ಕ್ರಿಕೆಟ್ ನಲ್ಲಿ ನತದೃಷ್ಟ ಅಂದ್ರೆ ಇವನೆ ಇರಬೇಕು.!? ಕೇವಲ ಒಂದೇ 1 ರನ್ನಿಂದ ತಪ್ಪಿಹೊಯ್ತು ತ್ರಿಬಲ್ ಸಂಚೂರಿ.!
news.ashwasurya.in
ಅಶ್ವಸೂರ್ಯ/ವೆಸ್ಟ್ ಬೆಂಗಾಲ್ : ಕ್ರಿಕೆಟ್ ಇತಿಹಾಸದಲ್ಲೇ ನತದೃಷ್ಟ ಅಂದ್ರೆ ಇವನೆ ಇರಬಹುದು.? ಕೇವಲ ಒಂದೇ ಒಂದು ರನ್ನಿನಿಂದ ತ್ರಿಬಲ್ ಹಂಡ್ರೆಡ್ ಮಿಸ್ ಮಾಡಿಕೊಂಡಿದ್ದು ನೆರೆದಿದ್ದ ಪ್ರೇಕ್ಷಕರನ್ನು ಮೌನಕ್ಕೆ ಜಾರುವಂತೆ ಮಾಡಿತ್ತು.ಪ್ರತಿ ಸಾಲಿನಂತೆ ಈ ಬಾರಿಯು ದೇಶದ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿ ರಣಜಿ ಟ್ರೋಫಿಯ ಪಂದ್ಯಗಳು ನಡೆಯುತ್ತಿವೆ.ಈಗಾಗಲೇ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ನಲ್ಲಿ ಮುಂಬಯಿ ತಂಡವನ್ನು ಮಣಿ ಸೆಮಿಫೈನಲ್ಸ್ ಹಂತಕ್ಕೆ ತಲುಪಿದೆ ಇನ್ನೂ ಇದೀಗ 3ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಂಗಾಳ ತಂಡದ ಬ್ಯಾಟರ್ ದೊಡ್ಡ ಮೊತ್ತದ ರನ್ ಗಳಿಸಿ ಭಾರೀ ಕೆಟ್ಟ ದಾಖಲೆ ಬರೆದಿದ್ದಾರೆ. 1932 ರಲ್ಲಿ ಡಾನ್ ಬ್ರಾಡ್ಮನ್ ಅವರಂತೆ ಬಂಗಾಳದ ಬ್ಯಾಟರ್ ಸುದೀಪ್ ಕುಮಾರ್ ಘರಾಮಿ ಔಟ್ ಆಗಿದ್ದು ಇದು ಅಭಿಮಾನಿಗಳನ್ನು ದೊಡ್ಡ ನಿರಾಸೆ ದೂಡಿದೆ.

ಕಲ್ಯಾಣಿಯಲ್ಲಿರುವ ಬಂಗಾಳದ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಬಂಗಾಳದ ಕ್ಯಾಪ್ಟನ್ ಫೀಲ್ಡಿಂಗ್ ಆಯ್ಕೆ ಮಾಡಿ, ಎದುರಾಳಿ ಆಂಧ್ರ ಪ್ರದೇಶವನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿದರು. ಮೊದಲ ಇನ್ನಿಂಗ್ಸ್ನಲ್ಲಿ ವಿಫಲ ಬ್ಯಾಟಿಂಗ್ ಮಾಡಿದ್ದ ಆಂಧ್ರ ಪ್ರದೇಶ 295 ರನ್ಗೆ ಆಲೌಟ್ ಆಗಿತ್ತು. ಇದರಿಂದ ಮೊದಲ ಇನ್ನಿಂಗ್ಸ್ನಲ್ಲಿ ಬಂಗಾಳ ಬ್ಯಾಟಿಂಗ್ ಮಾಡುತ್ತಿತ್ತು. ಬಂಗಾಳ ಪರ ಓಪನರ್ಗಳು ಬ್ಯಾಟಿಂಗ್ನಲ್ಲಿ ಬೇಗನೇ ಔಟ್ ಆದರು.

ಆದರೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಸುದೀಪ್ ಕುಮಾರ್ ಘರಾಮಿ ತಂಡಕ್ಕೆ ಆಸರೆಯಾಗಿ ನಿಂತರು. ಕೇವಲ 43 ರನ್ಗೆ 3 ವಿಕೆಟ್ ಕಳೆದುಕೊಂಡಿದ್ದ ಬಂಗಾಳಕ್ಕೆ ರನ್ಗಳ ರಾಶಿ ತುಂಬಿದ್ದು ಸುದೀಪ್ ಕುಮಾರ್. ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಸುದೀಪ್, 596 ಎಸೆತಗಳಲ್ಲಿ 31 ಅಮೋಘವಾದಂತಹ ಬೌಂಡರಿಗಳು ಹಾಗೂ 6 ಸಿಕ್ಸರ್ಗಳಿಂದ 299 ರನ್ ಗಳಿಸಿ ಆಂಧ್ರದ ಶೇಕ್ ರಶೀದ್ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆದರು. ಆದರೆ ಕೇವಲ ಒಂದೇ ಒಂದು ರನ್ನಿಂದ ತ್ರಿಶತಕ ಮಿಸ್ ಮಾಡಿಕೊಂಡಿರುವುದು ಫ್ಯಾನ್ಸ್ಗೂ ಬೇಸರ ಮೂಡಿಸಿತು. ಬಂಗಾಳ 629 ರನ್ಗಳನ್ನು ಗಳಿಸಿ ಆಲೌಟ್ ಆಗಿತ್ತು.ಆಂಧ್ರ ವಿರುದ್ಧ ವೆಸ್ಟ್ ಬೆಂಗಾಲ್ ಗೆಲುವಿನ ಹಾದಿಯಲ್ಲಿದೆ..


