ತೀರ್ಥಹಳ್ಳಿ : ಆಗುಂಬೆ ಠಾಣಾ ಸರಹದ್ದಿನಲ್ಲಿ ಅಕ್ರಮ ಮರಳು ದಂಧೆ. ಬ್ರೇಕ್ ಹಾಕಿದ ದಕ್ಷ ಪಿಎಸ್ಐ ಶಿವನಗೌಡ.
news.ashwasurya.in
ಅಶ್ವಸೂರ್ಯ/ಆಗುಂಬೆ : ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಅಕ್ರಮವಾಗಿ ಮರಳು ಲೂಟಿಯಾಗುತ್ತಿದ್ದರು ಕೇಳುವವರೆ ಇಲ್ಲದಂತಾಗಿದೆ, ಇಂತಹ ಭ್ರಷ್ಟರ ನಡುವೆಯೂ ದಕ್ಷ ಪೋಲಿಸ್ ಅಧಿಕಾರಿಯೊಬ್ಬರು ಅಕ್ರಮ ಮರಳು ದಂಧೆಕೋರರ ವಿರುದ್ಧ ಸಮರ ಸಾರಿದ್ದಾರೆ.
ಆಗುಂಬೆ ಪೋಲಿಸ್ ಠಾಣೆಯ ದಕ್ಷ ಠಾಣಾ ಅಧಿಕಾರಿಯಾಗಿರುವ ಪಿಎಸ್ಐ ಶಿವನಗೌಡ ಅವರು ಅಕ್ರಮ ಮರಳು ದಂಧೆಕೋರರ ಬೆನ್ನಿಗೆ ಬಿದ್ದಿದ್ದಾರೆ.ದಕ್ಷ ಪಿಎಸ್ಐ ಶಿವನಗೌಡ ಪಾಟೀಲ್ ಅವರು ತಮ್ಮ ಠಾಣಾ ಸರಹದ್ದಿನಲ್ಲಿ ನೆಡೆಯುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದಾರೆ.ತಮ್ಮ ಅಧಿಕಾರದ ಅವಧಿಯಲ್ಲಿ ಕೇಲವು ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಆಳವಡಿಸಿದ್ದಾರೆ. ಯಾವುದೇ ಸ್ಥಳದಲ್ಲಿ ಅಹಿತಕರ ಘಟನೆ ನೆಡೆದರು ಕ್ಯಾಮರದ ಕಣ್ಗಾವಾಲಿನ ಮೂಲಕ ಗಮನಿಸಿ ಸ್ಥಳಕ್ಕೆ ತಮ್ಮ ಸಿಬ್ಬಂದಿಯೊಂದಿಗೆ ದೌಡಾಯಿಸಿ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇತ್ತೀಚೆಗೆ ಆಗುಂಬೆ ಸರಹದ್ದಿನಲ್ಲಿ ಅಕ್ರಮ ಮರಳು ಸಾಗಾಟ ಮಿತಿ ಮೀರಿದ್ದು ಅದನ್ನು ಮಟ್ಟಹಾಕುವಲ್ಲಿ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಪಿಎಸ್ಐ ಶಿವನಗೌಡ ಅವರು ಆಗುಂಬೆ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡ ಕ್ಷಣದಿಂದ ಅಕ್ರಮ ದಂಧೆ ಕೋರರಿಗೆ ಬಿಸಿ ಮುಟ್ಟಿಸಿದ್ದಾರೆ.

