

ಲೋಕಾಯುಕ್ತರ ದಾಳಿ : ಬೆಂಗಳೂರು 4 ಲಕ್ಷ ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತರ ಬಲೆಗೆ ಬಿದ್ದ ಇನ್ಸ್ಪೆಕ್ಟರ್.! ಬಂಧನದ ವೇಳೆ ಇನ್ಸ್ಪೆಕ್ಟರ್ ಕೂಗಾಡಿದ್ದು ಯಾಕೆ.!

news.ashwasurya.in
ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜು 4 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಹಣ ಹೂಡಿಕೆಗೆ ಸಂಬಂಧಿಸಿ ವಂಚನೆ ಪ್ರಕರಣದಲ್ಲಿ ಆರೋಪಿಗಳನ್ನು ಬಿಡಿಸಲು 5 ಲಕ್ಷ ನೀಡುವಂತೆ ಪೊಲೀಸ್ ಇನ್ಸ್ಪೆಕ್ಟರ್ ಬೇಡಿಕೆ ಇಟ್ಟಿದ್ದರಂರೆ. ಒಂದು ಲಕ್ಷ ಮೊದಲೇ ಪಡೆದಿದ್ದ ಪೊಲೀಸ್ ಅಧಿಕಾರಿ, ಉಳಿದ 4 ಲಕ್ಷ ಲಂಚ ಸ್ವೀಕರಿಸುವಾಗ ವಶಕ್ಕೆ ಲೋಕಾಯುಕ್ತರ ಬಲೆಗೆ ಕೆಡವಿ ಕೊಂಡಿದ್ದಾರೆ.ಈ ಘಟನೆ (Lokayukta Raid) ನಗರದ ಚಾಮರಾಜಪೇಟೆಯ ಸಿಎಆರ್ ಮೈದಾನದಲ್ಲಿ ನಡೆದಿದೆ. ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜು ಅವರನ್ನು ಲಂಚ ಸ್ವೀಕಾರದ ವೇಳೆ ವಶಕ್ಕೆ ಪಡೆಯಲಾಗಿದೆ. ಟ್ರ್ಯಾಪ್ ವೇಳೆ ಲೋಕಾಯುಕ್ತ ಪೊಲೀಸರ ವಿರುದ್ಧ ಇನ್ಸ್ಪೆಕ್ಟರ್ ಗೋವಿಂದರಾಜು ಆವೇಶ ಗೊಂಡು ಕೂಗಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಏನಿದು ಪ್ರಕರಣ?
ಹಣ ಹೂಡಿಕೆಗೆ ಸಂಬಂಧಿಸಿ ವಂಚನೆಗೊಳಗಾದ ಬಗ್ಗೆ ಧನರಾಜ್ ಎಂಬುವವರು ಕೆ.ಪಿ.ಅಗ್ರಹಾರ ಠಾಣೆಗೆ ದೂರು ನೀಡಿದ್ದರು. ಹಣ ಹೂಡಿಕೆ ಮಾಡಿದರೆ ಲಾಭ ಬರುತ್ತದೆ ಎಂದು ನಂಬಿಸಿ ಸೂರಜ್, ಸುಜನ್ ಮತ್ತು ಶ್ರೀನಿವಾಸ್ ಎಂಬುವವರು ಧನರಾಜ್ ಅವರಿಂದ 19 ಲಕ್ಷ ರೂ. ಪಡೆದು ವಂಚಿಸಿದ್ದರು. ಹಣ ವಾಪಸ್ ಕೇಳಿದಾಗ ಆರೋಪಿಗಳು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಸಂಬಂಧ ಜನವರಿ 22 ರಂದು ಕೆ.ಪಿ. ಅಗ್ರಹಾರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಬಂಧನದ ವೇಳೆ ಆವೇಶ ಗೊಂಡ ಇನ್ಸ್ಪೆಕ್ಟರ್ ಕೂಗಾಡಿದ ವಿಡಿಯೋ.
