
ಕುಂದಾಪುರ: ಮಾವಿನಕಟ್ಟೆ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿಢೀರ್ ವರ್ಗಾವಣೆ: ವಿದ್ಯಾರ್ಥಿಗಳು, ಪೋಷಕರಿಂದ ಪ್ರತಿಭಟನೆ.!

news.ashwasurya.in
ಅಶ್ವಸೂರ್ಯ/ಕುಂದಾಪುರ: ದಿಢೀರ್ ವರ್ಗಾವಣೆ ಮಾಡಿದ್ದ ಅಷ್ಟೂ ಶಿಕ್ಷಕರನ್ನು ಮರುನೇಮಕಕ್ಕೆ ಮಾಡುವಂತೆ ಆಗ್ರಹಿಸಿ
ಮಾವಿನಕಟ್ಟೆ ಪ್ರೌಢಶಾಲೆಯ ವಿದ್ಯಾರ್ಥಿಗಳು, ಪೋಷಕರಿಂದ ಪ್ರತಿಭಟನೆ ಮಾಡಲಾಗಿದೆ,
ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಎಂಬಲ್ಲಿರುವ ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದ ಪ್ರೌಢಶಾಲೆಯಲ್ಲಿದ್ದ ಎಲ್ಲ ಶಿಕ್ಷಕರನ್ನು ಸಾಮೂಹಿಕ ವರ್ಗಾವಣೆಗೊಳಿಸಿ ಬೇರೆ ಶಿಕ್ಷಕರನ್ನು ನಿಯೋಜಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪೋಷಕರು ಸೇರಿ ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.ಪ್ರೌಢಶಾಲೆಯಲ್ಲಿ ಮೊದಲಿದ್ದ ಎಲ್ಲಾ ಶಿಕ್ಷಕರನ್ನು ಮರು ನಿಯೋಜಿಸು ವವರೆಗೆ ತರಗತಿಗೆ ನಾವು ಹೋಗುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.
ಕೊಲ್ಲೂರು ದೇವಳದ ಆಡಳಿತಕ್ಕೊಳ ಪಡುವ ಮಾವಿನಕಟ್ಟೆಯ ಈ ಪ್ರೌಢ ಶಾಲೆಯಲ್ಲಿ
ಸೌಕೂರು, ಹಟ್ಟಿಯಂಗಡಿ, ನೇರಳಕಟ್ಟೆ
ಗುಲ್ವಾಡಿ, ಮಾವಿನಕಟ್ಟೆ, ನೆಂಪು, ಕರ್ಕಿ, ತಲ್ಲೂರು, ಯಿಂದ ಬರುವ 185 ವಿದ್ಯಾರ್ಥಿಗಳಿದ್ದಾರೆ. ಈ ಬಾರಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಸದಾಗಿ ಸೇರ್ಪಡೆಯಾಗಿದ್ದು ಎಸೆಸೆಲ್ಸಿ ವಿಭಾಗದಲ್ಲಿ 50 ವಿದ್ಯಾರ್ಥಿಗಳಿದ್ದಾರೆ. ಆದರೆ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ ಈ ಹಿಂದಿದ್ದ ಮುಖ್ಯೋಪಧ್ಯಾಯರನ್ನು ಸೇರಿದಂತೆ ಎಲ್ಲಾ ಒಂಬತ್ತು ಶಿಕ್ಷಕರನ್ನು ಬೇರೆ ಶಾಲೆಗಳಿಗೆ ದಿಢೀರ್ ವರ್ಗಾವಣೆ ಮಾಡಲಾಗಿದ್ದು ಈ ಶಾಲೆಗೆ ಬೇರೆ ಬೇರೆ ಶಾಲೆಯ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ.
