ಹರ್ಯಾಣ : IPS ಅಧಿಕಾರಿ ವೈ. ಪೂರಣ್ ಕುಮಾರ್ ತಮ್ಮ ಸರ್ವಿಸ್ ರಿವಲ್ವಾರ್ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ.? ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು.?
ಜನ ಮೆಚ್ಚುಗೆಯ IPS ಅಧಿಕಾರಿಯಾಗಿದ್ದ ವೈ. ಪೂರಣ್ ಕುಮಾರ್ ತಮ್ಮದೆ ಸರ್ವಿಸ್ ರಿವಲ್ವಾರ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.! ಈಗ ಈ ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.! ಮದ್ಯದ ದೊರೆಯ ಲಂಚ ಮತ್ತು ಆತನು ಹರಿಬಿಟ್ಟ ಆಡಿಯೋ ಕ್ಲಿಪ್ ಖಡಕ್ ಐಪಿಎಸ್ ಅಧಿಕಾರಿಯ ಜಂಘಾಬಲವನ್ನೆ ಕುಗ್ಗುವಂತೆಮಾಡಿ ಉರುಳಾಯ್ತಾ.?ಎನಿದು ಖಡಕ್ ಖಾಕಿ ಗುಂಡಿಗೆ ಬಲಿ….!
news.ashwasurya.in
ಅಶ್ವಸೂರ್ಯ/ಚಂಡಿಗಡ್ : ಹರಿಯಾಣ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಐಜಿ) ವೈ. ಪೂರಣ್ ಕುಮಾರ್ ಮಂಗಳವಾರ ಚಂಡೀಗಢದ ಸೆಕ್ಟರ್ 11 ನಲ್ಲಿರುವ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.!?
ಹರಿಯಾಣದ ಐಜಿ ವೈ. ಪೂರಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾದರು ಏಕೆ.? ಎನ್ನುವ ಪ್ರಶ್ನೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಅವರು ಒತ್ತಡದಲ್ಲಿದ್ದರಾ.? ಅಥವಾ ಏನಾದರೂ ಭಯದಿಂದಲೆ ಗುಂಡು ಹೊಡೆದುಕೊಂಡು ಬಲಿಯಾದರಾ.? ತನಿಖೆ ಮುಂದುವರೆದು ಚುರುಕುಗೊಂಡಿದೆ.ಕ್ಷಣದಿಂದ ಕ್ಷಣಕ್ಕೆ ಈ ಪ್ರಕರಣದಲ್ಲಿ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ.! ಹಿರಿಯ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಭ್ರಷ್ಟಾಚಾರ ಪ್ರಕರಣಕ್ಕೆ ಹೆದರಿದ್ದರೇ ಎಂದು ಈ ಹಾದಿಯಲ್ಲಿ ಹೊಸ ಬೆಳವಣಿಗೆಗಳು ಅನುಮಾನಗಳನ್ನು ಹುಟ್ಟುಹಾಕಿವೆ. ಅವರು ಮದ್ಯ, ಲಂಚ ಮತ್ತು ಆಡಿಯೋ ಕ್ಲಿಪ್ಗಳಿಗೆ ಬಲಿಯಾದರಾ.!? ಎನ್ನುವ ದೊಡ್ಡ ಪ್ರಶ್ನೆ ಕೆಲವರನ್ನು ಕಾಡಿದೆ.? ವಾಸ್ತವವಾಗಿ, ಹರಿಯಾಣ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಐಜಿ) ವೈ. ಪೂರಣ್ ಕುಮಾರ್ ಮಂಗಳವಾರ ಚಂಡೀಗಢದ ಸೆಕ್ಟರ್ 11 ನಲ್ಲಿರುವ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದ್ದು
ಈಗ, ಹಿರಿಯ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಮಾಹಿತಿ ಹೊರಬಿದ್ದಿದೆ. ರೋಹ್ಟಕ್ ಶ್ರೇಣಿಯ ಮಾಜಿ ಐಜಿ ವೈ. ಪೂರಣ್ ಕುಮಾರ್ ಅವರ ಗನ್ ಮ್ಯಾನ್ ಸುಶೀಲ್ ಕುಮಾರ್ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಾಜಿ ಐಜಿ ಅವರ ಆದೇಶದ ಮೇರೆಗೆ ಮಾಸಿಕ ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗಿ ಸುಶೀಲ್ ಕುಮಾರ್ ಪೊಲೀಸ್ ಕಸ್ಟಡಿಯಲ್ಲಿ ಒಪ್ಪಿಕೊಂಡಿದ್ದಾರಂತೆ.!? ಎರಡು ದಿನಗಳ ಹಿಂದೆ, ರೋಹ್ಟಕ್ನ ಅರ್ಬನ್ ಎಸ್ಟೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ರೋಹ್ಟಕ್ ರೇಂಜ್ನ ಮಾಜಿ ಐಜಿ ವೈ. ಪೂರಣ್ ಕುಮಾರ್ ಅವರ ಗನ್ ಮ್ಯಾನ್ ಸುಶೀಲ್ ಕುಮಾರ್ ವಿರುದ್ಧ ಈ ಎಫ್ಐಆರ್ ದಾಖಲಾಗಿತ್ತು. ಮದ್ಯ ವ್ಯಾಪಾರಿಯಿಂದ ಲಂಚ ಕೇಳಿದ ಆರೋಪ ಅವರ ಮೇಲಿದೆಯಂತೆ.?

