Headlines

ಶಿರಸಿ TO ಮುಂಬೈ : ಕಡಿಮೆ ಅಂಕ ಪೋಷಕರ ನಿಂದನೆ.! ಮನೆ ಬಿಟ್ಟು ತೆರಳಿದ್ದ ಇಬ್ಬರು ಮಕ್ಕಳು ಮುಂಬೈನಲ್ಲಿ ಪತ್ತೆ.!

ಅಶ್ವಸೂರ್ಯ/ ಕಾರವಾರ: ಕಾಣೆಯಾಗಿದ್ದ ಶಿರಸಿಯ (Sirsi) ಇಬ್ಬರು ವಿದ್ಯಾರ್ಥಿನಿಯರು ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಶಿರಸಿ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ
ಶಿರಸಿ ಪೊಲೀಸರ ತಂಡ ಮಕ್ಕಳ ಹುಡುಕಾಟಕ್ಕೆ ಮುಂದಾಗಿದ್ದಾರೆ.ಪೊಲೀಸರ ನಿರಂತರ ಕಾರ್ಯಾಚರಣೆಯಿಂದ ನಾಪತ್ತೆಯಾಗಿದ್ದ ಕಸ್ತೂರಬಾ ನಗರದ ನಿವಾಸಿಗಳಾದ ಶ್ರೀಶಾ (13), ಪರಿಧಿ(10) ಈಗ ಮುಂಬಯಿ ಪೊಲೀಸರ ಕೈಗೆ ಸಿಕ್ಕಿದ್ದಾರೆ.
ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದಕ್ಕೆ ಓದುವಂತೆ ಪೋಷಕರು ಒತ್ತಾಯಿಸಿದ್ದಕ್ಕೆ ಇಬ್ಬರು ಆ.16 ರಂದು ಮನೆಯಿಂದ ಕಾಣೆಯಾಗಿದ್ದರು. ಶಿರಸಿಯಿಂದ- ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ಪುಣೆಗೆ ತೆರಳಿ ಅಲ್ಲಿಂದ ಮುಂಬೈಗೆ ತೆರಳಿದ್ದರು ಇಬ್ಬರು ಮಕ್ಕಳು.! ಬಸ್ಸಿನಲ್ಲಿ ಪ್ರಯಾಣಿಸಿದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

ಈ ದೃಶ್ಯ ಆಧಾರಿಸಿ ಶಿರಸಿ ಪೊಲೀಸರು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮುಂಬೈನಲ್ಲಿ ಇಳಿದ ಮಕ್ಕಳು ಶಿರಡಿಗೆ ಹೋಗಬೇಕೆಂದು ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದರು.
ಅನುಮಾನಗೊಂಡ ಸ್ಥಳಿಯ ಪೊಲೀಸರು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಎಲ್ಲಿಂದ ಬಂದಿರುವುದು ಎಂದು ಮಕ್ಕಳಿಗೆ ವಿಚಾರಿಸಿದಾಗ ಶಿರಸಿ ಎಂದು ಹೇಳಿದ್ದಾರೆ. ಕೂಡಲೇ ಈ ವಿಚಾರವನ್ನು ಶಿರಸಿ ಪೊಲೀಸರಿಗೆ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಸದ್ಯ ಮಕ್ಕಳು ಮುಂಬೈಯಿಂದ ಶಿರಸಿ ಕಡೆ ಬರುತ್ತಿದ್ದಾರೆ. ಮಕ್ಕಳ ಶೋಧಕ್ಕಾಗಿ ಉತ್ತರ ಕನ್ನಡ ಎಸ್ಪಿ ಎಂ.ಎನ್.ದೀಪನ್ ಪೊಲೀಸರ ಆರು ತಂಡವನ್ನು ರಚಿಸಿ ಕಾರ್ಯಚರಣೆಗೆ ಇಳಿಸಿದ್ದರು. ದಕ್ಷ ಎಸ್ಪಿ ಮತ್ತು ಪೊಲೀಸರ ಕ್ಷಿಪ್ರ ಕಾರ್ಯಚರಣೆಯಿಂದ ಮಕ್ಕಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!