

ಮಹಾರಾಷ್ಟ್ರ : ಭಾವಿ ಪತಿ ಕೊಲೆ ಪ್ರಕರಣ, ಆರೋಪಿ ಪ್ರೇಮಿಗಳು 7 ದಿನ ಪೊಲೀಸ್ ಕಸ್ಟಡಿಗೆ.
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿಯನ್ನು ಲೋನಾವಾಲಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಆರೋಪಿಗಳನ್ನು 7 ದಿನಗಳ ಕಾಲ (ಜೂನ್ 29ರವರೆಗೆ) ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ….

news.ashwasurya.in
ಅಶ್ವಸೂರ್ಯ/ಮಹಾರಾಷ್ಟ್ರ : ಪ್ರಿ-ವೆಡ್ಡಿಂಗ್ ಶೂಟ್ ನೆಪದಲ್ಲಿ ಕೊಲೆಗೆ ಸ್ಕೆಚ್.! ಚೇತನ್ ಜೊತೆ ಬಾಳಲು ಕೇತನ್ ಕೊಲೆಮಾಡಿದ ಬಾವಿ ಪತ್ನಿ.! ಒಂದು ಕಡೆ ಎರಡು ಕುಟುಂಬದವರ ಮನೆಗಳಲ್ಲಿ ಮದವೆಯ ಸಂಭ್ರಮ, ಇನ್ನೊಂದೊ ಕಡೆ ಬಾವಿ ಪತ್ನಿಯಿಂದ ಬಾವಿ ಪತಿಯನ್ನು ಕೊಲೆಮಾಡಲು ಸ್ಕೆಚ್.!
ಪ್ರಿ-ವೆಡ್ಡಿಂಗ್ ಶೂಟಿಂಗ್ ನೆಪದಲ್ಲಿ ಮಹಾರಾಷ್ಟ್ರದ ವಧು (ಯುವತಿ) ಪ್ರಿಯಕರನೊಂದಿಗೆ ಸೇರಿ ಭಾವಿ ಪತಿಯನ್ನು ಹತ್ಯೆ ಮಾಡಿರುವ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಆರೋಪಿ ಜೋಡಿಯನ್ನು 7 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ನನ್ನು ಮಂಗಳವಾರ ಲೋನಾವಾಲಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪ್ರಕರಣದ ತನಿಖೆಗಾಗಿ ಜೂನ್ 29ರವರೆಗೆ 7 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಜೂನ್ 18ರಂದು ಸಿಯಾ ಗೋಯಲ್ ಹುಟ್ಟುಹಬ್ಬ ಆಚರಿಸಲು ಕೇತನ್ ಮತ್ತು ಸಿಯಾ ಲೋಹಗಡ್ ಕೋಟೆಗೆ ಟ್ರೆಕ್ಕಿಂಗ್ಗೆ ತೆರಳಿದ್ದರು. ಟ್ರೆಕ್ಕಿಂಗ್ ವೇಳೆ ಕೇತನ್ನ ಸುಮಾರು 400 ಅಡಿ ಆಳದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದ. ಮೊದಲಿಗೆ ಇದು ಅಪಘಾತ ಎಂದು ಎಲ್ಲರೂ ಭಾವಿಸಿದ್ದರು. ಫೋಟೋ ತೆಗೆಯುವ ವೇಳೆ ಕಾಲು ಜಾರಿ ಬಿದ್ದಿದ್ದಾನೆ ಎಂದು ಸಿಯಾ ಪೊಲೀಸರಿಗೆ ಹೇಳಿದ್ದಳು. ಆದರೆ, ತನಿಖೆ ಮುಂದುವರಿದಂತೆ ಹಲವು ಅನುಮಾನಗಳು ಹುಟ್ಟಿಕೊಂಡವು. ಬಳಿಕ ಇದು ಅಪಘಾತವಲ್ಲ ಪೂರ್ವನಿಯೋಜಿತ ಕೊಲೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಚೇತನ್ ಚೌಧರಿಯನ್ನು ಪ್ರೀತಿಸುತ್ತಿದ್ದ ಸಿಯಾಗೆ ಕೇತನ್ನೊಂದಿಗೆ ಮದುವೆಯಾಗಲು ಇಷ್ಟವಿರಲಿಲ್ಲ. ಆದೆ ಕಾರಣಕ್ಕೆ ಪ್ರೇಮಿಗಳು ಇಬ್ಬರೂ ಸೇರಿ ಕೇತನ್ನನ್ನು ಕೊಲೆ ಮಾಡಿರುವ ನಿಗೂಢ ಸಂಚು ಇದೀಗಾ ಬಯಲಾಗಿದೆ. ಇದೇ ಜೂನ್ 14ರಂದು ಕೂಡ ಸಿಯಾ ಮತ್ತು ಕೇತನ್ ಲೋಹಗಡ್ ಕೋಟೆಗೆ ಹೋಗಿದ್ದರು. ಆಗಲೂ ಕೇತನ್ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಮಗನ ಮೃತದೇಹ ಮನೆಗೆ ಬಂದಾಗ ಸಿಯಾ ಮುಖದಲ್ಲಿ ಯಾವುದೇ ದುಃಖ ಕಾಣಿಸಲಿಲ್ಲ ಎಂದು ಕೇತನ್ ತಂದೆ ಹೇಳಿದ್ದಾರೆ.
ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಸಿಯಾ ಮತ್ತು ಚೇತನ್ ವಿರುದ್ಧ ಕೊಲೆ ಹಾಗೂ ಸಂಚು ಆರೋಪದಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಬಹಿರಂಗವಾಗಲಿದೆ.

