ವಿಜಯಪುರ: ಭೀಮಾ ತೀರದ ಹಂತಕ ರೌಡಿಶೀಟರ್ ಬಾಗಪ್ಪ ಹರಿಜನ್ ಭೀಕರ ಹತ್ಯೆ.!
ಗೊಮ್ಮಟ ನಗರದಲ್ಲಿ ರೌಡಿಶೀಟರ್ ಬಾಗಪ್ಪನ ಅಂತ್ಯವಾಗಿದೆ.! ರಾತ್ರಿ ವೇಳೆ ಮನೆ ಹೊರಗಡೆ ಬಂದ ಬಾಗಪ್ಪನನ್ನು ಹಂತಕರ ತಂಡ ಏಕಾಏಕಿ ದಾಳಿಮಾಡಿ ಉಸಿರು ನಿಲ್ಲಿಸಿದ್ದಾರೆ.
ashwasurya/Shivamogga
ಅಶ್ವಸೂರ್ಯ/ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದಿದೆ.! ತಣ್ಣಗೆ ಹರಿಯುತ್ತಿದ್ದ ಭೀಮನಾ ಒಡಲು ಮತ್ತೆ ನೆತ್ತರ ಒಕಳಿಗೆ ತೀಳಿ ಕೆಂಪು ಬಣ್ಣಕ್ಕೆ ಜಾರಿದ್ದಾನೆ.ಕೊನೆಗೂ ಹಂತಕರ ಸ್ಕೆಚ್ ಗೆ ರೌಡಿಶೀಟರ್ ಹಂತತಕ ಬಾಗಪ್ಪ ಹರಿಜನ್ ಮಂಗಳವಾರ ರಾತ್ರಿ ಕೊಲೆಯಾಗಿ ಹೋಗಿದ್ದಾನೆ.!
ವಿಶ್ವವಿಖ್ಯಾತ ಗೊಮ್ಮಟ ನಗರದ ರೇಡಿಯೋ ಕೇಂದ್ರದ ಬಳಿ ಮೊದಲೇ ಸ್ಕೆಚ್ ಹಾಕಿ ಕುಳಿತಿದ್ದ ಹಂತಕರ ತಂಡ ಏಕಾಏಕಿ ರೌಡಿಶೀಟರ್ ಬಾಗಪ್ಪ ಹರಿಜನ್ ನನ್ನು ಮಾರಕಾಸ್ತ್ರಗಳಿಂದ ತಲೆ ಮತ್ತು ದೇಹದ ಇತರ ಭಾಗಗಳಿಗೆ ಮನಬಂದಂತೆ ಕೊಚ್ಚಿ ನೆತ್ತರು ಹರಿಸಿ ಉಸಿರು ನಿಲ್ಲಿಸಿದ್ದಾರೆ ಲಾಂಗಿನೇಟಿಗೆ ರೌಡಿಶೀಟರ್ ಬಾಗಪ್ಪನ ಕೈ ಕತ್ತರಿಸಿ ಹೋಗಿದೆ.ಈ ಭೀಕರ ಹತ್ಯೆಯಿಂದ ಗೊಮ್ಮಟ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ.
Notorious ರೌಡಿಶೀಟರ್ ಸಿಂದಗಿ ಬ್ಯಾಡಗಿಹಾಳ ಗ್ರಾಮದ ಬಾಗಪ್ಪನ ಪಾತ್ರವು ಭೀಮಾ ತೀರದ ರಕ್ತ ಚರಿತ್ರೆಯ ಪುಟದಲ್ಲಿ ದಾಖಲಿತವಾಗಿದೆ. ಮಂಗಳವಾರ ರಾತ್ರಿ ಮನೆಯಲ್ಲಿದ್ದ ಬಾಗಪ್ಪನನ್ನು ಮನೆಯ ಹೋರಗಿನಿಂದ ಯಾರೋ ಕರೆದಿದ್ದಾರೆ.ಸಾವಿನ ಸುಳಿವಿಲ್ಲದ ಬಾಗಪ್ಪ ತಕ್ಷಣವೇ ಬಾಗಿಲು ತೆರದು ಹೊರಗಡೆ ಬಂದಿದ್ದಾನೆ.! ಅಷ್ಟೋತ್ತಿಗಾಗಲೆ ಏಳೆಂಟು ಮಂದಿಯ ಜನರ ತಂಡ ಹತಾರದೊಂದಿಗೆ ಹೊರಗೆ ಹೊಂಚುಹಾಕಿ ಕುಳಿತಿದ್ದಾರೆ.ಹಂತಕ ರೌಡಿಶೀಟರ್ ಬಾಗಪ್ಪ ಬಾಗಿಲು ತೆರದು ಹೊರಬರುತ್ತಿದ್ದ ಗಾಗೆ ಹಂತಕರು ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾರೆ.ಹಂತಕರ ಲಾಂಗಿನೇಟಿನ ಆರ್ಭಟಕ್ಕೆ ಬಾಗಪ್ಪನ ಕಟ್ಟುಮಸ್ತಾದ ದೇಹ ಕೊಚ್ಚಿ ಛಿದ್ರವಾಗಿದೆ.ಕ್ಷಣಮಾತ್ರದಲ್ಲೆ ಬಾಗಪ್ಪ ರಕ್ತದ ಮಡುವಿನಲ್ಲಿ ಉಸಿರು ಚಲ್ಲಿದ್ದಾನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಬ್ಬ ಹಂತಕ ರೌಡಿಶೀಟರ್ ಹಂತಕರ ಲಾಂಗಿನೇಟಿಗೆ ಮನೆಯ ಅಂಗಳದಲ್ಲಿ ಉಸಿರು ಚಲ್ಲುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರೌಡಿಶೀಟರ್ ಬಾಗಪ್ಪನ ಸಾವಿನ ಸುದ್ದಿ ಭೀಮಾ ತೀರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ.ಕುಖ್ಯಾತ ರೌಡಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಾಗಪ್ಪ ಹರಿಜನ ಮೇಲೆ 2017ರಲ್ಲಿ ಜಿಲ್ಲಾ ಕೋರ್ಟ್ ಆವರಣದಲ್ಲೇ ಗುಂಡಿನ ದಾಳಿ ನಡೆದಿತ್ತು. ಅದೇನು ಅದೃಷ್ಟವೊ ಈತ ಬದುಕುಳಿದಿದ್ದ. ನಟೋರಿಯಸ್ ಮಾವ ಚಂದಪ್ಪ ಹರಿಜನ್ ಮೂಲಕ ಅಪರಾಧ ಜಗತ್ತಿಗೆ ಕಾಲಿಟ್ಟ ಬಾಗಪ್ಪ ಶಾರ್ಪ್ ಶೂಟರ್ ಎನಿಸಿಕೊಂಡಿದ್ದ.