ಇನ್ಸ್ಪೆಕ್ಟರ್ ವಿರುದ್ಧದ ಆರೋಪ ಏನು?
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಸೂರಜ್ ಮತ್ತು ಸುಜನ್ ಮನೆಗೆ ಇನ್ಸ್ಪೆಕ್ಟರ್ ಗೋವಿಂದರಾಜು ನೇತೃತ್ವದ ತಂಡ ತೆರಳಿತ್ತು. ಈ ವೇಳೆ ಪೊಲೀಸರು ಮತ್ತು ಆರೋಪಿಗಳ ನಡುವೆ ಗಲಾಟೆ ನಡೆದಿತ್ತು. ಬಳಿಕ ಠಾಣೆಯಲ್ಲಿ ಪ್ರಕರಣವನ್ನು ಡೀಲ್ ಮಾಡಲು ಮುಂದಾದ ಇನ್ಸ್ಪೆಕ್ಟರ್ ಗೋವಿಂದರಾಜು, ಕೇಸ್ನಿಂದ ಬಿಡಿಸಲು ಮತ್ತು ಬಂಧಿಸದಿರಲು 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಲಂಚಕ್ಕೆ ಬೇಡಿಕೆ ಬಗ್ಗೆ ಆರೋಪಿಗಳ ಕಡೆಯವರಾದ ಮೊಹಮ್ಮದ್ ಅಕ್ಬರ್ ಎಂಬುವವರು ನೀಡಿದ ದೂರಿನನ್ವಯ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ಟ್ರ್ಯಾಪ್ ಪ್ಲಾನ್ ಮಾಡಲಾಗಿತ್ತು. ಇನ್ಸ್ಪೆಕ್ಟರ್ ಗೋವಿಂದರಾಜು ಈಗಾಗಲೇ 1 ಲಕ್ಷ ರೂಪಾಯಿ ಲಂಚ ಪಡೆದಿದ್ದರು. ಉಳಿದ 4 ಲಕ್ಷ ರೂಪಾಯಿ ಪಡೆಯಲು ಚಾಮರಾಜಪೇಟೆಯ ಸಿಎಆರ್ ಮೈದಾನಕ್ಕೆ ಬಂದಿದ್ದರು. ಹಣ ಸ್ವೀಕರಿಸುತ್ತಿದ್ದಂತೆಯೇ ಲೋಕಾಯುಕ್ತ ಪೊಲೀಸರು ಸುತ್ತುವರಿದು, ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಪೊಲೀಸರು ತನ್ನನ್ನು ಹಿಡಿಯುತ್ತಿದ್ದಂತೆಯೇ ಇನ್ಸ್ಪೆಕ್ಟರ್ ಗೋವಿಂದರಾಜು ಕೂಗಾಡಲು ಶುರು ಮಾಡಿದ್ದಾರೆ. “ನನ್ನನ್ನು ಬಿಡಿ, ನಾನು ನಿಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿಲ್ಲ” ಎಂದು ಜೋರಾಗಿ ಕಿರುಚುತ್ತಾ ಹೈಡ್ರಾಮಾ ಸೃಷ್ಟಿಸಿದ್ದಾರೆ. ಆದರೆ ಲೋಕಾಯುಕ್ತ ಪೊಲೀಸರು ಇನ್ಸ್ಪೆಕ್ಟರ್ ಅನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜು ಪ್ರತಿಕ್ರಿಯಿಸಿ, “ಪ್ರಿವೆನ್ಷನ್ ಆಫ್ ಕರಪ್ಷನ್ ಆ್ಯಕ್ಟ್ ಅಡಿ ನಾವು ಟ್ರ್ಯಾಪ್ ಮಾಡಿದ್ದೇವೆ. ಕೆ.ಪಿ. ಅಗ್ರಹಾರ ಇನ್ಸ್ಪೆಕ್ಟರ್ ಗೋವಿಂದರಾಜು ಅವರು 5 ಲಕ್ಷ ಹಣ ಡಿಮ್ಯಾಂಡ್ ಮಾಡಿದ್ದರು. ಉಳಿದ 4 ಲಕ್ಷ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಕೆಲವು ಅಧಿಕಾರಿಗಳ ಭಾಗಿಯಾಗಿರುವ ಸಾಧ್ಯತೆಯಿದ್ದು, ತನಿಖೆ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಆರೋಪಿಗಳು ತಾವು ಈಗಾಗಲೇ ಹಣವನ್ನು ವಾಪಸ್ ಕೊಟ್ಟಿದ್ದೇವೆ ಮತ್ತು ಇದು ಸಿವಿಲ್ ಪ್ರಕರಣವಾಗಿದ್ದರೂ ಬರ್ಡ್ಸ್ ಆ್ಯಕ್ಟ್ ಹಾಕಲಾಗಿದೆ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದಿನನಿತ್ಯ ಲಂಚದ ಕೂಗು ಕೇಳಿಬರುತ್ತಿದೆ..ಕೇಲವು ಅಧಿಕಾರಿಗಳಂತು ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ.ಅದಕ್ಕೆ ಕಾರಣವೂ ಬಲವಾಗಿಯೆ ಇದೆ.ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕ ಅಧಿಕಾರಿಗಳು ಲಂಚಕ್ಕೆ ಕೈಯೊಡ್ಡುವ ಸ್ಥಿತಿ ನಿರ್ಮಾಣವಾಗಿದೆ.!?ಕಾರಣವೊಂದೆ ಕೆಲವು ಸಚಿವರು, ಶಾಸಕರು ರಾಜಕೀಯ ನಾಯಕರ ಹಣದಾಹಕ್ಕೆ ಸರ್ಕಾರಿ ಅಧಿಕಾರಿಗಳು ನೌಕರರು ಲಂಚಕ್ಕೆ ಕೈಯೊಡ್ಡಿ ಬಲಿಯಾಗುವ ಪರಿಸ್ಥಿತಿ ಎದುರಾಗಿದೆ.ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ಎನ್ನುವುದರ ಬೆನ್ನಿಗೆ ಲಕ್ಷ ಲಕ್ಷ ಹಣದ ಪಿಂಡಿ ಕೆಲವು ಸಚಿವರು ಶಾಸಕರು ಮತ್ತು ರಾಜಕೀಯ ನಾಯಕರ ಕಿಸೆ ಸೇರುತ್ತಿದೆ.ಯಾವ ಮಟ್ಟಕ್ಕೆ ಎಂದರೆ ಪ್ರಮುಖ ಜಿಲ್ಲೆ,ಊರು ವಿವಿಧ ಕಛೇರಿಗಳಿಗೆ ಮತ್ತು ಪೊಲೀಸ್ ಠಾಣೆಗಳಿಗೆ ವರ್ಗಾವಣೆಯಾಗಲು ಒಂದೊಂದು ಸ್ಥಳಗಳಿಗೂ ಒಂದೊಂದು ರೀತಿಯ ದೊಡ್ಡ ಮಟ್ಟದ ರೇಟ್ ಫಿಕ್ಸ್ ಆಗಿದೆ ಅಷ್ಟು ಹಣ ಕೊಟ್ಟರಷ್ಟೆ ಆತ ಅ ಸ್ಥಳಕ್ಕೆ ವರ್ಗಾವಣೆಗೊಳ್ಳಲು ಸಾಧ್ಯ.!?ಇಲ್ಲಿ ಹಣಕೊಟ್ಟು ಅ ಸ್ಥಳಗಳಿಗೆ ಹೋಗಬೇಕು ಯಾಕೆ.?ಎಲ್ಲಿಗೆ ವರ್ಗಾವಣೆ ಮಾಡಿದರು ಕೇಲಸ ಮಾಡಬಹುದಲ್ಲಾ ಎನ್ನುವ ಪ್ರಶ್ನೆ ಕೂಡಾ ನಮ್ಮಲ್ಲಿ ಮೂಡುತ್ತದೆ.! ಅದಕ್ಕೆ ಕಾರಣವೂ ಇದೆ.! ಕೇಲವರು ಹಣ ಮಾಡಲೆಂದು ಅವರಿಗೆ ಬೇಕಾದ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಂಡರೆ ಇನ್ನೂ ಕೇಲವರು ತಮ್ಮ ಮಕ್ಕಳ ವಿಧ್ಯಾಭ್ಯಾಸ ಮತ್ತು ಹೆತ್ತವರು ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಸಾಲ ಮಾಡಿಯಾದರು ಲಕ್ಷಾಂತರ ರೂಪಾಯಿ ಹಣಕೊಟ್ಟು ವರ್ಗಾವಣೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.

