ತಿರುವಳ್ಳೂರು: ಬಿರಿಯಾನಿ ಮಾಡೋಕೆ ಕಾಗೆಗಳನ್ನ ಕೊಲ್ಲುತ್ತಿದ್ದ ದಂಪತಿ..! ಎಚ್ಚರಿಸಿದ ಅರಣ್ಯ ಇಲಾಖೆ.!
ಅಶ್ವಸೂರ್ಯ/ಶಿವಮೊಗ್ಗ
ತಮಿಳುನಾಡು: ತಮಿಳುನಾಡಿನ ತಿರುವಳ್ಳೂರಿನಲ್ಲಿ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ.ತಿರುವಳ್ಳೂರಿನ ಹಳ್ಳಿ ಒಂದದರಲ್ಲಿ ಕಾಗೆಗಳನ್ನು ಕೊಂದು ಇನ್ನೇನು ಬಿರಿಯಾನಿ ಸಿದ್ಧಪಡಿಸಲು ಮುಂದಾಗಿದ್ದ ಹೊಟೆಲ್ ಒಂದನ್ನು ನೆಡೆಸುತ್ತಿದ್ದ ದಂಪತಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಜತೆಗೆ ದಂಡವನ್ನೂ ವಿಧಿಸಿದೆ. ಈ ಕುರಿತ ಇಂಟ್ರಸ್ಟಿಂಗ್ ವರದಿಯೊಂದು ಇಲ್ಲಿದೆ..
ತಿರುವಳ್ಳೂರು ಜಿಲ್ಲೆಯ ನಯಪಕ್ಕಂ ಮೀಸಲು ಸಮೀಪದ ತೊರೈಪಕ್ಕಂ ಗ್ರಾಮದಲ್ಲಿ ರಮೇಶ್ ಮತ್ತು ಭೂಚಮ್ಮ ಎಂಬ ದಂಪತಿ ಕಾಗೆಗಳನ್ನು ಕೊಲ್ಲುತ್ತಿರುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿದಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ರಮೇಶ್ ದಂಪತಿಯ ಮನೆಯಲ್ಲಿ ಶೋಧ ನಡೆಸಿದ್ದಾರೆ. ಮನೆಯಲ್ಲಿದ್ದ 19 ಕಾಗೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಾಂದರ್ಭಿಕ ಚಿತ್ರ
ಅರಣ್ಯಾಧಿಕಾರಿಗಳು ದಂಪತಿಯನ್ನು ವಿಚಾರಿಸಿದಾಗ, ರಮೇಶ್ಗೆ 4 ಹೆಣ್ಣು ಮಕ್ಕಳು ಮತ್ತು 1 ಗಂಡು ಮಗನಿದ್ದಾನೆ .. ಊಟಕ್ಕಾಗಿ ಕಾಗೆಗಳನ್ನು ಹಿಡಿದಿದ್ದರಂತೆ. ಆದರೆ ರಸ್ತೆ ಬದಿಯ ಮತ್ತು ಹೆದ್ದಾರಿಗಳಲ್ಲಿನ ಸಣ್ಣ ಮಾಂಸಾಹಾರಿ ರೆಸ್ಟೋರೆಂಟ್ಗಳಿಗೆ ಈ ಮಾಂಸವನ್ನು ಪೂರೈಸಲು ಈ ಕಾಗೆಗಳನ್ನು ಹಿಡಿಯಲಾಗುತ್ತಿದೆ ಎಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ.
ಮಾಂಸಕ್ಕಾಗಿ ಕಾಗೆಗಳನ್ನು ಕೊಲ್ಲುತ್ತಿರುವ ಬಗ್ಗೆ ಅರಣ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಕಾಗೆ ಮಾಂಸ ತಿನ್ನುವುದರಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುತ್ತಾರೆ ದಂಪತಿ. ಈಗಾಗಲೇ ಕಾಗೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಅರಣ್ಯ ಇಲಾಖೆಯ ಸಂರಕ್ಷಣಾ ಕಾಯಿದೆ, 1972 ರ ಅಡಿಯಲ್ಲಿ ಕಾಗೆಗಳನ್ನು ಕೀಟಗಳೆಂದು ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ಕಾಗೆಯನ್ನು ಕೊಲ್ಲುತ್ತಿದ್ದ ದಂಪತಿಯನ್ನು ಬಂಧಿಸಲಿಲ್ಲ. ಆದರೂ ಎಚ್ಚರಿಕೆ ನೀಡಿ 5 ಸಾವಿರ ರೂ.ದಂಡ ವಿಧಿಸಿ, ಅರಣ್ಯ ಒತ್ತುವರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ..
ಅ ಭಾಗದ ಕೆಲವು ಹೊಟೆಲ್ ನಲ್ಲಿ ಕಾಗೆ ಮಾಂಸದ ಬಿರಿಯಾನಿ ತಯಾರಾಗಿತ್ತ.! ಅದು ಯಾವ ಹೊಟೆಲ್ ನಲ್ಲಿ ಎನ್ನುವುದು ನಿಗೂಢವಾಗಿದೆ.