ಬಳ್ಳಾರಿ ಜಿಲ್ಲೆಯಲ್ಲಿ ರೌಡಿ ನಿಗ್ರಹ ತಂಡಗಳ ನೇಮಕ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಸುಮನ್ ಡಿ.ಪಿ.
news.ashwasurya.in
ಅಶ್ವಸೂರ್ಯ/ ಬಳ್ಳಾರಿ, ಜೂ,20 : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಸುಮನ್ ಡಿ.ಪಿ ಅವರು ಜಿಲ್ಲೆಯಲ್ಲಿ 3 ರೌಡಿ ನಿಗ್ರಹ ತಂಡಗಳನ್ನು ರಚನೆ ಮಾಡಿದ್ದಾರೆ. ರೌಡಿಗಳ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಎಸ್ಪಿ ಯವರು ತಮ್ಮ ಅಧೀನದಲ್ಲಿ ಬಳ್ಳಾರಿ ನಗರ, ಸಿರುಗುಪ್ಪ, ತೋರಣಗಲ್ಲು ಉಪ-ವಿಭಾಗದ ಡಿ.ಎಸ್.ಪಿ.ಗಳ ನೇತೃತ್ವದಲ್ಲಿ ಸಿ.ಪಿ.ಐ.-ಪಿ.ಐ ಹಾಗೂ ಅಧಿಕಾರಿ/ಸಿಬ್ಬಂದಿಯವರನ್ನೊಳಗೊಂಡ ರೌಡಿ ನಿಗ್ರಹ ತಂಡಗಳನ್ನು ನೇಮಕ ಮಾಡಿದ್ದಾರೆ.
ಈ ತಂಡಗಳು ಉಪ-ವಿಭಾಗದ ವ್ಯಾಪ್ತಿಯಲ್ಲಿನ ಎಲ್ಲಾ ರೌಡಿಗಳ ಚಲನ ವಲನಗಳ ಮೇಲೆ ನಿಗಾವಣೆ ಇರಿಸಿ ಅವರ ವಿರುದ್ಧ ಈಗಾಗಲೆ ದಾಖಲಾದ ಪ್ರಕರಣಗಳ ಪರಿಶೀಲನೆ, ದಾಖಲಾತಿ ನಿರ್ವಹಣೆ, ಪದೇ ಪದೇ ಕಾನೂನು ಬಾಹಿರ ಕೃತ್ಯಗಳಲ್ಲಿ ಬಾಗಿಯಾದ ವ್ಯಕ್ತಿಗಳ ಗಡಿಪಾರು, ಗೂಂಡಾ ಕಾಯ್ದೆ, ಹಾಗೂ ಕೋಕಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವುದು, ಸೂಕ್ಷ್ಮ ಪ್ರದೇಶಗಳಲ್ಲಿ ಹಠಾತ್ ದಾಳಿ ಕೈಗೊಂಡು. ಚೆಕ್ ಮಾಡಿ ಕ್ರಮ ಕೈಗೊಳ್ಳುವುದು ತಂಡದ ಸದಸ್ಯರುಗಳ ಜವಬ್ದಾರಿಯಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಸುಮನ್ ಡಿ.ಪಿ.

ಬಳ್ಳಾರಿ ಜಿಲ್ಲೆಯಲ್ಲಿ ರೌಡಿಗಳ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಸುಮನ್ ಡಿ.ಪಿ ಅವರ ನೇರ ಅಧೀನದಲ್ಲಿ 3 ವಿಶೇಷ ರೌಡಿ ನಿಗ್ರಹ ತಂಡಗಳನ್ನು ರಚಿಸಲಾಗಿದೆ. [1, 2]
ಈ ತಂಡಗಳ ಕುರಿತು ಪ್ರಮುಖ ಮಾಹಿತಿ ಇಲ್ಲಿದೆ:
ಕಾರ್ಯವೈಖರಿ: ರೌಡಿಗಳ ಚಟುವಟಿಕೆಗಳ ಮೇಲೆ ನಿಗಾ ಇಡುವುದು, ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವುದು ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಇವರ ಮುಖ್ಯ ಉದ್ದೇಶವಾಗಿದೆ.