ಹೊಸದಾಗಿ ಬಂದ ಶಿಕ್ಷಕರಿಂದ ಹತ್ತನೆ ತರಗತಿಯ ವಿದ್ಯಾರ್ಥಿಗಳ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳಷ್ಟು ಸಮಸ್ಯೆ ಎದುರಾಗಲಿದೆ ಎಂದು ಪೋಷಕರು ಬಹಳ ಆರೋಪಿಸಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕೂಡ ತಮಗೆ ಹಿಂದಿದ್ದ ಒಂದಷ್ಟು ಶಿಕ್ಷಕರನ್ನು ನೇಮಿಸಿ ಎಂದು ಅವಲತ್ತುಕೊಂಡಿದ್ದಾರೆಕೆಲ ಹೊತ್ತು ತರಗತಿಗಳಿಂದ ಹೊರಗುಳಿದ ವಿದ್ಯಾರ್ಥಿಗಳು ತಮ್ಮ ಬೇಡಿಕೆ ಈಡೇರುವ ತನಕ ತರಗತಿ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೆಲವೇ ದಿವಸಗಳಲ್ಲಿ ಪರೀಕ್ಷೆ ಬರುತ್ತಿದ್ದು ಕೆಲವು ಪಾಠಗಳಿನ್ನು ಆರಂಭವಾಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಹಿರಿಯರಾದ ಚೆರಿಯಬ್ಬ ಸಾಹೇಬ್ ಸ್ಥಳಕ್ಕೆ ಭೇಟಿ ನೀಡಿದ್ದು, ದೇವಸ್ಥಾನದ ಆಡಳಿತ ಮಂಡಳಿ ಜೊತೆಗೆ ಚರ್ಚಿಸಿರುವುದಾಗಿಯೂ,ಮೂರು ದಿನದೊಳಗೆ ಸಮಸ್ಯೆ ಬಗೆಹರಿಸುವ ಬಗ್ಗೆ ಆಡಳಿತ ಕಮಿಟಿ ತಿಳಿಸಿರುವುದಾಗಿ ಪೋಷಕರಿಗೆ ಮಾಹಿತಿ ನೀಡಿ ಮಕ್ಕಳನ್ನು ಮತ್ತೆ ತರಗತಿಗೆ ತೆರಳುವಂತೆ ಮನವಿ ಮಾಡಿದರು. ಅದರಂತೆ ಮಕ್ಕಳು ಪ್ರತಿಭಟನೆಯನ್ನು ಕೈಬಿಟ್ಟು ತರಗತಿಗಳಿಗೆ ತೆರಳಿದರು.
ಬಳಿಕ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು, ಪೋಷಕರ ಅಹವಾಲು ಆಲಿಸಿದರು. ಶಾಲೆಯ ಎಲ್ಲಾ ಶಿಕ್ಷಕರನ್ನು ವರ್ಗಾವಣೆ ಮಾಡಿದ್ದರ ಬಗ್ಗೆ ಪೋಷ ಕರು ಅಸಮಾಧಾನ ಗೊಂಡಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯ ನಿರ್ಧಾರದಂತೆ ಈ ವರ್ಗಾವಣೆ ನಡೆದಿದೆ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ, ದಾಖಲಾತಿ ಹಿತದೃಷ್ಟಿ ಯಿಂದ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸಮಸ್ಯೆಯನ್ನು ಗಮನಕ್ಕೆ ತರಲಾಗುತ್ತದೆ ಎಂದು ಅವರು ತಿಳಿಸಿದರು.
ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಟಿಸಿ ಕೊಡಿ.!
25 ವರ್ಷಗಳ ಇತಿಹಾಸವುಳ್ಳ ಶಾಲೆ ಇದಾಗಿದ್ದು, ಕಳೆದ ಹತ್ತು ವರ್ಷಗಳಿಂದ ಈ ಶಾಲೆಗೆ ಶೇ.100 ಫಲಿತಾಂಶ ಬರುತ್ತಿದೆ. ಆದರೆ ಪೋಷಕರಲ್ಲಿ, ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಯಾಗಿ ಶಾಲೆಯ ಎಲ್ಲಾ ಅಧ್ಯಾಪಕರನ್ನು ವರ್ಗಾವಣೆ ಮಾಡಲಾಗಿದ್ದು ವಿಧ್ಯಾರ್ಥಿಗಳು ಪೋಷಕರು ಮತ್ತು ಗ್ರಾಮದ ಜನತೆ ಆಕ್ರೋಶ ಗೊಂಡಿದ್ದಾರೆ.
ಹೊಸದಾಗಿ ಬಂದ ಶಿಕ್ಷಕರ ಮೇಲೆ ಯಾವ ಭಿನ್ನಾಭಿಪ್ರಾಯವಿಲ್ಲ. ಆದರೆ ಮಕ್ಕಳ ಶೈಕ್ಷಣಿಕ ಹಿತದೃಷ್ಟಿ ಯಿಂದ ಮೊದಲಿದ್ದ ಶಿಕ್ಷಕರ ಪೈಕಿ ಕನಿಷ್ಟ 3-4 ಶಿಕ್ಷಕರನ್ನು ಮತ್ತೆ ಇಲ್ಲಿಗೆ ನಿಯೋಜಿಸಬೇಕು. ಮೂರು ದಿನದೊಳಗೆ ಬೇಡಿಕೆ ಈಡೇರಿಸದಿದ್ದರೆ ಟಿ.ಸಿ. ಪಡೆದು ಮಕ್ಕಳನ್ನು ಬೇರೆ ಶಾಲೆಗೆ ಕಳಿಸುತ್ತೇವೆ ಎಂದು ಪೋಷಕರು ಎಚ್ಚರಿಸಿದ್ದಾರೆ.


