
ಕಾಸರಗೋಡು : ಹೆಂಡತಿ ವಿಚ್ಚೇದನ ಕೇಳಿದ್ದಕ್ಕೆ ಮಗಳನ್ನೆ ಕೊಂದ ಅಪ್ಪ.! ತಡೆಯಲು ಬಂದ ದೊಡ್ಡಪ್ಪನಿಗೂ ಚಾಕು ಇರಿತ.!
news.ashwasurya.in
ಮಂಜೇಶ್ವರದ ಕುಂಜತ್ತೂರಿನಲ್ಲಿ, ಪತ್ನಿ ವಿಚ್ಛೇದನ ಕೇಳಿದ್ದಕ್ಕೆ ಕೋಪಗೊಂಡ ತಂದೆ ಉಮರ್ ಪಾಷಾ, ತನ್ನ 18 ವರ್ಷದ ಮಗಳು ಜುಬೈರಾಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಕೌಟುಂಬಿಕ ಕಲಹದ ಘೋರ ದುರಂತದಲ್ಲಿ, ಅಡ್ಡ ಬಂದ ತನ್ನ ಅಣ್ಣನ ಮೇಲೂ ಸಹ ಆತ ಹಲ್ಲೆ ನಡೆಸಿದ್ದಾನೆ.ತನ್ನ ಹೆಂಡತಿ
ವಿಚ್ಚೇದನ ಕೇಳಿದ ಹಿನ್ನೆಲೆಯಲ್ಲಿ ಗಂಡನಿಂದ ಮಗಳ ಕೊಲೆ ನೆಡೆದಿದೆ….

ಅಶ್ವಸೂರ್ಯ/ಮಂಜೇಶ್ವರ: ಹೆಂಡ್ತಿ ವಿಚ್ಛೇದನ ಕೇಳಿದಳು ಎಂದು ಸಿಟ್ಟಾದ ಗಂಡ ಆಕೆಯ ಮೇಲಿನ ಸಿಟ್ಟಿಗೆ ತನ್ನ ಮುದ್ದಾದ 18 ವರ್ಷದ ಮಗಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೇರಳ ಕರ್ನಾಟಕ ಗಡಿ ಭಾಗವಾದ ಕಾಸರಗೋಡಿನ ಮಂಜೇಶ್ವರ ಸಮೀಪದ ಕುಂಜತ್ತೂರಿನಲ್ಲಿ ಈ ಘಟನೆ ನಡೆದಿದ್ದು ವಿಷಯ ತಿಳಿದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.! ಉಮರ್ ಪಾಷಾ ಎಂಬಾತನೇ ಹೆಂಡ್ತಿ ಮೇಲಿನ ಸಿಟ್ಟಿಗೆ ಮಗಳ ಕೊಲೆ ಮಾಡಿದ ವ್ಯಕ್ತಿಯಾಗಿದ್ದಾನೆ.!
ಕುಂಜತ್ತೂರಿನ ತೂಮಿನಾಡು ಹಿಲ್ ಟಾಪ್ ನಗರದ ನಿವಾಸಿಯಾದ ಉಮರ್ ಪಾಷಾ ತನ್ನ 18 ವರ್ಷದ ಮಗಳು ಜುಬೈರಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ವೇಳೆ ತಡೆಯುವುದಕ್ಕೆ ಬಂದ ತನ್ನ ಸ್ವಂತ ಅಣ್ಣ ಶೇಕುಂ ಅವರ ಮೇಲೆಯೂ ಆತ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಚಾಕುವಿನಿಂದ ಹಲ್ಲೆ ಮಾಡಿದ್ದರಿಂದ ಶೆಕುಂ ಅವರಿಗೂ ಗಂಭೀರ ಗಾಯಗಳಾಗಿವೆ. ತಂದೆಯ ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಜುಬೈರಾಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಕೆ ಆಸ್ಪತ್ರೆ ಮುಟ್ಟುವ ಮೊದಲೆ ಸಾವಿನ ಮನೆ ಸೇರಿದ್ದಾಳೆ.!ಎಂದು ವೈದ್ಯರು ಘೋಷಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದು, ಸಾಕ್ಷ್ಯ ಸಂಗ್ರಹ ಮಾಡಿಕೊಂಡಿದ್ದಾರೆ. ಮೃತ ಜುಬೈರಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಭಾನುವಾರ ಈ ಘಟನೆ ನಡೆದಿದ್ದು, ಆರೋಪಿ ಉಮರ್ ಪಾಷಾ ದಿಢೀರನೇ ಮಗಳ ಮೇಲೆ ದಾಳಿ ಮಾಡಿದ್ದು, ಚಾಕುವಿನಿಂದ ಆಕೆಗೆ ಇರಿದಿದ್ದಾನೆ. ಆಕೆಯ ಕಿರುಚಾಟ ಕೇಳಿ ರಕ್ಷಣೆಗೆ ಬಂದ ಆಕೆಯ ದೊಡ್ಡಪ್ಪ ಶೇಕುಂ ಅವರ ಮೇಲೂ ಉಮರ್ ಪಾಷಾ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಗಾಯಗೊಂಡ ಶೇಕುಂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಡ ಹೆಂಡತಿ ನಡುವಿನ ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಉಮರ್ ಪಾಷಾ 3 ತಿಂಗಳ ಹಿಂದಷ್ಟೇ ಊರಿಗೆ ಬಂದಿದ್ದರು. ಉಮರ್ ಪಾಷಾ ಪತ್ನಿ 41 ವರ್ಷದ ತಾಹಿರಾ ಆತನಿಂದ ವಿಚ್ಛೇದನ ಪಡೆಯುವುದಕ್ಕೆ ಬಯಸಿದ್ದಳಂತೆ.! ಹಾಗೂ ಉಮರ್ಗೆ ಮನೆಬಿಟ್ಟು ಹೋಗುವಂತೆ ತಾಕೀತು ಮಾಡಿದ್ದಳಂತೆ.ಇದರಿಂದ ತೀವ್ರ ಹತಾಶೆಗೆ ಒಳಗಾದ ಉಮರ್ ಪಾಷಾ ಮಗಳ ಕೊಲೆ ಮಾಡಿದ್ದಾನೆ.! ಎಂದು ವರದಿಯಾಗಿದೆ. ಆರೋಪಿ ಉಮರ್ ಪಾಷಾ ಮಾದಕ ವ್ಯಸನಿಯಾಗಿದ್ದ ಕೃತ್ಯ ನಡೆಯುವ ವೇಳೆಯು ಆರೋಪಿ ಮಾದಕ ದ್ರವ್ಯ ಸೇವಿಸಿದ್ದು, ಅದರ ಅಮಲಿನಲ್ಲೇ ಈ ಭೀಕರ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.


