ಶಿವಮೊಗ್ಗ:ಮೊಬೈಲ್ ನೋಡ್ತಾನೆ ಇರಬೇಡ ಅಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವತಿ
ಅಶ್ವಸೂರ್ಯ/ಶಿವಮೊಗ್ಗ ಡಿಸೆಂಬರ್ 26: ಯಾವಾಗಲೂ ಮೊಬೈಲ್ ನೋಡ್ತಸ ಇರಬೇಡ ಅಂದಿದ್ದಕ್ಕೆ ವಿಷ ಸೇವಿಸಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿ ಸಾವಿನಮನೆ ಸೇರಿದ್ದಾಳೆ.! ಈ ಪ್ರಕರಣ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ಧನುಶ್ರೀ(20) ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಸರ್ಕಾರಿ ಪದವಿ ಕಾಲೇಜಿನಲ್ಲಿ ಓದುತಿದ್ದ ಧನುಶ್ರೀಗೆ ಹೆಚ್ಚು ಮೊಬೈಲ್ ನೋಡುವ ಹವ್ಯಾಸವಂತೆ. ಮನೆಯವರು ಮೊಬೈಲ್ ಜಾಸ್ತಿ ನೋಡಬೇಡಮ್ಮ ಎಂದು ಬುದ್ಧಿ ಹೇಳಿ ಬೈದಿದ್ದಾರೆ.ಇದು ಪೋಷಕರ ಜವಬ್ದಾರಿ ಕೂಡ. ಇಷ್ಟಕ್ಕೆ ನೊಂದ ಯುವತಿ ಧನುಶ್ರೀ ದುಡುಕಿನ ನಿರ್ಧಾರ ಮಾಡಿ ಮೂರು ದಿನದ ಹಿಂದೆ ವಿಷ ಸೇವಿಸಿದ್ದಾಳೆ. ಕೂಡಲೇ ಧನುಶ್ರೀಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಇದೀಗ ಚಿಕಿತ್ಸೆ ಫಲಿಸದೇ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.