ಕೇರಳ : ಮೂಗ ಕಿವಿ ಕೇಳದ ಯುವಕನನ್ನೆ ಹನಿಟ್ರ್ಯಾಪ್ ಖೆಡ್ಡಕ್ಕೆ ಕೆಡವಲು ಯತ್ನಿಸಿದ ಸುಂದರಿ.! ಹನಿ ಗ್ಯಾಂಗ್ ಅನ್ನು ಬಂಧಿಸಿ ಜೈಲಿಗಟ್ಟಿದ ಪೊಲೀಸರು.!
news.ashwasurya.in
ಇನ್ಸ್ಟಾಗ್ರಾಮ್ ಮೂಲಕ ವಿಕಲಚೇತನ ಯುವಕನನ್ನ ಸ್ನೇಹ ಬೆಳೆಸಿದ ಸುಂದರಿಯೊಬ್ಬಳು ಆತನನ್ನು ಹೋಟೆಲ್ಗೆ ಕರೆಸಿ ಹನಿಟ್ರ್ಯಾಪ್ ಖೆಡ್ಡಕ್ಕೆ ಕೆಡವಿದ್ದಾಳೆ.! ಯುವಕನ ಮೇಲೆ ಹಲ್ಲೆ ನಡೆಸಿ, ಹಣ ಸುಲಿಗೆಗೆ ಯತ್ನಿಸಿದ ಮಹಿಳೆ ಸೇರಿದಂತೆ ನಾಲ್ವರನ್ನು ಕೊಚ್ಚಿಯ ಕಡವಂತ್ರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ….
ಅಶ್ವಸೂರ್ಯ/ ಕೊಚ್ಚಿ : ಸೋಷಿಯಲ್ ಮಿಡಿಯಾದ ಇನ್ಸ್ಟಾಗ್ರಾಮ್ ಮೂಲಕ ಯುವಕನನ್ನು ಪರಿಚಯ ಮಾಡಿಕೊಂಡು, ಮಾತು ಬಾರದ ಹಾಗೂ ಕಿವುಡುತನದ ಸಮಸ್ಯೆಯುಳ್ಳ ವಿಕಲಚೇತನ ಯುವಕನನ್ನು ಹೋಟೆಲ್ಗೆ ಕರೆಸಿ, ಹನಿಟ್ರ್ಯಾಪ್ (Honeytrap) ಮೂಲಕ ಹಣ ಸುಲಿಗೆ ಮಾಡಲು ಯತ್ನಿಸಿದ ಸುಂದರಿ ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಕಡವಂತ್ರ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪರವೂರ್ನ ಮಹಿಳೆ ಸಫ್ನಾ , ವೈಟ್ಟಿಲದ ಜಾನ್ ರಾಹುಲ್, ಇರುಂಪನಂನ ಅಮಲ್ ಮತ್ತು ಮರಡು ಮೂಲದ ಆನಂದ್ ಬಂಧಿತ ಆರೋಪಿಗಳು. ಸಫ್ನಾ ಮತ್ತು ಆನಂದ್ ಕಾಕ್ಕನಾಡ್ನ ಅಪಾರ್ಟ್ಮೆಂಟ್ವೊಂದರಲ್ಲಿ ತಲೆಮರೆಸಿಕೊಂಡಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಈ ಪ್ರಕರಣದಲ್ಲಿ ಸಂಜು ಎಂಬ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.

ಪ್ರಕರಣದ ಹಿನ್ನಲೆ.!
ಕೊಲ್ಲಂ ಜಿಲ್ಲೆಯ 30 ವರ್ಷದ ವಿಕಲಚೇತನ ಯುವಕನಿಗೆ ಆರೋಪಿ ಸಫ್ನಾ ಇನ್ಸ್ಟಾಗ್ರಾಮ್ ಮೂಲಕ ಸ್ನೇಹ ಬೆಳೆಸಿದ್ದಳು. ಚಾಟಿಂಗ್ ಮೂಲಕ ಆತನ ವಿಶ್ವಾಸ ಗಳಿಸಿದ ಆಕೆ, ಫೆಬ್ರವರಿ 22 ರಂದು ಪನಂಪಿಳ್ಳಿ ನಗರದ ಸೌತ್ ಬ್ರಿಡ್ಜ್ ಸಮೀಪವಿರುವ ಹೋಟೆಲ್ವೊಂದಕ್ಕೆ ಆತನಿಗೆ ಬರುವಂತೆ ಆಹ್ವಾನಿಸಿದ್ದಾಳೆ. ಯುವಕ ಬೀಚ್ನಲ್ಲಿ ಭೇಟಿಯಾಗೋಣ ಎಂದು ಹೇಳಿದರೂ ಸುಂದರಿ ಸಫ್ನಾ ಒತ್ತಾಯಿಸಿ ಹೋಟೆಲ್ಗೆ ಬರಬೇಕು ಎಂದು ಒತ್ತಾಯಿಸಿ ಕರೆಸಿಕೊಂಡಿದ್ದಳು. ಯುವಕ ಸಂಜೆ 6:30 ರ ಸುಮಾರಿಗೆ ಹೋಟೆಲ್ ರೂಮ್ಗೆ ಹೋದಾಗ, ಆಕೆಯ ಇತರ ಗ್ಯಾಂಗ್ ಸದಸ್ಯರು ಆಗಲೇ ಅಲ್ಲಿ ಹೊಂಚು ಹಾಕಿ ಕುಳಿತಿದ್ದರಂತೆ. ಕೆಲವರು ಬಾತ್ರೂಮ್ನಲ್ಲಿ ಅಡಗಿದ್ದರೆ, ಉಳಿದವರು ಹೊರಗಡೆ ಹೊಂಚುಹಾಕಿ ಕುಳಿತಿದ್ದರಂತೆ.!
