
ಚಾಮರಾಜನಗರ: ಲೋಕಾಯುಕ್ತ ದಾಳಿ, ಬೈಕ್ ಸವಾರನಿಂದ ಮೂರು ಸಾವಿರ ಲಂಚಕ್ಕೆ ಕೈ ಒಡ್ಡಿ ಲೋಕಾಯುಕ್ತರ ಬಲೆಗೆ ಬಿದ್ದ ಪೊಲೀಸಪ್ಪ.!

news.ashwasurya.in
ಅಶ್ವಸೂರ್ಯ/ ಚಾಮರಾಜನಗರ : ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಮಲ್ಲು ತಾವು ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ಸವಾರನಿಂದ ₹3,000 ಲಂಚಕ್ಕೆ ಕೈ ಒಡ್ಡಿದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ..
ಚಾಮರಾಜನಗರದಲ್ಲಿ ಮಲ್ಲು ಎನ್ನುವ ಹಣಕ್ಕಾಗಿ ಜೊಲ್ಲು ಸುರಿಸುವ ಸಂಚಾರಿ ಪೊಲೀಸಪ್ಪ ಪವಿತ್ರವಾದ ಕರ್ತವ್ಯವನ್ನು ಮರೆತು ಲಂಚದ ಹಣಕ್ಕಾಗಿ ಡಿಮಾಂಡ್ ಮಾಡಿ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದು ಖಾಕಿ ಕಳಚುವಂತಾಗಿದೆ. ಸಾರ್ವಜನಿಕರ ಸೇವೆಯಲ್ಲಿರಬೇಕಾದ ಟ್ರಾಫಿಕ್ ಪೊಲೀಸರೇ ಈ ರೀತಿ ಸುಲಿಗೆಗಿಳಿದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಲಂಚಾವತಾರ ಸಿಲಿಕಾನ್ ಸಿಟಿಗೆ ಮಾತ್ರ ಸಿಮೀತವಾಗಿಲ್ಲ.!
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸುಗಮ ಸಂಚಾರಕ್ಕೆ ಹಾದಿ ಮಾಡಿಕೊಡಬೇಕಾದ ಟ್ರಾಫಿಕ್ ಪೊಲೀಸರೇ ವಾಹನ ಸವಾರರನ್ನು ಸುಲಿಗೆ ಮಾಡಲು ನಿಂತಿದ್ದಾರೆ.ಅದರಲ್ಲೂ ಸಿಗ್ನಲ್ ಕ್ಯಾಮರಾ ಅಳವಡಿಕೆ ಮಾಡಿರುವ ವೃತ್ತದಲ್ಲೆ ವಾಹನಗಳ ತಪಾಸಣೆಗೆ ಮುಂದಾಗಿ ವಾಹನ ಸಂಚಾರರಿಗೆ ದೊಡ್ಡ ತಲೆನೋವು ಉಂಟು ಮಾಡುತ್ತಿದ್ದಾರೆ. ಪ್ರತಿ ವಾಹನವೂ ಕೆಲವರಿಗಂತೂ ATM ನಂತೆ ಕಾಣುತ್ತಿವೆ ಏನೋ,ಪವಿತ್ರ ಖಾಕಿ ತೋಟ್ಟು ಸುಲಿಗೆಗೆ ಇಳಿದಿದ್ದಾರೆ.! ಭ್ರಷ್ಟಾಚಾರದ ಈ ಜಾಲ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ಶಿವಮೊಗ್ಗ, ಭದ್ರಾವತಿ,ಮೈಸೂರು ರಾಜ್ಯ ವ್ಯಾಪ್ತಿ ಹರಡಿಕೊಂಡಿದೆ.

ಕೇವಲ ಒಂದು ಬೈಕ್ ಬಿಡುಗಡೆಗೆ 3,000 ಸಾವಿರದ ಹಣದ ಬೇಡಿಕೆ ಇಟ್ಟಿದ್ದಾನೆ
ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಮಲ್ಲು ಎಂಬಾತ.! ಸಾರ್ವಜನಿಕರೊಬ್ಬರ ಬೈಕ್ ರಿಲೀಸ್ ಮಾಡಲು ಲಂಚದ ಬೇಡಿಕೆ ಇಟ್ಟಿದ್ದರು. ನಿಯಮಾನುಸಾರ ಕೆಲಸ ಮಾಡಿಕೊಡುವ ಬದಲು, ಬೈಕ್ ಬಿಟ್ಟುಕೊಡಲು ಮೂರು ಸಾವಿರ ರೂಪಾಯಿ ನೀಡುವಂತೆ ಡಿಮಾಂಡ್ ಮಾಡಿದ್ದಾನೆ.!?
ಹಣ ಪಿಕಲು ಬೆಳೆಗ್ಗೆ ಸಂತೋಷದಿಂದಲೆ ಮನೆ ಬಿಟ್ಟು ಕರ್ತವ್ಯಕ್ಕೆ ಬಂದ ಮಲ್ಲು ಜೊಲ್ಲು ಸೇರಿಸಿಕೊಂಡು ಹಣ ಪಡೆಯುವಾಗಲೇ ಲೋಕಾಯುಕ್ತ ದಾಳಿ ಖೆಡ್ಡಕ್ಕೆ ಕೆಡವಿ ಕೊಂಡಿದ್ದಾರೆ.!
ಲಂಚದ ಹಣದ ಸಮೇತ ಮಲ್ಲು ಅವರನ್ನು ಲೋಕಾಯುಕ್ತ ಪೊಲೀಸರ ತಂಡ ವಶಕ್ಕೆ ಪಡೆದಿದ್ದು, ಭ್ರಷ್ಟ ಪೊಲೀಸಪ್ಪನ ಲಂಚಾವತಾರ ಬಯಲಾಗಿದೆ.
ಇತ್ತೀಚಿನ ದಿನಗಳಲ್ಲಿ ಲೋಕಾಯುಕ್ತರು ರಾಜ್ಯದಲ್ಲಿ ಮೈಕೊಡವಿ ನಿಂತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತರು ಸಮರ ಸಾರಿದ್ದಾರೆ.
ಈ ಹಾದಿಯಲ್ಲಿ ಚಾಮರಾಜನಗರ ಲೋಕಾಯುಕ್ತ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿ ಪೊಲೀಸ್ ಮಲ್ಲು ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.


