
ಹೊಳೆಹೊನ್ನೂರು : ಇಸ್ಪೀಟ್ ಆಡಬೇಕೆ.? “ಹೊಳೆಹೊನ್ನೂ”ರು ಠಾಣಾ ಸರಹದ್ದಿಗೆ ಬನ್ನಿ ಕೈಬೀಸಿ ಕರೆಯುತ್ತಿವೆ ಅಂದರ್ ಬಾಹರ್ ಅಡ್ಡೆಗಳು.! ಮೌನಕ್ಕೆ ಜಾರಿದ ಪೊಲೀಸರು.!? ಶಾಸಕರು ಸೈಲೆಂಟು.? ಎನಿದು ಕರ್ಮ.!
news.ashwasurya.in
ಅಶ್ವಸೂರ್ಯ/ಹೊಳೆಹೊನ್ನೂರು : ಮಲೆನಾಡಿನ ತವರು ಜಿಲ್ಲೆ ಶಿವಮೊಗ್ಗ ಸುಸಂಸ್ಕೃತರು, ಬುದ್ಧಿಜೀವಿಗಳ ಬಿಡು..ರಮಣೀಯ ತಾಣಗಳ ಒಡಲು..ಎನ್ನುವ ಹಿರಿಮೆ ಇತ್ತಾದರು, ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪವಿತ್ರ ತುಂಗಾ ಭದ್ರಾ ಎರಡು ನದಿಗಳ ಸಂಗಮದ ಪುಣ್ಯಕ್ಷೇತ್ರ .ಆದರೆ ಈ ಪವಿತ್ರ ಕ್ಷೇತ್ರವನ್ನು ಮೈಲಿಗೆ ಮಾಡಲೆಂದೆ ಒಂದಷ್ಟು ಮಂದಿ ಆಡಳಿತ ಪಕ್ಷದ ಲೇಬಲ್ ಅಂಟಿಸಿಕೊಂಡು ಅಕ್ರಮ ಅಂದರ್ ಬಾಹರ್ ಇಸ್ಪೀಟ್ ಆಟದ ಜೂಜಿನಡ್ಡೆಯ ಕಿಂಗ್ ಪಿನ್ ಗಳಾಗಿದ್ದಾರೆ. ತಾಲೂಕಿನ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟವಾದ ಅಂದರ್ ಬಾಹರ್ ಧಂದೆ ಭರ್ಜರಿಯಾಗಿ ಚಿಗಿತುಕೊಂಡಿದೆ.! ಇತ್ತೀಚೆಗಂತು ಹೊಳೆಹೊನ್ನೂರು ಠಾಣಾ ಸರಹದ್ದು ಎಲ್ಲಾ ಅಕ್ರಮಗಳ ಮೈದಾನವಾಗಿದೆ. ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಹಗಲು ರಾತ್ರಿ ಎನ್ನದೆ ನಡೆಯುತ್ತಿರುವ ಈ ಕಾನೂನುಬಾಹಿರ ಚಟುವಟಿಕೆಗಳಿಂದ ಸಾರ್ವಜನಿಕರು ಆತಂಕಗೊಂಡಿದ್ದು, ಪೊಲೀಸರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಅದರಲ್ಲೂ ಅಕ್ರಮ “ಅಂದರ್ ಬಾಹರ್” ಇಸ್ಪೀಟ್ ಆಟವಂತೂ ಕೇಲವರ ನಿದ್ದೆಗೆಡಿಸಿದೆ.ಹೊಳೆಹೊನ್ನೂರು ತಾಲೂಕಿನಲ್ಲಿ ಇಸ್ಪೀಟ್ ಎಲೆಗಳ ಸರಪರ ಸದ್ದಿನ ದಾಸರಾದ ಕೇಲವರನ್ನು ಬಿದಿಗೆ ತಂದು ನಿಲ್ಲಿಸಿದೆ.! ಈ ಕಾರಣದಿಂದಲೇ ಪಟ್ಟಣದ ಒಂದಷ್ಟು ಸುಸಂಸ್ಕೃತ ಮಂದಿ “ಇಸ್ಪೀಟ್ ಆಡಲು ಹೊಳೆಹೊನ್ನೂರಿಗೆ ಬನ್ನಿ” ಇಂಥದೊಂದು ಫಲಕವನ್ನು ತಾಲೂಕಿನ ನಾಲ್ಕು ಹೆದ್ದಾರಿಯ ರಸ್ತೆಯ ಹೆಬ್ಬಾಗಿಲು ಅಳವಡಿಸುವುದೊಂದೆ ಬಾಕಿ ಇದೆ.! ಎಂದು ತಮ್ಮ ಅಳಲನ್ನೂ ತೋಡಿ ಕೊಂಡಿದ್ದಾರೆ ಅ ಮಟ್ಟಕ್ಕೆ ಅಕ್ರಮ ಅಂದರ್ ಬಾಹರ್ ಇಸ್ಪೀಟ್ ಹಡಬೆ ದಂಧೆಯ ಮೈದಾನವಾಗಿದೆ ಹೊಳೆಹೊನ್ನೂರು.

