
ಕಿರುತೆರೆ: ಎಲ್ಲಾ ಸಂಕಷ್ಟಗಳನ್ನು ದಾಟಿ ಬಂದೆ ಬಿಟ್ಟ ಕರ್ಣ.

news.ashwasurya.in
ಅಶ್ವಸೂರ್ಯ/ಬೆಂಗಳೂರು : ಕಿರುತೆರೆ ಇತಿಹಾಸದಲ್ಲೇ ಪ್ರಥಮಬಾರಿಗೆ ಇತಿಹಾಸ ಸೃಷ್ಟಿಸಿದ ಕರ್ಣ ( ಕಿರುತೆರೆ ಧಾರವಾಹಿ)
ಕಿರಣ್ ರಾಜ್ ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಹಾಗೂ ನಮೃತಾ ಗೌಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಕರ್ಣ ಧಾರಾವಾಹಿಯ ಒಂದೇ ಒಂದು ಪ್ರೊಮೋ ಕಿರುತೆರೆಯಲ್ಲಿ ಮೂಡಿ ಬರುವುದರ ಮೂಲಕ ವೀಕ್ಷಕರನ್ನು ಕಾದು ಕುಳಿದುಕೊಳ್ಳುವಂತೆ ಮಾಡಿತ್ತು.ಯಾವಾಗ ಕರ್ಣ ಧಾರಾವಾಹಿ ಪ್ರಸಾರವಾಗಲಿದೆ ಎನ್ನುವ ಕೂತುಹಲ ಧಾರವಾಹಿ ಪ್ರೀಯರಿಗೆ ಇತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2025 ಜೂನ್ 16ರಂದು ರಾತ್ರಿ 8 ಗಂಟೆಗೆ ಕರ್ಣ ಧಾರಾವಾಹಿ ಪ್ರಸಾರವಾಗಬೇಕಿತ್ತು. ಆದರೆ, ಕಾನೂನಿನ ತೊಡಕಿನಿಂದ ಧಾರಾವಾಹಿ ಪ್ರಸಾರವನ್ನು ಮುಂದೂಡಲಾಗಿತ್ತು. ಎಲ್ಲ ಅಡೆತಡೆಗಳನ್ನು ದಾಟಿ ಕರ್ಣ “ಬರೋದೊ ತಡವಾಗಬಹುದು ಆದರೆ ಬಂದೆ ಬರ್ತಾನೆ ಕರ್ಣ” ಆದಷ್ಟು ಬೇಗ ನಿಮ್ಮ ಮುಂದೆ ಎಂದು ವಾಹಿನಿಯವರು ಹೇಳಿದ್ದರು. ಆದರೆ ಈಗ ಎಲ್ಲಾ ಅಡೆತಡೆಗಳನ್ನು ದಾಟಿ ಕರ್ಣ ಧಾರಾವಾಹಿಯ ಮೊದಲ ಕಂತು ಯಾವುದೇ ಮುನ್ಸೂಚನೆ ಇಲ್ಲದೆ OTT ಯಲ್ಲಿ ಜೋತೆಗೆ Z5 ನಲ್ಲೂ ಪ್ರಸಾರವಾಗಿದೆ..! ಇಷ್ಟು ಮಾತ್ರವಲ್ಲದೆ ಇತಿಹಾಸವನ್ನು ನಿರ್ಮಿಸಿದೆ.

ಈ ಧಾರಾವಾಹಿಯಲ್ಲಿ ಭವ್ಯಾ ಗೌಡ ಕಾಣಿಸಿಕೊಂಡಿದ್ದು ಪ್ರಸಾರಕ್ಕೆ ತೊಂದರೆ ಆಯಿತು. ಭವ್ಯಾ ಅವರು ಬಿಗ್ ಬಾಸ್ನಲ್ಲಿ ಭಾಗವಹಿಸುವ ವೇಳೆ ಒಪ್ಪಂದ ಒಂದನ್ನು ಮಾಡಿಕೊಂಡಿದ್ದರು. ಆ ಒಪ್ಪಂದದ ಅವಧಿ ಮುಗಿಯುವ ಮೊದಲೇ ಕರ್ಣ ಧಾರಾವಾಹಿ ಪ್ರಸಾರ ಕಂಡಿದ್ದರಿಂದ ಕೇಸ್ ಹಾಕಲಾಯಿತು. ಇದೇ ಕಾರಣದಿಂದ ಕರ್ಣ ಧಾರಾವಾಹಿ ಝೀ ಕನ್ನಡದಲ್ಲಿ ಪ್ರಸಾರ ಕಂಡಿರಲಿಲ್ಲ. ಕರ್ಣ ಬರೋದು ತಡವಾಗಬಹುದು. ಆದರೆ, ಅವನು ಬರೋದು ಖಚಿತ ಎಂದು ವಾಹಿನಿಯವರು ಹೇಳಿದ್ದರು. ಆದರೆ, ಈ ಧಾರಾವಾಹಿಯ ಮೊದಲ ಎಪಿಸೋಡ್ ನಿನ್ನೆ (ಜು. 2 ರಂದು) ಒಟಿಟಿಯಲ್ಲಿ ಪ್ರಸಾರ ಕಂಡಿದೆ.