ಯುವಕನೊಂದಿಗೆ ಸಫ್ನಾ ಇರುವ ಅಸಭ್ಯ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಮಾಡುವುದು ಇವರ ಉದ್ದೇಶವಾಗಿತ್ತು. ಯುವಕ ಬಟ್ಟೆ ಬಿಚ್ಚಲು ಮತ್ತು ಅಸಭ್ಯ ಕೃತ್ಯಗಳಲ್ಲಿ ತೊಡಗಲು ನಿರಾಕರಿಸಿದಾಗ, ಗ್ಯಾಂಗ್ ಅಮಾನವೀಯವಾಗಿ ಹಲ್ಲೆ ನಡೆಸಿದೆ. ಯುವಕನ ಮುಖಕ್ಕೆ ಗುದ್ದಿ, ಬೆನ್ನಿಗೆ ಒದ್ದು ಕ್ರೂರವಾಗಿ ನಡೆದುಕೊಳ್ಳಲಾಗಿದೆ. ದೊಡ್ಡ ಟಾರ್ಚ್ನಿಂದ ಆತನ ತಲೆಗೆ ಹೊಡೆಯಲು ಯತ್ನಿಸಿದಾಗ, ಯುವಕ ಕೈ ಅಡ್ಡಹಿಡಿದು ಬಚಾವಾಗಿದ್ದಾನೆ. ಆದರೆ ಆತನ ಕೈಗೆ ತೀವ್ರ ಗಾಯಗಳಾಗಿವೆ.
ಅ ನಂತರ ಆರೋಪಿಗಳು ಆತನ ಗೂಗಲ್ ಪೇ ಖಾತೆ ಮೇಲೆ ಕಣ್ಣು ಹಾಕೀದ್ದಾರೆ.!
ಯುವಕನ ಗೂಗಲ್ ಪೇ (Google Pay) ಖಾತೆಯನ್ನು ಬಲವಂತವಾಗಿ ಪ್ರವೇಶಿಸಿದ ಗ್ಯಾಂಗ್, ಹಣ ಲೂಟಿ ಮಾಡಲು ಯತ್ನಿಸಿತು. ಆದರೆ ಖಾತೆಯಲ್ಲಿ ಹಣ ಇಲ್ಲದ ಕಾರಣ, ಕೊನೆಗೆ ಯುವಕನ ಬೆತ್ತಲೆ ಫೋಟೋಗಳನ್ನು ತೆಗೆದು ಬೆದರಿಸಿ ಕಳುಹಿಸಿದ್ದರಂತೆ. ಪೊಲೀಸರು ಆರೋಪಿಗಳ ಫೋನ್ ವಶಪಡಿಸಿಕೊಂಡಿದ್ದು, ಡಿಲೀಟ್ ಆಗಿರುವ ಫೋಟೋಗಳನ್ನು ರಿಕವರಿ ಮಾಡುವ ಪ್ರಯತ್ನದಲ್ಲಿದ್ದಾರೆ.
ಕಾನೂನು ಕ್ರಮ :

ಬೆನ್ನುಮೂಳೆಯ ಗಾಯದಿಂದ ಬಳಲುತ್ತಿದ್ದ ಯುವಕ ಫೆಬ್ರವರಿ 24 ರಂದು ದೂರು ನೀಡಿದ್ದಾನೆ. ಯುವಕನಿಗೆ ಮಾತು ಬಾರದ ಕಾರಣ, ಸಂಜ್ಞಾ ಭಾಷಾ ತಜ್ಞರ (Sign Language Expert) ಸಹಾಯದಿಂದ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಹಲ್ಲೆ, ಸುಲಿಗೆ ಮತ್ತು ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯ ಅಡಿಯಲ್ಲಿ ಕಠಿಣ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.


