ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ ನಿಮ್ಮ ಕನಸುಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ.! ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.
ashwasurya/Shivamogga
ಅಶ್ವಸೂರ್ಯ/ಲಕ್ನೋ: ಲಕ್ನೋದ ಜೆಇಇ ಪರೀಕ್ಷೆಯಲ್ಲಿ ಫೇಲ್ ಅದ ಕಾರಣಕ್ಕೆ ಹದಿನೆಂಟು ವರ್ಷದ ಇಂಜಿನಿಯರ್ ವಿದ್ಯಾರ್ಥಿನಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.! ಈ ಘಟನೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವತಿ ಅದಿತಿ (18) ವಿದ್ಯಾರ್ಥಿನಿ.
ಅದಿತಿ ಉತ್ತರ ಪ್ರದೇಶದ ಗೋರಖ್ಪುರದ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮೊಮೆಂಟಮ್ ಕೋಚಿಂಗ್ ಸೆಂಟರ್ನ ವಿದ್ಯಾರ್ಥಿಯಾಗಿದ್ದಳು. ಕಳೆದ ಎರಡು ವರ್ಷಗಳಿಂದ ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳಂತೆ.! ಕೋಚಿಂಗ್ ತಯಾರಿಗಾಗಿ ಸತ್ಯದೀಪ ವಿದ್ಯಾರ್ಥಿ ನಿಲಯದಲ್ಲಿದ್ದಳಂತೆ.
ಜೆಇಇ ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ಬುಧವಾರ ಬೆಳಗ್ಗೆ ಮನೆಗೆ ಕರೆಮಾಡಿ ತಂದೆಯ ಬಳಿ ಮೊಬೈಲ್ ಫೋನ್ಗೆ ರಿಚಾರ್ಜ್ ಮಾಡುವಂತೆ ಹೇಳಿದ್ದಳಂತೆ. ಅದೇ ಸಮಯದಲ್ಲಿ ಅದಿತಿಯ ರೂಮ್ಮೇಟ್ ಹೊರಗೆ ಹೋಗಿದ್ದರು.
ಹೊರಗಡೆ ಹೋಗಿದ್ದ ರೂಮ್ಮೇಟ್ ವಾಪಾಸಾಗಿದ್ದು, ರೂಮ್ ಬಾಗಿಲು ಬಡಿದಿದ್ದಾಳೆ. ಈ ವೇಳೆ ಅದಿತಿ ಯಾವುದೇ ಪ್ರತಿಕ್ರಿಯೆ ನೀಡದಿದ್ದರಿಂದ ಅನುಮಾನಗೊಂಡು ಕಿಟಕಿಯಿಂದ ಒಳಗೆ ನೋಡಿದಾಗ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ. ಬಳಿಕ ಆಕೆಯ ರೂಮ್ಮೇಟ್ ಹಾಸ್ಟೆಲ್ ವಾರ್ಡನ್ಗೆ ವಿಷಯ ತಿಳಿಸಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಅಷ್ಟೋತ್ತಿಗಾಗಲೇ ಬಾಳಿ ಬದುಕ ಬೇಕಾದ ಜೀವ ಒಂದು ನೇಣು ಕುಣಿಕೆಗೆ ಕೊರಳೊಡ್ಡಿ ಉಸಿರು ಚಲ್ಲಿದೆ. ಅದಿತಿ ತನ್ನ ಕೈಯಾರ ಬದುಕಿಗೆ ಅಂತ್ಯವಾಡಿ ಸಾವಿನ ಮನೆ ಸೇರಿದ್ದಾಳೆ.!ಮುದ್ದಾದ ಹಿಡುಗಿ ಅದಿತಿಗೆ ಅದೇನಾಯಿತು ಹೆತ್ತವರನ್ನು ಒಡಹುಟ್ಟಿದ ತಂಗಿಯನ್ನು ಮರೆತು ಇಹಲೋಕ ತ್ಯಜಿಸಿದ್ದಾಳೆ.!ಅದಿತಿ ಸಾಯುವ ಮುನ್ನ ಅದೇನು ಮನದಲ್ಲಿತ್ತೊ ಒಂದೆರಡು ಸಾಲುಗಳನ್ನು ಹೆತ್ತವರಿಗಾಗಿ ಬರೆದು ಹೋಗಿದ್ದಾಳೆ.!ಅದು ಅದಿತಿಯ ಕೊನೆಯ ಪತ್ರವಾಗಿದೆ.
ಡೆತ್ನೋಟ್ನಲ್ಲೇನಿದೆ.?
ಅಪ್ಪ ,ಅಮ್ಮ ನನ್ನನ್ನು ಕ್ಷಮಿಸಿ. ನಿಮ್ಮ ಆಸೆಯನ್ನು ನನ್ನಿಂದ ಈಡೇರಿಸಲಾಗಲಿಲ್ಲ. ಇಲ್ಲಿಗೆ ನನ್ನ ನಿಮ್ಮ ಸಂಬಂಧವನ್ನು ಕೊನೆಗೊಳಿಸುತ್ತಿದ್ದೇನೆ. ನೀವು ನನಗೆ ಬೇಕಾದಷ್ಟು ಪ್ರೀತಿ ನೀಡಿದ್ದೀರಿ. ದಯವಿಟ್ಟು ನನಗಾಗಿ ಅಳಬೇಡಿ. ನಿಮ್ಮ ಕನಸುಗಳನ್ನು ಈಡೇರಿಸಲು ನನ್ನಿಂದ ಸಾಧ್ಯವಾಗಲಿಲ್ಲ.ನನ್ನ ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಅವಳು ನಿಮ್ಮ ಕನಸುಗಳನ್ನು ಈಡೇರಿಸುತ್ತಾಳೆ. ನಿಮ್ಮ ಪ್ರೀತಿಯ ಅದಿತಿ ಎಂದು ಸಾಯುವ ಮುನ್ನ ಕೊನೆಯ ಪತ್ರವನ್ನು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಎಂದು ಪೊಲೀಸರು ತಿಳಿಸಿದ್ದಾರೆ.ತಕ್ಷಣವೇ ಪೊಲೀಸರು ಅದಿತಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ತ್ಯಾಗಿ ತಿಳಿಸಿದ್ದಾರೆ.