Headlines

20 ಲಕ್ಷ ಮೌಲ್ಯದ ಬಂಗಾರವಿದ್ದ ಬ್ಯಾಗ್ ಕದ್ದೊಯ್ದ ಕೋತಿ.! ಪೊಲೀಸರು ಹಾಗೂ ಜನರಿಂದ ಹುಡುಕಾಟ!

20 ಲಕ್ಷ ಮೌಲ್ಯದ ಬಂಗಾರವಿದ್ದ ಬ್ಯಾಗ್ ಕದ್ದೊಯ್ದ ಕೋತಿ.! ಪೊಲೀಸರು ಹಾಗೂ ಜನರಿಂದ ಹುಡುಕಾಟ!

ಅಶ್ವಸೂರ್ಯ/ಉತ್ತರಪ್ರದೇಶ: ದೇವರಮಂದಿರಕ್ಕೆ ಹೋಗಿ ಪ್ರಾರ್ಥಿಸುತ್ತಿದ್ದ ವೇಳೆ ಖತರ್ನಾಕ್ ಕೋತಿಯೊಂದು ದೇವರ ಜ್ಞಾನದಲ್ಲಿದ್ದ ಮಹಿಳೆಯ ಕೈಯಲ್ಲಿದ್ದ 20 ಲಕ್ಷ ರೂ. ಮೌಲ್ಯದ ಆಭರಣಗಳಿದ್ದ ಬ್ಯಾಗನ್ನು ಕಿತ್ತುಕೊಂಡು ಎಸ್ಕೇಪ್ ಆಗಿತ್ತು.! ಧರ್ಮ ಸಂಕಟಕ್ಕೆ ಒಳಗಾದ ಮಹಿಳೆ ಒಮ್ಮೆ ಗಾಬರಿಯಿಂದ ಕೋತಿಯ ಹಿಂದೆ ಓಡಿದ್ದಾರೆ.!ಪೊಲೀಸರು ವಿಷಯ ಮುಟ್ಟಿದೆ. ಪೊಲೀಸರು ಮತ್ತು ಸ್ಥಳೀಯರು ಸೇರಿ ಸುಮಾರು ಎಂಟು ಗಂಟೆಗಳ ಕಾಲ ಹುಡುಕಾಟ ನಡೆಸಿದ್ದಾರೆ.
ಸಾಮಾನ್ಯವಾಗಿ ಪ್ರವಾಸಕ್ಕೆ ಹೋದಾಗ ಅಥವಾ ನಗರಗಳಲ್ಲಿ ಒಬ್ಬಂಟಿ ಮಹಿಳೆಯರು ನಡೆದುಕೊಂಡು ಹೋಗುವಾಗ ಕಳ್ಳರು ಬಂದು ಬ್ಯಾಗ್ ಕಿತ್ತುಕೊಂಡು ಹೋಗುವ ದೃಶ್ಯಗಳನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಈ ದೇವಸ್ಥಾನಕ್ಕೆ ಕುಟುಂಬ ಒಂದು ಪ್ರವಾಸಕ್ಕಾಗಿ ಹೋಗಿದ್ದ ವೇಳೆ ಮಹಿಳೆಯೊಬ್ಬರು ತನ್ನ ಚಿನ್ನಾಭರಣಗಳನ್ನು ಇಟ್ಟುಕೊಂಡಿದ್ದ ಬ್ಯಾಗ್ ಅನ್ನು ಕೋತಿ ಕಿತ್ತುಕೊಂಡು ಓಡಿಹೋಗಿದೆ. ಇದೀಗ ಪೊಲೀಸರು ಮತ್ತು ಜನರು ಕೋತಿಗಾಗಿ ಉದ್ಯಾನವನದ ತುಂಬಾ ಹುಡುಕಾಡಿದ್ದಾರೆ.ಆದರೆ ಆಭರಣಗಳನ್ನು ಕಳೆದುಕೊಂಡ ಮಹಿಳೆಗೆ ದಿಕ್ಕೆ ತೋಚದಂತಾಗಿದೆ.
ಅನೇಕರಿಗೆ ಜೀವನದಲ್ಲಿ ಇಂತಹ ಅನುಭವವಾಗಿದೆ. ಕಳ್ಳತನಗಳು ಹೆಚ್ಚುತ್ತಿರುವುದರಿಂದ, ಎಲ್ಲೋ ಹೋಗುವಾಗ ತಮ್ಮ ಎಲ್ಲಾ ಗಳಿಕೆಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಲು ಕೆಲವರು ಸಿದ್ಧರಿದ್ದಾರೆ. ಆದರೆ, ಅಂತಹ ಸಂದರ್ಭಗಳಲ್ಲಿ ತಮ್ಮೊಂದಿಗೆ ತೆಗೆದುಕೊಂಡು ಹೋಗುವ ಬೆಲೆಬಾಳುವ ವಸ್ತುಗಳ ಸುರಕ್ಷತೆಯ ಬಗ್ಗೆ ಅವರು ಯೋಚಿಸುವುದಿಲ್ಲ. ಬದಲಿಗೆ, ಅದು ತಮ್ಮೊಂದಿಗೆ ಇರುವುದರಿಂದ ಸುರಕ್ಷಿತವಾಗಿರುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ.
ಉತ್ತರ ಪ್ರದೇಶದ ವೃಂದಾವನಕ್ಕೆ ಭೇಟಿ ನೀಡಿದ್ದ ಅಲಿಘರ್ ನಿವಾಸಿ ಅಭಿಷೇಕ್ ಅಗರ್‌ವಾಲ್‌ ಅವರಿಗೆ ಇದೇ ರೀತಿಯ ಅನುಭವವಾಗಿದೆ. ಅವರು ವೃಂದಾವನದಲ್ಲಿರುವ ಠಾಕೂರ್ ಬಾಂಕೆ ಬಿಹಾರಿ ದೇವಸ್ಥಾನದ ಮುಂದೆ ಪ್ರಾರ್ಥಿಸುತ್ತಿದ್ದಾಗ, ಅವರ ಪತ್ನಿಯ ಕೈಯಲ್ಲಿದ್ದ 20 ಲಕ್ಷ ರೂ. ಮೌಲ್ಯದ ಆಭರಣಗಳಿದ್ದ ಬ್ಯಾಗನ್ನು ಕೋತಿಯೊಂದು ಕಸಿದುಕೊಂಡು ಹೋಯಿತು. ಕ್ಷಣಾರ್ಧದಲ್ಲಿ, ಕೋತಿ ಬ್ಯಾಗಿನೊಂದಿಗೆ ಕಟ್ಟಡಗಳ ನಡುವೆ ಮಾಯವಾಯಿತು. ನಂತರ ಅಭಿಷೇಕ್ ಅವರ ಪತ್ನಿ ಕಿರುಚಿದರು ಮತ್ತು ದೇವಸ್ಥಾನದ ಸಿಬ್ಬಂದಿ ಮತ್ತು ಭಕ್ತರು ಬ್ಯಾಗ್‌ಗಾಗಿ ಕೋತಿಯನ್ನು ಹುಡುಕಿದರು. ಆದರೆ ಕೋತಿಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಕೊನೆಗೆ ಅಭಿಷೇಕ್ ಪೊಲೀಸರ ಸಹಾಯ ಪಡೆಯಬೇಕಾಯಿತು.
ಘಟನೆಯ ಬಗ್ಗೆ ತಿಳಿದ ಸದರ್‌ನ ಸರ್ಕಲ್ ಅಧಿಕಾರಿ ಸಂದೀಪ್ ಕುಮಾರ್, ಪೊಲೀಸರು ಮತ್ತು ಸ್ಥಳೀಯರನ್ನೊಳಗೊಂಡ ತಂಡವನ್ನು ರಚಿಸಿ ಬ್ಯಾಗ್ ಹುಡುಕಲು ಕಳುಹಿಸಿದರು. ಅಲ್ಲದೆ, ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಸಂಕೀರ್ಣ ಮತ್ತು ಕಿರಿದಾದ ಹಾದಿಗಳನ್ನು ಹೊಂದಿರುವ ಕಟ್ಟಡಗಳ ನಡುವೆ ನಿರಂತರವಾಗಿ ಹುಡುಕಾಟ ನಡೆಸಿದ ನಂತರ, ಅವರು ಪ್ರದೇಶದ ಎತ್ತರದ ಮರದ ಕೊಂಬೆಯಲ್ಲಿ ಬ್ಯಾಗ್ ತೂಗಾಡುತ್ತಿರುವುದನ್ನು ಕಂಡುಕೊಂಡರು. ಈ ಹೊತ್ತಿಗೆ ಹುಡುಕಾಟ ಎಂಟು ಗಂಟೆಗಳಿಗೂ ಹೆಚ್ಚು ಕಾಲ ನಡೆದಿತ್ತು. ಪತ್ತೆಯಾದ ಬ್ಯಾಗ್ ಅನ್ನು ಪರಿಶೀಲಿಸಿದಾಗ, ಆಭರಣಗಳೆಲ್ಲವು ಭದ್ರವಾಗಿತ್ತು.ಯಾವುದು ಕಳೆದುಹೋಗಿಲ್ಲ ಎಂದು ತಿಳಿದ ಅಭಿಷೇಕ್ ವೃಂದಾವನ ಪೊಲೀಸರಿಗೆ ಧನ್ಯವಾದ ಅರ್ಪಿಸಿದರು.ದೇವರಿಗೆ ದೊಡ್ಡದೊಂದು ನಮಸ್ಕಾರಮಾಡಿ ಅಲ್ಲಿಂದ ತೆರಳಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!