲ್ಲಿಯ ಅಕ್ರಮ ದಂಧೆಕೋರರು ಕ್ರಿಮಿನಲ್ ಹಿನ್ನಲೆ ಇದ್ದು ತೀರ್ಥಹಳ್ಳಿ ಮತ್ತು ಮಾಳುರು ಪೊಲೀಸ್ ಠಾಣೆ ಇವರಿಗೆ ಮಾವನ ಮನೆ ಇದ್ದಂತೆ ತಮ್ಮ ಬದುಕನ್ನೆ ಅಕ್ರಮ ದಂಧೆಗೆ ಮಿಸಲಿಟ್ಟಿರಯವ ಇವರುಗಳು ಬದಲಾಗುವ ಜಾಯಮಾನದವರಲ್ಲ. ಇವರನ್ನು ಮಟ್ಟ ಹಾಕಬೇಕೆಂದರೆ ಖಡಕ್ ಐಪಿಎಸ್ ಅಧಿಕಾರಿ ಎಸ್ಪಿ. ಮಿಥುನ್ ಕುಮಾರ್ ಅವರ ನಜರು ಈ ಕ್ರಿಮಿನಲ್ಗಳ ಮೇಲೆ ಬಿದ್ದರೆ ಗ್ರಾಮದ ಜನರು ನೆಮ್ಮದಿಗೆ ಜಾರಬಹುದಾಗಿದೆ.
ಮಾಳುರು ಠಾಣೆಯಲ್ಲಿ ಎಸ್ಪಿ ಡ್ಯೂಟಿ ಮಾಡುತ್ತಿರುವ ಪೊಲೀಸಪ್ಪನಿಗೆ ಮೈತುಂಬಾ ಹಸಿವು ಬಾಯ್ತುಂಬ ಪುಗಸ್ಸಟ್ಟೆ ಕಾಸಿನ ಮೇಲುಕು ಇವನನ್ನು ದಿಕ್ಕು ತಪ್ಪಿಸಿದೆ. ಹಾಕಿದ ಪವಿತ್ರ ಖಾಕೀಯ ಕರ್ತವ್ಯವನ್ನೆ ಮರತೆವನಂತೆ ಹಣ ಮಾಡಲು ನಿಂತು ಬಿಟ್ಟಿದ್ದಾನೆ.ಪತ್ರಿಕೆ ಇವನ ಅಷ್ಟೂ ಮಾಹಿತಿಯನ್ನು ಕಲೆಹಾಕಲು ಮುಂದಾಗಿದೆ.ಈತ ಕರ್ತವ್ಯಕ್ಕೆ ಬಂದು ಬೆರಳೆಣಿಕೆ ವರ್ಷ ಆಗಿದ್ದರು ತೀರ ಪಳಗಿದವನಂತೆ ಆಡುತ್ತಿದ್ದಾನೆ.ಇವನು ಅಕ್ರಮವಾಗಿ ಹಣಮಾಡುವ ಖಯಾಲಿ ಯಾವ ಮಟ್ಟಕ್ಕಿದೆ ಎನ್ನುವುದನ್ನು ಮುಂದಿನ ವರದಿಯಲ್ಲಿ ತಿಳಿಸುತ್ತೇನೆ. ಪುಗಸ್ಸಟ್ಟೆ ಹಣ ಕೈಸೇರುತ್ತಿದ್ದಂತೆ ಸಂತೋಷ ಪಡುವ ಇತ ಅಕ್ರಮ ದಂಧೆಕೋರರಿಗೆ ಗ್ರೀನ್ ಸಿಗ್ನಲ್ ತೋರಿಸುತ್ತಾನೆ.ಮಾಳುರು ಠಾಣೆಯಲ್ಲಿ ಪಿಎಸ್ಐ ಆಟಕ್ಕುಂಟೂ ಲೆಕ್ಕಕ್ಕೆ ಇಲ್ಲದಂತಾಗಿದೆ.ಆ ಮಟ್ಟಕ್ಕಿದೆ ಎಸ್ಪಿ ಡ್ಯೂಟಿ ಮಾಡುತ್ತಿರವ ಪೊಲೀಸಪ್ಪನ ರೇಂಜ್.!