
ಪುಣ್ಣದ ಭೂಮಿಯ ಪಾಪದ ಕಥೆಗಳು ಸತ್ಯವೋ..ಅಸತ್ಯವೋ…ತನಿಖೆಯಿಂದಷ್ಟೆ ಬಯಲಾಗಬೇಕಿದೆ..
ಧರ್ಮಸ್ಥಳ: 1986 ಮತ್ತು 2018 ರ ಎರಡು ಸಾವಿನ ಪ್ರಕರಣಕ್ಕೆ ಮರುಜೀವ.!?
news.ashwasurya.in
ಅಶ್ವಸೂರ್ಯ/ಧರ್ಮಸ್ಥಳ: ಧರ್ಮಸ್ಥಳದ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಹಲವು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು 1986 ಮತ್ತು 2018 ರ ಸಾವಿನ ಪ್ರಕರಣ ಮತ್ತೆ ಮುನ್ನಲೇಗೆ ಬಂದಿದೆ. ಕರ್ನಾಟಕದ ಸುಪ್ರಸಿದ್ಧ ದೇವಾಲಯ ಪಟ್ಟಣವಾದ ಧರ್ಮಸ್ಥಳದಲ್ಲಿ ಹಲವು ಶವ ಹೂತಿಟ್ಟ ಪ್ರಕರಣ ಮತ್ತು ವ್ಯವಸ್ಥಿತ ಅಪರಾಧಗಳ ಬಗ್ಗೆ ದಿನ ನಿತ್ಯ ಸಾಲು ಸಾಲು ಆರೋಪಗಳಿಗೆ ನಲುಗಿ ಹೋಗಿರುವ ಪುಣ್ಯದ ಭೂಮಿಯಲ್ಲಿ ಹಿಂದಿನ ಎರಡು ಬಗೆಹರಿಯದ ಪಾಪದ ಕಥೆಗಳ ಪ್ರಕರಣ ಮತ್ತೆ ಬೆಳಕಿಗೆ ಬಂದಿವೆ.ಈ ಬೆಳವಣಿಗೆಯೊಂದಿಗೆ ಈ ಪ್ರದೇಶದಲ್ಲಿ ದೀರ್ಘಕಾಲದಿಂದ ಹೊಂದಿರುವ ಅಧಿಕಾರಸ್ಥರ ಬಗ್ಗೆ ಆಳವಾದ ತನಿಖೆಯ ಬೇಡಿಕೆಗೆ ಹೊಸ ಪುಷ್ಟಿಯನ್ನು ನೀಡಿದೆ.

ಈ ಸಾಮೂಹಿಕ ಶವ ಹೂತಿಟ್ಟ ಆರೋಪಗಳಲ್ಲಿ ಪಕ್ಕದ ರಾಜ್ಯ ಕೇರಳದ ಲಿಂಕ್ ಕೂಡ ಪಡೆದಿಕೊಂಡಿದೆ. ಕೇರಳದ ಒಂದು ಕುಟುಂಬ, 2018 ರಲ್ಲಿ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ನಡೆದ ಸಾವನ್ನು ಇದೇ ರೀತಿ ಮುಚ್ಚಿಹಾಕಲಾಗಿದೆ ಎಂದು ಆರೋಪಿಸಲಾಗಿದೆ.ಕೇರಳದ ಕಣ್ಣೂರು ನಿವಾಸಿ ಅನೀಶ್ ಜಾಯ್ ತಮ್ಮ ತಂದೆ ಕೆ.ಜೆ. ಜಾಯ್ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕೋರಿ ತಲಿಪರಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆಯನ್ನು ಈ ಹಿಂದೆ ಕರ್ನಾಟಕ ಪೊಲೀಸರು ರಸ್ತೆ ಅಪಘಾತ ಎಂದು ದಾಖಲಿಸಿದ್ದರೂ, ಧರ್ಮಸ್ಥಳದಲ್ಲಿ ತಮ್ಮ ಒಡೆತನದ ಭೂಮಿಯನ್ನು ಕಬಳಿಸುವ ಪ್ರಯತ್ನದಲ್ಲಿ ತಮ್ಮ ತಂದೆಯನ್ನು ಕೊಲೆ ಮಾಡಲಾಗಿದೆ ಎಂದು ಅನೀಶ್ ಆರೋಪಿಸಿದ್ದಾರೆ.

