ಸುರತ್ಕಲ್ : ಮನೆಗೆ ಬರುತ್ತೇನೆ ಎಂದು ಮಗಳು ಹುಡುಗನ ಜೊತೆ ಮಾತನಾಡಿದ ಬಳಿಕ ಮುಚ್ಚಳಿಕೆಯನ್ನು ಹರಿದು ಹಾಕಿದ್ದಾಳೆ – ಮಗಳಿಗಾಗಿ ಕಣ್ಣೀರುಡುತ್ತಿರುವ ಪೋಷಕರು.

news.ashwasurya.in
ಅಶ್ವಸೂರ್ಯ/ಮಂಗಳೂರು : ಪ್ರತಿ ಕ್ಷಣವೂ ತಾವು ಮಗಳಿಗಾಗಿ ಎಲ್ಲವನ್ನೂ ಧಾರೆರ ಎರೆದು ಕಷ್ಟಪಟ್ಟು ಮುದ್ದಾಗಿ ಸಾಕಿ ಓದಿಸಿದ ಮಗಳು ಇದೀಗ ಅನ್ಯಕೋಮಿನ ಯುವಕನ ಜೊತೆಗೆ ಓಡಿ ಹೋಗಿದ್ದಾಳೆ. ಅಲ್ಲದೆ ರಿಜಿಸ್ಟರ್ ಮದುವೆ ಕೂಡ ಆಗಿದ್ದು, ಇತ್ತ ಹೆತ್ತ ತಂದೆತಾಯಿ ಮಗಳಿಗಾಗಿ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.
ಮೂಲತಃ ಕಾಸರಗೋಡು ಜಿಲ್ಲೆಯ ಸದ್ಯ ಸುರತ್ಕಲ್ ಬಳಿಯ ಮುಕ್ಕಾದ ಕಾಲೇಜ್ ಒಂದರಲ್ಲಿ ಕ್ರಿಮಿನಾಲಜಿ ಪದವಿ ಓದುತ್ತಿದ್ದ ವಿದ್ಯಾರ್ಥಿನಿ ವೈಶಾಲಿ, ಓದುತ್ತಿರುವ ಸಂದರ್ಭದಲ್ಲೇ ಸುರತ್ಕಲ್ನ ಜ್ಯುವೆಲ್ಲರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮೊಹಮ್ಮದ್ ವಿದ್ಲಾಜ್ ಪಿ.ಎಚ್. ಜೊತೆ ಲವ್ ಆಗಿದೆ. ಇಬ್ಬರೂ ಜನವರಿ 31ರಂದು ವಯನಾಡಿನ ರಿಜಿಸ್ಟರ್ ಕಚೇರಿಯಲ್ಲಿ ಓಡಿಹೋಗಿ ಮದುವೆ ಕೂಡ ಆಗಿದ್ದಾರೆ.
ಈ ವಿಚಾರ ಗೊತ್ತಾಗುತ್ತಿದ್ದಂತೆ ವೈಶಾಲಿ ತಂದೆ ವಿದೇಶದಿಂದ ಓಡಿ ಬಂದಿದ್ದಾರೆ. ಮಗಳು ನಾಪತ್ತೆಯಾಗಿದ್ದಾಳೆ ಎಂದು ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಮಗಳು ಬೆರೊಂದು ಹುಡುಗನ ಜೊತೆ ಮದುವೆಯಾಗಿರುವುದನ್ನು ನಂಬುವ ಸ್ಥಿತಿಯಲ್ಲಿ ತಂದೆತಾಯಿ ಇಲ್ಲ. ಮಗಳನ್ನು ಬ್ರೈನ್ ವಾಶ್ ಮಾಡಲಾಗಿದೆ. ಆಕೆಗೆ ಬ್ಲಾಕ್ ಮೇಲ್ ಮಾಡಿ, ಬೆದರಿಸಿ ಕರೆದುಕೊಂಡು ಹೋಗಾಲಾಗಿದೆ. ಷಡ್ಯಂತ್ರ ಮಾಡಿದ್ದಾರೆ ಅಂತಾ ಪೋಷಕರು ಆರೋಪ ಮಾಡಿದ್ದಾರೆ.
ವಯನಾಡು ಪೊಲೀಸ್ ಠಾಣೆಯಲ್ಲಿ ಇವರಿಬ್ಬರು ಇರುವುದು ಗೊತ್ತಾಗಿದೆ. ವಿಶ್ವನಾಥ್ ಮತ್ತು ಲತಾ ದಂಪತಿ ವಯನಾಡು ಠಾಣೆಗೆ ಹೋಗಿ ತಮ್ಮ ಮಗಳನ್ನು ಭೇಟಿಯಾಗಿದ್ದಾರೆ.

ಮಗಳು ‘ನಾನು ನಿಮ್ಮ ಜೊತೆ ಬರುತ್ತೇನೆ’ ಅಂತಾ ಹೇಳಿದ್ದಳಂತೆ. ಅದೇ ರೀತಿ ಮುಚ್ಚಳಿಕೆ ಬರೆದುಕೊಟ್ಟಳಂತೆ. ಆದರೆ ವಯನಾಡು ಪೊಲೀಸರು ಮಗಳ ಜೊತೆ ಮಾತನಾಡಲು ಕೇವಲ 5 ನಿಮಿಷ ಕಾಲಾವಕಾಶ ನೀಡಿದ್ದಾರೆ. ಆ ಹುಡುಗನಿಗೆ ಹೆಚ್ಚು ಸಮಯ ನೀಡಿದ್ದಾರೆ. ಪೊಲೀಸರು ಕೂಡ ಆ ಹುಡುಗನ ಪರವಹಿಸಿದರು. ಹೀಗಾಗಿ ಬರೆದುಕೊಟ್ಟ ಮುಚ್ಚಳಿಕೆಯನ್ನು ಹರಿದು ಮತ್ತೆ ಬೇರೆ ಬರೆದುಕೊಟ್ಟಿದ್ದಾಳೆ ಅಂತಾ ಪೋಷಕರು ಕಣ್ಣೀರಿಟ್ಟರು. ಇನ್ನು ಮಗಳೇ ಎಲ್ಲಿದರೂ ಬಾ ಅಂತಾ ತಾಯಿ ಲತಾ ಅಂಗಲಾಚಿ ಬೇಡಿಕೊಂಡರು.
ಕೇರಳ ಪೊಲೀಸರು ಹುಡುಗನ ಕಡೆ ಶ್ಯಾಮೀಲಾಗಿದ್ದಾರೆ. ನೀವು ನಮಗೆ ನ್ಯಾಯ ದೊರಕಿಸಿಕೊಡಿ ಅಂತಾ ಪೋಷಕರು ಸುರತ್ಕಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರೀತಿಸಿದವನ ಜೊತೆ ಹೋಗುತ್ತಾಳಾ ಅಥವಾ ಪೋಷಕರ ಪ್ರೀತಿಗೆ ವೈಶಾಲಿ ಕರಗುತ್ತಾಳಾ ಕಾದುನೋಡಬೇಕಿದೆ.


