

ನ್ಯೂಸ್ ಆ್ಯಂಕರ್ ಸಲ್ಮಾ ಸುಲ್ತಾನ ನಾಪತ್ತೆ ಹಾಗೂ ಕೊಲೆ ಪ್ರಕರಣದ ಕರಾಳ ಸತ್ಯ ಬಯಲಾಗಿದೆ. ಸಲ್ಮಾ ಕೊಲೆಯಾಗಿದ್ದು ಹೇಗೆ, ಭೀಕರ ಘಟನೆಯ ಇಂಚಿಂಚು ಮಾಹಿತಿ ಕೋರ್ಟ್ನಲ್ಲಿ ಅನಾವರಣಗೊಂಡಿದೆ.
ತುಟಿಗೆ ಸಿಗರೇಟು ಇಟ್ಟು ಸಂಭ್ರಮಿಸಿದ್ದರು.!
ಮೂವರು ತುಟಿಗಳ ಮೇಲಿನ ಸಿಗರೇಟು ಕಿಕ್ ಹೆಚ್ಚಿಸುತ್ತಿತ್ತು. ಜೊತೆಗೆ ಹಳೆ ಬಾಲಿವುಡ್ ಸಿನಿಮಾದ “ತುಜೆ ನಾರಾಜ್ ನಹಿ ಮೈ ಜಿಂದಗಿ ಹಾಡು ಮೆಲ್ಲನೆ ಪರಿಸ್ಥಿತಿಯನ್ನೇ ಬದಲಿಸಿತ್ತು. ಜಿಮ್ ಇನ್ಸ್ಸ್ಟ್ರರ್ ಜೊತೆಗೆ ಆತನ ಇಬ್ಬರು ಸ್ನೇಹಿತರು ಸೇರಿ ನ್ಯೂಸ್ ಆ್ಯಂಕರ್ ಸಲ್ಮಾ ಸುಲ್ತಾನಳ ಉಸಿರು ನಿಲ್ಲಿಸಿದ್ದರು. 18ರ ಹರೆಯದ ಪತ್ರಕರ್ತೆ ಚಿರಮೌನಕ್ಕೆ ಜಾರಿದ್ದಳು. ಸಲ್ಮಾ ಸುಲ್ತಾನ ನಾಪತ್ತೆ ಪ್ರಕರಣ ಬರೋಬ್ಬರಿ 5 ವರ್ಷಗಳ ಕಾಲ ರಹಸ್ಯವಾಗಿಯೇ ಉಳಿದಿತ್ತು. ಇದೀಗ ಈ ಕೊಲೆಯ ಅಸಲಿ ಸತ್ಯಗಳು ಬಯಲಾಗಿದೆ….
ಛತ್ತೀಸ್ಗಢ್ : 2018 ರಲ್ಲಿ ಕಾಣೆಯಾಗಿದ್ದ ಯುವ ಪತ್ರಕರ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.! ಸ್ಫೋಟಕ ಮಾಹಿತಿ ಬಹಿರಂಗ!

news.ashwasurya.in
ಛತ್ತೀಸ್ಘಡ್ : ಐದು ವರ್ಷ ಕಾಲ ರಹಸ್ಯವಾಗಿದ್ದ ಛತ್ತೀಸ್ ಘಡದ 18 ರ ಹರೆಯದ ಪತ್ರಕರ್ತೆ ಹಾಗೂ ಸುದ್ದಿ ವಾಹಿನಿಯ ನಿರೂಪಕಿ ಸಲ್ಮಾ ಸುಲ್ತಾನ ಪ್ರಕರಣ ಇದೀಗ ಕೆಲ ಸ್ಫೋಟಕ ಮಾಹಿತಿಯೊಂದಿಗೆ ಸತ್ಯ ಬಹಿರಂಗವಾಗಿದೆ.
ಛತ್ತೀಸ್ಘಡದ ಕೋರ್ಬಾದಲ್ಲಿ ಸುದ್ದಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ಸಲ್ಮಾನ ಸುಲ್ತಾನ 2018ರಲ್ಲಿ ನಾಪತ್ತೆಯಾಗಿದ್ದಳು. ಸಲ್ಮಾ ಎಲ್ಲಿದ್ದಾಳೆ, ಏನಾಗಿದೆ ಅನ್ನೋ ಯಾವ ಸಣ್ಣ ಸುಳಿವು ಸಿಕ್ಕಿರಲೇ ಇಲ್ಲ. ಪೋಷಕರು ಮಗಳಿಗಾಗಿ ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲೇರಿದ್ದರೂ ಆಕೆ ಪತ್ತೆಯಾಗಲಿಲ್ಲ. ಐದು ವರ್ಷಗಳ ಬಳಿಕ 2023ರಲ್ಲಿ ಕೊರ್ಬಾದಲ್ಲಿ ಹೆದ್ದಾರಿ ವಿಸ್ತರಣೆ, ಪ್ರೈ ಓವರ್ ನಿರ್ಮಾಣ ಯೋಜನೆಗಳು ಆರಂಭಗೊಂಡಿವೆ.
ಪಿಲ್ಲರ್ ನಿರ್ಮಾಣ ಹಾಗೂ ಭೂಮಿಯ ಗಟ್ಟಿ, ಎಷ್ಟು ಆಳಕ್ಕೆ ಪಿಲ್ಲರ್ ಹಾಕಬೇಕು ಅನ್ನೋದರ ಕುರಿತು ಗ್ರೌಂಡ್ ಪೆನಟ್ರೇಟಿಂಗ್ ಮ್ಯಾಪಿಂಗ್ ಸೇರಿದಂತೆ ಹಲವು ಸಲಕರಣೆಗಳ ಮೂಲಕ ಎಂಜಿನಿಯರ್ಗಳು ಅಧ್ಯಯನ ನಡೆಸಿದ್ದರು. ಈ ವೇಳೆ ಅಸ್ಥಿಪಂಜರ ಇರುವುದು ಪತ್ತೆಯಾಗಿತ್ತು. ಜನ ವಸತಿ ಇಲ್ಲದ, ಸ್ಮಶಾನವಲ್ಲದ ಪ್ರದೇಶದಲ್ಲಿ ಒಂದೇ ಒಂದು ಅಸ್ಥಿಪಂಜರ ಪತ್ತೆ ಹಲವು ಅನುಮಾನಕ್ಕೆ ಕಾರಣವಾಗಿತ್ತು.