ಅದರಲ್ಲೂ ಭದ್ರಾವತಿ ತಾಲ್ಲೂಕು ಕ್ಷೇತ್ರದಲ್ಲಿ ಇಸ್ಪೀಟ್ ನ ಆರ್ಭಟಕ್ಕೆ ಸಾಕಷ್ಟು ಮಂದಿ ಎಲ್ಲವನ್ನೂ ಕಳೆದುಕೊಂಡು ಬಿದಿಗೆ ಬಿದ್ದಿದ್ದಾರೆ. ಇನ್ನೂ ಹೊಳೆಹೊನ್ನೂರು ಠಾಣೆಯ ಕೂಗಳತೆ ದೂರದಲ್ಲಿದ್ದು ಕೆಲವು ಮಂದಿ ರಾಜಕಾರಣಿಗಳ ಲೇಬಲ್ ಅಂಟಿಸಿಕೊಂಡು ಅಂದರ್ ಬಾಹರ್ ಇಸ್ಪೀಟ್ ಅಡ್ಡೆಗಳ ಲೀಡರ್ ಗಳಾಗಿದ್ದಾರೆ.! ಪವಿತ್ರ ಹೊಳೆಹೊನ್ನೂರು ಕ್ಷೇತ್ರವನ್ನು ಅಪವಿತ್ರಗೊಳಿಸಿದ್ದಾರೆ ಎಂದರೆ ನೀವು ನಂಬಲೆ ಬೇಕು.!ಅದರಲ್ಲೂ ಭರ್ಜರಿಯಾಗಿ ದೊಡ್ಡ ಮೊತ್ತದ ವ್ಯವಹಾರ ನೆಡೆಯುವ ಅಂದರ್ ಬಾಹರ್ ಇಸ್ಪೀಟ್ ಅಡ್ಡೆಯ ಒಡ್ಡೋಲಗಾ ಕಾನನದ ಗರ್ಭವನ್ನೆ ನಡುಗಿಸಿದೆ.ಜನ ನಾಯಕನೆಂದು ಫೋಸು ಕೊಡುವ ಈತನ ಇಸ್ಪೀಟ್ ಆಟದ ಅಖಾಡಕ್ಕೆ ಸಾಕಷ್ಟು ಮಂದಿ ದಾಸರಾಗಿ ಹೋಗಿದ್ದಾರೆ.ಇಲ್ಲಿಯ ಇಸ್ಪೀಟ್ ಆಟದ ಬಿರುಸಿಗೆ ಎಲ್ಲವನ್ನೂ ಕಳೆದುಕೊಂಡು ಆಕಾಶ ನೋಡುವ ಪರಿಸ್ಥಿತಿ ಕೆಲವರದ್ದಾದರೆ ಇನ್ನೂ ಕೆಲವರು ಮನೆ ಮಠ ಮಾರಿ ಎಲ್ಲಾ ಹಣವನ್ನೂ ಜೂಜಿನಡ್ಡೆಗೆ ಸುರಿದು ಬಿದಿಗೆ ಬಿಳುವ ಹಂತಕ್ಕೆ ಹೆಜ್ಜೆ ಇಟ್ಟಿದ್ದಾರೆ.. ಇನ್ನೂ ಸ್ಥಳೀಯರಲ್ಲದೆ ದಾವಣಗೆರೆ,ಶಿವಮೊಗ್ಗ, ಭದ್ರಾವತಿ, ಚನ್ನಗಿರಿ,ಚಿತ್ರದುರ್ಗ ಮತ್ತು ಚಳ್ಳಕೆರೆಯ ಅಂದರ್ ಬಾಹರ್ ಇಸ್ಪೀಟ್ ಫಂಟರ್ಗಳು ಕಟ್ಟೆಯ ಅಂದರ್ ಬಾಹರ್ ಅಖಾಡದಲ್ಲಿ ಕಂಡು ಬರುತ್ತಾರೆ.! ಅ ಮಟ್ಟಕ್ಕೆ ಇಸ್ಪೀಟ್ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಸಿಬ್ಬಂದಿ ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.ಕ್ಷೇತ್ರದ ಶಾಸಕರು ಮೌನಕ್ಕೆ ಜಾರಿದ್ದಾರೆ.!
ಹೊಳೆಹೊನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯ ಕಾನನದ ಗರ್ಭದ ಒಣಗಿದ ದರಗೆಲೆಗಳ ಮೇಲೆ ಅಕ್ರಮ ಅಂದರ್ ಬಾಹರ್ ಇಸ್ಪೀಟ್ ಆಟವಂತು ದಿನಕ್ಕೊಂದು ಜಾಗದಲ್ಲಿ ನೆಡೆಯುತ್ತಿದೆಯಂತೆ.! ಇನ್ನೂ ಎಲ್ಲಾ ಅಕ್ರಮ ದಂಧೆಗಳು ನೆಡೆಯುತ್ತಿದ್ದರು ಪೊಲೀಸರು ಮೌನಕ್ಕೆ ಜಾರಿದ್ದಾರೆ.
ಸುತ್ತಮುತ್ತಲಿನ ಮದ್ಯಮ ವರ್ಗದ ಮಂದಿ, ಬಡ ರೈತರು ಮತ್ತು ಕೂಲಿ ಕಾರ್ಮಿಕರು ಜೂಜಿನಡ್ಡೆಯ ದಾಸರಾಗಿದ್ದಾರೆ. ಮನೆ-ಮಟ, ಹೊಲ-ಗದ್ದೆ ಮತ್ತು ಇದ್ದಬದ್ದ ಬಂಗಾರ ಬೆಲೆಬಾಳುವ ವಸ್ತುಗಳನ್ನು ಅಂದರ್ ಬಾಹರ್ ಇಸ್ಪೀಟ್ ನ ಜೂಜಿನಡ್ಡೆಯ ದಾಸರಾಗಿ ದಿನ ನಿತ್ಯ ಆಡಲು ಹಣಕ್ಕಾಗಿ ಮಾರಿ ತಮ್ಮ ಸಂಸಾರವನ್ನು ಬಿದಿಗೆ ತಂದಿಡುವ ಮೊದಲೇ ಪೊಲೀಸ್ ಇಲಾಖೆ ಎಚ್ಚೆತ್ತು ಕೊಳ್ಳಬೇಕಿದೆ. ಮಾಮೂಲು ಪಡೆಯುವ ಕೆಲವು ಪೊಲೀಸರೇ ಈ ಅಕ್ರಮ ಇಸ್ಪೀಟ್ ದಂಧೆಗೆ ನೆರಳಾಗಿ ನಿಂತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.!ಪತ್ರಿಕೆಯು ಎರಡನೇ ಭಾಗದಲ್ಲಿ ಇಲ್ಲಿಯ ಅಂದರ್ ಬಾಹರ್ ಇಸ್ಪೀಟ್ ಅಡ್ಡೆಯ ಮಹಾನ್ ಕುಳನೊಬ್ಬನ ಅಕ್ರಮ ಇಸ್ಪೀಟ್ ಜೂಜಾಟದ ಅಡ್ಡೆಯ ಸವಿವರವಾದ ವರದಿಯನ್ನು ನಿಮ್ಮ ಮುಂದಿಡಲಿದೆ. ತಾನೊಬ್ಬ ಮಹಾನ್ ರಾಜಕೀಯ ನಾಯಕನಂತೆ ಫೊಸುಕೊಡುತ್ತಾ ಜಿಲ್ಲಾ ಮಂತ್ರಿಗಳನ್ನು ಸ್ಥಳೀಯ ಶಾಸಕರು ಮತ್ತು ರಾಜಕೀಯ ನಾಯಕರ ಜೋತೆಗೆ ಫೊಸುಕೊಡುತ್ತಾ ಓಡಾಡಿಕೊಂಡೆ ಈ ಅಕ್ರಮ ಅಂದರ್ ಬಾಹರ್ ಇಸ್ಪೀಟ್ ದಂಧೆಯನ್ನು ನಿರಂತರವಾಗಿ ನಡೆಸಿಕೊಂಡು ಹೋಗುತ್ತಿದ್ದಾನೆ ಎಂದರೆ ನೀವು ನಂಬಲೆ ಬೇಕು.! ಇತನ ಇಸ್ಪೀಟ್ ಅಡ್ಡೆಯ ಖಾಯಂ ಗಿರಾಕಿಗಳಾದ ಕೆಲವರು ನಿತ್ಯ ಮಡದಿ ಮಕ್ಕಳ ಬದುಕನ್ನು ಬದಿಗಿಟ್ಟು ಹೆಂಡತಿಗೆ ಕಟ್ಟಿದ ತಾಳಿ ಬೆಲೆಬಾಳುವ ವಸ್ತುಗಳನ್ನು ಮಾರಿ ಇಸ್ಪೀಟ್ ಅಡ್ಡೆಯ ದಾಸರಾಗಿದ್ದಾರೆ.