ಧರ್ಮಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ಆಸ್ತಿಯ ವಿಷಯದಲ್ಲಿ ತನ್ನ ತಂದೆಗೆ ಪದೇ ಪದೇ ಬೆದರಿಕೆ ಹಾಕುತ್ತಿದ್ದ ಎಂದು ಅವರು ಆರೋಪಿಸಿದ್ದಾರೆ. ಅಂದು ಪೊಲೀಸರಿಗೆ ಎಲ್ಲಾ ಗೊತ್ತಿದ್ದರು ದಿನಗಳಲ್ಲಿ ಡಿಕ್ಕಿ ಹೊಡೆದದ್ದು ಅಪರಿಚಿತ ವಾಹನ ಎಂದು ಹೇಳಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು.ಈ ಪ್ರಕರಣವನ್ನು ಮುಂದುವರಿಸಲು ಹೋಗಬೇಡಿ ಮತ್ತು ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ಅವರು ನನಗೆ ಹೇಳಿದರು. ಅದಕ್ಕಾಗಿಯೇ ನಾನು ಕರ್ನಾಟಕ ತೊರೆದು ಕೇರಳಕ್ಕೆ ತೆರಳಿದೆ” ಎಂದು ಅನೀಶ್ ಹೇಳಿದ್ದಾರೆ.

ಅಂದು ನೆಡೆದದ್ದೇನು.? :
ಅನೀಶ್ ಜಾಯ್ ಅವರ ತಂದೆ ಕೆ.ಜೆ. ಜಾಯ್ ಏಪ್ರಿಲ್ 5, 2018 ರಂದು ಧರ್ಮಸ್ಥಳದಲ್ಲಿ ಸಾವು ಕಂಡಿದ್ದರು. ಮೂಡುಬಿದಿರೆ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಅಪಘಾತದಲ್ಲಿ ಅವರು ಸಾವು ಕಂಡಿದ್ದಾರೆ ಎಂದು ತಿಳಿಸಿದ್ದರು.!ಆದರೆ ನಮಗೆ ಇದು ಸಾಮಾನ್ಯ ಆಕಸ್ಮಿಕ ಸಾವು ಅಲ್ಲ ಎಂಬ ಅನುಮಾನವಿತ್ತು ಮತ್ತು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದೆವು.
ಢಿಕ್ಕಿ ಹೊಡೆದವನನ್ನು ಹಾಗೂ ಕಾರನ್ನು ಎರಡು ದಿನಗಳ ಕಾಲ ಠಾಣೆಯಲ್ಲಿ ಇರಿಸಲಾಗಿತ್ತು, ನಂತರ ಆತನನ್ನು ಬಿಡುಗಡೆ ಮಾಡಲಾಯಿತು. ಇಲ್ಲಿನ ಪ್ರಮುಖ ವ್ಯಕ್ತಿಗಳು ಇದರ ಹಿಂದೆ ಇದ್ದಾರೆ ಮತ್ತು ಆತನನ್ನು ಹಿಂಬಾಲಿಸಬಾರದು ಎಂದು ಎಸ್ಐ ಅನೀಶ್ಗೆ ತಿಳಿಸಿದ್ದರಂತೆ.! ಆತನನ್ನು ಹಿಂಬಾಲಿಸಿದರೆ ಆತನ ಜೀವಕ್ಕೆ ಅಪಾಯವಿದೆ ಎಂದು ಎಸ್ಐ ಹೇಳಿದ್ದಾಗಿ ಅನೀಶ್ ತಿಳಿಸಿದ್ದಾರೆ.
