ಹೆತ್ತ ಮಗನನ್ನೇ ಕೊಂದ ತಾಯಿ .! ಸಿಸಿ ಟಿವಿ ಮತ್ತು ಪೊಲೀಸರ ಸೂಕ್ಷ್ಮ ತನಿಖೆಯಿಂದ ಬಯಲಾಯ್ತು ಹಂತಕಿಯ ಹೆಜ್ಜೆ ಗುರುತು.!
ASHWASURYA/SHIVAMOGGA
ಅಶ್ವಸೂರ್ಯ/ಮಧ್ಯಪ್ರದೇಶ: ಹದಿನೈದು ವರ್ಷದ ಮಗನನ್ನು ಹೆತ್ತ ತಾಯಿಯೇ ಕತ್ತು ಹಿಸುಕಿ ಕೊಂದ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಗುಣ ಜಿಲ್ಲೆಯಿಂದ ವರದಿಯಾಗಿದೆ.! ಆರಂಭದಲ್ಲಿ ಆಕೆ (ಹೆತ್ತತಾಯಿ) ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಶತ ಪ್ರಯತ್ನಮಾಡಿದ್ದಳು.! ಆದರೆ ಪೊಲೀಸರ ಕಾರ್ಯಚರಣೆ. ಪ್ರತಿಯೊಂದು ಸೂಕ್ಷ್ಮ ತನಿಖೆಯಿಂದ ಅಮ್ಮನೆ ಮಗನನ್ನು ಕೊಂದ ಸತ್ಯವನ್ನು ಬಹಿರಂಗಪಡಿಸಿದ್ದವು.ಮಗನ ಸಣ್ಣ ಮಾತನ್ನು ದೊಡ್ಡತಪ್ಪೆಂದು ತಿಳಿದ ಹೆತ್ತ ತಾಯಿಯೆ ತನ್ನ ಭುಜ ಮಟ್ಟಕ್ಕೆ ಬೆಳೆದುನಿಂತಿದ್ದ ಮಗನನ್ನೆ ಕೊಂದು ಮುಗಿಸಿದ್ದಾಳೆ.!
ಮಗ ತನ್ನ ಬಟ್ಟೆ ಮತ್ತು ‘ಬಿಂದಿ’ ಬಗ್ಗೆ ಪದೇ ಪದೇ ಪ್ರಶ್ನಿಸುತ್ತಿದ್ದ ಎಂಬ ಕ್ಷುಲ್ಲಕ ಕಾರಣಕ್ಕೆ ಆತನನ್ನು ತಾಯಿ ಹತ್ಯೆ ಮಾಡಿದ್ದಾಳೆ ಎಂಬ ಆಘಾತಕಾರಿ ಸಂಗತಿಯೂ ವರದಿಯಾಗಿದೆ.!

ಫೆಬ್ರವರಿ 14 ರಂದು ಚೌಧರನ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, 8 ನೇ ತರಗತಿ ವಿದ್ಯಾರ್ಥಿ ಅಭ್ಯುದಯ್ ಜೈನ್ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದ.!? ಆರಂಭದಲ್ಲಿ ಇದು ಆತ್ಮಹತ್ಯೆ ಎಂದು ತೋರಿದ್ದು, ಆದರೆ ಮರಣೋತ್ತರ ಪರೀಕ್ಷೆಯ ವರದಿಯ ನಂತರ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.?ಅತ ಸಾವಿಗೆ ಕತ್ತು ಹಿಸುಕುವಿಕೆಯಿಂದ ಉಸಿರುಗಟ್ಟಿ ಸಾವಿಗೆ ಕಾರಣ ಎಂದು ದೃಢಪಡಿಸಿತ್ತು.
ಮಾಹಿತಿಯ ಪ್ರಕಾರ, ಅಭ್ಯುದಯ್ ತಂದೆ ಅನುಪಮ್ ಜೈನ್ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಾರೆ. ಆತನ ತಾಯಿ ಅಲ್ಕಾ ಜೈನ್ ಗೃಹಿಣಿ.