ತಕ್ಷಣ ಪೊಲೀಸರಿಗೆ ಮಾಹಿತಿ ತಲುಪಿತ್ತು.ಪೊಲೀಸರು ಅಸ್ಥಿಪಂಜರದ ಡಿಎನ್ಎ ಪರೀಕ್ಷೆ ಮಾಡಿಸಿದಾಗ ಇದು ನಾಪತ್ತೆಯಾದ ಸಲ್ಮಾ ಅಸ್ಥಿಪಂಜರ ಅನ್ನೋದು ದೃಢಪಟ್ಟಿತ್ತು. ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಸಲ್ಮಾ ಸುಲ್ತಾನ ಹಾಗೂ ಕೊರ್ಬಾದಲ್ಲಿದ್ದ ಜಿಮ್ ಇನ್ಸ್ಸ್ಟ್ರಕ್ಟರ್ ಮಧು ಸಾಹು ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದರು ಅನ್ನೋದು ಪತ್ತೆಯಾಗಿತ್ತು. ಮಧು ಸಾಹು ಹಾಗೂ ಆತನ ಆಪ್ತರನ್ನು ವಿಚಾರಣೆ ಮಾಡಿದಾಗ ಕೆಲ ಮಾಹಿತಿಗಳು ಬಯಲಾಗಿದ್ದವು.
ಮಧು ತನ್ನ ಆಪ್ತ ಸ್ನೇಹಿತರಾದ ಕೌಶಲ್ ಶ್ರೀವಾಸ್ ಹಾಗೂ ಅತುಲ್ ಶರ್ಮಾ ಜೊತೆ ಸೇರಿ ಸಲ್ಮಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಮಧು ಸಾಹು ಆಪ್ತರು, ಸಲ್ಮಾ ಆಪ್ತರು, ಜಿಮ್ ಬಳಿ ಬರುತ್ತಿದ್ದ ಹಲವರನ್ನು ವಿಚಾರಣೆ ನಡೆಸಿದಾಗ ಸಿಕ್ಕ ಮಾಹಿತಿಗಳ ಆಧಾರದಲ್ಲಿ ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿ ಸಲ್ಮಾಳ ಕೊಲೆ ರಹಸ್ಯ ಭೇದಿಸಿದ್ದಾರೆ. ಸಲ್ಮಾಳನ್ನು ದೈಹಿಕವಾಗಿ ಬಳಸಿಕೊಂಡ ಬಳಿಕ ಮಧು ಸಾಹು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಇದಕ್ಕೆ ಇಬ್ಬರು ಸಾಥ್ ನೀಡಿದ್ದರು.

ಆಕೆಯ ಮೃತದೇಹ ಕೋಣೆಯಲ್ಲಿ ಬಿದ್ದಿದ್ದರೆ, ಬಾಲಿವುಡ್ ಸಿನಿಮಾದ ಹಳೇ ಹಾಡು ಹಾಕಿ, ಸಿಗರೇಟು ಹಚ್ಚಿ ಈ ಮೂವರು ಸಂಭ್ರಮಿಸಿದ್ದರಂತೆ.! ಬಳಿಕ ಕೊಲೆಯನ್ನು ಯಾವುದೇ ಸಾಕ್ಷಿ, ಸುಳಿವು ಸಿಗದಂತೆ ಮರೆ ಮಾಚಲು ತಂತ್ರಗಳನ್ನು ಹೂಡಿದ್ದರು ಅನ್ನೋದು ಈಗ ಬಯಲಾಗಿದೆ.