ಅನೀಶ್ ಅವರ ಅಜ್ಜ ಕರ್ನಾಟಕಕ್ಕೆ ವಲಸೆ ಬಂದು 45 ಎಕರೆ ಭೂಮಿಯನ್ನು ಹೊಂದಿದ್ದರು. ಅವರು ರಬ್ಬರ್ ಮತ್ತು ಗೋಡಂಬಿ ಬೆಳೆಯುವ ಮೂಲಕ ಜೀವನ ಸಾಗಿಸುತ್ತಿದ್ದರು. ನಾವಿದ್ದ ಸ್ಥಳ ಧರ್ಮಸ್ಥಳದಿಂದ ಕೇವಲ ನಾಲ್ಕು ಕಿ.ಮೀ ದೂರದಲ್ಲಿದೆ. ಅಲ್ಲಿನವರು ಆ ಭೂಮಿಯನ್ನು ನೀಡುವಂತೆ ಕೇಳಿದರು. ಅದನ್ನು ಅವರಿಗೆ ಉಚಿತವಾಗಿ ನೀಡಬೇಕೆಂದು ಅವರು ಬಯಸಿದ್ದರು.ನಾವು ನಿರಾಕರಿಸಿದ್ದೇವು.
23 ಎಕರೆಯ ಜಾಗ ಬರೀ 18 ಲಕ್ಷಕ್ಕೆ ಮಾರಾಟ.!
ಅದಾದ ಬಳಿಕ ನಮ್ಮ ತಂದೆ ಕೆಜೆ ಜಾಯ್ ಅಲ್ಲಿಯೇ ಒಂದು ಹೋಟೆಲ್ ಆರಂಭಿಸಿದ್ದರು. ಈ ವೇಳೆ ಅಲ್ಲಿನ ಪ್ರಮುಖ ಲ್ಯಾಂಡ್ ಬ್ರೋಕರ್ ಒಬ್ಬ , ನಮ್ಮನ್ನು ಸಂಪರ್ಕಿಸಿ ಈ ಜಾಗವನ್ನು ಮಾರುವಂತೆ ಹೇಳಿದ್ದರು. ಕೊನೆಗೆ ನಮ್ಮಿಂದ ಒತ್ತಾಯಪೂರ್ವಕವಾಗಿ ಜಾಗವನ್ನು ಮಾರಾಟ ಮಾಡಿಸಿಕೊಂಡರು. 23 ಎಕರೆಯ ಜಾಗವನ್ನು ಬರೀ 18 ಲಕ್ಷ ಹಣ ಫಿಕ್ಸ್ ಮಾಡಿದ್ದರು. ನನ್ನ ಅಪ್ಪನ ಸಹೋದರರೆಲ್ಲರೂ ಇದರಿಂದಾಗಿ ಕೇರಳಕ್ಕೆ ಶಿಫ್ಟ್ ಆದರೆ, ತಂದೆ ಮಾತ್ರ ಹೋಟೆಲ್ ನಡೆಸುತ್ತಿದ್ದರು ಎಂದು ಅನೀಶ್ಜಾಯ್ ಹೇಳಿದ್ದಾರೆ.
ಅದಾದ ಬಳಿಕ ಉಳಿದ ಜಾಗವನ್ನೂ ಮಾರಾಟ ಮಾಡುವಂತೆ ಒತ್ತಾಯ ಮಾಡಿದರು. ಆದರೆ, ಇದಕ್ಕೆ ತಂದೆ ಒಪ್ಪಲಿಲ್ಲ. ಬ್ಯಾಂಕ್ಗೆ ಹೋಗಿ ಜಾಗದ ಮೇಲೆ ಸಾಲ ತೆಗೆದುಕೊಳ್ಳಲು ಮುಂದಾದರು. ಆದರೆ, ಬ್ಯಾಂಕ್ನಲ್ಲಿ ಇರುವುದು ಪೂರ್ತಿ ಲ್ಯಾಂಡ್ ಬ್ರೋಕರ್ ವ್ಯಕ್ತಿಗೆ ಪರಿಚಿತರಾದ ಜನರೆ ಆಗಿದ್ದರು. ಈ ಮಾಹಿತಿ ಗೊತ್ತಾದ ಬಳಿಕ ಸಮಸ್ಯೆ ಶುರುವಾಯಿತು. ಸಾಲತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ತಂದೆ ಓಡಾಡುತ್ತಿರುವಾಗಲೇ ಒಂದು ತಿಂಗಳ ಅಂತರದಲ್ಲಿ ಅವರು ಬೈಕ್ ಅಪಘಾತದಲ್ಲಿ ಸಾವು ಕಂಡರು.
