Headlines

ತೀರ್ಥಹಳ್ಳಿ : 25-26ನೇ ಸಾಲಿನ ಮುನ್ಸಿಪಲ್ ಬಜೆಟ್ : 38 ಕೋಟಿ ರೂಪಾಯಿ ಭರ್ಜರಿ ಬಜೆಟ್ ಮಂಡಿಸಿದ ರಹಮತ್ ಉಲ್ಲಾ ಅಸಾದಿ.!

  • ಪಟ್ಟಣ ಪಂಚಾಯತಿ ನೀರು ಸರಬರಾಜು ಕೇಂದ್ರದ ಮುಂಭಾಗ ರಾಷ್ಟ್ರ ಧ್ವಜ ನಿರ್ಮಾಣಕ್ಕಾಗಿ 10 ಲಕ್ಷ ರೂ ಮಿಸಲಿಡಲಾಗಿದೆ.
  • ವಿದ್ಯುತ್ / ತಾಲೂಕಿನ ನಾಗರೀಕರ ಅನುಕೂಲಕ್ಕಾಗಿ ವಿದ್ಯುತ್ / ಗ್ಯಾಸ್ ಚಿತಾಗಾರ ನಿರ್ಮಾಣಕ್ಕಾಗಿ 1 ಕೋಟಿ 50 ಲಕ್ಷ ರೂ ಮಿಸಲಿಡಲಾಗಿದೆ.
  • ಹಿಂದೂ ರುದ್ರಭೂಮಿ, ಖಬರಸ್ಥಾನ, ಕ್ರಿಶ್ಚಿಯನ್ ಸ್ಮಶಾನಗಳಿಗೆ ಹೈಮಾಸ್ಟ್ ಬೀದಿ ದೀಪ ಅಳವಡಿಕೆಗಾಗಿ 7 ಕೋಟಿ 50 ಲಕ್ಷ ರೂ ಮೀಸಲು.
  • ವ್ಯಾಯಾಮ ಶಾಲೆಯ ಪರಿಕರಣಗಳ ಖರೀದಿಗಾಗಿ 15 ಲಕ್ಷ ರೂ.ಮಿಸಲು
  • ತೀರ್ಥಹಳ್ಳಿಗೆ ಬಂದು ಹೋಗುವ ಪ್ರವಾಸಿಗರ ಅನುಕೂಲಕ್ಕಾಗಿ ಮುಖ್ಯ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ವಸತಿ ಗೃಹ ನಿರ್ಮಾಣಕ್ಕಾಗಿ 1 ಕೋಟಿ ರೂ.ಮೀಸಲು
  • ನೂತನ ವ್ಯಾಯಾಮ ಶಾಲೆ ನಿರ್ಮಾಣ ಸೊಪ್ಪುಗುಡ್ಡೆಯ
  • ಗೋಪಾಲಗೌಡ ರಂಗಮಂದಿರದ ಮುಂಭಾಗದ ಕಟ್ಟಡದಲ್ಲಿ ಈಗಾಗಲೇ ವ್ಯಾಯಾಮ ಶಾಲೆಗೆ ಸ್ಥಳ ನಿಗದಿ ಮಾಡಲಾಗಿದ್ದು 21 ಲಕ್ಷ ಕಾಮಗಾರಿ ಪ್ರಗತಿಯಲ್ಲಿದ್ದು ಉಳಿದಂತೆ 25 ಲಕ್ಷ ರೂಪಾಯಿ ಮಿಸಲಿಡಲಾಗಿದೆ.
  • ಬೆಟ್ಟಮಕ್ಕಿಯ ಅಂಬೇಡ್ಕ‌ರ್ ಭವನ ಶಿಥಿಲಗೊಂಡಿದ್ದು ಅದರ ನವೀಕರಣದ ಕಾಮಗಾರಿ ಹಾಗೂ ಇತರ ಕಾಮಗಾರಿಗೆ 15 ಲಕ್ಷ ರೂ ಮೀಸಲು.
  • ತೀರ್ಥಹಳ್ಳಿ ನಾಗರಿಕರ ಮನೋರಂಜನೆ ಹಾಗೂ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಕುವೆಂಪು ಅವರ ಜನ್ಮದಿನೋತ್ಸವದ ಸವಿನೆನಪಿಗಾಗಿ ಪಟ್ಟಣ ಪಂಚಾಯತಿ ಕಚೇರಿ ಪಕ್ಕದ ಮೈದಾನದಲ್ಲಿ 80 ಲಕ್ಷ ರೂ ವೆಚ್ಚದಲ್ಲಿ ಬಯಲು ರಂಗಮಂದಿರ ನಿರ್ಮಾಣ
  • ಈ ಸಾಲಿನಲ್ಲಿ ಕ್ರೀಡೆಗೆ ಪ್ರಾಶಸ್ತ್ರ ನೀಡುವ ಸಲುವಾಗಿ ಸೊಪ್ಪುಗುಡ್ಡೆಯಲ್ಲಿರುವ ವಾಲಿಬಾಲ್ ಕೋರ್ಟ್ ಅನ್ನು ಉನ್ನತ ಮಟ್ಟದಲ್ಲಿ ಆಧುನಿಕಗೊಳಿಸಿ ಕ್ರೀಡಾಂಗಣಕ್ಕೆ ಹೊನಲು ಬೆಳಕಿನ ವ್ಯವಸ್ಥೆಗಾಗಿ 8 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
