
ಶಿವಮೊಗ್ಗ : ಮೊಹಮ್ಮದ್ ಹ್ಯಾರಿಸ್ ನಲಪಾಡ್ ರವರಿಂದ ರಾಷ್ಟ್ರಮಟ್ಟದ ಟಗರು ಕಾಳಗದ “ಕಂಬಳಿಯ ಜುಲ ” ಅನಾವರಣ.

news ashwasurya.in
ಅಶ್ವಸೂರ್ಯ/ಶಿವಮೊಗ್ಗ : ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರವರಿ 15ರಂದು ಹಮ್ಮಿಕೊಂಡಿರುವ “ರಾಷ್ಟ್ರ ಮಟ್ಟದ” ಅದ್ದೂರಿ “ಟಗರು ಕಾಳ”ಗದ ಅಂಗವಾಗಿ “ಸಂಗೊಳ್ಳಿ ರಾಯಣ್ಣ” ಮತ್ತು “ವೀರ ಶಿವಪ್ಪ ನಾಯಕ”ಹಾಗೂ ಭಗೀರಥ,ವೀರ ಸಿಂಧೂರ ಲಕ್ಷ್ಮಣ ಬಿರುದಿನ “ಕಂಬಳಿಯ ಜುಲವನ್ನು ”

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ನಿಕಟ ಪೂರ್ವ ಅಧ್ಯಕ್ಷರಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್ ರವರು ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ನಲ್ಲಿ ಅನಾವರಣ ಗೊಳಿಸಿ ಮಾತನಾಡಿ ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಈ ರಾಷ್ಟ್ರಮಟ್ಟದ “ಟಗರು ಕಾಳಗ” ದ ಮಹೋತ್ಸವವು ಜನರಲ್ಲೊಂದು ವಿಶೇಷ ಉತ್ಸಾಹ ಮೂಡಿಸಿದೆ ಶಿವಮೊಗ್ಗ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಮಹೋತ್ಸವದ ಅಂಗವಾಗಿ ನೆಡೆಯುತ್ತಿರುವ ಈ ಟಗರು ಕಾಳವು ಯಶಸ್ವಿಯಾಗಲೆಂದು ಮೊಹಮ್ಮದ್ ಹ್ಯಾರಿಸ್ ನಲಪಾಡ್
ಶುಭ ಕೋರಿದರು.

ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕ ಕೆ ರಂಗನಾಥ್, ಗೌರವ ಸಂಚಾಲಕರಾದ ಐಡಿಯಲ್ ಗೋಪಿ, ಹೆಚ್ ಪಾಲಾಕ್ಷಿ, ಸಿ ರವಿ, ಜಿಡಿ ಮಂಜುನಾಥ್, ಸೂಡ ಸದಸ್ಯರಾದ ಎಂ.ಪ್ರವೀಣ್ ಕುಮಾರ್, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ, ನಮ್ಮೂರ ಬಳಗದ ಸಂಚಾಲಕರಾದ ಕೆ ಆರ್ ಸುರೇಶ್, ಎಚ್. ಪಿ. ಗಿರೀಶ್, ಬಿ ಲೋಕೇಶ್ ,ಗುರುಪ್ರಸಾದ್, ಚಂದ್ರು ಗೆಡ್ಡೆ, ಶಮಿರ್, ಎಸ್ಕೆ ಮನೋಜ್, ಕಿರಣ್, ರವಿ ಶಾಸ್ತ್ರಿ, ಹಾಗೂ ಇತರರು ಉಪಸ್ಥಿತರಿದ್ದರು.

