75 ವರ್ಷಗಳ ಪ್ರಾತಿನಿಧಿಕ ಕನ್ನಡದ ಕಿರು ಕಥೆಗಳ ಸಂಕಲನ “ಅಮೃತ ಕಥಾನಕ” ದಲ್ಲಿ “ಶಿ ಜು ಪಾಶ” ರ ಒಂದು ಕಥೆ…ಅದರ ಹೆಸರೇ ಸುಡುಗಾಡು.!
news.ashwasurya.in/Shivamogga
ಅಶ್ವಸೂರ್ಯ/ಶಿವಮೊಗ್ಗ: ಕರುನಾಡ ನೆಲೆದ ಹೆಸರಾಂತ ಯುವ ಸಾಹಿತಿಗಳ ಅಗ್ರ ಪಂಕ್ತಿಯ ಸಾಲಿನಲ್ಲಿ ತಮ್ಮ ಬರವಣಿಗೆಯ ಮುಖಾಂತರವೆ ಗುರುತಿಸಿಕೊಂಡಿರುವ ಮಲೆನಾಡ ಯುವ ಸಾಹಿತಿ ನಮ್ಮೆಲ್ಲರ ಚಿರಪರಿಚಿತ ವ್ಯಕ್ತಿ ನನ್ನ ಆತ್ಮೀಯ ಮಿತ್ರರಾದ ಶಿ ಜು ಪಾಶ ಅವರ ಜನಪ್ರಿಯ ಕಿರು ಕಥೆಯೊಂದನ್ನು 75 ವರ್ಷಗಳ ಪ್ರಾತಿನಿಧಿಕ ಕನ್ನಡದ ಕಿರು ಕಥೆಗಳಲ್ಲಿ ಶಿ ಜು ಪಾಶ ಅವರ “ಸುಡುಗಾಡು” ಎನ್ನುವ ಕಥೆ ಸೇರ್ಪಡೆ ಗೊಂಡಿದೆ.
ಕನ್ನಡ ವಿಶ್ವವಿದ್ಯಾಲಯ ಹಂಪಿಯ ವಿಶ್ರಾಂತ ಪ್ರಾಧ್ಯಾಪಕರಾಗಿರುವ ಡಾ. ಕರೀಗೌಡ ಬೀಚನಹಳ್ಳಿ ಸಂಪಾದಕತ್ವದಲ್ಲಿ 1950-2025ರ ವರೆಗಿನ 75 ಪ್ರಾತಿನಿಧಿಕ ಕಿರುಗತೆಗಳ ಸಂಕಲನ ” ಅಮೃತ ಕಥಾನಕ ” ಇದೀಗಷ್ಟೇ ಬಿಡುಗಡೆಯಾಗಿದೆ. ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ 75ರ ಸಂಭ್ರಮದ ಸವಿನೆನಪಿಗಾಗಿ
ಈ ಸಂಕಲನ ಹುಟ್ಟು ಪಡೆದಿದೆ. ಕನ್ನಡ ಕಥಾ ಜಗತ್ತನ್ನು ಬೆಳಗಿದ ಶಾಂತಿನಾಥ ದೇಸಾಯಿಯವರ ತೃಪ್ತ, ಬೆಸರಗರಹಳ್ಳಿ ರಾಮಣ್ಣನವರ ಗೋಸುಂಬೆ, ದೇವನೂರು ಮಹಾದೇವರ ಗ್ರಸ್ತರು, ತೇಜಸ್ವಿಯವರ ಮೆಣಸಿನ ಮಡಿ, ಲಂಕೇಶರ ಮುಟ್ಟಿಸಿಕೊಂಡವರು, ಬರಗೂರರ ಅಕ್ಕ ತಂಗಿ ಸಾವು, ಪುರುಷೋತ್ತಮ ಬಿಳಿಮಲೆಯವರ ಇವ್ನ ಶಾಲೆಗೆ ಕಳ್ಸುದು ಬೇಡ್ವಾ?, ಉಮಾರಾವ್ ರ ಹೊಂಗೆಮರ, ಸಿದ್ದಲಿಂಗಯ್ಯರ ಪೊಲೀಸ್ ಪರಾರಿ, ದೊಡ್ಡರಂಗೇಗೌಡರ ಮಧ್ಯವರ್ತಿ, ಮಲ್ಲೇಪುರಂರ ಅಮ್ಮನ ಅಗಲಿಕೆ, ಕುಂ ವೀಯವರ ರುದ್ರಪ್ಪನ ಖಡ್ಗ, ಬೋಳುವಾರರ ಮುತ್ತುಪ್ಪಾಡಿಯ ಮಾಟಗಾತಿ, ವಸುಧೇಂದ್ರರ ಸಮಾನತೆ, ಬಶೀರರ ಗೋಡೆ ಕಪಾಟು…ಹೀಗೆ,ಕನ್ನಡದ ಅಭೂತಪೂರ್ವ 75 ಕಥೆಗಾರರ ಜೊತೆ ನಮ್ಮೆಲ್ಲರ ಪ್ರೀತಿಯ ಶಿ.ಜು.ಪಾಶ ಅವರು ಬರೆದ ಜನಪ್ರಿಯ ಕಿರು ಕಥೆ ಸುಡುಗಾಡು ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ.ಯುವ ಸಾಹಿತಿ ಶಿ ಜು ಪಾಶ ಅವರ “ಸುಡುಗಾಡು” ಕಥೆಯನ್ನು ಆಯ್ಕೆಮಾಡಿಕೊಂಡು ಪ್ರೋತ್ಸಾಹಿಸಿದ ಸಂಪಾದಕರಿಗೆ ವಂದನೆಗಳು…
ನಕ್ಸಲನೊಬ್ಬ ಸತ್ತ ನಂತರ ಸ್ಮಶಾನದಲ್ಲಿ ಹೆಣಗಳ ಜೊತೆ ಸಲ್ಲಾಪ ಮಾಡುವ, ಅಲ್ಲೂ ಧರ್ಮಾತೀತ ಜಗತ್ತಿಲ್ಲದೇ ನರಳುವ ಪುಟ್ಟ ಕಥೆಯೇ ಸುಡುಗಾಡು!
ಕನ್ನಡದ ಕಥಾ ಜಗತ್ತು ಶಿವಮೊಗ್ಗ ಮೂಲದ ಯುವ ಸಾಹಿತಿ ಶಿ ಜು ಪಾಶ ಅವರನ್ನು ಆಗಾಗ ಗುರುತಿಸಿ ಅವರ ಬರೆವಣಿಗೆಯನ್ನು ನಾಡಿನೂದ್ದಕ್ಕೂ ಗುರುತಿಸುವಂತೆ ಮಾಡುತ್ತಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ.
ಶಿ ಜು ಪಾಶ ಅವರನ್ನು ಅವರನ್ನು ಆಗಾಗ ಗುರುತಿಸಿ ಪ್ರೋತ್ಸಾಹಿಸುತ್ತಿರುವುದಕ್ಕೆ ಅವರ ಆತ್ಮೀಯರ ಬಳಗದವರ ಪರವಾಗಿ ಧನ್ಯವಾದಗಳು.