ಧರ್ಮಸ್ಥಳದ ಬಗ್ಗೆ ಹೊರಬರುತ್ತಿರುವ ಎಲ್ಲಾ ಮಾಹಿತಿಗಳು ಕೂಡ ನಿಜ ಎಂದು ಅನೀಶ್ ಹೇಳಿದ್ದಾರೆ. ತನ್ನ ತಂದೆಯ ಸಾವಿನ ಮೂಲಕ ನನಗೆ ಇದು ಮನವರಿಕೆ ಆಗಿದೆ. ಸುಮಾರು ನೂರು ಜನರನ್ನು ಕೊಂದು ಸಮಾಧಿ ಮಾಡಲಾಗಿದೆ ಎಂದು ಬಹಿರಂಗವಾದ ನಂತರ, ಅನೀಶ್ ಧರ್ಮಸ್ಥಳಕ್ಕೆ ಹೋಗಿ ಮತ್ತೆ ಪೊಲೀಸರಿಗೆ ದೂರು ನೀಡಿದರು ಮತ್ತು ತಲಿಪರಂಬ ಪೊಲೀಸರಿಗೆ ಸಹ ದೂರು ನೀಡಿ, ತನ್ನ ಜೀವಕ್ಕೆ ಬೆದರಿಕೆ ಇದೆ ಎಂದು ಹೇಳಿದ್ದಾರೆ.
ಪದ್ಮಲತಾ ಪ್ರಕರಣ :

ಮರುಜೀವ ಪಡೆದುಕೊಂಡ ಪ್ರಕರಣಗಳಲ್ಲಿ ಅತ್ಯಂತ ಪ್ರಮುಖವಾಗಿರುವುದು 1986ರಲ್ಲಿ ಧರ್ಮಸ್ಥಳದ ಬೋಳ್ಯಾರು ಗ್ರಾಮದ ಕಾಲೇಜು ವಿದ್ಯಾರ್ಥಿನಿ ಪದ್ಮಲತಾ ಅವರ ಸಾವು. ಸುಮಾರು ನಾಲ್ಕು ದಶಕಗಳ ಹಿಂದೆ ನೆಡೆದಿತ್ತು.! ಈಕೆ ನಿಗೂಢವಾಗಿ ನಾಪತ್ತೆಯಾಗಿದ್ದಳು.ಐದಾರು ದಿನಗಳ ನಂತರ ನೇತ್ರಾವತಿ ನದಿಯಲ್ಲಿ ಆಕೆಯ ಶವಗಳು ಕೈಕಾಲುಗಳನ್ನು ಕಟ್ಟಿಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಆದರೆ,ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿರಲಿಲ್ಲ. ಕೊನೆಗೆ ಈ ಪ್ರಕರಣವನ್ನು ಕ್ರಿಮಿನಲ್ ತನಿಖಾ ಇಲಾಖೆ (ಸಿಐಡಿ), ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಕೇಸ್ ಮುಚ್ಚಿಹಾಕಿತು. ಈ ಬಗ್ಗೆ ಈಗಾಗಲೇ ರಾಜ್ಯದಲ್ಲಿ ಚರ್ಚೆ ಆರಂಭವಾಗಿದೆ.