ಅದರಲ್ಲೂ ಅಕ್ರಮ ಮರಳು ದಂಧೆಕೋರರ ನಿದ್ದೆಗೇಡಿಸಿದ್ದಾರೆ ಪಿಎಸ್ಐ ಶಿವನಗೌಡ ಅವರು,ಇನ್ನೂ ತಾಲೂಕ್ ಮರಳು ಸ್ಕ್ವಾಡ್ ನಲ್ಲಿರುವ ತಹಶಿಲ್ದಾರ್,ಇಓ,ಪಿಡಿಓ ಹಾಗೂ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ದಂಧೆಕೋರರಿಂದ ಗಡದ್ದಾಗಿ ತಿಂದು ತೆಗಿರುವುದರಿಂದ ಎಷ್ಟೇ ಅಕ್ರಮವಾಗಿ ಮರಳು ಸಾಗಾಟವಾದರು ತಲೆಕೆಡಿಸಿಕೊಳ್ಳದೆ ನಿದ್ರೆಗೆ ಜಾರಿದ್ದಾರೆ.ಆದರೆ ಈ ಅಕ್ರಮ ಮರಳು ದಂಧೆಕೋರರ ಬೆನ್ನಿಗೆ ಬಿದ್ದ ಆಗುಂಬೆ ಪೋಲಿಸರ ತಂಡ ಇತ್ತೀಚೆಗೆ ಎಂಟು ದಂಡ ಪ್ರಕರಣಗಳು ಮತ್ತು ಒಂದು FIR ಅನ್ನು ದಾಖಲಿಸಿ ಮರಳು ತುಂಬಿದ 4 ಪಿಕಪ್ ವಾಹನವನ್ನು ಠಾಣೆಗೆ ತಂದು ನಿಲ್ಲಿಸಿದ್ದಾರೆ. ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ.ಮರಳು ದಂಧೆಕೋರರನ್ನು ಠಾಣೆಗೆ ಕರೆ ತರುತ್ತಿದ್ದ ಹಾಗೆ ಒಂದಷ್ಟು ಮಂದಿ ತಲೆಮಾಸಿದ ರಾಜಕಾರಣಿಗಳು ಠಾಣೆಗೆ ಎಡತಾಗಿ ಮರಳು ಮಾಫಿಯಾದವರನ್ನು ಠಾಣೆಗೆ ತಂದ ಅವರ ವಾಹನಗಳನ್ನು ದೊಡ್ಡಮಟ್ಟದ ಒತ್ತಡ ಹಾಕಿ ಬಿಡಿಸಿಕೊಂಡು ಹೋಗಲು ಮುಂದಾಗುತ್ತಿದ್ದು ಎಲ್ಲೊ ಒಂದು ಕಡೆ ಕೇಲವು ಮಂದಿ ನೀಚ ರಾಜಕಾರಣಿಗಳಿಂದ ಅಧಿಕಾರಿಗಳ ವರ್ಗಾ ಮುಜುಗರಕ್ಕೆ ಒಳಗಾಗಿದೆ ಎನ್ನುದು ಮಾತ್ರ ದುರಂತವೆ ಹೌದು.!
ಇತ್ತೀಚೆಗೆ ಆಗುಂಬೆ ಠಾಣಾ ಸರಹದ್ದಿನ ಮಳಲೂರು, ಕಮ್ಮರಡಿ,ಮಾಲತಿ ನದಿ ತೀರ,ಆಗುಂಬೆ, ಕೇಳೂರು ಬಾಗೋಡು ಇನ್ನೀತರ ಹಳ್ಳ ಕೊಳ್ಳ ನದಿ ತೀರದಲ್ಲಿ ಅಕ್ರಮ ಮರಳು ದಂಧೆ ಮಿತಿ ಮೀರಿದ್ದು ದಕ್ಷ ಆಗುಂಬೆ ಠಾಣೆಯ ಪಿಎಸ್ಐ ಶಿವನಗೌಡ ಅವರು ದಂಧೆಕೋರರನ್ನು ಮಟ್ಟ ಹಾಕಬೇಕಿದೆ,ಪತ್ರಿಕೆ ಕೂಡಾ ಈ ದಂಧೆಯಲ್ಲಿರುವ ದಂಧೆಕೋರರ ಪಟ್ಟಿಯನ್ನು ಮಾಡಿ ಸುದ್ದಿ ಮಾಡಲಿದೆ ಮತ್ತು ಪೊಲೀಸ್ ಇಲಾಖೆ ಮಾಹಿತಿ ನೀಡಲಿದೆ.

