
ಶಿವಮೊಗ್ಗ :ಭ್ರಷ್ಟಾಚಾರದ ವಿರುದ್ದ ಸಿಡಿದೆದ್ದ ಮಹಾನಗರ ಪಾಲಿಕೆ ಮಾಜಿ ಸದಸ್ಯ ವಿಶ್ವಾಸ್.! ಇನ್ಮುಂದೆ ಭ್ರಷ್ಟಾಚಾರ ಕೊನೆಗೊಳ್ಳದಿದ್ರೆ ಹೋರಾಟ ಮಾಡಬೇಕಾದಿತು.?ಎಚ್ಚರಿಕೆ.
ನಾನು ಈ ಮೊದಲೇ ಸಾಕಷ್ಟು ಬಾರಿ ಬರೆದಿರುವಂತೆ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರದ ಘಮಲು ಹೆಸರಿಗಷ್ಟೆ ಸ್ಮಾರ್ಟ್ ಸಿಟಿ ಕಿರೀಟ ತೊಟ್ಟ ಶಿವಮೊಗ್ಗ ನಗರವನ್ನು ಪಸರಿಸಿದೆ.ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ರುದ್ರ ತಾಂಡವ ಆಡುತ್ತಿದ್ದು.ಯಾವುದೇ ಕೆಲಸಕ್ಕೂ ಹಣ ಕೊಟ್ಟರಷ್ಟೆ ಕೆಲಸ ಎಂಬಂತಾಗಿದೆ.ಇಲ್ಲಿಯ ನೌಕರರಿಗೆ ಸರ್ಕಾರ ತಿಂಗಳು ಸರಿಯಾಗಿ ಸಂಬಳಕೊಟ್ಟರು ಕೆಲವು ನೌಕರರು ಗಿಂಬಳದ ಆಸೆಗೆ ಜೂಲ್ಲು ಸುರಿಸಿ ಕುಳಿತಿದ್ದಾರೆ.ಇಲ್ಲಿಯ ಕೆಲವು ನೌಕರರ ಐಶಾರಾಮಿ ಬದುಕೆ ಅದನ್ನು ಸಾರಿ ಸಾರಿ ಹೇಳುತ್ತಿದೆ..ಅ ಮಟ್ಟದ ಭ್ರಷ್ಟಾಚಾರ ಶಿವಮೊಗ್ಗ ಮಹಾನಗರ ಪಾಲಿಕೆಯನ್ನು ಜಬಡಿ ಹಾಕಿದೆ..ಈ ಕಾರಣದಿಂದಲೇ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಯುವ ಮುಂದಾಳು ರಾಷ್ಟ್ರ ಭಕ್ತ ಬಳಗದ ವಿಶ್ವಾಸ್ ಸಿಡಿದೆದ್ದಿದ್ದಾರೆ.ಪತ್ರಿಕಾ ಗೋಷ್ಠಿಯಲ್ಲಿ ವಿಶ್ವಾಸ್ ಹೇಳಿದ್ದೇನು……
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಮಹಾನಗರ ಪಾಲಿಕೆಯ ಭ್ರಷ್ಟಾಚಾರಗಳು ಕೊನೆಗೊಳ್ಳಬೇಕು ಪಾಲಿಕೆ ಸಾರ್ವಜನಿಕ ಸ್ನೇಹಿಯಾಗಬೇಕು ಎಂದು ಪಾಲಿಕೆಯ ಮಾಜಿ ಸದಸ್ಯ ಹಾಗೂ ರಾಷ್ಟ್ರ ಭಕ್ತ ಬಳಗದ ಮುಖಂಡ ಯುವ ಮುಂದಾಳು ವಿಶ್ವಾಸ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಇತ್ತೀಚೆಗೆ ಲೋಕಾಯುಕ್ತ ದಾಳಿ ನಡೆದಿದ್ದು ಮತ್ತು ಶಶಿಧರ್ ಎಂಬಾತನ ವಿರುದ್ಧ ದೂರು ದಾಖಲಿದ್ದು, ಈ ಹಿಂದೆ ಕೃಷ್ಣಪ್ಪ ಅವರು ಕೂಡ ಲೋಕಾಯುಕ್ತರ ಬಲೆಗೆ ಬಿದ್ದಿದ್ದು ಸಾಕ್ಷಿಯಾಗಿದೆ. ಸಾರ್ವಜನಿಕರ ಯಾವುದೇ ಕೆಲಸವು ಹಣವಿಲ್ಲದೆ ಆಗುತ್ತಿಲ್ಲ.