
ಸಿದ್ಧಾಪುರ ಕೊಲೆ ಪ್ರಕರಣ : ಕೊಲೆಯಾದ ದಿನ ಆಗಿದ್ದೇನು.? ಐದೇ ನಿಮಿಷದಲ್ಲಿ ನಡೆದು ಹೊಯ್ತಾ ವಸಂತ್ ನಾಯ್ಕನ ಕೊಲೆ.! ಗಂಡ ಕೊಲೆ ಕುರಿತು ಮೃತ ವಸಂತ್ ಪತ್ನಿ ಹೇಳಿದ್ದು ಎನು.?
news.ashwasurya.in
ಅಶ್ವಸೂರ್ಯ/ಸಿದ್ಧಾಪುರ : ಜ್ಯೋತಿಷಿ ಕಮಲಾಕರ ಭಟ್ಟ ಮತ್ತು ಸುಚಿತ್ರಾ ನಾಯ್ಕ್ ಪ್ರಕರಣದಲ್ಲಿ ಮೃತಪಟ್ಟ ವಸಂತ್ ಕಾಯ್ಕ್ ಅವರ ಪತ್ನಿ, ಘಟನೆಯ ದಿನ ನಡೆದ ಘಟನೆಯ ಒಂದಷ್ಟು ಸತ್ಯಾ ಸತ್ಯತೆಗಳನ್ನು ಬಹಿರಂಗಪಡಿಸಿದ್ದಾರೆ. ಕೇವಲ ಐದೇ ನಿಮಿಷಗಳಲ್ಲಿ ನಡೆದ ಆ ಘಟನೆಯ ಬಗ್ಗೆ ಅವರು ಮಾತನಾಡಿದ್ದಾರೆ.
ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಜ್ಯೋತಿಷಿ ಕಮಲಾಕರ ಭಟ್ಟ ಮತ್ತು ಸುಚಿತ್ರಾ ನಾಯ್ಕ್ನ ಗ್ಯಾಂಗ್ ನೆಡೆಸಿದ ಘಟನೆ ಬಗ್ಗೆ ಇದೀಗ ಮೃತ ವಸಂತ್ ಅವರ ಪತ್ನಿ ಶಾಕಿಂಗ್ ಎನ್ನುವಂಥ ಸತ್ಯವನ್ನು ರಿವೀಲ್ ಮಾಡಿದ್ದಾರೆ. ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಅಂದು ನಡೆದ ಘಟನೆಯ ಇಂಚಿಂಚು ಮಾಹಿತಿಯನ್ನು ನೀಡಿದ್ದಾರೆ. ಸುಚಿತ್ರಾ ಅವರ ಪತಿ ಮಹೇಶ್ ಅವರ ಸಹೋದರ ವಸಂತ್ ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರು. ಈ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲದ ಅವರು, ಅನ್ಯಾಯವಾಗಿ ತಮ್ಮ ಜೀವವನ್ನೇ ಬಲಿ ಕೊಟ್ಟಿದ್ದಾರೆ. ಅಷ್ಟಕ್ಕೂ ಆ ದಿನ ಆಗಿದ್ದೇನು, ಐದೇ ನಿಮಿಷಗಳಲ್ಲಿ ಆ ನಾಲ್ಕು ಮಂದಿ ಮಾಡಿದ್ದೇನು ಎನ್ನುವ ಬಗ್ಗೆ ವಸಂತ್ ಅವರ ಪತ್ನಿ ರಿವೀಲ್ ಮಾಡಿದ್ದಾರೆ.

ಅವರು ಹೇಳಿದಂತೆ, ಸುಚಿತ್ರಾ ನಾಯ್ಕ್ 300-400 ರೂಪಾಯಿಗೆ ಕಂಡಕಂಡವರ ಜೊತೆ ಹಲ್ಲು ಕಿರಿಯುತ್ತಿದ್ದಳು ಆದರೆ ಕೋಟ್ಯಧೀಶ್ವರನಾಗಿರುವ ಕಮಲಾಕರ ಭಟ್ಟ ಅವಳ ತೆಕ್ಕೆಗೆ ಬಿದ್ದ ಆಮೇಲೆ ಅವಳ ವರ್ತನೆ ಬದಲಾಗಿದೆ. ಸುಚಿತ್ರಾಳ ಹಿಂಸೆ ತಾಳದೇ ಗಂಡ ಮಹೇಶ್ ಬೆಂಗಳೂರಿನಲ್ಲಿ ಇದ್ದರು. ಅಷ್ಟಕ್ಕೂ ಮಹೇಶ್ ಅವರಿಗೂ ತಮಗೂ ಯಾವುದೇ ರೀತಿಯ ಒಡನಾಟವೇ ಇರಲಿಲ್ಲ.ಮಾತ್ರವಲ್ಲದೇ ಸುಚಿತ್ರಾಳ ಮಗಳನ್ನು ಕೂಡ ತಾವು ಹುಟ್ಟಿದಾಗಿನಿಂದ ನೋಡೇ ಇರಲಿಲ್ಲ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಅದೇ ಮೊದಲ ಬಾರಿಗೆ ಸುಚಿತ್ರಾ ಮಗಳು, ಆಸರೆ ಕೋರಿ ನಮ್ಮ ಮನೆಗೆ ( ವಸಂತ್ ಮನೆಗೆ ) ಬಂದಿದ್ದಳು. ಆದರೆ ಅದೇ ಅವರಿಗೆ ಮುಳುವಾಗಿ ಹೋಯ್ತು. ವಸಂತ್ ಅವರು ಪ್ರಾಣ ಕಳೆದುಕೊಳ್ಳಬೇಕಾಯ್ತು.