ಪ್ರಕರಣದ ಹಿನ್ನೆಲೆ ಮತ್ತು ಪ್ರಮುಖ ಮುಖ್ಯಾಂಶಗಳು:
ಜೂನ್ 18ರಂದು ಸಿಯಾ ಗೋಯಲ್ ಹುಟ್ಟುಹಬ್ಬ ಆಚರಿಸಲು ಕೇತನ್ ಮತ್ತು ಸಿಯಾ ಲೋಹಗಡ್ ಕೋಟೆಗೆ ಟ್ರೆಕ್ಕಿಂಗ್ಗೆ ತೆರಳಿದ್ದರು. ಈ ವೇಳೆ ಕೇತನ್ ಸುಮಾರು 400 ಅಡಿ ಆಳದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದರು.
ಪ್ರಕರಣದ ಹಿನ್ನೆಲೆ ಮತ್ತು ಪ್ರಮುಖ ಮುಖ್ಯಾಂಶಗಳು:
- ಸಂಚು: ಸಿಯಾಗೆ ಕೇತನ್ನೊಂದಿಗೆ ಮದುವೆಯಾಗಲು ಇಷ್ಟವಿರಲಿಲ್ಲ. ಆಕೆ ಚೇತನ್ ಚೌಧರಿಯನ್ನು ಪ್ರೀತಿಸುತ್ತಿದ್ದಳು. ಈ ಕಾರಣಕ್ಕಾಗಿ ಇಬ್ಬರೂ ಸೇರಿ ಕೇತನ್ನನ್ನು ಕೊಲೆ ಮಾಡಲು ಮುಂಚಿತವಾಗಿಯೇ ಸ್ಕೆಚ್ ಹಾಕಿದ್ದರು.
- ಅಪಘಾತದ ನಾಟಕ: ಆರಂಭದಲ್ಲಿ ಫೋಟೋ ತೆಗೆಯುವಾಗ ಕಾಲು ಜಾರಿ ಬಿದ್ದಿದ್ದಾನೆ ಎಂದು ಸಿಯಾ ಪೊಲೀಸರಿಗೆ ಸುಳ್ಳು ಹೇಳಿ, ಇದನ್ನು ಆಕಸ್ಮಿಕ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಳು.
- ರಹಸ್ಯ ಬಯಲು: ಕೇತನ್ ಅನುಭವೀ ಟ್ರೆಕ್ಕರ್ ಆಗಿದ್ದರಿಂದ ಅವರ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ತಾಂತ್ರಿಕ ಸಾಕ್ಷ್ಯಗಳು, ಸಾಕ್ಷಿಗಳ ಹೇಳಿಕೆ ಮತ್ತು ಪೊಲೀಸ್ ತನಿಖೆಯ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.ಸದ್ಯ ಲೋನಾವಾಲಾ ಗ್ರಾಮೀಣ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಕಲೆಹಾಕುತ್ತಿದ್ದಾರೆ.


