
ಸ್ನೇಹಿತನ ಹೆಂಡತಿಗಾಗಿ ಜೀವದ ಗೆಳೆಯನಿಗೆ ಚಟ್ಟಕಟ್ಟಿದ ಗೆಳೆಯ.!ಅಕ್ರಮ ಸಂಬಂಧಕ್ಕೆ ಮೈಯೊಡ್ಡಿ ಗಂಡನ ಹತ್ಯೆಗೆ ಸ್ಕೆಚ್ ಹಾಕಿದ ಮಡದಿ.!


news.ashwasurya.in

ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ ಜೀವದ ಗೆಳೆಯನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಬಾಲ್ಯದ ಸ್ನೇಹಿತನನ್ನೆ ಕೊಂದು ಮುಗಿಸಿದ್ದಾನೆ.! ಪೊಲೀಸರ ತನಿಖೆಯಲ್ಲಿ ಹೆಂಡತಿ ಮತ್ತು ಆಕೆಯ ಪ್ರಿಯಕರನೇ ಈ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಇಬ್ಬರೂ ಬಾಲ್ಯದ ಸ್ನೇಹಿತರು. ಬೆಂಗಳೂರು ನಗರದ ಗಲ್ಲಿ ಗಲ್ಲಿಗಳಲ್ಲಿ ಒಟ್ಟಿಗೆ ಆಡಿ ಬೆಳದು ಓಡಾಡಿಕೊಂಡಿದ್ದ ಇಬ್ಬರು ಗೆಳೆಯರಲ್ಲಿ ವಿಜಯ್ ಮದುವೆ ಮಾಡಿಕೊಂಡು ಸುಂದರ ಬದುಕು ಕಟ್ಟಿಕೊಂಡಿದ್ದ. ಸ್ನೇಹಿತನ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಬಾಲ್ಯದ ಸ್ನೇಹಿತ ಧನಂಜಯ್, ಗೆಳೆಯನ ಹೆಂಡತಿ ಅತ್ತಿಗೆಯ ಸಮಾನ ಎನ್ನುವುದನ್ನು ಮರೆತು ಅತನ ಹೆಂಡತಿಯ ಮೇಲೆ ಕಣ್ಣು ಹಾಕಿದ್ದಾನೆ.!ಆಕೆಯು ಹಸಿದು ಕುಳಿತಿದ್ದಳೇನೊ ಇವರಿಬ್ಬರ ಸಂಬಂಧ ಬೇಗನೇ ಅಕ್ರಮ ಸಂಬಂಧಕ್ಕೆ ತಿರುವು ಪಡೆದುಕೊಂಡಿದೆ.! ಇಬ್ಬರಿಬ್ಬರ ಅಕ್ರಮ ಸಂಬಂಧದ ವಿಷಯ ಗಂಡನಿಗೆ ತಿಳಿದಿದೆ ತಕ್ಷಣವೇ ಹೆಂಡತಿಗೆ ಸರಿಯಾಗೆ ಕ್ಲಾಸ್ ತೆಗೆದುಕೊಂಡಿದ್ದಾನೆ. ಇತ್ತ ಹೆಂಡತಿ ನಮ್ಮಿಬ್ಬರ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಾನೆ ಎಂದು ಗಂಡನನ್ನೇ ಮುಗಿಸಲು ಮುಂದಾಗಿದ್ದಾಳೆ.! ಈ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯ ಕಡಬಗೆರೆ ಕ್ರಾಸ್ನ ಜನಪ್ರಿಯ ಅಪಾರ್ಟ್ಮೆಂಟ್ನ ಬಳಿ ನಡೆದಿದೆ. ವಿಜಯ್ (28) ಕೊಲೆಯಾದ ಮೃತ ದುರ್ದೈವಿ ಆಗಿದ್ದಾನೆ. ಮಾಗಡಿ ಮೂಲದ ವಿಜಯ್ ಕಡಬಗೆರೆ ಬಳಿ ವಾಸ ಮಾಡುತ್ತಿದ್ದರು. ಅಂದು ಮೂರ್ನಾಲ್ಕು ಜನ ಸೇರಿ ಪಾರ್ಟಿ ಮಾಡಿದ ನಂತರ ಅವರವರೆ ಗಲಾಟೆ ಮಾಡಿಕೊಂಡಿದ್ದಾರೆ. ನಂತರ, ಮಚ್ಚಿನಿಂದ ಕೊಚ್ಚಿ ಸ್ನೇಹಿತನನ್ನು ಕೊಲೆ ಮಾಡಿದ್ದಾರೆ. ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯ ತನಿಖೆ ಬೆನ್ನಟ್ಟಿ ಹೋದವರಿಗೆ ಆತನ ಹೆಂಡತಿಯೇ ಕೊಲೆ ಮಾಡಿಸಿರುವ ಅನುಮಾನ ಬಂದಿದೆ.