ಹಲವು ಸಮಯದಿಂದ ರಿವೆಂಜ್ ಬಿದ್ದಿದ್ದ ಹಂತಕರ ತಂಡ ಈ ಬಾರಿ ಯೋಜಿತ ರೀತಿಯಲ್ಲಿ ಸ್ಕೆಚ್ ಹಾಕಿದ್ದರು.ತಮ್ಮ ಸ್ಕೆಚ್ ನಂತೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಬಾಗಪ್ಪನನ್ನು ಕೊಂದು ಮುಗಿಸಿದ್ದಾರೆ.
ಭೀಮಾ ತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ್ ಅಳಿಯ ಪ್ರಮುಖ ಸಹಚರ ಬಾಗಪ್ಪ ಹರಿಜನನನ್ನು ಹತ್ಯೆ ಮಾಡಲಾಗಿದೆ. ಮಂಗಳವಾರ ರಾತ್ರಿ 8-50 ರ ಸುಮಾರಿನಲ್ಲಿ ವಿಜಯಪುರದ ಮದಿನಾ ನಗರದಲ್ಲಿರುವ ರೇಡಿಯೋ ಕೇಂದ್ರದ ಸಮೀಪವಿರುವ ರೌಡಿಶೀಟರ್ ಬಾಗಪ್ಪನ ಮನೆಬಾಗಿಲ್ಲೆ ಮಾರಕಾಸ್ತ್ರಗಳಿಂದ ಮುಖ, ತಲೆ ಸೇರಿದಂತೆ ದೇಹದ ವಿವಿಧ ಕಡೆಗಳಲ್ಲಿ ಲಾಂಗು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಈ ಹಿಂದೆ ಕೋರ್ಟ್ ಆವರಣದಲ್ಲಿಯೇ ಬಾಗಪ್ಪ ಹರಿಜನ್ ಮೇಲೆ ಗುಂಡಿನ ನೆಡೆದಿತ್ತು ಆಗ ಬಾಗಪ್ಪ ಬಚಾವ್ ಆಗಿದ್ದ. ಆದರೆ ಈ ಬಾರಿ ಹಂತಕರು ಯೋಜಿತ ರೀತಿಯಲ್ಲಿ ದಾಳಿ ನಡೆಸಿ ಬಾಗಪ್ಪನನ್ನು ಕೊಂದು ಹಾಕಿದ್ದಾರೆ.ಕುಖ್ಯಾತ ಹಂತಕ ರೌಡಿಶೀಟರ್ ಒಬ್ಬನ ಅಂತ್ಯವಾಗಿದೆ ಭೀಮಾ ತೀರದಲ್ಲಿ ನೆತ್ತರ ಕೋಡಿ ಹರಿದು ಭೀಮಾ ಮಲಿನನಾಗಿದ್ದರು ಪಾತಕಲೋಕದಲ್ಲಿ ಮೆರೆದು ನೆತ್ತರ ಕಲೆ ಅಂಟಿಸಿ ಕೊಂಡವನೊಬ್ಬನ ಅಂತ್ಯವಾಗಿದೆ. ಬಾಗಪ್ಪನನ್ನು ಹತ್ಯೆ ಮಾಡಿದ ಹಂತಕರು ಬಾಗಪ್ಪ ಉಸಿರು ಚಲ್ಲಿದ್ದಾನೆ ಎನ್ನುವುದನ್ನು ಅರಿತು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.ಘಟನ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಹಂತಕರನ್ನು ಹೆಡೆಮುರಿಕಟ್ಟಲು ಮುಂದಾಗಿದ್ದಾರೆ.
ಅಂದು ವಿಜಯಪುರ ನ್ಯಾಯಾಲಯದ ಆವರಣದಲ್ಲಿ ಕುಖ್ಯಾತ ಹಂತಕ ಬಾಗಪ್ಪ ಹರಿಜನ್ (40) ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದರು.ರಮೇಶ ಹಡಪದ, ಭೀಮಶಿ ಹರಿಜನ, ನಾಮದೇವ ದೊಡಮನಿ, ರಜಾಕ ಕಾಂಬ್ಳೆ, ಪ್ರಭು ಜಮಾದಾರ,ಮಲ್ಲೇಶ್ ಇಂಚಗೇರಿ ಬಂಧಿತರು.ಈ ಶೂಟೌಟ್ ಪ್ರಕರಣದಲ್ಲಿ ದೇಹದ ಒಳಕ್ಕೆ ಮೂರು ಗುಂಡುಗಳು ತೂರಿದ್ದರು ಬಾಗಪ್ಪ ಬದುಕುಳಿದಿದ್ದ.!