ಬೆಂಗಳೂರು ಐಟಿ ಉದ್ಯಮ: ಮುಂದಿನ 3 ವರ್ಷಗಳಲ್ಲಿ ಐಟಿ ಕಂಪನಿಯ ಶೇ. 80 ರಷ್ಟು ಉದ್ಯೋಗಗಳಿಗೆ AI ಕುತ್ತು.!

news.ashwasurya.in
ಅಶ್ವಸೂರ್ಯ/ಬೆಂಗಳೂರು : ಪ್ರಸ್ತುತ ಐಟಿ ಮತ್ತು ತಂತ್ರಜ್ಞಾನ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆಯು ಭಾರೀ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತಿದೆ. ಭವಿಷ್ಯದಲ್ಲಿ ಇದರ ಪರಿಣಾಮ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು ನಗರದ ಐಟಿ ಉದ್ಯಮದಲ್ಲಿ ಇದು ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಎಂದು ಟೆಕ್ಕಿಯೊಬ್ಬರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ 3 ವರ್ಷಗಳಲ್ಲಿ ಶೇ.80 ರಷ್ಟು ಜನರು ತಮ್ಮ ಉದ್ಯೋಗ ಕಳೆದುಕೊಳ್ಳುತ್ತಾರೆ ಎಂಬ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಪ್ರಸ್ತುತ ಕೃತಕ ಬುದ್ಧಿಮತ್ತೆ ( Artificial Intelligence ) ಐಟಿ ಮತ್ತು ಟೆಕ್ ಉದ್ಯಮದಲ್ಲಿ ಭಾರೀ ಪ್ರಮಾಣದ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತಿದೆ. ಮುಂಬರುವ ದಿನಗಳಲ್ಲಿ ಇದರ ಪ್ರಭಾವ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಭಾರತದ ಸಿಲಿಕಾನ್ ವ್ಯಾಲಿ ಎಂದೇ ಕರೆಯಲ್ಪಡುವ ಬೆಂಗಳೂರು ನಗರದ ಐಟಿ ಉದ್ಯಮದಲ್ಲಿ ಎಐ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಲಿದೆ ಎಂದು ಟೆಕ್ಕಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಮುಂದಿನ 3 ವರ್ಷಗಳಲ್ಲಿ ಶೇ. 80 ರಷ್ಟು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂಬ ಅವರ ಮಾತು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಿಶ್ವದ ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ‘ಕೃತಕ ಬುದ್ಧಿಮತ್ತೆ’ (AI) ಎಂಬ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಈ ತಂತ್ರಜ್ಞಾನದಿಂದ ಎಷ್ಟು ಪ್ರಯೋಜನವಿದೆಯೋ ಅಷ್ಟೇ ಅಪಾಯವೂ ಇದೆ ಎಂದು ಟೆಕ್ ತಜ್ಞರು ಮತ್ತು ಕೈಗಾರಿಕೋದ್ಯಮಿಗಳು ಎಚ್ಚರಿಸುತ್ತಿದ್ದಾರೆ. ವಿಶ್ವದ ಪ್ರಮುಖ ಕುಬೇರರು ಸಹ ಎಐ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ತಂತ್ರಜ್ಞಾನದ ಬಳಕೆಯಿಂದಾಗಿ ದೈತ್ಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಭಾರತದಲ್ಲೂ ಎಐ ಪ್ರಭಾವ ಜೋರಾಗಿದ್ದು, ಪ್ರಮುಖ ಐಟಿ ಕಂಪನಿಗಳು ವೆಚ್ಚ ನಿಯಂತ್ರಣ ಮತ್ತು ಮರು ಸಂಘಟನೆಯ ಹೆಸರಿನಲ್ಲಿ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಈ ನಡುವೆ ಬೆಂಗಳೂರಿನ ಟೆಕ್ಕಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ನೀಡಿರುವ ಎಚ್ಚರಿಕೆ ಎಲ್ಲರ ಗಮನ ಸೆಳೆದಿದೆ.

