
Shivamogga Underworld :ರಿವೆಂಜಿನ ನಂಜಿಗೆ ರೌಡಿಶೀಟರ್ ‘ಬ್ಯಾಟ್ ನರಸಿಂಹ’ನ ಹತ್ಯೆ ಆಯ್ತಾ.!? ಇದು ಗ್ಯಾಂಗ್ ವಾರ್ನ ಮುಂದುವರೆದ ಭಾಗನಾ.?
ಕೊಲೆಯಾದ ಬ್ಯಾಟಿ ನರಸಿಂಹ ಕುಖ್ಯಾತ ರೌಡಿಶೀಟರ್ ಕಾಡಾ ಕಾರ್ತಿಕ್ನ ಆಪ್ತ ಸಹಚರರಲ್ಲಿ ಒಬ್ಬನಾಗಿದ್ದ ಎಂದು ತಿಳಿದುಬಂದಿದೆ. ಲಷ್ಕರ್ ಮೊಹಲ್ಲಾ ಬಳಿ ನರಸಿಂಹ ಒಂಟಿಯಾಗಿ ಸಿಕ್ಕಿದ್ದನ್ನು ಗಮನಿಸಿದ ಅಂಬು ಮತ್ತವನ ಗ್ಯಾಂಗ್,ಮಚ್ಚು ಲಾಂಗ್ಗಳಿಂದ ಏಕಾಏಕಿ ದಾಳಿ ನಡೆಸಿ ಹತ್ಯೆಮಾಡಿದ್ದಾರೆ.ರಕ್ತದ ಮಡುವಿನಲ್ಲಿ ಬಿದ್ದ ನರಸಿಂಹ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ದಾಳಿ ನಡೆಸಿ ನೆತ್ತರಕೊಡಿ ಹರಿಸಿದ ರೌಡಿಶೀಟರ್ ಅಂಬು ಮತ್ತು ಆತನ ಸಹಚರರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ…..

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ತಣ್ಣಗೆ ಹೊದ್ದು ಮಲಗಿದ್ದ ಪಾತಕ ಲೋಕ ಮತ್ತೆ ಚಿಗುತು ಕೊಂಡಿದೆ.ರೌಡಿಗಳ ರಿವೆಂಜ್ಗೆ ರೌಡಿಶೀಟರ್ ಒಬ್ಬನ ತಲೆ ಉರುಳಿದೆ.! ನಗರ ಲಷ್ಕರ್ ಮೊಹಲ್ಲಾದಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ‘ಬ್ಯಾಟ್ ನರಸಿಂಹ’ ಎಂಬ ರೌಡಿಶೀಟರ್ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ರೌಡಿಶೀಟರ್ ಅಂಬು ಮತ್ತು ಆತನ ಸಹಚರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು ಇದು ಹಳೆಯ ಗ್ಯಾಂಗ್ ವಾರ್ನ ಮುಂದುವರೆದ ಭಾಗವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಅದೇನೇ ಇರಲಿ ಮಲೆನಾಡ ನಗರಿ ಶಿವಮೊಗ್ಗ ನಗರದಲ್ಲಿ ಕಳೆದ ಒಂದು ವರ್ಷದಿಂದ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಬಿದ್ದಿತ್ತು.ಊರು ಸೈಲೆಂಟ್ ಆಗಿತ್ತು ರೌಡಿಗಳು ಲಾಂಗು ಮಚ್ಚುಗಳನ್ನು ದೂರವಿಟ್ಟು ಸೈಲೆಂಟ್ ಆಗಿದ್ದರು ಆದರೆ ದ್ವೇಷದ ಕಿಚ್ಚು ಬೂದಿಮುಚ್ಚಿದ ಕೆಂಡದಂತೆ ಒಳಗೊಳಗೇ ಕುದಿಯುತ್ತಿತ್ತು.ಈ ಹಿನ್ನೆಲೆಯಲ್ಲೆ ಕಳೆದ ಶುಕ್ರವಾರ (ಜೂನ್,12)ರೌಡಿಶೀಟರ್ ಬ್ಯಾಟ್ ನರಸಿಂಹನ ಹತ್ಯೆಯಾಗಿದೆ ಈತ ರೌಡಿಶೀಟರ್ ಕಾಡ ಕಾರ್ತಿಕನ ಸಹಚರ ನಾಗಿದ್ದು ಈ ಹಿಂದೆ ನೆಡೆದಂತಹ ಹತ್ಯೆ ಮತ್ತು ಗ್ಯಾಂಗ್ ವಾರ್ಗಲ್ಲಿ ಕಾಡ ಕಾರ್ತಿಕನ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದನೆಂದು ತಿಳಿದುಬಂದಿದೆ, ಈ ಹಿನ್ನೆಲೆಯಲ್ಲೆ ಇತನ ಮೇಲೆ ರಿವೆಂಜ್ ಗೆ ಬಿದ್ದ ರೌಡಿಶೀಟರ್ ಅಂಬು & ಗ್ಯಾಂಗ್ ಸ್ಕೆಚ್ ಹಾಕಿ ಸರಿಯಾದ ಸಮಯ ಕಾದು ಬ್ಯಾಟ್ ನರಸಿಂಹನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಹಂತಕರ ಲಾಂಗಿನೇಟಿಗೆ ನರಸಿಂಹ ಘಟನಾ ಸ್ಥಳದಲ್ಲೆ ನರಳಿ ಉಸಿರು ಚಲ್ಲಿದ್ದಾನೆ.! ಮತ್ತೆ ಶಿವಮೊಗ್ಗ ನಗರದಲ್ಲಿ ರೌಡಿಗಳ ಗ್ಯಾಂಗ್ ವಾರ್ ಮುಂದುವರಿದಿದೆ. ಈ ಹತ್ಯೆಯು ಲಷ್ಕರ್ ಮೊಹಲ್ಲಾದಲ್ಲಿ ನೆಡೆದಿದ್ದು ಇಸ್ಪೀಟ್ ಗ್ಯಾಂಬ್ಲರ್ ಆಗಿದ್ದ ರೌಡಿಶೀಟರ್ ‘ಬ್ಯಾಟ್ ನರಸಿಂಹ’ನೆ ತನ್ನ ವೈರಿಗಳ ಲಾಂಗಿನೇಟಿಗೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ.!