ಸ್ಥಳಗಳು: ಬಳ್ಳಾರಿ ನಗರ, ಗ್ರಾಮಾಂತರ ಮತ್ತು ಕಂಪ್ಲಿ ಸೇರಿದಂತೆ ಮೂರು ವಿಭಾಗಗಳಲ್ಲಿ ಈ ವಿಶೇಷ ತಂಡಗಳು ಕಾರ್ಯನಿರ್ವಹಿಸಲಿವೆ.
ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ರೌಡಿಸಂ ಮತ್ತು ಸಮಾಜವಿರೋಧಿ ಚಟುವಟಿಕೆಗಳಿಗೆ ಶಾಶ್ವತವಾಗಿ ಮುಕ್ತಿ ಹಾಡಲು ಕರ್ನಾಟಕ ಪೊಲೀಸ್ ಇಲಾಖೆ ಅತ್ಯಂತ ಕಠಿಣ ಮತ್ತು ಮಹತ್ವದ ಹೆಜ್ಜೆಯನ್ನಿಟ್ಟಿದೆ. ರಾಜ್ಯಾದ್ಯಂತ ರೌಡಿಗಳ ಮೇಲೆ ನಿರಂತರ ನಿಗಾ ಇಡಲು ಮತ್ತು ಅವರ ಹೆಡೆಮುರಿ ಕಟ್ಟಲು ಪ್ರತಿ ಪೊಲೀಸ್ ಸರ್ಕಲ್ ಹಾಗೂ ಪೊಲೀಸ್ ಸ್ಟೇಷನ್ ಮಟ್ಟದಲ್ಲಿ ಪ್ರತ್ಯೇಕ ರೌಡಿ ಸ್ಕ್ವಾಡ್ (Rowdy Squads) ಅನ್ನು ರಚಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DG&IGP) ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿರುವ ಡಾ. ಎಂ.ಎ. ಸಲೀಂ (IPS) ಅವರು ಖಡಕ್ ಸುತ್ತೋಲೆಯಲ್ಲಿ ಏನಿದೆ.? ಈ ವಿಶೇಷ ಪಡೆಯು ರೌಡಿಗಳ ದಮನಕ್ಕಾಗಿ ಈ ಕೆಳಗಿನ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಲಿದೆ:
ಅಪರಾಧ ಇತಿಹಾಸ ಹೊಂದಿರುವ ವ್ಯಕ್ತಿಗಳ ಕೇಸ್ಗಳನ್ನು ಮರುಪರಿಶೀಲಿಸಿ, ತಕ್ಷಣವೇ ಹೊಸದಾಗಿ ‘ರೌಡಿ ಶೀಟ್’ ಓಪನ್ ಮಾಡುವುದು (ಇದೇ ವೇಳೆ ಯಾವುದೇ ಅಧಿಕಾರಿಯಿಂದ ಕರ್ತವ್ಯ ಲೋಪವಾದರೆ ಶಿಸ್ತು ಕ್ರಮ ಜರುಗಿಸಲಾಗುವುದು).
ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ರೌಡಿ ಶೀಟರ್ಗಳು ಮತ್ತು ಸಮಾಜವಿರೋಧಿ ಶಕ್ತಿಗಳ ಅಪ್ಡೇಟೆಡ್ ಮಾಹಿತಿಯನ್ನು ಸಿದ್ಧವಾಗಿಟ್ಟುಕೊಳ್ಳುವುದು.
ಕಾನೂನಿನ ಚೌಕಟ್ಟಿನಲ್ಲಿ ರೌಡಿಗಳ ಚಲನವಲನ, ದೈನಂದಿನ ಚಟುವಟಿಕೆಗಳು ಹಾಗೂ ಅವರ ಒಡನಾಟಗಳ ಮೇಲೆ ನಿರಂತರ ನಿಗಾ ಮತ್ತು ತಪಾಸಣೆ ನಡೆಸುವುದು.
ಹೊಸದಾಗಿ ತಲೆ ಎತ್ತುತ್ತಿರುವ ರೌಡಿಗಳು, ಗ್ಯಾಂಗ್ಗಳು ಮತ್ತು ಕ್ರಿಮಿನಲ್ ಗುಂಪುಗಳನ್ನು ಗುರುತಿಸಿ ಸೂಕ್ತ ಇಂಟೆಲಿಜೆನ್ಸ್ ಮಾಹಿತಿ ಕಲೆಹಾಕುವುದು.
ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಹಳೇ ಮತ್ತು ಸರಣಿ ಅಪರಾಧಿಗಳ ಮೇಲೆ ತೀವ್ರ ನಿಗಾ ಇಡುವುದು.
ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ (Goonda Act), ಕೆಕೋಕಾ (KCOCA Act), ಗಡಿಪಾರು (Externment procedure) ಹಾಗೂ ಬಾಂಡ್ಗಳಂತಹ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು.
ವಾರಂಟ್ಗಳ ಜಾರಿ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹಠಾತ್ ದಾಳಿ (Surprise checks) ನಡೆಸುವುದು.
ಈ ಪಡೆಯ ಕೆಲಸ ಕಾರ್ಯಗಳ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ. ಇದಕ್ಕಾಗಿ ಕಟ್ಟುನಿಟ್ಟಿನ ಹೊಣೆಗಾರಿಕೆಯನ್ನು ನಿಗದಿಪಡಿಸಲಾಗಿದೆ:
ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಠಾಣಾಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ (Fortnightly) ಈ ರೌಡಿ ಸ್ಕ್ವಾಡ್ಗಳ ಕಾರ್ಯವೈಖರಿಯನ್ನು ಖುದ್ದಾಗಿ ಪರಿಶೀಲಿಸಬೇಕು.
ಎಸಿಪಿ ಮತ್ತು ಎಸ್ಡಿಪಿಒಗಳು ತಮ್ಮ ಮಾಸಿಕ ಅಪರಾಧ ವಿಮರ್ಶಾ ಸಭೆಯಲ್ಲಿ (Monthly Crime Meetings) ಈ ಪಡೆಯ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ.
ಪ್ರತಿ ತಿಂಗಳು ನಡೆಸಿದ ಕಾರ್ಯಾಚರಣೆ, ವಾರಂಟ್ ಜಾರಿ ಮತ್ತು ರೌಡಿ ಶೀಟ್ಗಳ ಅಪ್ಡೇಟ್ ಮಾಹಿತಿಯ ವರದಿಯನ್ನು ಡಿಒ ಲೆಟರ್ (DO Letter) ಮೂಲಕ ಹಿರಿಯ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು.
ರೌಡಿಸಂ ವಿರುದ್ಧ ಜೀರೋ ಟಾಲರೆನ್ಸ್ ನೀತಿ
ಪೊಲೀಸ್ ಇಲಾಖೆಯು ರೌಡಿಸಂ ವಿರುದ್ಧ ಯಾವುದೇ ಮುಲಾಜಿಲ್ಲದೆ ‘ಜೀರೋ ಟಾಲರೆನ್ಸ್’ (Zero Tolerance Policy) ನೀತಿಯನ್ನು ಅಳವಡಿಸಿಕೊಳ್ಳಲು ಸೂಚಿಸಿದೆ. ಸಾರ್ವಜನಿಕರಿಗೆ ಬೆದರಿಕೆ ಹಾಕುವುದು, ಹಫ್ತಾ ವಸೂಲಿ, ಮೀಟರ್ ಬಡ್ಡಿ ದಂಧೆ, ಬಲವಂತದ ವಸೂಲಾತಿ, ಗ್ಯಾಂಗ್ ವಾರ್ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕಡಕ್ ಆದೇಶ ನೀಡಲಾಗಿದೆ.
ಈ ಸುತ್ತೋಲೆ ತಲುಪಿದ 7 ದಿನಗಳ ಒಳಗಾಗಿ ರೌಡಿ ಸ್ಕ್ವಾಡ್ಗಳನ್ನು ರಚಿಸಿ, ಇಲಾಖೆಯ ಮುಖ್ಯ ಕಚೇರಿಗೆ ಅನುಷ್ಠಾನದ ವರದಿಯನ್ನು ಸಲ್ಲಿಸುವಂತೆ ಎಲ್ಲಾ ಪೊಲೀಸ್ ಕಮಿಷನರ್ಗಳು, ವಲಯ ಐಜಿಪಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (SP) ಸೂಚಿಸಲಾಗಿದೆ.