  • ರಾಮಮಂಟಪಕ್ಕೆ ಸಂಪರ್ಕ ರಸ್ತೆ ನಿರ್ಮಾಣ ಪವಿತ್ರ ರಾಮಕೊಂಡಕ್ಕೆ ಧಾರ್ಮಿಕ ಸಂದರ್ಭದಲ್ಲಿ ಸುರಕ್ಷಿತವಾಗಿ ಭಕ್ತಾದಿಗಳು ಓಡಾಡಲು ಅನುಕೂಲವಾಗುವಂತೆ ಯಾಂಪ್ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
  • ಪ್ರತಿನಿತ್ಯ ತೀರ್ಥಹಳ್ಳಿ
    ಪಟ್ಟಣದ ಸ್ವಚ್ಚತೆಗಾಗಿ ಬಿಸಿಲು ಮಳೆಯನ್ನು ಲೆಕ್ಕಿಸದೆ ಪ್ರತಿನಿತ್ಯ ಶ್ರಮಿಸುವ ಪೌರಕಾರ್ಮಿಕರಿಗೆ ವಿಶೇಷ ಮನ್ನಣೆ ನೀಡುವ ದೃಷ್ಟಿಯಲ್ಲಿ ಅವರಿಗೆ ಅಪರೂಪವಾದ ವಿಮಾನ ಸಂಚಾರಕ್ಕೆ ತೀರ್ಮಾನಿಸಿದ್ದು 10 ಲಕ್ಷ ರೂ.ಮೀಸಲಿಡಲಾಗಿದೆ.
  • ಪಟ್ಟಣದ ಕೇಂದ್ರ ಬಿಂದುವಾದ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಅಭಿವೃದ್ಧಿ ಕಾಮಗಾರಿಗೆ ಮತ್ತು ರಂಗಮಂದಿರದಲ್ಲಿ ಸಿ.ಸಿ ಕ್ಯಾಮರ ಅಳವಡಿಕೆಗೆ ಮತ್ತು ಹೈಟೆಕ್ ಧ್ವನಿವರ್ಧಕ ವ್ಯವಸ್ಥೆಗಾಗಿ 30 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
  • ತುಂಗೆಯ ಸುಂದರಾದ ತಟದಲ್ಲಿ ಪ್ರವಾಸಿಗರು ಮತ್ತು ವಾಯುವಿಹಾರಕ್ಕಾಗಿ ಹೋಗುವ ಸ್ಥಳಿಯರಿಗಾಗಿ ತುಂಗಾನದಿ ತೀರದಲ್ಲಿ 20 ಬೆಂಚ್ ಗಳನ್ನು ಅಳವಡಿಸಲು 10 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
  • ಪಂಚಾಯಿತಿ ಕಛೇರಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಾರ್ವಜನಿಕರಿಗೆ ತಲುಪಿಸುವ ದೃಷ್ಟಿಯಿಂದ ಮತ್ತು ಪಟ್ಟಣ ಪಂಚಾಯಿತಿ ಆದಾಯ ಹೆಚ್ಚಿಸುವ ಉದ್ದೇಶದಿಂದ ಪಟ್ಟಣ ಪಂಚಾಯಿತಿಗೆ ಸಂಭಂದಿಸಿದ ಸ್ಥಳವಾದ ಮುಖ್ಯ ಬಸ್ ನಿಲ್ದಾಣದಲ್ಲಿನದ ಕಟ್ಟಡಗಳ ಮೇಲೆ ಜಾಹಿರಾತು ಫಲಕಗಳನ್ನು ಅಳವಡಿಸಲು 15 ಲಕ್ಷ ರೂ.ರೂಪಾಯಿ ಮೀಸಲಿಡಲಾಗಿದೆ.
  • ಪಟ್ಟಣದ ಬಡ ಕುಟುಂಬದ ಅನೇಕ ಯುವಕ, ಯುವತಿಯರ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಮೋಟಾರ್ ವಾಹನಗಳಿಗೆ ಚಾಲನೆ ಮತ್ತು ಪರವಾನಿಗೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಆಸಕ್ತ ಯುವಕ ಯುವತಿಯರಿಗೆ ತರಬೇತಿ ಮತ್ತು ಪರವಾನಿಗೆ ನೀಡಲು 10 ಲಕ್ಷ ರೂಪಾಯಿ.
  • ಪಂಚಾಯಿತಿಯಲ್ಲಿ ಕ್ಲಿನಿಕ್‌ನ್ನು ಸ್ಥಾಪಿಸಿ ಪಟ್ಟಣದ ನಾಗರೀಕರ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು
