

ಹಾಸನ: ರೌಡಿ ಶೀಟರ್ ಜೆಸಿಬಿ ಮಂಜು ಮೇಲೆ ಅಟ್ಯಾಕ್.! ಪ್ರಾಣ ಅಪಾಯದಿಂದ ಪಾರು.! ನೆತ್ತರ ನಡುವಿನಲ್ಲಿ ನರಳಾಡಿದ ಮಂಜ.!

news.ashwasurya.in
ಅಶ್ವಸೂರ್ಯ/ಹಾಸನ : ಹಾಸನದ ಮಣ್ಣಲ್ಲಿ ಮತ್ತೆ ನೆತ್ತರು ಹರಿದಿದೆ.! ರೌಡಿ ಶೀಟರ್ ಜೆಸಿಬಿ ಮಂಜನ ಮೇಲೆ ಆತನ ಗೆಳೆಯರಾದ ಯೋಗಿಹಳ್ಳಿ ರಾಜು ಮತ್ತು ಗ್ಯಾಂಗ್ ತಲ್ವಾರ್ನಿಂದ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಿದೆ. ಹೆಂಡದ ನಶೆ ಎರುತ್ತಿಂದ್ದಂತೆ ನಶೆಯ ಗುಂಪಿನಲ್ಲಿ ಕಿರಿಕ್ ಅದ ಹಿನ್ನೆಲೆಯಲ್ಲಿ ಈ ಮಂಜನ ಮೇಲೆ ಅಟ್ಯಾಕ್ ನಡೆದಿದ್ದು ಗಂಭೀರವಾಗಿ ಗಾಯಗೊಂಡ ರೌಡಿಶೀಟರ್ ಮಂಜ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ರೌಡಿ ಶೀಟರ್ ಜೆಸಿಬಿ ಮಂಜನ ಮೇಲೆ ಆತನ ಸ್ನೇಹಿತ ಬಳಗವೇ ತಲ್ವಾರ್ ಬೀಸಿ ಹತ್ಯೆಗೈಯಲು ಯತ್ನಿಸಿರುವ ಘಟನೆ ಬುಧವಾರ ರಾತ್ರಿ ಸರಿ ಸುಮಾರು 11ಯ ವೇಳೆಗೆ ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ. ಕೂದಲೆಳೆಯಲ್ಲಿ ಸಾವಿನ ದವಡೆಯಿಂದ ಜೆಸಿಬಿ ಮಂಜ ಪಾರಾಗಿದ್ದಾನೆ.!

ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಗೆಳೆಯರೊಂದಿಗೆ ಕುಡಿದ ಮತ್ತಿನಲ್ಲಿ ಅಶ್ಲೀಲವಾಗಿ ಒಬ್ಬರನ್ನೊಬ್ಬರು ನಿಂದಿಸಿಕೊಂಡಿದ್ದಾರೆ. ಅದರಲ್ಲೂ ಜಿಸಿಬಿ ಮಂಜ ತನ್ನ ಗೆಳೆಯ ಯೋಗಿಹಳ್ಳಿ ರಾಜಿ ಮತ್ತಾತನ ಸಹಚರರಿಗೆ ಅತ್ಯಂತ ಕೆಟ್ಟದಾಗಿ ನಿಂದಿಸಿದ್ದಾನೆ. ಅ ಸಮಯದಲ್ಲೇ ಕೈ ಕೈ ಮಿಲಾಯಿಸಿದ್ದು ಅಷ್ಟರಲ್ಲಿ ಸ್ಥಳದಲ್ಲಿದ್ದವರು ಇಬ್ಬರನ್ನು ಅಲ್ಲಿಂದ ಕಳುಹಿಸಿದ್ದಾರೆ. ಬಳಿಕ ರಾತ್ರಿ 9ರ ವೇಳೆಗೆ ಜೆಸಿಬಿ ಮಂಜುಗೆ ಕರೆ ಮಾಡಿದ ಗೆಳೆಯ ಯೋಗಿಹಳ್ಳಿ ರಾಜು ನಾವು ನಾವೇ ಹೀಗೆ ಜಗಳ ಮಾಡಿಕೊಂಡರೇ ಹೇಗೆ ನಮ್ಮಲ್ಲೆ ದುಷ್ಮನ್ ಗಿರಿ ಯಾಕೆ.? ರಾಜಿಯಾಗೋಣ ಬಾ ಎಂದು ಮಾತಿಗೆ ಕರೆದಿದ್ದಾನೆ.
ನಂಬಿ ಮಾತುಕತೆಗೆ ಬಂದ ಜೆಸಿಬಿ ಮಂಜನ ಹತ್ಯೆಗೆ ಯತ್ನ.! :
ಇನ್ನೂ ಯೋಗಿಹಳ್ಳಿ ರಾಜು ಮಾತು ಕೇಳಿ ಮನೆಯಲ್ಲಿದ್ದ ಜೆಸಿಬಿ ಮಂಜ. ರಿಂಗ್ ರಸ್ತೆಯ ಸತ್ಯಮಂಗಲ ಕೆರೆ ಕೋಡಿ ಹರಿಯುವ ಬ್ರಿಡ್ಜ್ ಬಳಿ ಬಂದಿದ್ದಾನೆ ಈ ವೇಳೆ ಯೋಗಿಹಳ್ಳಿ ರಾಜು ಮತ್ತು ಆತನ ಸಹಚರರಾದ ಸುಮಾರು 20 ಮಂದಿಯಿದ್ದ ತಂಡ ಏಕಾಏಕಿ ರೌಡಿಶೀಟರ್ ಜೆಸಿಬಿ ಮಂಜನ ಮೇಲೆ ಮೊದಲೇ ತಯಾರಾಗಿ ತಂದಿದ್ದ ಹತ್ಯಾರಗಳಿಂದ ಏಕಾಏಕಿ ದಾಳಿಗೆ ಮುಂದಾಗಿದ್ದಾರೆ.! ಈ ವೇಳೆ ರಾಜು ( ರಾಜಿ) ಬೀಸಿದ ಭರ್ಜಿ ಜೆಸಿಬಿ ಮಂಜನ ಕುತ್ತಿಗೆಯ ಗದ್ದದವನ್ನೆ ಸೀಳಿದೆ.! ಕೂದಲೆಳೆಯಲ್ಲಿ ಮಂಜು ಸಾವಿನಂಚಿನಿಂದ ಪಾರಾಗಿದ್ದಾನೆ.

ಮಂಜು ಮಾರಕಾಸ್ತ್ರ ತೆಗೆದ ಕೂಡಲೇ ಬೆಚ್ಚಿ ಬಿದ್ದ ತಂಡ
ಇಷ್ಟರಲ್ಲಿ ಎಚ್ಚೆತ್ತುಕೊಂಡ ಮಂಜು ತನ್ನ ಬಳಿ ಇದ್ದ ಮಾರಕಾಸ್ತ್ರದಿಂದ ತೆಗೆದ ಕೂಡಲೇ ಬೆಚ್ಚಿ ಬಿದ್ದ ತಂಡ ಅಲ್ಲಿಂದ ಎಸ್ಕೇಪ್ ಆಗಿದ್ದು, ಗದ್ದದ ಭಾಗ ಕತ್ತರಿಸಿ ರಕ್ತ ಸುರಿಯುವುದರ ನಡುವೆ ಆತ ನಗರದ ಖಾಸಗಿ ನರ್ಸಿಂಗ್ ಹೋಂಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಸದ್ಯ ಜೆಸಿಬಿ ಮಂಜು ಸಾವಿನ ದವಡೆಯಿಂದ ಪಾರಾಗಿದ್ದಾನೆ.! ಇನ್ನು ಜೆಸಿಬಿ ಮಂಜು ಹತ್ಯೆ ಮಾಡಲು ಮುಂದಾಗಿದ್ದ ಯೋಗಿಹಳ್ಳಿ ರಾಜು ಮತ್ತು ಆತನ ತಮ್ಮ ಅಶೋಕ ಇವರ ಸಹಚರರು ಈ ಹಿಂದೆ ಪೆಟ್ರೋಲ್ ಪೈಪ್ ಕೊರೆದು ಪೆಟ್ರೋಲ್ ಕದ್ದ ಆರೋಪ ಹೊತ್ತಿದ್ದು,ಸಣ್ಣಪುಟ್ಟ ಗಲೆಟೆ ಮಾಡಿಕೊಂಡು ಓಡಾಡುವ ಇವರುಗಳು ರೌಡಿಶೀಟರ್ಗಳಾಗಿದ್ದಾರೆ ಎಂದು ತಿಳಿದುಬಂದಿದೆ.

ಬದುಕುಳಿದ ರೌಡಿಶೀಟರ್ ಜೆಸಿಬಿ ಮಂಜ ಘಟನೆಯ ಕುರಿತು ಹೇಳಿದ್ದೆನು :
ನಾನು ಮನೆಯಲ್ಲಿ ಮಲಗಿದ್ದೆ. ಸ್ನೇಹಿತರು ಮಾತನಾಡಬೇಕು ಅಂತ ಕರೆದರು ಮನೆಯಿಂದ ಹೊರಹೋದೆ. ಮಾತಾಡುವ ವೇಳೆಗೆ ರಾಜಿ ಭರ್ಜಿಯಿಂದ ಇರಿದ. ಅವನಿಗೂ ನನಗೂ ಯಾವುದೇ ದ್ವೇಷವಿಲ್ಲ. ಆದರೂ ಯಾಕೆ ಕೊಲೆ ಮಾಡಲು ಬಂದರೆಂಬುದೇ ತಿಳಿಯುತ್ತಿಲ್ಲ.
- ರೌಡಿಶೀಟರ್ ಜೆಸಿಬಿ ಮಂಜು,