ಮುಂದಿನ ಸಂಚಿಕೆಯಲ್ಲಿ ಇಲ್ಲಿ ದಿನನಿತ್ಯ ನೆಡೆಯುವ ಅಕ್ರಮ ವಹಿವಾಟು ಎಷ್ಟು.? ಈ ಅಂದರ್ ಬಾಹರ್ ಇಸ್ಪೀಟ್ ಅಡ್ಡೆಯ ಸೂತ್ರದಾರಿ ಯಾರು.? ಇವನ ಬೆನ್ನಿಗೆ ಯಾರು ಯಾರು ಇದ್ದಾರೆ.? ಇಷ್ಟೇಲ್ಲಾ ಅಕ್ರನ ಇಸ್ಪೀಟ್ ಆಟ ಕಣ್ಣೆದುರೆ ನೆಡೆಯುತ್ತಿದ್ದರು ಪೊಲೀಸರ ಮೌನಕ್ಕೆ ಕಾರಣವೇನು.? ಈ ಎಲ್ಲವನ್ನೂ ಎಳೆ ಎಳೆಯಾಗಿ ನಿಮ್ಮ ಮುಂದಿಡಲಿದ್ದೇವೆ….
ನಿರೀಕ್ಷಿಸಿ ಮುಂದಿನ ಸಂಚಿಕೆಯಲ್ಲಿ…..ಭಾಗ -2 ರಲ್ಲಿ

ಹೊಳೆಹೊನ್ನೂರು ಪಟ್ಟಣದ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಕೆಲವು ಮಂದಿ ರಾಜಕಾರಣಿಗಳ ಗೆಟಪ್ ಧರಿಸಿ ಅಡ್ಡ ಕಸುಬಿ ದಂಧೆಗೆ ಇಳಿದಿದ್ದಾರೆ ಕೆಲವು ಮನೆಹಾಳರಿಂದ ಸಂಪೂರ್ಣ ನಲುಗಿ ಹೋಗಿದೆ ಹೊಳೆಹೊನ್ನೂರು ಪಟ್ಟಣ.! ಇವರ ಹಣದಾಹದ ವಾಂಚೆಗೆ ಕೆಲವು ಕೂಲಿ ಕಾರ್ಮಿಕರು. ರೈತರು, ಮಧ್ಯಮವರ್ಗದ ಮಂದಿಯ ಜೋತೆಗೆ ಊರಿನ ಕೆಲವು ಯುವಕರು ಅಂದರ್ ಬಾಹರ್ ಇಸ್ಪೀಟ್ ಅಡ್ಡದ ದಾಸರಾಗಿದ್ದಾರೆ..ಇನ್ನೂ ಕೇಲವರು ಈಗಾಗಲೇ ಈ ಅಡ್ಡೆಯ ದಾಸರಾಗಿ ಇದ್ದಬದ್ದ ಹಣ ಆಸ್ತಿಯನ್ನು ಕಳೆದುಕೊಂಡು ಬಿದಿಗೆ ಬಿದ್ದಿದ್ದಾರೆ ಅ ಮಟ್ಟಕ್ಕೆ ಇಲ್ಲಿಯ ಅಂದರ್ ಬಾಹರ್ ಇಸ್ಪೀಟ್ ಅಡ್ಡೆಯ ಹಣದಾಹಿಗಳು ಅಮಾಕ ಮಂದಿಯ ಹಣವನ್ನು ನುಂಗು ನೇಣೆದಿದ್ದಾರೆ…ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಅಂದರ್ ಬಾಹರ್ ಅಕ್ರಮ ಇಸ್ಪೀಟ್ ಆಟ ಭರ್ಜರಿಯಾಗಿ ರಾಜ ರೋಷವಾಗಿ ನೆಡೆಯುತ್ತಿದ್ದರು ಪೊಲೀಸರು ಮಾತ್ರ ಮೌನಕ್ಕೆ ಜಾರಿದ್ದಾರೆ….ಕಾರಣ ಮಾತ್ರ ಅ ದೇವರಿಗೆ ಗೋತ್ತು ಅ ಮಟ್ಟದ ದೊಡ್ಡ ಮೊತ್ತದ ಗಂಟು ಠಾಣೆಯ ಮೆಟ್ಟಿಲೇರಿದಿಯಾ ಎನ್ನುವುದನ್ನು ಅಲ್ಲಿಯ ಪೊಲೀಸರೆ ಉತ್ತರಿಸಬೇಕಿದೆ.!