ಉತ್ತರಪ್ರದೇಶದ : ಪ್ರೀತಿಸಿ ಮದುವೆಯಾದ ಮಡದಿಯೆ ಗಂಡನನ್ನು ಕೊಂದು ಮುಗಿಸಿ ಬಿಟ್ಲು.! ನಂತರ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿ ಬಂಧನ.!
news.ashwasurya.in
ಅಶ್ವಸೂರ್ಯ/ಉತ್ತರಪ್ರದೇಶ : ಜಿತೇಂದ್ರ ಕುಮಾರ್ ಯಾದವ್ ಕೊಲೆಯಾದ ವ್ಯಕ್ತಿ ಪತ್ನಿ ಜ್ಯೋತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನೆರೆಹೊರೆಯವರಿಗೆ ಅನುಮಾನ ಬಾರದಂತೆ, ಆಕೆ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡ ಸತ್ತಿದ್ದಾರೆ ಎಂದು ಬಿಂಬಿಸಿದ್ದಳು.
ಜ್ಯೋತಿ ಮತ್ತು ಜಿತೇಂದ್ರ ಉತ್ತರ ಪ್ರದೇಶದ ಬರೇಲಿಯವರು,ಕಳೆದ ಒಂಬತ್ತು ವರ್ಷಗಳಿಂದ ಪ್ರೀತಿಸಿ ಕಳೆದ ನವೆಂಬರ್ ತಿಂಗಳಲ್ಲಿ ಮದುವೆಯಾಗಿದ್ದರು. ಪತ್ನಿಯೇ ಪ್ರೀತಿಸಿ ಮದುವೆಯಾದ ಗಂಡನನ್ನು ಕೊಂದು ಚಟ್ಟಕ್ಕೆ ಏರಿಸಿ ಆತ್ಮಹತ್ಯೆ ಎಂದು ಬಿಂಬಿಸಿದ್ದಳು, ಆದರೆ ಪೊಲೀಸರ ತನಿಖೆಯಿಂದ ಅಸಲಿ ಸತ್ಯ ಹೊರಬಂದಿದೆ.
ಜಿತೇಂದ್ರ ಕುಮಾರ್ ಯಾದವ್ ಕೊಲೆಯಾದ ವ್ಯಕ್ತಿ, ಪತ್ನಿ ಜ್ಯೋತಿ ಕತ್ತು ಹಿಸುಕಿ ಗಂಡನನ್ನು ಕೊಲೆ ಮಾಡಿದ್ದಾಳೆ. ನೆರೆಹೊರೆಯವರಿಗೆ ಅನುಮಾನ ಬಾರದಂತೆ, ಆಕೆ ತನ್ನ ಪತಿಯ ಸಾವು ಆತ್ಮಹತ್ಯೆಯೆಂದು ಬಿಂಬಿಸಿದ್ದಳು.

ಕೊಲೆಯಾದ ಜಿತೇಂದ್ರ ಯಾದವ್ ಐವಿಆರ್ಐನ ಗುತ್ತಿಗೆ ಕೆಲಸಗಾರ. ಬರೇಲಿಯ ಇಜ್ಜತ್ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೈಲಾಶಪುರಂ ಕಾಲೋನಿಯಲ್ಲಿ ಅವರು ವಾಸಿಸುತ್ತಿದ್ದರು.
ಆದರೆ ಮರಣೋತ್ತರ ಪರೀಕ್ಷೆಯಲ್ಲಿ “ಕತ್ತು ಹಿಸುಕಿರುವುದು” ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಎಲ್ಲಾ ಪುರಾವೆಗಳನ್ನು ಒಟ್ಟುಗೂಡಿಸಿದ ಪೊಲೀಸರು, ಜಿತೇಂದ್ರ ಅವರನ್ನು ಅವರ ಪತ್ನಿ ಕತ್ತು ಹಿಸುಕಿ ಕೊಂದಿದ್ದಾರೆ ಮತ್ತು ಅವರ ಮಾವ, ಅತ್ತೆ ಮತ್ತು ಸೋದರ ಮಾವ ಅವರು ಕೊಲೆಗೆ ನೆರವು ನೀಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಮೃತದೇಹವನ್ನು ಕಿಟಕಿಯ ಗ್ರಿಲ್ಗೆ ಮಫ್ಲರನ್ನು ಕುತ್ತಿಗೆಗೆ ಕಟ್ಟಿ ನೇತುಹಾಕಲಾಗುತ್ತು. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ಸೋದರ ಮಾವನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.


