ಶಿವಮೊಗ್ಗ : ಹಣಕಾಸು ವಿಚಾರಕ್ಕೆ ಕರೆಸಿಕೊಂಡು ಕುಳ್ಳಿ ಕಿರಣನ ಹತ್ಯೆಮಾಡಿದ ಹಂತಕರು.! ಆರೋಪಿ ಕಾಲಿಗೆ ಗುಂಡು ತೂರಿಸಿದ ಖಡಕ್ ಇನ್ಸ್ಪೆಕ್ಟರ್ ಕೆ ಟಿ ಗುರುರಾಜ್.ನಾಲ್ಕು ಮಂದಿ ಆರೋಪಿಗಳ ಬಂಧನ.
ಆರೋಪಿಗಳನ್ನು ಬಂಧಿಸುವ ವೇಳೆ ಪೋಲಿಸರ ಸುಳಿವರಿತ ಹಂತಕರ ಗ್ಯಾಂಗ್ ಏಕಾಏಕಿ ಅವರಿಂದ ತಪ್ಪಿಸಿಕೊಳ್ಳಲು ಪೋಲಿಸರ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಲು ಮುಂದಾಗಿದ್ದಾರೆ.ತಕ್ಷಣವೇ ಮುಂದಾಗಬಹುದಾದ ಅನಾಹುತದ ಹಿನ್ನಲೆಯಲ್ಲಿ ಪೊಲೀಸರ ರಕ್ಷಣೆಗಾಗಿ ಇನ್ಸ್ಪೆಕ್ಟರ್ ಗುರುರಾಜ್ ಅವರು ಆರೋಪಿಯ ಕಾಲಿಗೆ ಗುಂಡು ತೂರಿಸಿ ನಾಲ್ಕು ಮಂದಿ ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ….
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಕಳೆದ ಭಾನುವಾರ (ಸೇ,06) ರಾಮೇನಕೊಪ್ಪದ ಪ್ರದೇಶದಲ್ಲಿ ಸೀಗೆಹಟ್ಟಿಯ ಕುಳ್ಳಿ ಕಿರಣನ ಬರ್ಬರ ಹತ್ಯೆಯಾಗಿತ್ತು.ಕುಳ್ಳಿ ಕಿರಣನನ್ನು ಮಾರಕಾಸ್ತ್ರದಿಂದ ಮನಬಂದಂತೆ ಇರಿದ ನಾಲ್ಕು ಮಂದಿ ಹಂತಕರ ತಂಡ ಅಟ್ಯಾಕ್ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದರು.

ತುಂಗಾನಗರ ಠಾಣೆಯಲ್ಲಿ ಕಿರಣನ ಹತ್ಯೆಗೆ ಸಂಬಂದಿಸಿದಂತೆ ದೂರು ದಾಖಲಾಗುತ್ತಿದ್ದಂತೆ ಆರೋಪಿಗಳ ಹೆಡೆಮುರಿಕಟ್ಟಲು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ ಅವರ ಸೂಚನೆಯಂತೆ ಕಾರ್ಯಚರಣೆಗೆ ಇಳಿದ ಖಡಕ್ ಇನ್ಸ್ಪೆಕ್ಟರ್ ಗುರುರಾಜ್ ನೆತ್ರುತ್ವದ ಪೊಲೀಸರ ತಂಡ ಘಟನೆ ನೆಡೆದ ಕೇಲವೆ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಬಂಧಿಸುವ ವೇಳೆ ಪೋಲಿಸರ ಸುಳಿವರಿತ ಹಂತಕರ ಗ್ಯಾಂಗ್ ಏಕಾಏಕಿ ಅವರಿಂದ ತಪ್ಪಿಸಿಕೊಳ್ಳಲು ಪೋಲಿಸರ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಲು ಮುಂದಾಗಿದ್ದಾರೆ.ತಕ್ಷಣವೇ ಮುಂದಾಗಬಹುದಾದ ಅನಾಹುತದ ಹಿನ್ನಲೆಯಲ್ಲಿ ಪೊಲೀಸರ ರಕ್ಷಣೆಗಾಗಿ ಇನ್ಸ್ಪೆಕ್ಟರ್ ಗುರುರಾಜ್ ಅವರು ಆರೋಪಿಯ ಕಾಲಿಗೆ ಗುಂಡು ತೂರಿಸಿ ನಾಲ್ಕು ಮಂದಿ ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪೋಲಿಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳ ಹೇಳಿಕೆಯಂತೆ ಹಂತಕರ ಗ್ಯಾಂಗ್ ಮೊದಲೇ ಕಿರಣನಿಗೆ ಮುಹೊರ್ತವಿಟ್ಟು ತಾವು ನಿಗಧಿ ಪಡಿಸಿದ ಸ್ಥಳಕ್ಕೆ ನಿನ್ನ ