2024ನೇ ಸಾಲಿನ ಕಳವು ಪ್ರಕರಣಗಳಲ್ಲಿ ಪತ್ತೆಯಾದ ವಸ್ತುಗಳನ್ನು ಮಾಲೀಕರಿಗೆ ನೀಡಿದ ಶಿವಮೊಗ್ಗ ಜಿಲ್ಲಾ ಪೋಲಿಸ್ ಇಲಾಖೆ.!
ASHWASURYA/SHIVAMOGGA
ಶಿವಮೊಗ್ಗ: ಡಿ,16 ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಗರದ ಪೊಲೀಸ್ ಕವಾಯತು ಡಿಎಆರ್ ಮೈದಾನದಲ್ಲಿ 2024ನೇ ಸಾಲಿನಲ್ಲಿ ನಡೆದಂತಹ ಹಲವು ಕಳವು ಪ್ರಕರಣಗಳಲ್ಲಿ ಪೋಲಿಸರು ಪತ್ತೆ ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ. ವಸ್ತುಗಳನ್ನು ಕಳೆದುಕೊಂಡಂತಹ ವಾರಸುದಾರರಿಗೆ. ಪೊಲೀಸರು ಕಳ್ಳರನ್ನು ಪತ್ತೆಹಚ್ಚಿ ವಸ್ತುಗಳನ್ನು ದಸ್ತಗಿರಿ ಮಾಡಿದಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ.ವಸ್ತುಗಳನ್ನು ಮಾಲಿಕರಿಗೆ ಹಿಂದಿರುಗಿಸುವ ವ್ಯವಸ್ಥೆಯನ್ನು ಡಿಎಆರ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದರು.
2024ನೇ ಸಾಲಿನ 244 ಪ್ರಕರಣಗಳು ಮತ್ತು ಹಿಂದಿನ ವರ್ಷಗಳ 54 ಪ್ರಕರಣಗಳು ಸೇರಿ ಒಟ್ಟು 298 ಪ್ರಕರಣಗಳನ್ನು ಪತ್ತೆ ಮಾಡಿ, ಅಂದಾಜು ಮೌಲ್ಯ 3,76,99,299/- ರೂಗಳ ಮಾಲುಗಳನ್ನು , CEIR (Central Equipment Identity Register) ಕಳೆದು ಹೋದ ಒಟ್ಟು 477 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಲಾಗಿರುತ್ತದೆ.
2024ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 612 ಸ್ವತ್ತು ಕಳವು ಪ್ರಕರಣಗಳು ವರದಿಯಾಗಿರುತ್ತವೆ. ಸದರಿ ಪ್ರಕರಣಗಳಲ್ಲಿ 2 ಲಾಭಕ್ಕಾಗಿ ಕೊಲೆ, 3 ದರೋಡೆ, 19 ಸುಲಿಗೆ, 4 ಸರಗಳ್ಳತನ, 51 ಕನ್ನಹಾಕಿ ಕಳವು, 14 ಮನೆಗಳ್ಳತನ, 62 ಸಾಮಾನ್ಯ ಕಳವು, 6 ಜಾನುವಾರು ಕಳವು,
70 ವಾಹನ ಕಳವು ಹಾಗೂ 13 ವಂಚನೆ ಪ್ರಕರಣಗಳು ಸೇರಿದಂತೆ ಒಟ್ಟು 244 ಪ್ರಕರಣಗಳನ್ನು ಪತ್ತೆ ಮಾಡಿ ಅಂದಾಜು ಮೌಲ್ಯ 3,22,37,654/- ರೂ ಗಳ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು, ಮೊಬೈಲ್ ಫೋನ್, ವಾಹನಗಳು, ಜಾನುವಾರು, ನಗದು ಹಣ, ಎಲೆಕ್ಟ್ರಾನಿಕ್ ವಸ್ತುಗಳು, ಅಡಿಕೆ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರಲಾಗಿತ್ತು.
ಅಲ್ಲದೇ ಹಿಂದಿನ ವರ್ಷಗಳಲ್ಲಿ ವರದಿಯಾದ ಪ್ರಕರಣಗಳಲ್ಲಿ 26 ಮನೆಗಳ್ಳತನ, 11 ಸಾಮಾನ್ಯ ಕಳವು ಮತ್ತು 17 ವಾಹನ ಕಳವು ಸೇರಿದಂತೆ ಒಟ್ಟು 54 ಪ್ರಕರಣಗಳನ್ನು ಸಹಾ ಪತ್ತೆ ಮಾಡಿ ಅಂದಾಜು ಮೌಲ್ಯ 54,61,645/- ರೂಗಳ ಮಾಲುಗಳನ್ನು ವಶಪಡಿಸಿಕೊಂಡಿರಲಾಗಿತ್ತು.
ಹಾಗೂ CEIR ಪೋರ್ಟಲ್ ಮುಖಾಂತರ ಪತ್ತೆ ಹಚ್ಚಲಾದ ಮೊಬೈಲ್ ಫೋನ್ ಗಳನ್ನು ಈ ದಿನ ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.
ಸ್ವತ್ತು ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ ಕಳೆದುಹೋದ ಮಾಲನ್ನು ಅವುಗಳ ಮಾಲೀಕರಿಗೆ ಹಿಂದಿರುಗಿಸುವಲ್ಲಿ, ಪ್ರಮುಖ ಪಾತ್ರವಹಿಸಿದ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳ ಉತ್ತಮ ಕಾರ್ಯಕ್ಕೆ ಶ್ರೀ ಮಿಥುನ್ ಕುಮಾರ್ ಜಿ.ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ರವರು ಪ್ರಂಶಂಸಿಸಿ ಅಭಿನಂದಿಸಿರುತ್ತಾರೆ,
ಕಳೆದುಕೊಂಡ ವಸ್ತುಗಳು ತಮ್ಮ ಕೈಸೇರಿದ ನೂರಾರು ವಾರುಸುದಾರರು ಶಿವಮೊಗ್ಗ ಜಿಲ್ಲಾ ಪೋಲಿಸ್ ಇಲಾಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು.ಶಿವಮೊಗ್ಗ ಜಿಲ್ಲಾ ದಕ್ಷ ರಕ್ಷಣಾ ಅಧಿಕಾರಿಗಳಾದ ಮಿಥುನ್ ಕುಮಾರ್ ಜಿ ಕೆ, ಐಪಿಎಸ್ ಅವರನ್ನು ಅವರ ಸಿಬ್ಬಂದಿ ವರ್ಗದವರ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿ ಗೌರವದ ಮಾತುಗಳನ್ನು ಅಡಿ ಅಭಿನಂದಿಸಿದ್ದಾರೆ.
ವಸ್ತುಗಳನ್ನು ಕಳೆದುಕೊಂಡವರ ಪಾಲಿನ ಸಂಜೀವಿನಿಯಾದ ಶಿವಮೊಗ್ಗ ಜಿಲ್ಲಾ ರಕ್ಷಣಾ ಅಧಿಕಾರಿಗಳಿಗೂ ಮತ್ತು ಜಿಲ್ಲಾ ಪೋಲಿಸ್ ಇಲಾಖೆಯ ಸಿಬ್ಬಂದಿ ವರ್ಗದವರಿಗೂ ಪತ್ರಿಕೆಯ ಮತ್ತು ಪತ್ರಿಕೆಯ ಓದುಗರ ಬಳಗದವರಿಂದಲೂ ಪೋಲಿಸ್ ಇಲಾಖೆಯ ಕರ್ತವ್ಯ ದಕ್ಷತೆಗೆ ಅಭಿನಂದನೆಗಳು….