ಈ ಕಾರಣದಿಂದಲೇ ಲಂಚದ ಹಣಕ್ಕೆ ಕೈಯೊಡ್ಡುವ ಪರಿಸ್ಥಿತಿ ಅಧಿಕಾರಿಗಳ ವಲಯದಲ್ಲಿ ಎದುರಾಗಿದೆ.!ವರ್ಗಾವಣೆಯಾಗಲು ಲಕ್ಷಾಂತರ ರೂಪಾಯಿ ಹಣವನ್ನು ಕೆಲವು ಸಚಿವರು ಶಾಸಕರಿಗೆ ಕೊಟ್ಟು ವರ್ಗಾವಣೆಯಾಗಿ ಲಂಚದ ಹಣಕ್ಕೆ ಮುಲಾಜಿಲ್ಲದೆ ಕೈಯೊಡ್ಡುವಂತಾಗಿದೆ…ರಾಜಕಾರಣಿಗಳು ಮತ್ತು ಅಧಿಕಾರಿಗಳ ಲಂಚದ ದಾಹಕ್ಕೆ ಅಮಾಯಕ ಬಲಿಯಾಗುತ್ತಿದ್ದಾನೆ ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ರೂಪಾಯಿ ಲಂಚಕೊಟ್ಟು ವರ್ಗಾವಣೆಯಾಗಿ ಬಂದ ಅಧಿಕಾರಿಗಳಲ್ಲಿ ಪ್ರಾಮಾಣಿಕರು ಲಂಚಕ್ಕೆ ಕೈಯೊಡ್ಡಲು ಮುಂದಾಗಿದ್ದಾರೆ.ಕಾರಣ ಲಕ್ಷಾಂತರ ರೂಪಾಯಿ ಸಾಲಮಾಡಿ ಕೇಲವು ಸಚಿವರು ಶಾಸಕರಿಗೆ ಕೊಟ್ಟಿರುತ್ತಾರೆ ಕೊಟ್ಟ ಹಣವನ್ನು ಗಳಿಸುವ ಹಾದಿಯಲ್ಲಿ ಮುಲಾಜಿಲ್ಲದೆ ಲಂಚಕ್ಕೆ ಕೈಯೊಡ್ಡುತ್ತಿದ್ದಾರೆ.ಈ ಕಾರಣದಿಂದಲೇ ರಾಜ್ಯದ ಉದ್ದಗಲಕ್ಕೂ ಲಂಚದ ಘಮಲು ಮುಗಿಲು ಮುಟ್ಟಿದೆ ಯಾವುದೇ ಕೆಲಸವು ಕಾಸಿಲ್ಲದೆ ನೆಡೆಯುತ್ತಿಲ್ಲ. ಈ ಹಾದಿಯಲ್ಲೆ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜು ಕೂಡ ಲಂಚದ ಹಣಕ್ಕೆ ಕೈಯೊಡ್ಡಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.ಇನ್ಸ್ಪೆಕ್ಟರ್ ಗೋವಿಂದರಾಜು ಕೂಡ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬರಲು ಯಾವುದೊ ಸಚಿವನಿಗೋ, ಶಾಸಕನಿಗೋ ರಾಜಕೀಯ ನಾಯಕನಿಗೋ ಕೋಟಿ ಹಣ ಕೊಟ್ಟು ಬಂದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.!? ಸಾಲ ಮಾಡಿಕೊಟ್ಟ ಕೋಟಿ ಹಣವನ್ನು ಗಳಿಸಲು ಲಕ್ಷಾಂತರ ರೂಪಾಯಿ ಲಂಚದ ಹಣಕ್ಕೆ ಕೈಯೊಡ್ಡಿ ಬಿಟ್ರಾ ಇನ್ಸ್ಪೆಕ್ಟರ್ ಗೋವಿಂದರಾಜು.?

