ಮೋಸ್ಟ್ ವಾಂಟೆಡ್ ಉಗ್ರ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆಗೆ ಭಯೋತ್ಪಾದಕರ ದಂಡು.! ಪಾಕ್ ಬಣ್ಣ ಬಯಲು.
news.ashwasurya.in
ಅಶ್ವಸೂರ್ಯ/ಇಸ್ಲಾಮಾಬಾದ್ : ಪಾಕಿಸ್ತಾನದ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಮುಸುಕು ದಾರಿಗಳ ಗುಂಡಿಗೆ ಬಲಿಯಾಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆ
ಇಸ್ಲಾಮಾಬಾದ್ನಲ್ಲಿ ನಡೆದ ಸಂದರ್ಭದಲ್ಲಿ
ಪಾಕಿಸ್ತಾನದಲ್ಲಿ ನೆಲೆಸಿರುವ ಹಲವಾರು ಪ್ರಮುಖ ಮತ್ತು ವಾಂಟೆಡ್ ಭಯೋತ್ಪಾದಕರು ಭಾಗವಹಿಸಿದ್ದರು.
ಉಗ್ರನ ಅಂತ್ಯಕ್ರಿಯೆಗೆ ಭಯೋತ್ಪಾದಕರ ದಂಡೇ ಹರಿದು ಬಂದಿದೆ ಎಂದು ವರದಿಯಾಗಿದೆ.!

ಪಾಕಿಸ್ತಾನವು ಭಯೋತ್ಪಾದಕರ ಪೋಷಕ ರಾಷ್ಟ್ರವಾಗಿದೆ ಎಂದು ಭಾರತ ವಾದಿಸುತ್ತಲೇ ಬಂದಿದೆ. ಇದು ಜಾಗತಿಕ ಭಯೋತ್ಪಾದನೆ ರಫ್ತು ಕೇಂದ್ರವಲ್ಲ ಎಂಬ ಇಸ್ಲಾಮಾಬಾದ್ನ (Islamabad) ಸ್ಪಷ್ಟನೆಗಳನ್ನು ಹಲವು ಬಾರಿ ಸುಳ್ಳಾಗಿಸಿದೆ.ಕಳೆದ ಶುಕ್ರವಾರ (ಮೇ 23) ಇಸ್ಲಾಮಾಬಾದ್ನಲ್ಲಿ ನಡೆದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದಲ್ಲಿ ನೆಲೆಸಿರುವ ಹಲವಾರು ಪ್ರಮುಖ ಮತ್ತು ವಾಂಟೆಡ್ ಭಯೋತ್ಪಾದಕರು ಭಾಗವಹಿಸಿದ್ದರು. ಅಮೆರಿಕದಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲ್ಲಾಹುದ್ದೀನ್ ಮತ್ತು ಅಲ್-ಬದ್ರ್ ಮುಖ್ಯಸ್ಥ ಬಖ್ತ್ ಜಮೀನ್ ಖಾನ್ ಕೂಡ ಈ ವೇಳೆ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ. ಇದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹೊರಬಂದಿವೆ.
ನಿಷೇಧಿತ ಅಲ್-ಬದರ್ ಭಯೋತ್ಪಾದಕ ಸಂಘಟನೆಯ ಉನ್ನತ ಕಮಾಂಡರ್ ಮತ್ತು ಡಾಕ್ಟರ್ ಎಂಬ ಸಂಕೇತನಾಮದಿಂದ ಕರೆಯಲ್ಪಡುತ್ತಿದ್ದ ಅರ್ಜುಮಂಡ್ ಗುಲ್ಜಾರ್ ದಾರ್ ಅಲಿಯಾಸ್ ಹಮ್ಜಾ ಬುರ್ಹಾನ್, ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಪಕ ಭಯೋತ್ಪಾದಕ ಜಾಲವನ್ನು ಹರಡುವಲ್ಲಿ ಪ್ರಮುಖನಾಗಿದ್ದ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಅಪರಿಚಿತ ಬಂದೂಕುಧಾರಿಗಳು ಅವನನ್ನು ಗುಂಡಿಕ್ಕಿ ಹತ್ಯೆ ಮಾಡಿದರು. ಹೀಗಾಗಿ ಇಸ್ಲಾಮಾಬಾದ್ನಲ್ಲಿ ಉಗ್ರನ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಫೋಟೋಗಳು ಮತ್ತು ವಿಡಿಯೊಗಳು ಅಂತ್ಯಕ್ರಿಯೆಯ ಸಭೆಯಲ್ಲಿ ಭಾರಿ ಭದ್ರತಾ ವ್ಯವಸ್ಥೆಗಳನ್ನು ತೋರಿಸಿವೆ. ಸಶಸ್ತ್ರ ಭಯೋತ್ಪಾದಕರ ಬೃಹತ್ ನಿಯೋಜನೆಯೊಂದಿಗೆ, ಪಾಕಿಸ್ತಾನವು ವಿಶ್ವದ ಕುಖ್ಯಾತ ಭಯೋತ್ಪಾದಕರಿಗೆ ತನ್ನ ಭೂಪ್ರದೇಶದಲ್ಲಿ ಆಶ್ರಯ ನೀಡುತ್ತಿರುವುದನ್ನು ಮತ್ತೊಮ್ಮೆ ಜಗಜ್ಜಾಹೀರಾಗಿಸಿದೆ.
ಅಂತ್ಯಕ್ರಿಯೆಯ ಸ್ಥಳದಲ್ಲಿ ಎಕೆ-47 ಮತ್ತು ಇತರ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಭಯೋತ್ಪಾದಕರು ಸುತ್ತುವರಿದಿದ್ದರು. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಭಯೋತ್ಪಾದಕರ ಹತ್ಯೆಗಳ ಸರಣಿಯ ನಂತರ ಮೃತನ ಭದ್ರತೆಯನ್ನು ಹೆಚ್ಚಿಸಲಾಗಿತ್ತು ಎನ್ನಲಾಗಿದೆ. ಕಳೆದ ಕೆಲವು ವರ್ಷಗಳಿಂದ, ಹಲವಾರು ವಾಂಟೆಡ್ ಭಯೋತ್ಪಾದಕರು ನಿಗೂಢವಾಗಿ ಹತ್ಯೆಯಾಗುತ್ತಿದ್ದಾರೆ. ಇದು ಉಗ್ರರಲ್ಲಿ ನಡುಕ ಉಂಟು ಮಾಡಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಒಂದು ತಿಂಗಳ ಹಿಂದೆ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಆಪ್ತ ಸಹಾಯಕನೊಬ್ಬ ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್ನ ಪುತ್ರ ಲಷ್ಕರ್-ಎ-ತೈಬಾ (ಎಲ್ಇಟಿ) ಭಯೋತ್ಪಾದಕ ಹಫೀಜ್ ತಲ್ಹಾ ಸಯೀದ್ ಜೊತೆ ವೇದಿಕೆ ಹಂಚಿಕೊಂಡಿದ್ದರು.
ಇನ್ನೂ ಕಳೆದ ವರ್ಷ, ಆಪರೇಷನ್ ಸಿಂದೂರ್ ದಾಳಿಯ ಸಮಯದಲ್ಲಿ ಹತ್ಯೆಯಾದ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಹಲವಾರು ಉನ್ನತ ಪಾಕಿಸ್ತಾನಿ ಮಿಲಿಟರಿ ಅಧಿಕಾರಿಗಳು ಭಾಗವಹಿಸಿದ್ದರು. ಇದು ಪಾಕಿಸ್ತಾನದಲ್ಲಿ ಮಿಲಿಟರಿ ಮತ್ತು ಭಯೋತ್ಪಾದಕರ ನಡುವಿನ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ.


