ಕೆಎಸ್ಆರ್ಟಿಸಿ ಬಸ್ನಲ್ಲಿ ಮಾಜಿ ಪ್ರಿಯತಮೆಯ ಗಂಡನಿಗೆ ಚಾಕು ಇರಿದ ಪಾಪಿ ಪ್ರಿಯತಮ.! ಪತ್ನಿ ಎದುರಿಗೆ ಪ್ರಾಣ ಬಿಟ್ಟ ಪತಿ.!
ನಾನು ಮತ್ತು ಗಂಡ ಬೆಂಗಳೂರಿನಲ್ಲಿ ಕೆಲಸ ಮಾಡೋದು. ಇಲ್ಲಿ ಕೂತಿರೋರು ನಮ್ಮ ಅತ್ತಿಗೆ. ಅವರ ಮನೆಯ ಕಾರ್ಯಕ್ರಮಕ್ಕಾಗಿ ಶಿರಸಿಗೆ ಬಂದಿದ್ದೆವು. ಇಲ್ಲಿಂದ ನಾವು ಇವತ್ತು ಬೆಂಗಳೂರಿಗೆ ಹೊರಟ್ಟಿದ್ದೆವು. ಅದಕ್ಕಾಗಿ ಹಾವೇರಿ-ಬೆಂಗಳೂರು ಬಸ್ ಹತ್ತಿದ್ದೆವು. ನನ್ನೂರು ಸಿರಸಿ. ಅವರ ಊರು ಸಾಗರ. ಹಳೆ ಬಸ್ ಸ್ಟ್ಯಾಂಡ್ನಲ್ಲಿ ಬಸ್ ಚೇಂಜ್ ಮಾಡಲು ಇಳಿಯಲು ಬಂದಿದ್ದೆವು. ಈ ವೇಳೆ ಚರ್ಚ್ ಎದುರುಗಡೆ ಅವರು ದಾಳಿ ಮಾಡಿದರು. ಆ ಹುಡುಗನ ಹೆಸರು ಪ್ರೀತಮ್ ಅಂತಾ. ಆತ ಶಿರಸಿಯವನೇ’ ಎಂದು ಗಂಗಾಧರ್ ಅವರ ಪತ್ನಿ ತಿಳಿಸಿದ್ದಾರೆ.
Ashwasurya/Shivamogga
ಶಿರಸಿ(ಉತ್ತರ ಕನ್ನಡ) ಹತ್ತು ವರ್ಷದಿಂದ ಪ್ರೀತಿಸುತಿದ್ದ ಹುಡುಗಿ ಪೂಜಾ ಬೇರೆಯವನನ್ನು ಮದುವೆಯಾದ ಸಿಟ್ಟಿಗೆ ಪ್ರೀತಮ್ ಎನ್ನುವ ಯುವಕ ಆಕೆಯ ಅಮಾಯಕ ಗಂಡ ಗಂಗಾಧರನನ್ನು KSRTC ಬಸ್ಸಿನಲ್ಲಿಯೆ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಶಿರಸಿ ನಗರದ KSRTC ಬಸ್ ನಿಲ್ದಾಣದ ಸಮೀಪ ಬೆಂಗಳೂರಿಗೆ ಸಂಚರಿಸುತಿದ್ದ KSRTC ಬಸ್ನಲ್ಲಿ ಶನಿವಾರ ನಡೆದಿದೆ. ಸಾಗರ ತಾಲೂಕಿನ ನೀಚಡಿಯ ಗ್ರಾಮದ ಗಂಗಾಧರ್ ಹತ್ಯೆಯಾದವ.ಹತ್ಯೆಮಾಡಿದ ಹಂತಕ ಪ್ರೀತಮ್ ಶಿರಸಿ ನಗರದವನು. ಇನ್ನೂ ಗಂಗಾಧರನ ಮಡದಿ, ಪ್ರೀತಮ್ ಮಾಜಿ ಪ್ರೇಯಸಿ ಪೂಜಾ ಶಿರಸಿಯವಳು…!
