Headlines

ಗಂಡ-ಹೆಂಡತಿಯ ವಿಚ್ಛೇದನ ಪ್ರಕ್ರಿಯೆ ಮತ್ತು ವ್ಯವಹಾರದ ವಿಷಯದ ಜಗಳ.! ದೆಹಲಿಯ ಪ್ರಸಿದ್ಧ ಬೇಕರಿ ಮಾಲೀಕ ಆತ್ಮಹತ್ಯೆಗೆ ಶರಣು.!

ದೆಹಲಿ:ದೆಹಲಿಯ ಪ್ರಸಿದ್ಧ ಬೇಕರಿ ಮಾಲೀಕ ಪುನೀತ್ ಖುರಾನಾ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ. ಪತ್ನಿಯೊಂದಿಗಿನ ವಿಚ್ಛೇದನ ಪ್ರಕ್ರಿಯೆ ಮತ್ತು ವ್ಯವಹಾರದ ಬಗ್ಗೆ ನಡೆದ ಜಗಳವೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.!
ದೆಹಲಿ ನಗರದಲ್ಲಿ ಹೆಸರುವಾಸಿಯಾಗಿರುವ ಬೇಕರಿಯೊಂದರ ಮಾಲೀಕ ಪುನೀತ್ ಖುರಾನಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪತ್ನಿಯಿಂದ ದೂರವಾಗಿದ್ದ ಅವರು ಮಂಗಳವಾರ ಸಂಜೆ ವೇಳೆಗೆ ಸಾವಿಗೆ ಶರಣಾಗಿದ್ದಾರೆ. ಪತ್ನಿಯೊಂದಿಗಿನ ವಿಚ್ಛೇದನ ಪ್ರಕ್ರಿಯೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

ದೆಹಲಿಯ ಪ್ರಸಿದ್ಧ ಕೆಫೆಯ ಸಹ-ಸಂಸ್ಥಾಪಕ ಪುನೀತ್ ಖುರಾನಾ ಮಂಗಳವಾರ ಸಂಜೆ ಮಾಡೆಲ್ ಟೌನ್‌ನ ಕಲ್ಯಾಣ್ ವಿಹಾರ್ ಪ್ರದೇಶದಲ್ಲಿರುವ ತಮ್ಮ ಮನೆಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿಯುತಿದ್ದಂತೆ ಕುಟುಂಬ ಸದಸ್ಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಕೆಳಗಿಳಿಸಿ ಸ್ಥಳ ಮಹಜರು ಮಾಡಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಕುಟುಂಬದ ಸದಸ್ಯರ ಪ್ರಕಾರ,ಇನ್ನೂ 38 ವರ್ಷದ ಉದ್ಯಮಿ ಪುನೀತ್ ತಮ್ಮ ವಿಚ್ಛೇದನ ಪ್ರಕ್ರಿಯೆಯಿಂದ ತೀವ್ರವಾಗಿ ಖಿನ್ನತೆಗೆ ಒಳಗಾಗಿದ್ದರು. ಆತ್ಮಹತ್ಯೆಗೆ ಕೆಲ ಸಮಯದ ಮೊದಲು, ತಮ್ಮ ಪತ್ನಿಯೊಂದಿಗೆ ಜಂಟಿಯಾಗಿ ಆರಂಭಿಸಿದ ಬೇಕರಿ ವ್ಯವಹಾರದ ಬಗ್ಗೆ ಫೋನ್‌ನಲ್ಲಿ ಮಾತನಾಡಿದ್ದರು

ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಫೋನ್‌ನಲ್ಲಿ ಮಾತನಾಡುವಾಗ ಇಬ್ಬರು ಕೂಡ ಅ ಸಂದರ್ಭದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಕಾನೂನುಬದ್ಧವಾಗಿ ನಡೆಯುತ್ತಿದ್ದ ವಿಚ್ಛೇದನ ಪ್ರಕ್ರಿಯೆ ಮತ್ತು ವ್ಯವಹಾರದ ಬಗ್ಗೆ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈಗಾಗಲೇ ಒತ್ತಡದಲ್ಲಿದ್ದ ಪುನೀತ್, ಪತ್ನಿಯೊಂದಿಗಿನ ವಾಗ್ವಾದದ ನಂತರ ಮತ್ತಷ್ಟು ಖಿನ್ನತೆಗೆ ಒಳಗಾಗಿ ರೂಮಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.!
ಪೊಲೀಸರು ಪುನೀತ್ ಅವರ ಫೋನ್ ದಸ್ತಗಿರಿ ಮಾಡಿದ್ದ ಅವರ ಸಾವಿಗೆ ಕಾರಣವೇನು ಎಂಬುದನ್ನು ತಿಳಿಯಲು ತನಿಖೆ ಚುರುಕುಗೊಳಿಸಿದ್ದಾರೆ. ಪುನೀತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ಪತ್ನಿಯನ್ನೂ ವಿಚಾರಣೆ ನಡೆಸಲು  ಮುಂದಾಗಿದ್ದು, ಪೂರ್ಣ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ದೆಹಲಿ ಪೊಲೀಸರು ಮಾದ್ಯಮದವರಿಗೆ ಸ್ಪಷ್ಟಪಡಿಸಿದ್ದಾರೆ.
2016 ರಲ್ಲಿ ಇವರಿಬ್ಬರ ವಿವಾಹವಾಗಿತ್ತು.ದೆಹಲಿ ಬೇಕರಿ ಮಾಲಿಕತ್ವದ ಜೊತೆಗೆ ಫಾರ್ ಗಾಡ್ಸ್ ಕೇಕ್ ಬೇಕರಿ ಮತ್ತು ವುಡ್‌ಬಾಕ್ಸ್ ಕೆಫೆ ಎಂಬ ಇನ್ನೊಂದು ಉಪಾಹಾರ ಗೃಹದ ಸಹ- ಮಾಲೀಕತ್ವವನ್ನು ಹೊಂದಿದ್ದರು. ಕೆಲ ಸಮಯದ ಹಿಂದೆ ವುಡ್‌ಬಾಕ್ಸ್ ಕೆಫೆಯನ್ನು ಮುಚ್ಚಲಾಗಿದೆ ಎಂದು ವರದಿ ತಿಳಿಸಿದೆ.
ಈ ನಡುವೆ ಇವರಿಬ್ಬರ ನಡುವಿನ ಸಂಭಾಷಣೆಯ ಆಡಿಯೋ ಕೂಡ ಪೊಲೀಸರಿಗೆ ಸಿಕ್ಕಿದ್ದು, ನೀವು ನನಗೆ ಬೆಳಿಗ್ಗೆ 3 ಗಂಟೆಗೆ ಕರೆ ಮಾಡುತ್ತಿದ್ದೀರಿ, ನಿಮಗೆ ನಿದ್ರೆ ಬರುತ್ತಿಲ್ಲವೇ? ನೀವು ನನ್ನನ್ನು ಮತ್ತು ನನ್ನ ಕುಟುಂಬವನ್ನು ಅಗೌರವಗೊಳಿಸಿದ್ದೀರಿ ಎಂದು ಪತ್ನಿ ಹೇಳುತ್ತಿರುವುದು ಕಂಡುಬಂದಿದೆ. ಪ್ರತಿಯಾಗಿ ಗಂಡ ಪುನೀತ್ ಖುರಾನಾ ನಿನಗೇನು ಬೇಕು ಎಂದು ಹೇಳು ಎಂದಿದ್ದಾನೆ.

ಈ ನಡುವೆ ಪುನೀತ್ ಪತ್ನಿ ಮಣಿಕಾ ಪಹ್ವಾ, ಗಂಡನ ಸಹೋದರಿ ಮತ್ತು ಪೋಷಕರ ವಿರುದ್ಧ ಕಿರುಕುಳದ ಆರೋಪವನ್ನು ಹೊರಿಸಿದ್ದಾರೆ. ಆದರೆ ಪುನೀತ್ ಅವರ ಸಹೋದರಿ ಪುನೀತ್  ಪತ್ನಿ ಮತ್ತು ಆಕೆಯ ಅಮ್ಮ ತನ್ನ ಸಹೋದರನಿಗೆ ಮಾನಸಿಕ ಕಿರುಕುಳ ಮತ್ತು ಚಿತ್ರಹಿಂಸೆ ನೀಡಿದ್ದಾರೆಂದು   ಸುಮಾರು 59 ನಿಮಿಷಗಳ ವೀಡಿಯೊ ರೆಕಾರ್ಡಿಂಗ್ ಇದೆ, ಅದರಲ್ಲಿ ಪುನೀತ್ ಅವರು ಎದುರಿಸಿದ ಕಿರುಕುಳದ ವಿವರಗಳನ್ನು ಉಲ್ಲೇಖಿಸಿದ್ದಾರೆ. ಪತ್ನಿ ಪುನೀತ್ ಅವರ ಸಾಮಾಜಿಕ ಮಾಧ್ಯಮ ಖಾತೆಯನ್ನು ಸಹ ಹ್ಯಾಕ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಕಳೆದ ಇಪ್ಪತ್ತು ದಿನದ ಹಿಂದೆ
ಈಗ ಪುನೀತ್ ಕೂಡ ಬೆಂಗಳೂರಿನ ಟೆಕ್ಕಿ ಅತುಲ್ ಆತ್ಮಹತ್ಯೆ ನೆನಪಿಸುವಂತೆ ಪುನೀತ್ ಖುರಾನಾ ಆತ್ಮಹತ್ಯೆ ಘಟನೆ ನೆಡೆದಿದೆ. ಅತುಲ್ ಪರಿಸ್ಥಿತಿಯಂತೆ ಪುನೀತ್ ಎದುರಿಸುತ್ತಿದ್ದರು ಎಂದು ಶಂಕಿಸಲಾಗಿದೆ. ವ್ಯವಹಾರ ಮತ್ತು ವಿಚ್ಛೇದನದ ವಿಷಯದಲ್ಲಿ ಪತ್ನಿಯ ಒತ್ತಡವೇ ಅವರ ಸಾವಿಗೆ ಕಾರಣ ಎಂದು ಪುನೀತ್ ಕುಟುಂಬ ಸದಸ್ಯರು ಪೊಲೀಸರಲ್ಲಿ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!