ರೌಡಿಗಳ ಏಕಾಏಕಿ ದಾಳಿ :
ಕೊಲೆಯಾದ ಬ್ಯಾಟಿ ನರಸಿಂಹ ಕುಖ್ಯಾತ ರೌಡಿಶೀಟರ್ ಕಾಡಾ ಕಾರ್ತಿಕ್ನ ಆಪ್ತ ಸಹಚರರಲ್ಲಿ ಒಬ್ಬನಾಗಿದ್ದ ಎಂದು ತಿಳಿದುಬಂದಿದೆ. ಲಷ್ಕರ್ ಮೊಹಲ್ಲಾ ಬಳಿ ನರಸಿಂಹ ಒಂಟಿಯಾಗಿ ಸಿಕ್ಕಿದ್ದನ್ನು ಗಮನಿಸಿದ ಅಂಬು ಮತ್ತವನ ಗ್ಯಾಂಗ್,ಮಚ್ಚು ಲಾಂಗ್ಗಳಿಂದ ಏಕಾಏಕಿ ದಾಳಿ ನಡೆಸಿ ಹತ್ಯೆಮಾಡಿದ್ದಾರೆ.ರಕ್ತದ ಮಡುವಿನಲ್ಲಿ ಬಿದ್ದ ನರಸಿಂಹ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ದಾಳಿ ನಡೆಸಿ ನೆತ್ತರಕೊಡಿ ಹರಿಸಿದ ರೌಡಿಶೀಟರ್ ಅಂಬು ಮತ್ತು ಆತನ ಸಹಚರರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ :
ರೌಡಿಶೀಟರ್ ಬ್ಯಾಟ್ ನರಸಿಂಹನ ಹತ್ಯೆಯ ವಿಷಯ ತಿಳಿಯುತ್ತಿದ್ದಂತೆಯೇ ಕೋಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಪಟೇಲ್ ಮತ್ತು ಸಿಬ್ಬಂದಿಗಳ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಈ ಒಂದು ಹತ್ಯೆಯು ಶಿವಮೊಗ್ಗದ ರೌಡಿಗಳ ನಡುವಿನ ಗ್ಯಾಂಗ್ ವಾರ್ನ ಭಾಗವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು. ಸದ್ಯ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಅಂಬು ಮತ್ತು ಆತನ ಸಹಚರರ ಬಂಧನಕ್ಕಾಗಿ ಪೊಲೀಸರು ತಂಡಗಳಾಗಿ ಕಾರ್ಯಚರಣೆಗೆ ಇಳಿದಿದ್ದಾರೆ ಈ ಘಟನೆಯಿಂದಾಗಿ ಲಷ್ಕರ್ ಮೊಹಲ್ಲಾ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗುವಿನ ವಾತಾವರಣವಿದ್ದು ರೌಡಿಗಳು ರಿವೆಂಜ್ಗೆ ಬಿದ್ದಿದ್ದು ಮುಂದೆನು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಶಿವಮೊಗ್ಗ ಭದ್ರಾವತಿ ಅವಳಿನಗರದಲ್ಲಿ ಎರಡು ದಿನಗಳ ಅಂತರದಲ್ಲಿ ಇಬ್ಬರು ರೌಡಿಶೀಟರ್ ಗಳ ಹತ್ಯೆಯಾಗಿದ್ದು ಪೋಲಿಸ್ ಇಲಾಖೆ ಎಚ್ಚೇತ್ತುಕೊಂಡು ರೌಡಿಶೀಟರ್ ಗಳ ನಡು ಮುರಿಯದೆ ಹೋದರೆ ಮುಂದಿನ ದಿನಗಳಲ್ಲಿ ಶಿವಮೊಗ್ಗ ಭದ್ರಾವತಿ ನಗರದಲ್ಲಿ ಪಾತಕ ಲೋಕದ ರಿವೆಂಜಿನ ನಂಜಿಗೆ ಮತ್ತಷ್ಟು ತಲೆ ಉರುಳಿದರು ಆಶ್ಚರ್ಯವಿಲ್ಲ…