ಹಣವಿಲ್ಲದ ಬಡವರ ಕೆಲಸಗಳು ಕನಸಾಗೆ ಉಳಿದಿವೆ. ತಮ್ಮ ದುಡಿಮೆಯ ಕೆಲಸವನ್ನು ಬಿಟ್ಟು ತಮ್ಮ ಯಾವುದಾದರೊಂದು ಕೆಲಸಕ್ಕೆ ಮಾಹಾನಗರ ಪಾಲಿಕೆ ಮೆಟ್ಟಿಲು ಹತ್ತಿದರೆ ಅಲ್ಲಿನ ಅಧಿಕಾರಿಗಳು ಸಬೂಬು ಕೇಳಿಯೆ ಸುಸ್ತಾಗಿ ಹೋಗುತ್ತಾರೆ .

ಕೆಲಸ ಮಾಡಿಕೊಡಲು ಇಲ್ಲಿ ಕೆಲವರು ಲಂಚ ಕೇಳುತ್ತಾರೆ.ಹಣವಿರುವ ಒಂದಿಬ್ಬರ ಕೆಲಸವಾದರೆ ಉಳಿದ ನಗರದ ನಾಗರಿಕರ ಯಾವುದೇ ಕೆಲಸಗಳೂ ಆಗುತ್ತಿಲ್ಲ. ಅದರಲ್ಲೂ ಇ-ಖಾತೆ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಿದೆ ಎಂದು ಆರೋಪಿಸಿದರು.
ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಸುಮಾರು 3600 ಮನೆಗಳಿವೆ. ಇವತ್ತಿಗೂ ಆಶ್ರಯ ನಿವಾಸಿಗಳು ಎನ್ಓಸಿಗೆ, ಖಾತೆಗೆ ಮತ್ತು ವಿವಿಧ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಇವರೆಲ್ಲಾ ಕೂಲಿ ಕಾರ್ಮಿಕರು ಅವರು ಒಂದು ದಿನದ ಕೂಲಿ ಬಿಟ್ಟು ಆಟೋ ಹಿಡಿದು ಬಂದರೆ ಸಾವಿರ ರೂ. ಖರ್ಚಾಗುತ್ತದೆ ಆದರೂ ಕೆಲಸ ಆಗುವುದಿಲ್ಲ.

ಸಾಂದರ್ಭಿಕ ಚಿತ್ರ
ಈಗ ಸಸ್ಪೆಂಡ್ ಆರುವ ಶಶಿಧರ್ ಎಂಬ ಅಧಿಕಾರಿಗೆ ಈ ಹಿಂದೆಯೇ ನಾವು ಹೇಳಿದ್ದೆವು. ಆದರೂ ಸ್ಪಂದನೆ ನೀಡಿರಲಿಲ್ಲ. ಪಾಲಿಕೆಯಲ್ಲಿ ಚುನಾವಣೆ ಆಗದೆ ಹಲವು ದಿನಗಳಾಗಿವೆ. ಜನಪ್ರತಿನಿಧಿಗಳು ಇಲ್ಲ.ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ಕೂಡಲೇ ಪಾಲಿಕೆಗೆ ಚುನಾವಣೆ ನಡೆಸಬೇಕು ಆಯುಕ್ತರು ಭ್ರಷ್ಟಾಚಾರ ತಡೆಗೆ ಮತ್ತು ನಗರದ ಅವ್ಯವಸ್ಥೆಗೆ, ಗಮನಹರಿಸಬೇಕು ಎಂದರು.
