Headlines

11ನೇ ಬಾರಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಇತಿಹಾಸ ನಿರ್ಮಿಸಿದ ಆ‌ರ್ ಎಂ ಮಂಜುನಾಥ್ ಗೌಡರಿಗೆ ಅಭಿನಂದನೆ : ಕುರುವಳ್ಳಿ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಯುವ ಕಾಂಗ್ರೆಸ್, ತೀರ್ಥಹಳ್ಳಿ

11ನೇ ಬಾರಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಇತಿಹಾಸ ನಿರ್ಮಿಸಿದ ಆ‌ರ್ ಎಂ ಮಂಜುನಾಥ್ ಗೌಡರಿಗೆ ಅಭಿನಂದನೆ : ಕುರುವಳ್ಳಿ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಯುವ ಕಾಂಗ್ರೆಸ್, ತೀರ್ಥಹಳ್ಳಿ

ಅಶ್ವಸೂರ್ಯ/ಶಿವಮೊಗ್ಗ: ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ( ಡಿಸಿಸಿ ಬ್ಯಾಂಕ್) ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಗುರುವಾರ ( ಜುಲೈ,11) ಚುನಾವಣೆ ನಡೆಯಿತು ನೀರಿಕ್ಷೆಯಂತೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನೆಡೆಯದೆ ಅವಿರೋಧ ಆಯ್ಕೆಯಾಗಿದೆ. ಅಧ್ಯಕ್ಷರ ಚುನಾವಣೆಗೂ ಮೊದಲೆ ಅಧ್ಯಕ್ಷರ ಗಾದಿಗೆ ಆರ್ ಎಂ ಮಂಜುನಾಥ್ ಗೌಡರ ಆಯ್ಕೆ ಖಚಿತವಾಗಿತ್ತು ಎಲ್ಲರ ಎಣಿಕೆಯಂತೆ ಆರ್ ಎಂ ಮಂಜುನಾಥ್ ಗೌಡರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ್ದಾರೆ,ಈ ಚುನಾವಣೆಯಲ್ಲಿ ಕುತೂಹಲ ಮೂಡಿಸಿದ್ದ ಉಪಾಧ್ಯಕ್ಷರ ಸ್ಥಾನಕ್ಕೆ ಎಸ್‌.ಕೆ ಮರಿಯಪ್ಪನವರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕಿಗೆ ಕಳೆದ ಎರಡು ವಾರದ ಹಿಂದೆ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆರ್ ಎಂ ಮಂಜುನಾಥ್ ಗೌಡ ಮತ್ತು ಎಸ್ ಕೆ ಮರಿಯಪ್ಪನವರು ತಮ್ಮ ಪ್ರತಿಸ್ಪರ್ಧಿಗಳಿಗಿಂತ ಅತ್ಯಧಿಕ ಮತಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಬೆಂಬಲಿತರು ಮತ್ತು ಬಿಜೆಪಿ ಬೆಂಬಲಿತರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಇದ್ದುದ್ದರಿಂದ ಈ ಬಾರಿ ಚುನಾವಣೆ ಕೂತುಹಲ ಮೂಡಿಸಿತ್ತು.

ಸದಸ್ಯರ ಚುನಾವಣೆಯಲ್ಲಿ ಅಂತಿಮವಾಗಿ ಕಾಂಗ್ರೆಸ್ ಬೆಂಬಲಿಗರು ( ಆರ್ ಎಂ ಎಂ ಬಣ ) ಎದುರಾಳಿಗಳನ್ನು ದೂಳಿ ಪಟ್ಟಮಾಡಿ ಹದಿನಾಲ್ಕು ಸ್ಥಾನದಲ್ಲಿ ಹನ್ನೆರಡು ಸ್ಥಾನವನ್ನು ಗೆದ್ದು ಬಿಗಿದರೆ ಬಿಜಿಪಿ ಬೆಂಬಲಿತರು ಒಂದು ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು.ಇನ್ನೂ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪನವರ ಬೆಂಬಲಿಗರಾದ ಮಹಾಲಿಂಗ ಶಾಸ್ರೀ ಗೆಲುವು ಸಾಧಿಸಿದ್ದರು.ಕಾಂಗ್ರೆಸ್ ಬೆಂಬಲಿತರಾದ ಸಾಗರ ಶಾಸಕ ಗೋಪಾಲ್ ಕೃಷ್ಣ ಬೇಳೂರು, ಎಂ.ಎಂ ಪರಮೇಶ್ವ‌ರ್, ಬಸವರಾಜ್ ಪಿಎಲ್, ಜಿ.ಎನ್ ಸುಧೀರ್, ಎಸ್ ಕೆ ಮರಿಯಪ್ಪ, ಟಿ.ಶಿವಶಂಕರಪ್ಪ, ಚಂದ್ರಶೇಖ‌ರ್ ಗೌಡ, ಕೆಪಿ ರುದ್ರಗೌಡ, ಆರ್ ಎಂ ಮಂಜುನಾಥ್‌ ಗೌಡ, ಬಸವಾನಿ ವಿಜಯದೇವ್, ಕೆ.ಪಿ ದುಗ್ಗಪ್ಪ ಗೌಡ, ಸಿ.ಹನುಮಂತಪ್ಪ ಗೆಲುವು ಸಾಧಿಸಿದ್ದರು.

ಗುರುವಾರ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಆ‌ರ್ ಎಂ ಮಂಜುನಾಥ್ ಗೌಡರು ಪ್ರತಿಷ್ಠಿತ ಡಿಸಿಸಿ ಬ್ಯಾಂಕಿಗೆ 11ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಎಸ್ ಕೆ ಮರಿಯಪ್ಪ ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಸಂಧರ್ಭದಲ್ಲಿ ಡಿಸಿಸಿ ಬ್ಯಾಂಕಿಗೆ 11ನೇ ಬಾರಿಗೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸಹಕಾರಿ ರತ್ನ ಪುರಸ್ಕೃತರಾದ ಆರ್ ಎಂ ಮಂಜುನಾಥ್ ಗೌಡ, ( ಹಾಲಿ ಅಧ್ಯಕ್ಷರು ಮಲೆನಾಡು ಪ್ರದೇಶ ಮಂಡಳಿ,ಶಿವಮೊಗ್ಗ, ಕರ್ನಾಟಕ ಸರ್ಕಾರ .ನಿರ್ದೇಶಕರು ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ) ಅವರು ಮತ್ತು ಉಪಾಧ್ಯಕ್ಷರಾಗಿ ಮೊದಲಬಾರಿಗೆ ಆಯ್ಕೆಯಾಗಿರುವ ಎಸ್ ಕೆ ಮರಿಯಪ್ಪನವರಿಗೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಕುರುವಳ್ಳಿ ನಾಗರಾಜ್ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಆರ್ ಎಂ ಎಂ ಅಭಿಮಾನಿ ಬಳಗದವರು ಅಭಿನಂದನೆ ಸಲ್ಲಿಸಿದ್ದಾರೆ

Leave a Reply

Your email address will not be published. Required fields are marked *

Optimized by Optimole
error: Content is protected !!