ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಘಟಕಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಕುರುವಳ್ಳಿ ನಾಗರಾಜ್ ಆಯ್ಕೆ.
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ತೀರ್ಥಹಳ್ಳಿ ಪಟ್ಟಣದ ಕ್ರಿಯಾಶೀಲ ಯುಕರ ಸಾಲಿನಲ್ಲಿ ಒಬ್ಬರಾಗಿದ್ದು, ತೀರ್ಥಹಳ್ಳಿಯ ಮನೆ ಮಗನಂತೆ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಕುರುವಳ್ಳಿಯ ನಾಗರಾಜ್ ಅವರದು ಪ್ರತಿಯೊಬ್ಬರು ಗೌರವಿಸಬೇಕಾದಂತಹ ವ್ಯಕ್ತಿತ್ವದ ಗುಣ. ಯಾರಿಗೆ ತೊಂದರೆ ಆಗಿರಲಿ, ಯಾರಿಗೆ ಆರೋಗ್ಯ ಸಮಸ್ಯೆ ಇರಲಿ ಅಲ್ಲಿಗೆ ದಾವಿಸಿ ತಕ್ಷಣಕ್ಕೆ ತನ್ನ ಕೈಲಾದ ಮಟ್ಟಿಗೆ ಸ್ಪಂದಿಸುವ ವ್ಯಕ್ತಿತ್ವವುಳ್ಳ ಹುಡುಗ ಎಂದರೆ ತಪ್ಪಾಗಲಾರದು.
ಕುರುವಳ್ಳಿ ನಾಗರಾಜ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಆರ್ ಎಂ ಮಂಜುನಾಥ್ ಗೌಡರ ಆಪ್ತ ವಲಯದಲ್ಲಿ ಗುರಿತಿಸಿಕೊಂಡ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸಕ್ರಿಯ ಯುವ ನಾಯಕನಾಗಿ ಮುಂಚೂಣಿಯಲ್ಲಿರುವ ನಾಗರಾಜ್ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ,ಕಾಂಗ್ರೆಸ್ ಪಕ್ಷದಲ್ಲಿನ ಇವರ ಕಾರ್ಯವೈಖರಿಯನ್ನು ಗಮನಿಸಿ ಒಂದಷ್ಟು ಜವಬ್ದಾರಿಯುತ ಹುದ್ದೆಯನ್ನು ನೀಡಲಾಗಿತ್ತಾದರು ಈ ಬಾರಿ ಅವರಿಗೆ ದೊಡ್ಡ ಜವಬ್ದಾರಿಯನ್ನೆ ಕಾಂಗ್ರೆಸ್ ಪಕ್ಷ ನೀಡಿದೆ,

ಕುರುವಳ್ಳಿ ನಾಗರಾಜ್ ಅವರನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ (ಯುವ ಸಂಘಟನೆ) ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮತ್ತು ಶಿಕ್ಷಣ ಸಚಿವರಾದ ಎಸ್.ಮಧು ಬಂಗಾರಪ್ಪ ನವರ ಆದೇಶದ ಮೇರೆಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ರಮೇಶ್ ಶಂಕರಘಟ್ಟ ಅವರು ಕುರುವಳ್ಳಿ ನಾಗರಾಜ್ ಆಯ್ಕೆಯನ್ನು ಪ್ರಕಟಿಸಿದ್ದಾರೆ.
ಹಾಲಿ ತೀರ್ಥಹಳ್ಳಿ ಆರ್ಯ ಈಡಿಗ ಸಂಘದ ನಿರ್ದೇಶಕ, ತೀರ್ಥಹಳ್ಳಿ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ, ತಾಲ್ಲೂಕು ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಹೀಗೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಕುರುವಳ್ಳಿ ನಾಗರಾಜ್ ಅವರ ಸೇವೆ ಗುರುತಿಸಿ ಕಾಂಗ್ರೆಸ್ ಪಕ್ಷ ಗುರುತರ ಜವಾಬ್ದಾರಿಯನ್ನು ನೀಡಿದೆ ಎಂದು ಅವರ ಆಪ್ತರು ಸಂತೋಷ ವ್ಯಕ್ತಪಡಿಸಿದ್ದಾರೆ.