ರಾಷ್ಟ್ರ ಭಕ್ತ ಬಳಗದ ಮತ್ತೋರ್ವ ಮುಖಂಡ ವಕೀಲ ವಾಗೀಶ್ ಮಾತನಾಡಿ, ಡಿಸಿ ಕಛೇರಿ ಎದುರು ಇರುವ ಆಟದ ಮೈದಾನದ ವಿವಾದಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿತ್ತು. ಎಂಟು ವಾರದೊಳಗೆ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಆದರೆ ಅವಧಿ ಮುಗಿದು ಒಂದು ತಿಂಗಳಾಗಿದೆ ಆಯುಕ್ತರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಜಾಗ ಪಾಲಿಕೆಯದು ಎಂದು ಹೇಳಿಲ್ಲ. ಆದ್ದರಿಂದ ರಾಷ್ಟ್ರ ಭಕ್ತ ಬಳಗದಿಂದ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲಾಗುವುದು ಮತ್ತು ವಾರದೊಳಗೆ ತೀರ್ಮಾನ ಕೈಗೊಳ್ಳದಿದ್ದರೆ ಅವರ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.
ಇನ್ನೋರ್ವ ಮುಖಂಡ ಶ್ರೀಕಾಂತ್ ಮಾತನಾಡಿ, ಧರ್ಮಸ್ಥಳದ ನಾಟಕ ಕೊನೆಗೊಂಡಿದೆ. ಧರ್ಮವೇ ಗೆದ್ದಿದೆ. ಧರ್ಮಸ್ಥಳದ ಪರವಾಗಿ ಮೊದಲ ಹೋರಾಟ ರೂಪಿಸಿದವರೇ ರಾಷ್ಟ್ರಭಕ್ತ ಬಳಗ. ಅದರ ಪ್ರತಿಫಲ ಈಗ ಸಿಕ್ಕಿದೆ. ಧರ್ಮಸ್ಥಳಕ್ಕೆ ಇದ್ದ ಕಳಂಕ ಕಳಚಿದೆ ಈ ಹಿನ್ನಲೆಯಲ್ಲಿ ಕೆ.ಈ. ಕಾಂತೇಶ್ರವರ ನೇತೃತ್ವದಲ್ಲಿ ಸೆ.2ರ ಬೆಳಿಗ್ಗೆ 8 ಗಂಟೆಗೆ ರಾಷ್ಟ್ರ ಭಕ್ತ ಬಳಗದ ಸಂಚಾಲಕ ಈಶ್ವರಪ್ಪ ಅವರ ನಿವಾಸದಿಂದ ಧರ್ಮಸ್ಥಳಕ್ಕೆ ಸುಮಾರು 300 ವಾಹನಗಳಲ್ಲಿ ರಾಷ್ಟ್ರ ಭಕ್ತರ ಬಳಗದ ಸದಸ್ಯರು ಹಾಗೂ ಧರ್ಮಸ್ಥಳ ಭಕ್ತರು ತೆರಳಿ ವಿಶೇಷ ಪೂಜೆ ಧರ್ಮಸ್ಥಳದಲ್ಲಿ ಸಲ್ಲಿಸಲಾಗುವುದು. ಜೊತೆಗೆ ತರಕಾರಿ ಹಾಗೂ ಅಕ್ಕಿಯನ್ನು ಸಮರ್ಪಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮೋಹನ್ ಜಾದವ್, ಬೇಲೂರು ರವಿ, ಜಿ.ಪಿ. ಶ್ರೀಕಾಂತ್, ಕುಬೇರಪ್ಪ, ಟಿ. ನಾಯಕ್ ಸೇರಿದಂತೆ ರಾಷ್ಟ್ರ ಭಕ್ತ ಬಳಗದ ಮುಖಂಡರು ಸದಸ್ಯರು ಇದ್ದರು.


