ಬಟ್ವಾಳ : ಹತ್ಯೆಯಾದ ಲಾವಣ್ಯರ ಪಾರ್ಥೀವ ಶರೀರ ಮನೆ ಬಾಗಿಲಿಗೆ ಬಂದೊಡನೆ ಸಂಭಂದಿಕರು, ಸ್ನೇಹಿತರು, ಸ್ಥಳೀಯರ ಮುಗಿಲು ಮುಟ್ಟಿದ ಆಕ್ರಂದನ..!
ಹತ್ಯೆಯಾದ ಲಾವಣ್ಯರ ಪಾರ್ಥೀವ ಶರೀರ ಮನೆ ಬಾಗಿಲಿಗೆ ಬಂದೊಡನೆ ಸಂಭಂದಿಕರು, ಸ್ನೇಹಿತರು, ಸ್ಥಳೀಯರ ಮುಗಿಲು ಮುಟ್ಟಿದ ಆಕ್ರಂದನ..! ಮನೆ ಬಾಗಿಲಿಗೆ ಲಾವಣ್ಯರ ಪಾರ್ಥೀವ ಶರೀರ ತಲುಪುತ್ತಿದ್ದಂತೆ, ಅಲ್ಲಿ ನೆರೆದಿದ್ದ ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ಹಾಗೂ ಸ್ಥಳೀಯರ ಕಣ್ಣೀರಿನ ಕಟ್ಟೆ ಒಡೆಯಿತು.“ಇನ್ನೊಮ್ಮೆ ಕಣ್ಣು ತೆರೆಯಮ್ಮ…” ಎಂದು ತಾಯಿಯ ಹೃದಯವಿದ್ರಾವಕ ಆಕ್ರಂದನ, ತಂದೆಯ ಮೌನ ವೇದನೆ, ಸಹೋದರ-ಸಹೋದರಿಯರ ದುಃಖ, ಸ್ನೇಹಿತರ ಕಣ್ಣೀರು… ಇಡೀ ವಾತಾವರಣವನ್ನೇ ಮೌನಗೊಳಿಸಿತು.ನಗುವಿನಿಂದ ಕಂಗೊಳಿಸುತ್ತಿದ್ದ ಮನೆಯ ಅಂಗಳ, ಇಂದು ಕಣ್ಣೀರು ಮತ್ತು ನೋವಿನ ಸಾಗರವಾಗಿದೆ. ಪ್ರತಿಯೊಬ್ಬರ ಕಣ್ಣಲ್ಲೂ…
