Headlines

ಕೊನೆಗೂ ಭದ್ರಾವತಿ ಶಾಸಕರ ಪುತ್ರನ ವಿರುದ್ಧ ದಾಖಲಾಯ್ತು FIR. ರಾವಣಸುರನ ಆಟ್ಟಹಾಸಕ್ಕೆ ಬ್ರೇಕ್ ಬಿಳಲಿದೇಯಾ

ಶಾಸಕರ ಪುತ್ರ ಬಸವನ ವಿರುದ್ಧ ಪ್ರತಿಭಟಿಸಿದ ಭದ್ರಾವತಿ ಬಿಜೆಪಿ ಘಟಕ

ಭದ್ರಾವತಿ: ಮಾಹಿತಿ ಬಂದ ಕೂಡಲೆ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೋದ ಗಣಿ ಇಲಾಖೆಯ ಮಹಿಳಾ ಅಧಿಕಾರಿಗೆ ಭದ್ರಾವತಿ ಶಾಸಕರ ಪುತ್ರ ಬಸವ ಮಾತನಾಡಿರುವ ಅಶ್ಲೀಲ ಪದ ಬಳಸಿದ ವೀಡಿಯೋ ಎಡಿಟೆಡ್ ಎಂದಾದರೆ ಅದನ್ನು ಎಫ್‌’ಎಸ್‌’ಎಲ್‌’ಗೆ ಕಳುಹಿಸಿ ಎಂದು ಭದ್ರಾವತಿ ಬಿಜೆಪಿ ಘಟಕ ಸವಾಲು ಹಾಕಿದೆ.
ಈ ಪ್ರಕರಣವನ್ನು ವಿರೋಧಿಸಿ ಶಾಸಕ ಬಿ.ಕೆ. ಸಂಗಮೇಶ್ ಆತನ ಕುಲಪುತ್ರ ಬಸವನ ವಿರುದ್ಧ ಭದ್ರಾವತಿ ನಗರದಲ್ಲಿ ಬಿಜೆಪಿ ನಡೆಸಿದ ಬೃಹತ್‌ ಪ್ರತಿಭಟನಾ ಧರಣಿಯಲ್ಲಿ ಬಿಜೆಪಿ ಮುಖಂಡ ಧರ್ಮಪ್ರಸಾದ್‌ ಅಪ್ಪ ಮಕ್ಕಳ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಮಹಿಳಾ ಅಧಿಕಾರಿಗೆ ಬಸವ ಅಕ್ರಮ ಮರಳು ದಂಧೆಕೋರರನ ಮೊಬೈಲ್ ಗೆ ಕಾಲ್ ಮಾಡಿ ಮೊಬೈಲ್ ಓಪನ್‌ ಸ್ಪೀಕರ್ ಅನ್ ಮಾಡಿಸಿ ಮಹಿಳಾ ಅಧಿಕಾರಿಯ ಮುಂದಿಟ್ಟು ನೀಚ ಪದ ಬಳಸಿದ ವೀಡಿಯೋ ಹೊರಬಿದ್ದ ನಂತರ ಅದು ಎಡಿಟೆಡ್ ವೀಡಿಯೋ ಎಂದು ತಳ್ಳಿ ಹಾಕುವ ಪ್ರಯತ್ನಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬರುತ್ತಿದೆ.ಇಡೀ ಭದ್ರಾವತಿಗೆ ಬಸವನ ಧ್ವನಿ ತಿಳಿದಿದೆ. ಹಾಗೆ ಅದು ಎಡಿಟೆಡ್ ವೀಡಿಯೋ ಆದರೆ ಅದನ್ನು ಎಫ್‌’ಎಸ್‌’ಎಲ್’ಗೆ ಕಳುಹಿಸಿ. ಎಂದು ಸವಾಲು ಹಾಕಿದರು.
ಕ್ಷೇತ್ರದಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನೆಡೆಯುತ್ತಿದೆ.ಅದರಲ್ಲೂ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ಮೇಲೆ ಇವರ ದಬ್ಬಾಳಿಕೆ ಹೇಳ ತೀರದಾಗಿದೆ.ಮಗನ ಆರ್ಭಟಕ್ಕೆ ಶಾಸಕರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಾಕತ್ ಇದ್ದರೆ ನಮ್ಮ ವಿರುದ್ಧ ಹೋರಾಡಿ ಎಂದು ಸವಾಲು ಹಾಕಿದರು.
ಅಧಿಕಾರಿಗಳಿಂದ ಕರ್ತವ್ಯ ಲೋಪವಾಗಿದೆ ಎಂದು ಆರೋಪಿಸಿದ ಅವರು, ಕ್ಷೇತ್ರದಲ್ಲಿನ ಅಧಿಕಾರಿಗಳ ಮೇಲೂ ಸಹ ದೌರ್ಜನ್ಯ ನಡೆಯುತ್ತಿದ್ದು, ಅವರುಗಳಿಗಾಗಿ ಇಂದು ನಾವು ಹೋರಾಡುತ್ತಿದ್ದೇವೆ. ರಮೇಶ್ ಎನ್ನುವವರು ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿರುವುದು ಸಾಬೀತಾದರೂ ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಅಕ್ರಮ ಮರಳು ದಂಧೆ ನಡೆಯುತ್ತಿರುವುದು ತಿಳಿದಿದ್ದರೂ, ಇದನ್ನು ತಡೆಯದಂತೆ ಸಿಎಂ, ಡಿಸಿಎಂಗಳಿಂದ ಫೋನ್ ಮಾಡಿಸುತ್ತಾರೆ. ಅಧಿಕಾರಿಗಳ ಮೇಲೂ ಸಹ ಶಾಸಕರ ಕುಟುಂಬದ ದೌರ್ಜನ್ಯ ನಡೆಯುತ್ತಿದ್ದು, ಇದು ಇಡೀ ಭದ್ರಾವತಿಗೇ ಗೊತ್ತಿದೆ ಎಂದರು.

ಮಹಿಳಾ ಅಧಿಕಾರಿಗೆ ನೀಚ ಪದ ಬಳಸಿ ನಿಂದಿಸಿದ ಬಸವನ ವಿರುದ್ಧ ಕಾನೂನು ಕ್ರಮ ಕೈಗೊಂಡು ಇವನನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ಮಂಗೋಟೆ ರುದ್ರೇಶ್, ಮಂಜುಳಾ, ಸತೀಶ್ (ಟೈಲರ್), ಜಿ. ಆನಂದಕುಮಾ‌ರ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!