Headlines

ಹೊಳೆಹೊನ್ನೂರು : ಇಸ್ಪೀಟ್ ಆಡಬೇಕೆ.? “ಹೊಳೆಹೊನ್ನೂರು ಠಾಣಾ ಸರಹದ್ದಿಗೆ ಬನ್ನಿ” ಕೈಬೀಸಿ ಕರೆಯುತ್ತಿವೆ ಅಂದರ್ ಬಾಹರ್ ಅಡ್ಡೆಗಳು.! ಮೌನಕ್ಕೆ ಜಾರಿದ ಪೊಲೀಸರು.!? ಶಾಸಕರು ಸೈಲೆಂಟು.? ಎನಿದು ಕರ್ಮ.!

ಹೊಳೆಹೊನ್ನೂರು ಪಟ್ಟಣದ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಕೆಲವು ಮಂದಿ ರಾಜಕಾರಣಿಗಳ ಗೆಟಪ್ ಧರಿಸಿ ಅಡ್ಡ ಕಸುಬಿ ದಂಧೆಗೆ ಇಳಿದಿದ್ದಾರೆ ಕೆಲವು ಮನೆಹಾಳರಿಂದ ಸಂಪೂರ್ಣ ನಲುಗಿ ಹೋಗಿದೆ ಹೊಳೆಹೊನ್ನೂರು ಪಟ್ಟಣ.! ಇವರ ಹಣದಾಹದ ವಾಂಚೆಗೆ ಕೆಲವು ಕೂಲಿ ಕಾರ್ಮಿಕರು. ರೈತರು, ಮಧ್ಯಮವರ್ಗದ ಮಂದಿಯ ಜೋತೆಗೆ ಊರಿನ ಕೆಲವು ಯುವಕರು ಅಂದರ್ ಬಾಹರ್ ಇಸ್ಪೀಟ್ ಅಡ್ಡದ ದಾಸರಾಗಿದ್ದಾರೆ..ಇನ್ನೂ ಕೇಲವರು ಈಗಾಗಲೇ ಈ ಅಡ್ಡೆಯ ದಾಸರಾಗಿ ಇದ್ದಬದ್ದ ಹಣ ಆಸ್ತಿಯನ್ನು ಕಳೆದುಕೊಂಡು ಬಿದಿಗೆ ಬಿದ್ದಿದ್ದಾರೆ ಅ ಮಟ್ಟಕ್ಕೆ ಇಲ್ಲಿಯ ಅಂದರ್ ಬಾಹರ್ ಇಸ್ಪೀಟ್ ಅಡ್ಡೆಯ ಹಣದಾಹಿಗಳು ಅಮಾಕ ಮಂದಿಯ ಹಣವನ್ನು ನುಂಗು ನೇಣೆದಿದ್ದಾರೆ…ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಅಂದರ್ ಬಾಹರ್ ಅಕ್ರಮ ಇಸ್ಪೀಟ್ ಆಟ ಭರ್ಜರಿಯಾಗಿ ರಾಜ ರೋಷವಾಗಿ ನೆಡೆಯುತ್ತಿದ್ದರು ಪೊಲೀಸರು ಮಾತ್ರ ಮೌನಕ್ಕೆ ಜಾರಿದ್ದಾರೆ….ಕಾರಣ ಮಾತ್ರ ಅ ದೇವರಿಗೆ ಗೋತ್ತು ಅ ಮಟ್ಟದ ದೊಡ್ಡ ಮೊತ್ತದ ಗಂಟು ಠಾಣೆಯ ಮೆಟ್ಟಿಲೇರಿದಿಯಾ ಎನ್ನುವುದನ್ನು ಅಲ್ಲಿಯ ಪೊಲೀಸರೆ ಉತ್ತರಿಸಬೇಕಿದೆ.!ಇಲ್ಲ ಮುಲಾಜಿಲ್ಲದೆ ಈ ಅಂದರ್ ಬಾಹರ್ ಇಸ್ಪೀಟ್ ಅಡ್ಡದ ಖದೀಮರನ್ನು ಠಾಣೆಗೆ ಎಳೆದುತಂದು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಗರಿಬಿಚ್ಚಿರುವ ಅಂದರ್ ಬಾಹರ್ ಅಕ್ರಮ ಇಸ್ಪೀಟ್ ದಂಧೆಗೆ ಬ್ರೇಕ್ ಹಾಕಿ ತೋರಿಸಿ ದಯವಿಟ್ಟು ಒಂದಷ್ಟು ಅಮಾಯಕ ಮಂದಿಯ ಪ್ರಾಣ, ಹಣ, ಮಾನ,ಸಂಸಾರ ಉಳಿಸಿದ ಪುಣ್ಯ ನಿಮ್ಮದಾಗುತ್ತದೆ…. ನಾವೆ ನಿಮ್ಮ ಕರ್ತವ್ಯವನ್ನು ಮೆಚ್ಚಿ ಪತ್ರಿಕೆಗಳಲ್ಲಿ ಬರೆದು ಅಭಿನಂದಿಸುತ್ತೇವೆ….

Leave a Reply

Your email address will not be published. Required fields are marked *

Optimized by Optimole
error: Content is protected !!