ಇನ್ನಾದರು ಹಾಕಿದ ಪವಿತ್ರ ಖಾಕೀಗೆ ದ್ರೋಹ ಮಾಡದೆ ಅಕ್ರಮ ಮರಳು ದಂಧೆಕೋರರನ್ನು ಮಟ್ಟಹಾಕಿ.ಅಕ್ರಮ ಮರಳು ಸಾಗಟದ ದಂಧೆಕೋರರ ಜೆಸಿಬಿಯ ಬಗೆತದಿಂದ ಬಳಲಿರುವ ತುಂಗೆಗೆ ಒಂದಷ್ಟು ನೆಮ್ಮದಿ ಮತ್ತು ಗ್ರಾಮದ ಜನತೆಗೆ ದೂಳು ಮತ್ತು ಟಿಪ್ಪರ್ ಮತ್ತು ಪಿಕಪ್ ವಾಹನದ ಕರ್ಕಶ ಧ್ವನಿಯಿಂದ ಮುಕ್ತಿ ಸಿಗಲಿ….ಇನ್ನಾದರು ನಿದ್ರೆಗೆ ಜಾರಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಕೊಳ್ಳಲಿ, ಇಲ್ಲವಾದಲ್ಲಿ ಸಂಬಂದ ಪಟ್ಟ ಅಧಿಕಾರಿಗೆ ಮರಳು ಮಾಫಿಯಾ ದವರಿಂದ ಹರಿದು ಬರುವ ಹಣದ ಕುರಿತು ಬರೆಯ ಬೇಕಾಗುತ್ತದೆ.
ಈ ಗ್ರಾಮದಲ್ಲಿ ಕೆಲವು ಖದೀಮರು ಆಕ್ಟೀವ್ ಆಗಿದ್ದಾರೆ ಹಾಲಿ ಮತ್ತು ಮಾಜಿ ಶಾಸಕರ ಹೆಸರನ್ನು ಹೇಳಿಕೊಂಡು ಅಕ್ರಮ ಮರಳು ದಂಧೆಕೋರ ಮತ್ತು ಅಕ್ರಮ ಮರಳು ಸಾಗಾಟದ ಲಾರಿ ಮತ್ತು ಪಿಕಪ್ ವಾಹನಗಳಿಂದ ಕಾಸು ಕಮಾಯಿಗೆ ಮುಂದಾಗಿದ್ದಾರೆ.! ಇನ್ನೂ ಅಕ್ರಮ ದಂಧೆಕೋರರಿಗೆ ಅಕ್ರಮವಾಗಿ ಮರಳು ಸಾಗಾಟ ಮಾಡಲು ಬೆಳೆ ಬೆಳೆದು ಫಸಲು ತೆಗೆಯುವ ಭೂಮಿಯನ್ನೆ ಹಣದಾಸೆಗೆ ಟಿಪ್ಪರ್ ಮತ್ತು ಪಿಕಪ್ ವಾಹನಗಳು ಅಕ್ರಮವಾಗಿ ಮರಳು ಹೊತ್ತೊಯ್ಯಲು ರಸ್ತೆ ಮಾಡಿಕೊಟ್ಟ ಖದೀಮನ ಮೇಲೆ ದೂರು ದಾಖಲಿಸಿ. ಕಲ್ಕೊಪ್ಪದ ತುಂಗೆಯನ್ನು ಬಗೆಯುತ್ತಿರುವ ಮರಳು ದಂಧೆಕೋರರಾದ ಪ್ರವೀಣ್ ಮತ್ತು ಪುನೀತ್ ಯಾರು.? ಇವರ ಹಿನ್ನಲೆ ಏನು.? ಎನ್ನುವುದನ್ನು ಮುಂದಿನ ವರದಿಯಲ್ಲಿ ತಿಳಿಸುತ್ತೇನೆ.