ಲಂಚ…ಲಂಚ…ಲಂಚ…?

ಇತ್ತೀಚಿನ ದಿನಗಳಲ್ಲಿ ದಿನನಿತ್ಯ ಲಂಚದ ಕೂಗು ಬಲವಾಗಿ ಕೇಳಿಬರುತ್ತಿದೆ..ಕೇಲವು ಅಧಿಕಾರಿಗಳಂತು ಲಕ್ಷ ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ.ಅದಕ್ಕೆ ಕಾರಣವೂ ಬಲವಾಗಿಯೆ ಇದೆ. ಎಷ್ಟೇ ಲೋಕಾಯುಕ್ತರ ದಾಳಿ ನೆಡೆಯುತ್ತಿದ್ದರು ದಿನದಿಂದ ದಿನಕ್ಕೆ ಪ್ರತಿ ಇಲಾಖೆಯಲ್ಲೂ ಲಂಚದ ದಾಹ ಮುಗಿಲು ಮುಟ್ಟಿದೆ ಪ್ರಾಮಾಣಿಕ ಅಧಿಕಾರಿಗಳು ಕೂಡ ಲಂಚಕ್ಕೆ ಕೈಯೊಡ್ಡುವ ಸ್ಥಿತಿ ನಿರ್ಮಾಣವಾಗಿದೆ.!?ಕಾರಣವೊಂದೆ ಕೆಲವು ಸಚಿವರು, ಶಾಸಕರು ರಾಜಕೀಯ ನಾಯಕರ ಹಣದಾಹಕ್ಕೆ ಸರ್ಕಾರಿ ಅಧಿಕಾರಿಗಳು ನೌಕರರು ಲಂಚಕ್ಕೆ ಕೈಯೊಡ್ಡಿ ಮಾಡಿದ ಪಾಪದ ಕೆಲಸಕ್ಕೆ ಬಲಿಯಾಗುವ ಪರಿಸ್ಥಿತಿ ಎದುರಾಗಿದೆ.ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ಎನ್ನುವುದರ ಬೆನ್ನಿಗೆ ಲಕ್ಷ ಲಕ್ಷ ಹಣದ ಪಿಂಡಿ ಕೆಲವು ಸಚಿವರು ಶಾಸಕರು ಮತ್ತು ರಾಜಕೀಯ ನಾಯಕರ ಕಿಸೆ ಸೇರುತ್ತಿದೆ.ಯಾವ ಮಟ್ಟಕ್ಕೆ ಎಂದರೆ ಪ್ರಮುಖ ಜಿಲ್ಲೆ,ಊರು ವಿವಿಧ ಕಛೇರಿಗಳಿಗೆ ಮತ್ತು ಪೊಲೀಸ್ ಠಾಣೆಗಳಿಗೆ ವರ್ಗಾವಣೆಯಾಗಲು ಒಂದೊಂದು ಸ್ಥಳಗಳಿಗೂ ಒಂದೊಂದು ರೀತಿಯ ದೊಡ್ಡ ಮಟ್ಟದ ರೇಟ್ ಫಿಕ್ಸ್ ಆಗಿದೆ ಅಷ್ಟು ಹಣ ಕೊಟ್ಟರಷ್ಟೆ ಆತ ಅ ಸ್ಥಳಕ್ಕೆ ವರ್ಗಾವಣೆಗೊಳ್ಳಲು ಸಾಧ್ಯ.!? ಇಲ್ಲಿ ಹಣಕೊಟ್ಟು ಅ ಸ್ಥಳಗಳಿಗೆ ಹೋಗಲೆ ಬೇಕು ಯಾಕೆ.?