ಪೊಲೀಸರ ತನಿಖೆಯಿಂದ ಬಯಲಾದ ಸತ್ಯ.!?
ಧನಂಜಯ್ ಮತ್ತು ವಿಜಯ್ ಇಬ್ಬರೂ ಬಾಲ್ಯದ ಗೆಳೆಯರು. ಮಾಗಡಿಯ ನಿವಾಸಿ ಗಳಾಗಿದ್ದಂತವರು.ಸುಂಕದಕಟ್ಟೆಯಲ್ಲಿ ವಾಸವಿದ್ದರು. ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ವಿಜಯ್ 10 ವರ್ಷದ ಹಿಂದೆ ಆಶಾಳನ್ನ ಮದುವೆಯಾಗಿದ್ದ. ವಿಜಯ್ ಕುಮಾರ್ ಕಾಮಾಕ್ಷಿಪಾಳ್ಯದಲ್ಲಿ ವಾಸವಾಗಿದ್ದ. ಈ ವೇಳೆ ವಿಜಯ್ ಮನೆಗೆ ಬಂದು ಹೋಗುತ್ತಿದ್ದ ಧನಂಜಯ್ ಸ್ನೇಹಿತನ ಪತ್ನಿಯ ಜೊತೆಗೆ ಹತ್ತಿರವಾಗಿ ಪ್ರೀತಿ ಹೆಸರಿನಲ್ಲಿ ಅಕ್ರಮ ಸಂಬಂಧಕ್ಕೆ ಹೊಂದಿದ್ದಾನೆ. ಇದು ಅತಿರೇಕಕ್ಕೆ ಹೋಗಿ ವಿಜಯ ಹೆಂಡತಿ ಆಶಾ ಜೊತೆಗಿದ್ದ ಅನೈತಿಕ ಸಂಬಂಧದ ಪೋಟೋ ಕೂಡ ಗಂಡನಿಗೆ ಸಿಕ್ಕಿದೆಯಂತೆ.?

ಸ್ನೇಹಿತ ಹಾಗೂ ತನ್ನ ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ರಚ್ಚಿಗೆದ್ದ ವಿಜಯ್ ತನ್ನ ಹೆಂಡತಿ ಆಶಾಳ ಜೊತೆಗೆ ಗಲಾಟೆ ಮಾಡಿದ್ದಾನೆ.ನಂತರ ಕಾಮಾಕ್ಷಿಪಾಳ್ಯ ಮನೆ ಬಿಟ್ಟು ಕಡಬಗೆರೆಯ ಮಾಚೋಹಳ್ಳಿ ಬಳಿ ಮನೆ ಬಾಡಿಗೆ ಮಾಡಿಕೊಂಡು ಹೋಗಿದ್ದರು. ಇಷ್ಟಾದರೂ ಹೆಂಡತಿ ಅನೈತಿಕ ಸಂಬಂಧಕ್ಕೆ ಮಾತ್ರ ಬ್ರೇಕ್ ಬಿದ್ದಿರಲಿಲ್ಲ.
ಹತ್ಯೆಯಾಗುವ ದಿನ ಸಂಜೆ ವರೆಗೂ ಮನೆಯಲ್ಲೇ ಇದ್ದ ವಿಜಯ್ ನಂತರ ಮನೆಯಿಂದ ಹೊರಟಿದ್ದಾನೆ.ಎಷ್ಟೇ ಹೋತ್ತಾದರು ಮನೆಗೆ ಬಾರದ ಹಿನ್ನೆಲೆಯಲ್ಲಿ ಆತನನ್ನು ಹುಡುಕಿದಾಗ ರಾತ್ರಿ ವೇಳೆಗೆ ವಿಜಯ್ ಮಾಚೋಹಳ್ಳಿಯ ಡಿಗ್ರೂಪ್ ಲೇಔಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದ.!ಇದಕ್ಕೆ ಸಂಬಂಧಪಟ್ಟಂತೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.ತಕ್ಷಣವೇ ಅನುಮಾನ ಬಂದ ಹಿನ್ನೆಲೆಯಲ್ಲಿ ಹತ್ಯೆಯಾದ ವಿಜಯ್ನ ಹೆಂಡತಿ ಆಶಾಳನ್ನ ವಶಕ್ಕೆ ಪಡೆದಿರುವ ಮಾದನಾಯಕನಹಳ್ಳಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು.
ಈ ಬಗ್ಗೆ ಮಾಹಿತಿ ನೀಡಿದ,

ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಅವರು, ಮೊನ್ನೆ ರಾತ್ರಿ ಅಕ್ರಮ ಸಂಬಂಧದ ವಿಚಾರಕ್ಕೆ ವಿಜಯ್ ಎಂಬಾತನ ಕೊಲೆಯಾಗಿತ್ತು.ಪೊಲೀಸರು ಎರಡು ತಂಡದೊಂದಿಗೆ 7 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಒಟ್ಟು 48 ಗಂಟೆಯಲ್ಲಿ ಈ ಮರ್ಡರ್ ಪ್ರಕರಣವನ್ನು ಭೇದಿಸಿದ್ದೇವೆ. ಕೊಲೆ ಮಾಡಿರುವವರು ಎಲ್ಲರೂ ವಿಜಯ್ಗೆ ಸ್ನೇಹಿತರೆ ಆಗಿದ್ದಾರೆ. ಇದರಲ್ಲಿ ಮೃತನ ಪತ್ನಿಯ ಪಾತ್ರವು ಇದೆ. ಮೃತ ವಿಜಯ್ನ ಹೆಂಡತಿಯನ್ನು ಬಂಧಿಸಿದ್ದೇವೆ. ಆಕೆಯ ಗಂಡನಿಗೆ ಈಕೆಯ ಅಕ್ರಮ ಸಂಬಂಧ ವಿಚಾರವೂ ಗೊತ್ತಿತ್ತು. ಗಂಡ & ಹೆಂಡತಿಗೆ ಒಂದೆರಡು ಬಾರಿ ಈ ವಿಷಯವಾಗಿ ಜಗಳವಾಗಿತ್ತು. ಇದೇ ವಿಚಾರವಾಗಿ ಪತ್ನಿ ಮತ್ತು ಗೆಳೆಯ ಒಟ್ಟಿಗೆ ಇರಲು ಸಂಚು ಮಾಡಿ ಈ ಹತ್ಯೆ ಮಾಡಿದ್ದಾರೆ.! ಎಂದು ತಿಳಿಸಿದರು.