ಕರ್ಣ ಧಾರಾವಾಹಿಯ ಮೊದಲ ಎಪಿಸೋಡ್ ಝೀ 5 ಆ್ಯಪ್ನಲ್ಲಿ ಅಪ್ಲೋಡ್ ಆಗಿದೆ. ಕರ್ಣನ ಕುಟುಂಬ, ಅವನ ವೃತ್ತಿ ಬದುಕು, ದಾರಿ ಮಧ್ಯೆ ಆಂಬುಲೆನ್ಸ್ನಲ್ಲಿಯೇ ಹೆರಿಗೆ ಮಾಡಿಸೋದು, ಮನೆಯವರಿಗೆ ಕರ್ಣನ ಮೇಲಿನ ಅಸಮಾಧಾನ, ನಿಧಿ-ನಿತ್ಯಾ (ಭವ್ಯಾ ಗೌಡ-ನಮ್ರತಾ ಗೌಡ) ಕುಟುಂಬಗಳ ತುಣುಕನ್ನು ಮೊದಲ ಕಂತಿನಲ್ಲಿ ತೋರಿಸಲಾಗಿದೆ.

ಸಾಮಾನ್ಯವಾಗಿ ಟಿವಿಯಲ್ಲಿ ಪ್ರಸಾರ ಕಂಡ ಬಳಿಕವೇ ಧಾರಾವಾಹಿಯನ್ನು ಒಟಿಟಿಯಲ್ಲಿ ಪ್ರಸಾರ ಮಾಡೋದು ಸಾಮಾನ್ಯ. ಆದರೆ ಝೀ ಕನ್ನಡ ಹಾಗೂ ಝೀ 5 ಈಗ ಹೊಸ ತಂತ್ರವನ್ನು ಬಳಸಿ ಟಿವಿಗೂ ಮೊದಲೇ ಒಟಿಟಿಯಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ದಾಖಲೆ ಬರೆದಿದೆ. ಕಿರುತೆರೆ ಇತಿಹಾಸದಲ್ಲೇ ಮೊದಲ ಬಾರಿಗೆ ಟಿವಿಗೂ ಮೊದಲೇ ಒಟಿಟಿಯಲ್ಲಿ ಪ್ರಸಾರಗೊಂಡ ಧಾರಾವಾಹಿ ಎಂಬ ಖ್ಯಾತಿಗೆ ಕರ್ಣ ಹೆಸರು ದಾಖಲಿಸಿದ್ದಾನೆ.

ಇನ್ನೂ ಟಿವಿಯಲ್ಲಿ ಕರ್ಣ ಧಾರಾವಾಹಿಯ ಮೊದಲ ಕಂತು ಇಂದಿನಿಂದ ( ಗುರುವಾರ,ಜುಲೈ-3 ) ಪ್ರಸಾರವಾಗಲಿದೆ. ಈ ಕುರಿತು ಝೀ ಕನ್ನಡ ಅಧಿಕೃತವಾಗಿ ತಿಳಿಸಿದ್ದು, ‘‘ಎಲ್ಲ ಅಡೆತಡೆಗಳನ್ನು ದಾಟಿ ನಿಮ್ಮ ಹೃದಯ ಮೀಟಲು ಬರ್ತಿದ್ದಾನೆ ಕರ್ಣ! ರಾತ್ರಿ 8ಕ್ಕೆ’’ ಎಂದು ಬರೆದುಕೊಂಡಿದೆ.
ಎಲ್ಲಾ ಸಂಕಷ್ಟಗಳನ್ನು ದಾಟಿ ಬಂದೆ ಬಿಟ್ಟ ಕರ್ಣ.