ತಾಯಿ ಅಲ್ಕಾ ಜೈನ್ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಅಭ್ಯುದಯ್ ಮನೆಯಲ್ಲಿ ಒಬ್ಬಂಟಿಯಾಗಿದ್ದ. ಆಕೆ ಸಂಜೆ 7 ಗಂಟೆ ಸುಮಾರಿಗೆ ಹಿಂದಿರುಗಿದಾಗ, ಬಾಗಿಲು ಒಳಗೆ ಲಾಕ್ ಆಗಿರುವುದು ಕಂಡುಬಂದಿದೆ. ಅದನ್ನು ತೆರೆಯಲು ಹಲವು ಬಾರಿ ಪ್ರಯತ್ನ ಪಟ್ಟರು ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ನಂತರ, ನಮ್ಮ ಮನೆ ಮಾಲೀಕರಿಂದ ಡೂಪ್ಲಿಕೇಟ್ ಕೀ ಪಡೆದು ಒಳಗೆ ಪ್ರವೇಶಿಸಿದ್ದು, ಅಭ್ಯುದಯ್ ತನ್ನ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವುದನ್ನು ಕಂಡಿತ್ತು ಎಂದು ತಿಳಿಸಿದ್ದಳು.

ಅವನ ಕಾಲುಗಳನ್ನು ಕಟ್ಟಿಹಾಕಲಾಗಿತ್ತು ಮತ್ತು ಅವನ ಕುತ್ತಿಗೆಗೆ ದುಪಟ್ಟಾ ಸುತ್ತಲಾಗಿತ್ತು. ನೆರೆಹೊರೆಯವರು ಮತ್ತು ಮನೆ ಮಾಲೀಕರು ಅವನನ್ನು ಕರೆದುಕೊಂಡು ಜಿಲ್ಲಾ ಆಸ್ಪತ್ರೆಗೆ ಹೊಗಿದ್ದೇವು ಆದರೆ ವೈದ್ಯರು ಇಲ್ಲಿದೆ ಬರುವ ಮೊದಲೇ ಅತ ಮೃತಪಟ್ಟಿದ್ದಾನೆ ಎಂದು ಹೇಳಿದರು.
ಬಾಲಕನ ಕುತ್ತಿಗೆಯ ಮೇಲಿನ ಗುರುತುಗಳ ಬಗ್ಗೆ ಅನುಮಾನಗೊಂಡ ಪೊಲೀಸರು ಕೂಲಂಕಷ ತನಿಖೆ ನಡೆಸಿದಾಗ ಕಾಲೋನಿಯ ಸಿಸಿಟಿವಿ ದೃಶ್ಯಾವಳಿಗಳು, ತಾಯಿಯ ಕರೆ ದಾಖಲೆಗಳು, ನೆರೆಹೊರೆಯವರು ಮತ್ತು ಸಾಕ್ಷಿಗಳ ಹೇಳಿಕೆಗಳು ಮತ್ತು ಅಪರಾಧ ಸ್ಥಳದಿಂದ ವಿಧಿವಿಜ್ಞಾನದ ಸಾಕ್ಷ್ಯಗಳಂತಹ ನಿರ್ಣಾಯಕ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆಗೆ ಮುಂದಾದ ಪೊಲೀಸರಿಗೆ ಸಾವಿನ ಹಿಂದಿನ ಅಸಲಿ ಕಥೆ ಏನು.? ಕೊಲೆಮಾಡಿದವರು ಯಾರು.?ಎನ್ನುವುದು ತಿಳಿದಿತ್ತು.
ಅಲ್ಕಾ ಜೈನ್ ಅವರನ್ನು ಪ್ರಮುಖ ಶಂಕಿತರನ್ನಾಗಿ ಸಾಕ್ಷಿಗಳು ಸೂಚಿಸಿದ್ದವು. ಸಾಕ್ಷ್ಯಗಳ ಹೊರತಾಗಿಯೂ, ಆಕೆ ಅಪರಾಧವನ್ನು ನಿರಾಕರಿಸುತ್ತಲೇ ಇದ್ದಳಂತೆ. ಇದು ಆತ್ಮಹತ್ಯೆಯ ಪ್ರಕರಣ ಎಂದು ಹೇಳುತ್ತಲೇ ಇದ್ದಾಳೆ. ಆದಾಗ್ಯೂ, ಪೊಲೀಸರು ಆಕೆಯನ್ನು ಬಂಧಿಸಿ ಮತ್ತು ಹೆಚ್ಚಿನ ತನಿಖೆಗಾಗಿ ರಿಮಾಂಡ್ ಪಡೆಯಲು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.



