ಮಾಡೆಲಿಂಗ್ ಹೆಸರಿನಲ್ಲಿ ಯುವತಿಯರನ್ನು ಲೈಂಗಿಕ ದಂಧೆಗೆ ದೂಡಿದ ಮೂವರು ಖತರ್ನಾಕ್ ಲೇಡಿಸ್ ಬಂಧನ.
ದುಬೈನಲ್ಲಿ ಕಳ್ಳಸಾಗಣೆದಾರರ ಬಂಧನದಿಂದ ತಪ್ಪಿಸಿಕೊಂಡು ಕೇರಳಕ್ಕೆ ಮರಳಿದ ಇಬ್ಬರು ಸಂತ್ರಸ್ತೆಯರು ನೀಡಿದ ದೂರನ್ನು ದಾಖಲಿಸಿಕೊಂಡು ಅದರ ಆಧಾರದ ಮೇಲೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೊಚ್ಚಿ ನಗರ ಪೊಲೀಸ್ ಆಯುಕ್ತ ಕಾಳಿರಾಜ್ ಮಹೇಶ್ ಕುಮಾರ್ ಅವರ ಆದೇಶದ ಮೇರೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ. ತಂಡವು ಈಗಾಗಲೇ ಪ್ರಮುಖ ಮೂವರು ಮಹಿಳಾ ಆರೋಪಿಗಳನ್ನು ಬಂಧಿಸಿದ್ದಾರೆ…
news.ashwasurya.in
ಅಶ್ವಸೂರ್ಯ/ಕೊಚ್ಚಿ : ವಿದೇಶಗಳಲ್ಲಿ ಮಾಡೆಲಿಂಗ್, ಬ್ಯೂಟಿಷಿಯನ್ ಮತ್ತು ಫ್ಯಾಷನ್ ಉದ್ಯಮದಲ್ಲಿ ಲಾಭದಾಯಕ ವೃತ್ತಿಜೀವನದ ಭರವಸೆ ನೀಡಿ ಕೇರಳದ ಯುವತಿಯರನ್ನು ದುಬೈಗೆ ಆಕರ್ಷಿಸಿ, ಬಳಿಕ ಅಲ್ಲಿ ಅವರನ್ನು ಬ್ಲ್ಯಾಕ್ಮೇಲ್ ಮಾಡಿ ಲೈಂಗಿಕ ದಂಧೆಗೆ ದೂಡುತ್ತಿದ್ದ ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಗ್ಯಾಂಗನ್ನು ಕೊಚ್ಚಿ ನಗರ ಪೊಲೀಸರು ಬಂಧಿಸಿದ್ದಾರೆ.
ದುಬೈನಲ್ಲಿ ಕಳ್ಳಸಾಗಣೆದಾರರ ಬಂಧನದಿಂದ ತಪ್ಪಿಸಿಕೊಂಡು ಕೇರಳಕ್ಕೆ ಮರಳಿದ ಇಬ್ಬರು ಸಂತ್ರಸ್ತೆಯರು ನೀಡಿದ ದೂರನ್ನು ದಾಖಲಿಸಿಕೊಂಡು ಅದರ ಆಧಾರದ ಮೇಲೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೊಚ್ಚಿ ನಗರ ಪೊಲೀಸ್ ಆಯುಕ್ತ ಕಾಳಿರಾಜ್ ಮಹೇಶ್ ಕುಮಾರ್ ಅವರ ಆದೇಶದ ಮೇರೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ. ತಂಡವು ಈಗಾಗಲೇ ಪ್ರಮುಖ ಮೂವರು ಮಹಿಳಾ ಆರೋಪಿಗಳನ್ನು ಬಂಧಿಸಿದ್ದಾರೆ.

ಟಾಯ್ಸಿ ಸಿಂಧು, ಮಾಡೆಲ್ ಅಲೀನಾ ಅಬ್ರಹಾಂ, ಮಂಜಿಮಾ ಬಂಧಿತ ಮಹಿಳೆಯರು. ಸಂತ್ರಸ್ತರು ಪೊಲೀಸರಿಗೆ ನೀಡಿರುವ ರಹಸ್ಯ ಕ್ಯಾಮೆರಾ ಹೇಳಿಕೆಗಳು ಈ ದಂಧೆಯ ಕ್ರೌರ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿವೆ.
ಎರಡು ತಿಂಗಳ ವಿಸಿಟಿಂಗ್ ವೀಸಾದಲ್ಲಿ ದುಬೈ ತಲುಪಿದ ತಕ್ಷಣ ಯುವತಿಯರ ಪಾಸ್ಪೋರ್ಟ್, ಮೊಬೈಲ್ ಮತ್ತು ಹಣವನ್ನು ಕಸಿದುಕೊಳ್ಳಲಾಗುತ್ತಿತ್ತು. ಅವರನ್ನು ಫ್ಲಾಟ್ಗಳಲ್ಲಿ ಬಂಧಿಸಿ, ತಂಪು ಪಾನೀಯಗಳಲ್ಲಿ ಮಾದಕ ದ್ರವ್ಯ ಬೆರೆಸಿ ಪ್ರಜ್ಞೆ ತಪ್ಪಿಸಲಾಗುತ್ತಿತ್ತು. ಅರೆಪ್ರಜ್ಞಾಸ್ಥಿತಿಯಲ್ಲಿದ್ದ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡು, ಆ ದೃಶ್ಯಗಳನ್ನು ವೀಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಗುತ್ತಿತ್ತು.

ಈ ವೀಡಿಯೋಗಳನ್ನು ಅವರ ಕೇರಳದಲ್ಲಿರುವ ಕುಟುಂಬಸ್ಥರಿಗೆ ಕಳುಹಿಸುವುದಾಗಿ ಬೆದರಿಸಿ, ನಿರಂತರವಾಗಿ ಲೈಂಗಿಕ ದಂಧೆಗೆ ಬಳಸಿಕೊಳ್ಳಲಾಗುತ್ತಿತ್ತು. ವಿರೋಧಿಸಿದವರ ಮೇಲೆ ಭೀಕರ ದೈಹಿಕ ಹಲ್ಲೆ ನಡೆಸಲಾಗುತ್ತಿತ್ತು. ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ಮಗುವನ್ನು ಕೊಲ್ಲುವುದಾಗಿ ದೂರುದಾರೆ ಮಹಿಳೆಗೆ ಬೆದರಿಕೆ ಹಾಕಲಾಗಿತ್ತು.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ಐಟಿ ಕಾಯ್ದೆಯಡಿ ಸಾಮೂಹಿಕ ಅತ್ಯಾಚಾರ, ಮಾನವ ಕಳ್ಳಸಾಗಣೆ ಹಾಗೂ ಹಲ್ಲೆಯಂತಹ ಕಠಿಣ ಸೆಕ್ಷನ್ಗಳನ್ನು ದಾಖಲಿಸಿದ್ದಾರೆ. ಸಂತ್ರಸ್ತರು ಅಥವಾ ಅವರ ಕುಟುಂಬಸ್ಥರು ಯಾವುದೇ ಭಯವಿಲ್ಲದೆ ನೇರವಾಗಿ ದೂರು ನೀಡಿ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ಕಾಳಿರಾಜ್ ಮಹೇಶ್ ಕುಮಾರ್ ಮನವಿ ಮಾಡಿದ್ದಾರೆ.