ಇಲ್ಲ ಮುಲಾಜಿಲ್ಲದೆ ಈ ಅಂದರ್ ಬಾಹರ್ ಇಸ್ಪೀಟ್ ಅಡ್ಡದ ಖದೀಮರನ್ನು ಠಾಣೆಗೆ ಎಳೆದುತಂದು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಗರಿಬಿಚ್ಚಿರುವ ಅಂದರ್ ಬಾಹರ್ ಅಕ್ರಮ ಇಸ್ಪೀಟ್ ದಂಧೆಗೆ ಬ್ರೇಕ್ ಹಾಕಿ ತೋರಿಸಿ ದಯವಿಟ್ಟು ಒಂದಷ್ಟು ಅಮಾಯಕ ಮಂದಿಯ ಪ್ರಾಣ, ಹಣ, ಮಾನ,ಸಂಸಾರ ಉಳಿಸಿದ ಪುಣ್ಯ ನಿಮ್ಮದಾಗುತ್ತದೆ…. ನಾವೆ ನಿಮ್ಮ ಕರ್ತವ್ಯವನ್ನು ಮೆಚ್ಚಿ ಪತ್ರಿಕೆಗಳಲ್ಲಿ ಬರೆದು ಅಭಿನಂದಿಸುತ್ತೇವೆ….

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಜೂಜಾಟದ ಬಗ್ಗೆ ದೊಡ್ಡ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ. ಎಚ್ಚರಿಕೆಯ ಫಲಕಗಳು ವಾಟ್ಸ್ ಆಪ್ ಗ್ರೂಪ್ಗಳಲ್ಲಿ ರಾರಾಜಿಸಿವೆ ಹೊರತು ಅದು ಕಾರ್ಯ ರೂಪಕ್ಕೆ ಬಾರದೆ ಹೊಳೆಹೊನ್ನೂರಿನ ಅಂದರ್ ಬಾಹರ್ ಇಸ್ಪೀಟ್ ಅಡ್ಡೆಗಳಲ್ಲಿ ಒಳಗೆ ಹೊರಗೆ ಎನ್ನುವ ಧ್ವನಿ ಠಾಣೆಯ ಗೊಡೆಗೆ ಬಡಿದು ಪ್ರತಿಧ್ವನಿಸುತ್ತಿದ್ದರು ಪೊಲೀಸರು ನಿದ್ರೆಗೆ ಜಾರಿದ್ದಾರೆ.! ರಾಜ ರೋಷವಾಗಿ ಲಕ್ಷಾಂತರ ರೂಪಾಯಿ ಹಣ ಅಂದರ್ ಬಾಹರ್ ಇಸ್ಪೀಟ್ ಅಡ್ಡೆಗಳಲ್ಲಿ ಬಿಕರಿಯಾಗುತ್ತಿದೆ ಜೊತೆಗೆ ಜೂಜಿನಡ್ಡೆಯ ದಾಸರಾದ ಅಮಾಯಕ ಮಂದಿ ಹಣ ಕಳೆದುಕೊಂಡು ಬಿದಿಗೆ ಬೀಳುತ್ತಿದ್ದಾರೆ.! ಇದು ದುರಂತವೆ ಹೌದು ಇನ್ನಾದರು ಹಿರಿಯ ಪೊಲೀಸ್ ಅಧಿಕಾರಿಗಳು ಅದರಲ್ಲೂ ಖಡಕ್ ಅಧಿಕಾರಿಯಾಗಿರುವ ಜಿಲ್ಲಾ ರಕ್ಷಣಾಧಿಕಾರಿಗಳಾದ ನಿಖಿಲ್ ಅವರು ಈ ಕೂಡಲೇ ಈ ಅಂದರ್ ಬಾಹರ್ ಅಡ್ಡದ ಜೂಜುಕೋರ ಖದೀಮರನ್ನು ಮಟ್ಟಹಾಕಿ ಕಾನೂನಿನ ಅರಿವು ಮೂಡಿಸಬೇಕಿದೆ.ಜೂಜಾಟದ ದಾಸರಾಗಿರುವ ಅಮಾಯಕ ಮಂದಿಯ ಬಾಳಿಗೆ ಬೆಳಕಾಗಬೇಕಿದೆ.