ಆತ್ಮಹತ್ಯೆಗೆ ಇದೇ ಕಾರಣವಾಯ್ತಾ.?
ರೋಹ್ಟಕ್ ಪೊಲೀಸ್ ಮೂಲಗಳು ತಿಳಿಸಿರುವ ಪ್ರಕಾರ, ವೈ. ಪೂರಣ್ ಕುಮಾರ್ ಅವರ ಗನ್ ಮ್ಯಾನ್ ಸುಶೀಲ್, ಮದ್ಯದ ಉದ್ಯಮಿಯೊಬ್ಬರಿಂದ ಮಾಸಿಕ 2 ರಿಂದ 2.5 ಲಕ್ಷ ರೂಪಾಯಿಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ.!? ಇದಕ್ಕೆ ಸಂಬಂಧಿಸಿದ ಆಡಿಯೋ ಕ್ಲಿಪ್ ಪತ್ತೆಯಾಗಿದ್ದು, ಸುಶೀಲ್ ಅವರನ್ನು ಬಂಧಿಸಲಾಗಿದೆಯಂತೆ.! ವಿಚಾರಣೆಯ ಸಮಯದಲ್ಲಿ, ಸುಶೀಲ್ ವೈ. ಪೂರಣ್ ಕುಮಾರ್ ಎಂದು ಹೆಸರಿಸಿದ್ದಾರೆ. ರೋಹ್ಟಕ್ ಪೊಲೀಸರು ಮಂಗಳವಾರ ಸಂಜೆ ಸುಶೀಲ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿ ಜೈಲಿಗೆ ಕಳುಹಿಸಿದ್ದಾರೆ.
ವರ್ಗಾವಣೆಯ ಶಿಕ್ಷೆ ?

ಸೆಪ್ಟೆಂಬರ್ 29 ರಂದು, ಸರ್ಕಾರ ಪೂರಣ್ ಕುಮಾರ್ ಅವರನ್ನು ರೋಹ್ಟಕ್ ಶ್ರೇಣಿಯ ಐಜಿ ಹುದ್ದೆಯಿಂದ ತೆಗೆದುಹಾಕಿತ್ತು ಮತ್ತು ಅವರನ್ನು ಪೊಲೀಸ್ ತರಬೇತಿ ಕಾಲೇಜು (ಪಿಟಿಸಿ) ಸುನಾರಿಯಾದ ಐಜಿಯಾಗಿ ನೇಮಿಸಿತು. ಇದನ್ನು ಪೊಲೀಸ್ ಇಲಾಖೆಯೊಳಗಿನ ಶಿಕ್ಷೆ ವರ್ಗಾವಣೆ ಎಂದು ಪರಿಗಣಿಸಲಾಗಿತ್ತು. ಪೊಲೀಸರ ಪ್ರಕಾರ, ಮೃತ ಅಧಿಕಾರಿಯ ನಿವಾಸದಿಂದ ‘ವಿಲ್’ ಮತ್ತು ‘ಲಾಸ್ಟ್ ನೋಟ್’ ಪತ್ತೆಯಾಗಿದೆ. ಪೂರಣ್ ಕುಮಾರ್ ತಮ್ಮ ಸೇವಾ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಮಗಳು ನೆಲಮಾಳಿಗೆಯಲ್ಲಿ ಅವರ ಶವವನ್ನು ಕಂಡುಕೊಂಡಿದ್ದಾರೆ. ಆದಾಗ್ಯೂ, ಸ್ಥಳದಿಂದ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ.