    ರಾಜ್ಯದ ಹೆಸರಾಂತ
    ತಜ್ಞ ವೈದ್ಯರುಗಳಿಂದ ತಪಾಸಣೆಯನ್ನು ನಡೆಸುವ ಉದ್ದೇಶದಿಂದ ಪಟ್ಟಣ ಪಂಚಾಯಿತಿ ಕ್ಲಿನಿಕ್ ಸ್ಥಾಪಿಸಲು 5 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
  • ಪಟ್ಟಣ ಪಂಚಾಯತಿ ವ್ಯಾಪ್ತಿಯ ಮಹಿಳೆಯರಿಗೆ ಗುಡಿಕೈಗಾರಿಕೆಯಲ್ಲಿ ತರಬೇತಿ ನೀಡಿ ಅವರ ಅದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಹಮ್ಮಿಕೊಳ್ಳಲು 10 ಲಕ್ಷ ರೂಪಾಯಿ ಇರಿಸಲಾಗಿದೆ.
  • ಛತ್ರಕೇರಿಯ ಚಕ್ರತೀರ್ಥದಿಂದ ಹೊಳೆ ದಂಡೆಯ ಮೂಲಕ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಹೋಗಲು ಪರ್ಯಾಯ ರಸ್ತೆ ನಿರ್ಮಾಣಕ್ಕೆ 15 ಲಕ್ಷ ರೂಪಾಯಿ.
  • ದಸರ ಉತ್ಸವ ಹಾಗೂ ಬನ್ನಿ ವಿತರಣೆ ಮಾಡುವ ಕುಶಾವತಿ ಉದ್ಯಾನವನದಲ್ಲಿರುವ ವಿಜಯಮಂಟಪದ ನವೀಕರಣಕ್ಕಾಗಿ 10 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
  • ತೀರ್ಥಹಳ್ಳಿ ತಾಲ್ಲೂಕಿನ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮಕ್ಕಳ ಉನ್ನತ ವ್ಯಾಸಂಗ ಹಾಗೂ ಉದ್ಯೋಗಗಳ ಕನಸುಗೊಳಿಸುವ ಉದ್ದೇಶದಿಂದ ಐ.ಎ.ಎಸ್, ಐ.ಪಿ.ಎಸ್ ಹಾಗೂ ಕೆ.ಎ.ಎಸ್ ತರಬೇತಿ ಪಡೆಯಲು ಅನುಕೂಲವಾಗುವಂತೆ ರಾಜ್ಯದ ಹೆಸರಾಂತ ತರಬೇತುದಾರರಿಂದ ತರಬೇತಿ ಕೇಂದ್ರ ಸ್ಥಾಪನೆಗೆ 10 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
  • ಒಟ್ಟಿನಲ್ಲಿ ಈ ಬಾರಿಯ ಬಜೆಟ್ ದೊಡ್ಡ ಮೊತ್ತದ್ದಾಗಿದ್ದು ಜೋತೆಗೆ ಜನಸ್ನೇಹಿ ಬಜೆಟ್ ಆಗಿದೆ.ಅದರೆ ಇವುಗಳೆಲ್ಲ ಕಾರ್ಯರೂಪಕ್ಕೆ ಬರಬಹುದಾ.?ಇವುಗಳಲ್ಲಿ ಯಾವುದು ಜನರ ಅನುಕೂಲಕ್ಕೆ ಪ್ರಮುಖವಾಗಿದೆ ಎಂದು ನೋಡಬೇಕಿದೆ, ಕಳೆದ ಬಾರಿಯ ಬಜೆಟ್ ನಲ್ಲಿ ಮಂಡನೆಯಾಗಿದ್ದ ಯಾವೆಲ್ಲಾ ಕೆಲಸ ಕಾರ್ಯಗಳು ಜನರಿಗೆ ಅನುಕೂಲವಾಗಿದೆ ಎಂಬುದನ್ನು ಇಲ್ಲಿ ಯೊಚಿಸಬೇಕಿದೆ .

Leave a Reply

Your email address will not be published. Required fields are marked *

Optimized by Optimole
error: Content is protected !!