ಅಶ್ವಸೂರ್ಯ/ಶಿವಮೊಗ್ಗ: ಶಿರಸಿ ನಗರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಮಡದಿಯೊಂದಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಚಾಕು ಇರಿದು ಹತ್ಯೆಮಾಡಿ ಸಹ ಪ್ರಯಾಣಿಕನೊಬ್ಬ ಎಸ್ಕೇಪ್ ಆಗಿದ್ದಾನೆ. ಚಾಕು ಇರಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡ ಪ್ರಯಾಣಿಕ ತನ್ನ ಪತ್ನಿಯ ಎದುರಲ್ಲೇ ಕೊನೆ ಉಸಿರು ಬಿಟ್ಟಿದ್ದಾನೆ.!ಬಸ್ ನಲ್ಲಿ ಪ್ರಯಾಣಿಸಿ ಬೆಂಗಳೂರು ಸೇರಬೇಕಿದ್ದ ಯುವಕ ಹಂತಕನ ಕೃತ್ಯಕ್ಕೆ ಬಲಿಯಾಗಿ ಮಸಣ ಸೇರಿದ್ದಾನೆ.!! ಕ್ಷುಲ್ಲಕ ಕಾರಣಕ್ಕೆ ಈ ರ್ಘಟನೆ ನೆಡೆದು ಅಮಾಯಕನೊಬ್ಬನ ಸಾವಿನಲ್ಲಿ ಅಂತ್ಯವಾಗಿದೆ. ಶಿರಸಿಯಿಂದ ಬೆಂಗಳೂರಿಗೆ ತೆರಳುತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿಯೇ ಈ ಹತ್ಯೆ ನಡೆದಿದೆ.ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಗಂಗಾಧರ್ ಬಸ್ಸಿನಲ್ಲಿ ಚಾಕು ಇರಿತಕ್ಕೊಳಗಾಗಿ ಸಾವಿಗೆ ಶರಣಾದ ವ್ಯಕ್ತಿ.! ಶಿರಸಿಯ ದುಂಡಸಿ ನಗರದ ಪ್ರೀತಮ್ ಡಿಸೋಜಾ ತನ್ನ ಮಾಜಿ ಪ್ರಿಯತಮೆಯ ಗಂಡನಿಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಗಂಗಾಧರ್ ಶಿರಸಿಯಲ್ಲಿನ ಪತ್ನಿಯ ಮನೆಯ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಆಗಮಿಸಿದ್ದ. ಇಂದು ಗಂಗಾಧರ್ ಪತ್ನಿ ಜೊತೆ ಶಿರಸಿಯಿಂದ ಬೆಂಗಳೂರಿಗೆ ವಾಪಸ್ ಹೊರಟಿದ್ದರು. ಈ ವೇಳೆ ಪಕ್ಕದಲ್ಲೇ ಕುಳಿತಿದ್ದ ಪ್ರೀತಮ್ ನಡುವೆ ಕ್ಷುಲ್ಲಕ ಕಾರಣಕ್ಕೆ ತಗಾದೆ ಶುರುವಾಗಿದೆ. ಈ ಹಂತದಲ್ಲಿ ಪ್ರೀತಮ್ ಜೇಬಿನಿಂದ ಚಾಕು ತೆಗೆದು ಗಂಗಾಧರ್ ಎದೆಗೆ ಬಲವಾಗಿ ಚುಚ್ಚಿ ಬಸ್ಸಿನಿಂದ ಇಳಿದು ಪ್ರೀತಮ್ ಎಸ್ಕೇಪ್ ಆಗಿದ್ದಾನೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ಸಿನಲ್ಲಿ ಗಂಡನ ಜೋತೆಗಿದ್ದ ಮಡದಿಯ ಹೇಳಿಕೆ ಪ್ರಕಾರ ನಾನು ಮತ್ತು ನನ್ನ ಗಂಡ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇವೆ . ಇಲ್ಲಿ ಕೂತಿರೋರು ನಮ್ಮ ಅತ್ತಿಗೆ. ಅವರ ಮನೆಯ ಕಾರ್ಯಕ್ರಮಕ್ಕಾಗಿ ಶಿರಸಿಗೆ ಬಂದಿದ್ದೆವು. ಇಲ್ಲಿಂದ ನಾವು ಇವತ್ತು ಬೆಂಗಳೂರಿಗೆ ಹೊರಟ್ಟಿದ್ದೆವು. ಅದಕ್ಕಾಗಿ ಹಾವೇರಿ-ಬೆಂಗಳೂರು ಬಸ್ ಹತ್ತಿದ್ದೆವು. ನನ್ನೂರು ಶಿರಸಿ. ಅವರ ಊರು ಸಾಗರ. ಹಳೆ ಬಸ್ ಸ್ಟ್ಯಾಂಡ್ನಲ್ಲಿ ಬಸ್ ಚೇಂಜ್ ಮಾಡಲು ಇಳಿಯಲು ಬಂದಿದ್ದೆವು. ಈ ವೇಳೆ ಚರ್ಚ್ ಎದುರುಗಡೆ ನನ್ನ ಗಂಡನ ದಾಳಿ ಮಾಡಿದ್ದಾನೆ. ಆ ಹುಡುಗನ ಹೆಸರು ಪ್ರೀತಮ್ ಅಂತಾ. ಆತ ಶಿರಸಿಯವನೇ’ ಎಂದು ಗಂಗಾಧರ್ ಅವರ ಪತ್ನಿ ತಿಳಿಸಿದ್ದಾರೆ.ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ ಹಂತಕ ಪ್ರೀತಮ್ ನಂತರ ಶಿರಸಿ ನಗರ ಠಾಣಾ ಪೊಲೀಸರಿಗೆ ಶರಣಾಗಿದ್ದಾನೆ. ಶಿರಸಿಯ ದುಂಡಸಿ ನಗರದ ನಿವಾಸಿ ಆರೋಪಿ ಪ್ರೀತಮ್ ಡಿಸೋಜಾ ಪೊಲೀಸರಿಗೆ ಶರಣಾಗಿದ್ದು, ಇದರ ಬೆನ್ನಲ್ಲಿಯೇ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಆರೋಪಿ ಪ್ರೀತಮ್ ಹಾಗೂ ಮೃತನ ಹೆಂಡತಿ ಪೂಜಾ ಹತ್ತು ವರ್ಷಗಳ ಕಾಲ ಪ್ರೀತಿ ಮಾಡುತ್ತಿದ್ದರು. ಶಿರಸಿ ನಿವಾಸಿಯಾಗಿದ್ದ 30 ವರ್ಷದ ಪೂಜಾ ಮನೆ ಬಿಟ್ಟು ಕೆಲ ಕಾಲ ಕೊಲೆ ಆರೋಪಿ ಪ್ರೀತಮ್ ಜೊತೆಯಲ್ಲೇ ಇದ್ದಳು ಎಂದು ವರದಿಯಾಗಿದೆ. ಆರೋಪಿ ಪ್ರೀತಮ್ಗೆ ಬೇರೆ ಅಫೇರ್ ಇರೋದು ತಿಳಿದು ಅವನನ್ನು ಮರೆತು ಪೂಜಾ ಬೆಂಗಳೂರಿಗೆ ಕೆಲಸಕ್ಕೆ ಹೋಗಿದ್ದಳು.
ಈ ವೇಳೆ ಬೆಂಗಳೂರಿನಲ್ಲಿ ಪೂಜಾ ಹಾಗೂ ಸಾಗರ ನಗರದ 35 ವರ್ಷದ ಗಂಗಾಧರ್ ಎನ್ನುವವರ ಜೊತೆ ಲವ್ ಆಗಿ ಮದುವೆಯಾಗಿತ್ತು.ಕಳೆದ 7-8 ತಿಂಗಳ ಹಿಂದೆ ಮದುವೆಯಾಗಿದ್ದ ಪೂಜಾ ಹಾಗೂ ಗಂಗಾಧರ್ ಸುಖವಾಗಿ ಸಂಸಾರ ಮಾಡಿಕೊಂಡಿದ್ದರು. ಮೃತ ಗಂಗಾಧರ್ ಶಿರಸಿಯಲ್ಲಿನ ಅತ್ತಿಗೆ ಮನೆಗೆ ಮೊನ್ನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ. ಇಂದು ಪತ್ನಿ ಜೊತೆ ಬೆಂಗಳೂರಿಗೆ ಶಿರಸಿಯಿಂದ ಹೊರಟಿದ್ದರು.
ಶಿರಸಿಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ತೆರಳಲು ಗಂಗಾಧರ್ ಹಾಗೂ ಪೂಜಾ ಬಂದಿದ್ದರು. ಅದೇ ಸಮಯಕ್ಕೆ ಚಾಕು ಹಿಡಿದು ಸಿದ್ಧವಾಗಿ ಬಸ್ನೊಳಗೆ ಗಂಗಾಧರ್ ಪಕ್ಕದಲ್ಲೇ ಬಂದು ಪ್ರೀತಮ್ ಕುಳಿತುಕೊಂಡಿದ್ದ. ಗಂಗಾಧರ್ ಪತ್ನಿ ವಿಚಾರಕ್ಕೋ ಅಥವಾ ಬೇರೆ ವಿಚಾರಕ್ಕೋ ಗಂಗಾಧರ್ ಹಾಗೂ ಆರೋಪಿ ಪ್ರೀತಮ್ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಈ ವೇಳೆ ಜೇಬಿನಿಂದ ಚಾಕು ತೆಗೆದು ಗಂಗಾಧರ್ ಎದೆಗೆ ಚುಚ್ಚಿ ಆರೋಪಿ ಪ್ರೀತಮ್ ಪರಾರಿಯಾಗಿದ್ದ. ಘಟನೆ ಸಂಬಂಧಿಸಿ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳು.!? ಪೂಜಾ ಹಾಗೂ ಗಂಗಾಧರ್ ದಂಪತಿ ಹೊರಡೋ ಸಮಯದಲ್ಲೇ ಪ್ರೀತಮ್ ಕೂಡ ಅದೆ ಬಸ್ಸಿಗೆ ಬಂದಿರುವುದು ಹತ್ಯೆಯಾದ ಗಂಗಾಧರನ ಮಡದಿ ಹಂತಕ ಪ್ರೀತಮ್ ನ ಮಾಜಿ ಪ್ರೇಯಸಿಯ ಮೇಲೆ ಅನುಮಾನ ಮೂಡಿಸಿದೆ.!? ಹಂತಕನ ಮಾಜಿ ಪ್ರಿಯತಮೆ ಪೂಜಾ ಆರೋಪಿ ಪ್ರೀತಮ್ನನ್ನು ನಾವು ಇದೆ ಬಸ್ಸಿಗೆ ಹೋಗುವುದಾಗಿ ಹೇಳಿ ಬರಲು ಹೇಳಿದ್ದಳಾ.!? ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದವರಿಗಿರುವ ಅನುಮಾನ.? ಗಂಗಾಧರ್ ಜತೆ ಮದುವೆಯಾಗಿದ್ದರೂ ಆರೋಪಿ ಪ್ರೀತಮ್ ಜತೆ ಪೂಜಾಗಿತ್ತಾ ಸಂಪರ್ಕ..!? ಅನ್ನೋದು ಇನ್ನೊಂದು ಪ್ರಶ್ನೆಯಾಗಿದೆ.ತನ್ನ ಮಡದಿಯ ಒಂದು ದಶಕದ ಲವ್ ಅಫೇರ್ಗೆ ಪಾಪಿ ಪತಿ ಗಂಗಾಧರ ಬಲಿಯಾದ್ನಾ.!? ಈ ಪ್ರಕರಣದಲ್ಲಿ ಗಂಗಾಧರನ ಮಡದಿಯ ಕೈವಾಡ ಎದ್ದು ಕಾಣುತ್ತಿದೆ.!? ಎಷ್ಟೇ ಅದರು ಪ್ರೀತಮ್ ಮತ್ತು ಪೂಜಾಳದ್ದು ಹತ್ತು ವರ್ಷದ ಲವ್.!ಅಷ್ಟು ಸುಲಭವಾಗಿ ದೂರಾಗಲು ಸಾಧ್ಯವಿಲ್ಲ ಎನ್ನುವುದು ಕೆಲವರ ವಾದ.? ಈ ಎಲ್ಲಾ ದಿಕ್ಕಿನಲ್ಲೂ ಶಿರಸಿ ನಗರದ ಪೊಲೀಸರು ತನಿಖೆ ಚುರುಕು ಗೋಳಿಸಿದ್ದಾರೆ.ಕೊಲೆ ಪ್ರಕರಣ ಸಂಬಂಧಿಸಿದಂತೆ ಶಿರಸಿ ನಗರ ಠಾಣಾ ಪೋಲೀಸರಿಂದ ತನಿಖೆ ಮುಂದುವರಿದಿದ್ದು ಹತ್ಯೆಯ ಇನ್ನಷ್ಟು ಮಾಹಿತಿಗಳು ಸದ್ಯದಲ್ಲೇ ಹೋರಬಿಳಲಿದೆ…