ಎಲ್ಲಿಗೆ ವರ್ಗಾವಣೆ ಮಾಡಿದರು ಕೇಲಸ ಮಾಡಬಹುದಲ್ಲಾ ಎನ್ನುವ ಪ್ರಶ್ನೆ ಕೂಡಾ ನಮ್ಮಲ್ಲಿ ಮೂಡುತ್ತದೆ.! ಅದಕ್ಕೆ ಕಾರಣವೂ ಇದೆ.! ಕೇಲವರು ಹಣ ಮಾಡಲೆಂದೆ ಅವರಿಗೆ ಬೇಕಾದ ಸ್ಥಳಗಳಿಗೆ ಲಕ್ಷ ಲಕ್ಷ ಹಣಕೊಟ್ಟು ವರ್ಗಾವಣೆ ಮಾಡಿಸಿಕೊಂಡರೆ ಇನ್ನೂ ಕೇಲವರು ತಮ್ಮ ಮಕ್ಕಳ ವಿಧ್ಯಾಭ್ಯಾಸ ಮತ್ತು ಹೆತ್ತವರು ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಸಾಲ ಮಾಡಿಯಾದರು ಲಕ್ಷಾಂತರ ರೂಪಾಯಿ ಹಣಕೊಟ್ಟು ವರ್ಗಾವಣೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.ಈ ಕಾರಣದಿಂದಲೇ ಲಂಚದ ಹಣಕ್ಕೆ ಕೈಯೊಡ್ಡುವ ಪರಿಸ್ಥಿತಿ ಅಧಿಕಾರಿಗಳ ವಲಯದಲ್ಲಿ ಎದುರಾಗಿದೆ.!ವರ್ಗಾವಣೆಯಾಗಲು ಲಕ್ಷಾಂತರ ರೂಪಾಯಿ ಹಣವನ್ನು ಕೆಲವು ಸಚಿವರು ಶಾಸಕರಿಗೆ ಕೊಟ್ಟು ವರ್ಗಾವಣೆಯಾಗಿ ಲಂಚದ ಹಣಕ್ಕೆ ಮುಲಾಜಿಲ್ಲದೆ ಕೈಯೊಡ್ಡುವಂತಾಗಿದೆ…ರಾಜಕಾರಣಿಗಳು ಮತ್ತು ಅಧಿಕಾರಿಗಳ ಲಂಚದ ದಾಹಕ್ಕೆ ಅಮಾಯಕ ಬಲಿಯಾಗುತ್ತಿದ್ದಾನೆ ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ರೂಪಾಯಿ ಲಂಚಕೊಟ್ಟು ವರ್ಗಾವಣೆಯಾಗಿ ಬಂದ ಅಧಿಕಾರಿಗಳಲ್ಲಿ ಪ್ರಾಮಾಣಿಕರು ಲಂಚಕ್ಕೆ ಕೈಯೊಡ್ಡಲು ಮುಂದಾಗಿದ್ದಾರೆ.ಕಾರಣ ಲಕ್ಷಾಂತರ ರೂಪಾಯಿ ಸಾಲಮಾಡಿ ಕೇಲವು ಸಚಿವರು ಶಾಸಕರಿಗೆ ಕೊಟ್ಟಿರುತ್ತಾರೆ ಕೊಟ್ಟ ಹಣವನ್ನು ಗಳಿಸುವ ಹಾದಿಯಲ್ಲಿ ಮುಲಾಜಿಲ್ಲದೆ ಲಂಚಕ್ಕೆ ಕೈಯೊಡ್ಡುತ್ತಿದ್ದಾರೆ.ಈ ಕಾರಣದಿಂದಲೇ ರಾಜ್ಯದ ಉದ್ದಗಲಕ್ಕೂ ಲಂಚದ ಘಮಲು ಮುಗಿಲು ಮುಟ್ಟಿದೆ ಯಾವುದೇ ಕೆಲಸವು ಕಾಸಿಲ್ಲದೆ ನೆಡೆಯುತ್ತಿಲ್ಲ. ಈ ಹಾದಿಯಲ್ಲೆ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜು ಕೂಡ ಲಂಚದ ಹಣಕ್ಕೆ ಕೈಯೊಡ್ಡಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರ.? ಇನ್ಸ್ಪೆಕ್ಟರ್ ಗೋವಿಂದರಾಜು ಕೂಡ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬರಲು ಯಾವುದೊ ಸಚಿವನಿಗೋ, ಶಾಸಕನಿಗೋ ರಾಜಕೀಯ ನಾಯಕನಿಗೋ ಕೋಟಿ ಹಣ ಕೊಟ್ಟು ಬಂದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.!? ಸಾಲ ಮಾಡಿಕೊಟ್ಟ ಕೋಟಿ ಹಣವನ್ನು ಗಳಿಸಲು ಲಕ್ಷಾಂತರ ರೂಪಾಯಿ ಲಂಚದ ಹಣಕ್ಕೆ ಕೈಯೊಡ್ಡಿ ಬಿಟ್ರಾ.? ಇನ್ಸ್ಪೆಕ್ಟರ್ ಗೋವಿಂದರಾಜು.. ಇನ್ನೂ ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ದೊಡ್ಡಮಟ್ಟದ ವರ್ಗಾವಣೆ ದಂಧೆ ನೆಡೆಯುತ್ತದೆ.. ಒಂದೊಂದು ಜಿಲ್ಲೆ ಒಂದೊಂದು ಠಾಣೆಗೂ ಒಂದೊಂದು ರೇಟ್ ಫಿಕ್ಸ್ ಆಗಿದೆ ದೊಡ್ಡಮಟ್ಟದ ಕ್ರೈಮ್.. ಅಕ್ರಮ ದಂಧೆ.ಅವ್ಯವಹಾರ ಜೂಜು ನೆಡೆಯುವಂತಹ ಸರಹದ್ದಿನ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬರಬೇಕೆಂದರೆ ಅ ಜಿಲ್ಲೆಯ ಉಸ್ತುವಾರಿ ಸಚಿವನಿಗೊ ಅಥವಾ ಅ ಕ್ಷೇತ್ರದ ಶಾಸಕನಿಗೊ ಅವರ ಮಕ್ಕಳಿಗೊ ಅಥವಾ ಬಲಗೈ ಬಂಟರಿಗೊ ಲಕ್ಷಾಂತರ ರೂಪಾಯಿ ಹಣಕೊಟ್ಟು ವರ್ಗಾವಣೆಯಾಗಿ ಬರಬೇಕಾಗಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಗಾವಣೆಗೆ ಕೊಟ್ಟಂತಹ ಹಣ ಮರಳಿ ಗಳಿಸಲು ಅಧಿಕಾರಿಗಳು ಲಂಚದ ಹಣಕ್ಕೆ ಕೈಯೊಡ್ಡುತ್ತಿದ್ದಾರೆ. ತಮ್ಮ ಸುಂದರವಾದ ಬದುಕನ್ನು ತಮ್ಮ ಕೈಯಾರ ನಾಶ ಮಾಡಿಕೊಳ್ಳುತ್ತಿದ್ದಾರೆ….