ಮಗಳು ಮೊದಲ ಬಾರಿಗೆ ಬಂದಿದ್ದಳು
ಸುಚಿತ್ರಾ ಮಗಳು ಕಮಲಾಕರ ಭಟ್ಟ ಟಾರ್ಚರ್ ಕೊಡುವುದನ್ನು ಮತ್ತು ತಾಯಿಯ ವಿಚಿತ್ರ ವರ್ತನೆ ಬಗ್ಗೆ ತಂದೆ ಮಹೇಶ್ಗೆ ಮೆಸೇಜ್ ಮಾಡಿದ್ದಳಂತೆ. ಅವರು ಬೆಂಗಳೂರಿನಲ್ಲಿ ಇದ್ದರು. ನಾನೂ ನಿನ್ನ ಜೊತೆ ಬರುತ್ತೇನೆ. ಇಲ್ಲಿ ಇರಲು ಆಗಲ್ಲ ಎಂದಳು. ಆಗ ಮಹೇಶ್ ಅವರು ನನ್ನ ಗಂಡನಿಗೆ ಈ ಬಗ್ಗೆ ತಿಳಿಸಿದರು. ಮಗಳನ್ನು ಕರೆದುಕೊಂಡು ಬಂದು ಇಟ್ಟುಕೊಳ್ಳುವಂತೆ ಹೇಳಿದರು. ಅದಕ್ಕೂ ಮೊದಲು ಮಹೇಶ್ ಅವರಿಗೂ ನಮಗೂ ಅಷ್ಟೊಂದು ಟಚ್ಚೇ ಇರಲಿಲ್ಲ. ಅವರ ಮಗಳನ್ನೂ ನಾನು ನೋಡಿರಲಿಲ್ಲ. ಅದೇ ಮೊದಲ ಬಾರಿಗೆ ಅವಳು ನಮ್ಮ ಮನೆಗೆ ಬಂದಳು. ಅದೇಮೊದಲ ಬಾರಿಗೆ ನನ್ನನ್ನು ದೊಡ್ಡಮ್ಮ ಎಂದು ಕರೆದಳು.

ಐದೇ ನಿಮಿಷದಲ್ಲಿ ನಡೆದು ಹೋಯ್ತು ಕೊಲೆ.!
ಅಂದು ನನ್ನ ಗಂಡ ತೋಟಕ್ಕೆ ಹೋದವರು ಮನೆಗೆ ಬಂದಿದ್ದರು. ಅಷ್ಟರಲ್ಲಿ ಸುಚಿತ್ರಾ ಸೇರಿ ನಾಲ್ಕು ಮಂದಿ ಬಂದರು. ಎಲ್ಲರೂ ಶೂಸ್ ಹಾಕಿಕೊಂಡೇ ಒಳಗೆ ಬಂದಿದ್ದರು. ಆಗ ನನ್ನ ಗಂಡ ಒಳಗೆ ಯಾಕೆ, ಇಲ್ಲೇ ಕುಳಿತು ಮಾತನಾಡೋಣ ಬನ್ನಿ ಎಂದರು. ಇಷ್ಟಾಗಿದ್ದು ಕೇವಲ ಐದಾರು ನಿಮಿಷದಲ್ಲಿ ಮಾತ್ರ. ಅಷ್ಟೊತ್ತಿಗಾಗಲೇ ಬಂದವರು ನನ್ನ ಗಂಡನನ್ನು ಚಾಕುವಿನಿಂದ ಚುಚ್ಚಿ ಸಾಯಿಸಿಯೇ ಬಿಟ್ಟರು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ವಸಂತ್ ಅವರ ಪತ್ನಿ. ನಾನು ಕಮಲಾಕರ ಭಟ್ ಅವರನ್ನು ಮೊದಲು ನೋಡಲಿಲ್ಲ. ಆದ್ದರಿಂದ ಅವರು ಅಲ್ಲಿ ಬಂದಿದ್ದರೋ ಇಲ್ಲವೋ ಗೊತ್ತಾಗಲಿಲ್ಲ. ಆದರೆ ಸುಚಿತ್ರಾ ಮಗಳು, ಅವರು ಕೂಡ ಮನೆಗೆ ಸುಚಿತ್ರಾ ಜೊತೆ ಬಂದು ಅಲ್ಲೇ ನಿಂತಿದ್ದನ್ನು ನೋಡಿದ್ದಳಂತೆ ಎಂದು ಹೇಳಿದ್ದಾರೆ.
ಈ ಮನೆ ಸೇರಿದಂತೆ ಈಗಾಗಲೆ ಲಕ್ಷಾಂತರ ರೂಪಾಯಿ ಸಾಲ ಇದೆ. ನನ್ನ ಗಂಡನೇ ಜೀವನ ಆಧಾರವಾಗಿದ್ದರು ಎಂದು ದುಃಖ ತೋಡಿಕೊಂಡಿರುವ ವಸಂತ್ ಅವರ ಪತ್ನಿ, ಅವರಿಬ್ಬರೂ ಜೈಲಿನಿಂದ ಹೊರಗೆ ಬರಬಾರದು. ಆ ರೀತಿಯ ಶಿಕ್ಷೆ ಆಗಬೇಕು ಎಂದು ಗಂಡನನ್ನು ಕಳೆದುಕೊಂಡ ನೋವಿನಲ್ಲಿ ಹೇಳಿದ್ದಾರೆ. ಆದರೆ, ಯಾವುದೂ ಸಂಬಂಧವೇ ಇಲ್ಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಮಾತ್ರ ದುರಂತವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