ರೆಡ್ಡಿಟ್ (Reddit) ಪೋಸ್ಟ್ನಲ್ಲಿ ಟೆಕ್ಕಿ ಬಿಚ್ಚಿಟ್ಟ ಸ್ಫೋಟಕ ಮಾಹಿತಿ
ಬೆಂಗಳೂರಿನ ಈ ಟೆಕ್ಕಿ ಇತ್ತೀಚೆಗಷ್ಟೇ ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ, ತಾವು ಕೆಲಸ ಕಳೆದುಕೊಂಡಿದ್ದಕ್ಕೆ ಚಿಂತಿತರಾಗಿಲ್ಲ ಎಂದು ಹೇಳುತ್ತಲೇ ಲೇಆಫ್ಗಳ ಹಿಂದಿನ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. ಅವರ ಪೋಸ್ಟ್ನ ಪ್ರಮುಖ ಅಂಶಗಳು ಇಲ್ಲಿವೆ.
ಮನೆ ಖರೀದಿ ಬೇಡ: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಐಟಿ ಉದ್ಯೋಗಿಗಳು ನಗರದಲ್ಲಿ ಮನೆ ಖರೀದಿಸುವ ಮುನ್ನ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸಲಹೆ ನೀಡಿದ್ದಾರೆ. “ನಾನು ಮನೆ ಖರೀದಿಸುವ ಬದಲು ಬಾಡಿಗೆ ಮನೆಯಲ್ಲಿ ಇರುವ ನಿರ್ಧಾರ ಮಾಡಿದ್ದು ಸರಿಯಾಗಿದೆ,” ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಎಐ ಪ್ರಾಜೆಕ್ಟ್ ಅನುಭವ: ಇವರು ದೊಡ್ಡ ಟೆಕ್ ಕಂಪನಿಯೊಂದರಲ್ಲಿ ನೇರವಾಗಿ ‘ಎಐ ಮೈಗ್ರೇಷನ್ ಪ್ರಾಜೆಕ್ಟ್’ನಲ್ಲಿ ಕೆಲಸ ಮಾಡಿದ್ದರಂತೆ. ಆ ಅನುಭವದ ಆಧಾರದ ಮೇಲೆ ಐಟಿ ಉದ್ಯೋಗಿಗಳ ಭವಿಷ್ಯ ಎಷ್ಟು ದುಸ್ತರವಾಗಿದೆ ಎಂಬುದನ್ನು ಅವರು ವಿವರಿಸಿದ್ದಾರೆ.
ಶೇ. 80 ರಷ್ಟು ಉದ್ಯೋಗ ಕಡಿತ :
“ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಸುಮಾರು ಶೇ. 70 ರಿಂದ ಶೇ. 80 ರಷ್ಟು ಮಂದಿ ಸೇವಾ ಆಧಾರಿತ (Service-based) ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಹಕರು ಬಯಸಿದರೆ ಇವರು ಮಾಡುವ ಕೆಲಸವನ್ನು ಮುಂದಿನ 1 ರಿಂದ 3 ವರ್ಷಗಳಲ್ಲಿ ಎಐ ಟೂಲ್ಗಳ ಮೂಲಕವೇ ಮಾಡಬಹುದು. ಹಿರಿಯ ಅಧಿಕಾರಿಗಳ ಪ್ರಕಾರ, ಶೇ. 70 ರಷ್ಟು ಮಂದಿ ಉದ್ಯೋಗ ಕಳೆದುಕೊಳ್ಳಲು 3 ರಿಂದ 5 ವರ್ಷ ಬೇಕಾಗಬಹುದು. ಉಳಿದ ಶೇ. 30 ರಷ್ಟು ಮಂದಿ ಮಾತ್ರ ಸುರಕ್ಷಿತವಾಗಿರುತ್ತಾರೆ. ಏಕೆಂದರೆ, ಎಐ ಏಜೆಂಟ್ಗಳನ್ನು ನಿರ್ವಹಿಸಲು ಶೇ.30 ರಷ್ಟು ಮಾನವ ಶಕ್ತಿಯ ಅಗತ್ಯವಿರುತ್ತದೆ,” ಎಂದು ಅವರು ಹೇಳಿಕೊಂಡಿದ್ದಾರೆ.

ಕಂಪನಿಗಳು ಉದ್ಯೋಗಿಗಳನ್ನು ಏಕೆ ವಜಾಗೊಳಿಸುತ್ತಿವೆ? :
ರೆಡ್ಡಿಟ್ ಬಳಕೆದಾರರ ಪ್ರಕಾರ, ಕಂಪನಿಗಳು ಈ ಕ್ರಮದಿಂದ ಎರಡು ಲಾಭಗಳನ್ನು ಪಡೆಯುತ್ತಿವೆ.
ಪ್ರಚಾರ ಮತ್ತು ಸಾಮರ್ಥ್ಯ: ತಾವು ಹೊಸ ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ತೋರಿಸಿಕೊಳ್ಳುವುದು ಮತ್ತು ಕಡಿಮೆ ಜನರಿಂದಲೇ ಕೆಲಸ ಮುಗಿಸಬಹುದು ಎಂದು ಸಾಬೀತುಪಡಿಸುವುದು.
ಬ್ಯಾಲೆನ್ಸ್ ಶೀಟ್ ಸುಧಾರಣೆ: ಉದ್ಯೋಗಿಗಳ ಸಂಬಳದ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಕಂಪನಿಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು. ಭವಿಷ್ಯದಲ್ಲಿ ಸೇವಾ ಆಧಾರಿತ ಐಟಿ ಉದ್ಯೋಗಗಳು ಸಂಪೂರ್ಣವಾಗಿ ಮಾಯವಾಗಬಹುದು ಎಂಬ ಆತಂಕವನ್ನು ಈ ಟೆಕ್ಕಿ ವ್ಯಕ್ತಪಡಿಸಿದ್ದಾರೆ.


