ಮೊದಲ ಬಾರಿಗೆ ಕನ್ನಡಿಗ ರಘು ಕೈಯಿಂದ ಟೀಂ ಇಂಡಿಯಾ ಜೆರ್ಸಿ ಪಡೆದು ಕನ್ನಡಿಗನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವೈಭವ್ ಸೂರ್ಯವಂಶಿ.

news.ashwasurya.in
ಅಶ್ವಸೂರ್ಯ ನ್ಯೂಸ್ : ಮೊದಲ ಬಾರಿಗೆ ಟೀಂ ಇಂಡಿಯಾ ಜೆರ್ಸಿ ಪಡೆದು ಖುಷಿಯಲ್ಲಿ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಕನ್ನಡಿಗ ರಘು ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಕೊಂಡಿದ್ದಾರೆ.

ಐರ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಯುವ ಆಟಗಾರ 15 ರ ಹರೆಯದ ವೈಭವ್ ಸೂರ್ಯವಂಶಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಜೆರ್ಸಿ ತೊಡುತ್ತಿದ್ದಾರೆ.
ವೈಭವ್ ಸೂರ್ಯವಂಶಿಗೆ ಜೆರ್ಸಿ ನೀಡುತ್ತಿರುವ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ. ಟೀಂ ಇಂಡಿಯಾದಲ್ಲಿ ಥ್ರೋ ಡೌನ್ ಸ್ಪೆಷಲಿಸ್ಟ್ ಆಗಿರುವ ಕನ್ನಡಿಗ ರಘು ಸ್ವತಃ ತಾವೇ ಅವರ ಕೊಠಡಿಗೆ ತೆರಳಿ ಜೆರ್ಸಿಯನ್ನು ನೀಡಿದ್ದಾರೆ. ಟೀಮ್ ಇಂಡಿಯಾದ ಹಿರಿಯ ಥ್ರೋಡೌನ್ ಸ್ಪೆಷಲಿಸ್ಟ್ ಮತ್ತು ಕನ್ನಡಿಗ ರಘು (ರಾಘವೇಂದ್ರ) ಅವರು ವೈಭವ್ ಅವರ ಹೋಟೆಲ್ ರೂಮ್ಗೆ ಸರ್ಪ್ರೈಸ್ ಆಗಿ ಭೇಟಿ ನೀಡಿ ಭಾರತ ತಂಡದ ಅಧಿಕೃತ ನೀಲಿ ಜೆರ್ಸಿಯನ್ನು ಹಸ್ತಾಂತರಿಸಿದರು. ಆ ಕ್ಷಣದಲ್ಲಿ ವೈಭವ್ ನಡೆದುಕೊಂಡ ರೀತಿ ನಿಜಕ್ಕೂ ಅಪೂರ್ವವಾಗಿತ್ತು.

ರಘು ಅವರು ರಾಮ್ ರಾಮ್ ಎಂದು ವಿಶ್ ಮಾಡಿದಾಗ ಅವರ ಕಾಲಿಗೆ ನಮಸ್ಕರಿಸಿದ ವೈಭವ್ ಬಳಿಕ ಜೆರ್ಸಿ ಪಡೆದುಕೊಂಡಿದ್ದಾರೆ. ನೆಟ್ಸ್ನಲ್ಲಿ ದಿನಕ್ಕೆ ಸಾವಿರಾರು ಎಸೆತಗಳನ್ನು ಎಸೆದು ಆಟಗಾರರನ್ನು ಸಜ್ಜುಗೊಳಿಸುವ ರಘು ಅವರಂತಹ ತೆರೆಯ ಮರೆಯ ಹಿರಿಯ ಶ್ರಮಜೀವಿಗಳಿಗೆ ವೈಭವ್ ನೀಡಿದ ಈ ಗೌರವ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.