ಪದ್ಮಲತಾ ಅವರ ಸಹೋದರಿ ಚಂದ್ರಾವತಿ ಅವರು ತಮ್ಮ ಸಹೋದರಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ ಎಂದು ದೀರ್ಘಕಾಲದಿಂದ ಆರೋಪಿಸುತ್ತಿದ್ದಾರೆ. ಈಗ ಧರ್ಮಸ್ಥಳ ಸಾಮೂಹಿಕ ಶವ ಹೂತಿಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಕೊಲೆ ದಾಖಲೆಗಳನ್ನು ಮತ್ತೆ ತೆರೆಯುವಂತೆ ಕೋರಿದ್ದಾರೆ. “ನಮಗೆ ಪ್ರಸ್ತುತ ಅಧಿಕಾರಿಗಳ ಮೇಲೆ ಇನ್ನೂ ನಂಬಿಕೆ ಇದೆ” ಎಂದು ಅವರು ಹೇಳಿದರು, “ನಮ್ಮ ಪ್ರಕರಣದ ನಂತರ ಈ ಘಟನೆಗಳು ಕಡಿಮೆಯಾಗಿವೆ, ಆದರೆ ಸೌಜನ್ಯ ಪ್ರಕರಣದ ನಂತರ ಅವು ಮತ್ತೆ ಪ್ರಾರಂಭವಾಗಿವೆ. ಇಂತಹ ಘಟನೆಗಳು ನಿಲ್ಲಬೇಕು’ ಎಂದಿದ್ದಾರೆ.
ಅವರ ಪ್ರಕಾರ, ಪದ್ಮಲತಾ ಡಿಸೆಂಬರ್ 22, 1986 ರಂದು ಉಜಿರೆಯಲ್ಲಿ ಕಾಲೇಜು ಕಾರ್ಯಕ್ರಮಕ್ಕೆ ತೆರಳಿದ್ದರು ಮತ್ತು ಅವರು ಮತ್ತೆ ಹಿಂತಿರುಗಲಿಲ್ಲ. ಆರಂಭದಲ್ಲಿ ಪೊಲೀಸರು ಹಿಂಜರಿಕೆಯಿಂದ ಕಾಣೆಯಾದ ದೂರು ದಾಖಲಿಸುವಲ್ಲಿ ವಿಳಂಬವಾದರೂ, ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದ ಅವರ ತಂದೆ ಅಂತಿಮವಾಗಿ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ವಾರಗಳ ನಂತರ ಅವರ ಮನೆಯ ಬಳಿ ಶವ ಪತ್ತೆಯಾದಾಗ, ಅದು ಅಸ್ಥಿಪಂಜರವಾಗಿತ್ತು, ಮೃತದೇಹದ ಮೇಲಿನ ಬಟ್ಟೆ ಮತ್ತು ಕೈಗಡಿಯಾರದಿಂದ ಶವವನ್ನು ಗುರುತಿಸಲಾಯಿತು. ಈ ಸಾವಿಗೆ ಕಾರಣವೇನು, ಆರೋಪಿಗಳು ಯಾರು ಅನ್ನೋದು ಈವರೆಗೂ ಪತ್ತೆಯಾಗಿಲ್ಲ.
ಧರ್ಮಸ್ಥಳದಲ್ಲಿ ಭಯ ಮತ್ತು ಮೌನದ ವಾತಾವರಣವಿದೆ ಜೊತೆಗೆ ಭಕ್ತರ ಭಕ್ತಿ ಮಂಜುನಾಥನನ್ನು ಎಂದು ಎರಡೂ ಕುಟುಂಬಗಳು ಬೊಟ್ಟು ಮಾಡಿವೆ, ಅಲ್ಲಿ ಪೊಲೀಸರು ಮತ್ತು ರಾಜಕೀಯ ಪ್ರಭಾವವು ನ್ಯಾಯವನ್ನು ಬಹಳ ಹಿಂದಿನಿಂದಲೂ ತಡೆಯುತ್ತಿದೆ ಎಂದು ಅವರು ಹೇಳುತ್ತಾರೆ. ಸಾಮೂಹಿಕ ಶವ ಹೂತಿಟ್ಟ ಆರೋಪಗಳ ತನಿಖೆಗಾಗಿ ಈಗ ವಿಶೇಷ ತನಿಖಾ ತಂಡವನ್ನು ಸ್ಥಾಪಿಸಲಾಗಿರುವುದರಿಂದ, ಇದು ಅವರ ದೀರ್ಘಕಾಲದಿಂದ ಮೌನವಾಗಿದ್ದ ಕಥೆಗಳನ್ನು ಮತ್ತೆ ತೆರೆಯುತ್ತದೆ ಎಂದು ಅವರು ಆಶಿಸಿದ್ದಾರೆ.


