Headlines

ಮುಂಬಯಿ :ನಾಗ್ಪುರ ಜೈಲಿನಿಂದ 17 ವರ್ಷಗಳ ಬಳಿಕ ಹೊರಬಂದ ಮಾಜಿ (ಡ್ಯಾಡಿ) ಡಾನ್ ಅರುಣ್ ಗೌವ್ಲಿ.!

ಅಶ್ವಸೂರ್ಯ/ಮುಂಬಯಿ : 17 ವರ್ಷಗಳಿಗೂ ಹೆಚ್ಚು ಸಮಯ ಸೆರೆಮನೆಯಲ್ಲಿದ್ದ ಮುಂಬೈ ಗ್ಯಾಂಗ್‌ ಸ್ಟರ್,ಮಾಜಿ ಭೂಗತ ಲೋಕದ ದೊರೆ, ಪರಿವರ್ತಿತ ರಾಜಕಾರಣಿ ಮಾಜಿ ಶಾಸಕ ಅರುಣ್ ಗೌವ್ಲಿ (70) 2007ರಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಅರುಣ್ ಗೌವ್ಲಿ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ ಬಳಿಕ ಬುಧವಾರ ನಾಗ್ಪುರ ಸೆಂಟ್ರಲ್ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ.
ಮುಂಬೈನ ಶಿವಸೇನೆ ಕಾರ್ಪೊರೇಟರ್ ಕಮಲಾಕರ್ ಜಮ್ಸಂಡೇಕರ್ ಹತ್ಯೆ ಪ್ರಕರಣದಲ್ಲಿ ಗೌವ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ.
ವಿಚಾರಣಾ ನ್ಯಾಯಾಲಯದ ಷರತ್ತುಗಳಿಗೊಳಪಟ್ಟು ಗೌಳಿಗೆ ಜಾಮೀನು ಮಂಜೂರು ಮಾಡುವಾಗ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ಎನ್.ಕೋಟೀಶ್ವರ್ ಸಿಂಗ್ ಪೀಠವು,ಆತ 17 ವರ್ಷಗಳಿಗೂ ಹೆಚ್ಚು ಸಮಯದಿಂದ ಜೈಲಿನಲ್ಲಿದ್ದಾನೆ ಮತ್ತು ಆತನ ಮೇಲ್ಮನವಿ ತನ್ನ ಮುಂದೆ ಬಾಕಿಯಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿತ್ತು.
ಜೈಲು ಇಲಾಖೆಯ ಕಾನೂನು ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ಬಳಿಕ ಬುಧವಾರ ಅಪರಾಹ್ನ 12:30ರ ಸುಮಾರಿಗೆ ಗೌವ್ಲಿ ಜೈಲಿನಿಂದ ಹೊರನಡೆದಿದ್ದಾನೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

ಜೈಲಿನ ಹೊರಗೆ ಕಾದು ನಿಂತಿದ್ದ ಗೌವ್ಲಿ ಕುಟುಂಬದ ಸದಸ್ಯರು, ವಕೀಲರು ಮತ್ತು ಬೆಂಬಲಿಗರು ಮುಂಬೈನ ಮಾಜಿ ಡಾನ್‌ ನನ್ನು ಸ್ವಾಗತಿಸಿದರು.
‘ಡ್ಯಾಡಿ’ ಎಂದೂ ಕರೆಯಲ್ಪಡುವ ಗೌವ್ಲಿ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಎಂಕೋಕಾ)ಯಡಿ ಪ್ರಕರಣ ದಾಖಲಾಗಿತ್ತು. ವಿಚಾರಣಾ ನ್ಯಾಯಾಲಯವು ತನಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದನ್ನು ಎತ್ತಿ ಹಿಡಿದಿದ್ದ ಬಾಂಬೆ ಉಚ್ಚ ನ್ಯಾಯಾಲಯದ ಡಿ.9,2019ರ ತೀರ್ಪನ್ನು ಗೌವ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ.

ಬಾಯಖಳಾದ ದಗ್ಡಿ ಚಾಳ್‌ ನಿಂದ ಅಪರಾಧ ಜಗತ್ತಿನಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ ಗೌವ್ಲಿ ಅಖಿಲ ಭಾರತೀಯ ಸೇನಾ (ಎಬಿಎಸ್)ದ ಸ್ಥಾಪಕನಾಗಿದ್ದು, 2004ರಿಂದ 2009ರವರೆಗೆ ಮುಂಬೈನ ಚಿಂಚ್‌ಪೋಕ್ಲಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿದ್ದ.
ಆ.2012ರಲ್ಲಿ ಮುಂಬೈನ ಸೆಷನ್ಸ್ ನ್ಯಾಯಾಲಯವು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗವಳಿಗೆ ಜೀವಾವಧಿ ಶಿಕ್ಷೆ ಮತ್ತು 17 ಲಕ್ಷ ರೂ.ದಂಡ ವಿಧಿಸಿತ್ತು.

Leave a Reply

Your email address will not be published. Required fields are marked *

Optimized by Optimole
error: Content is protected !!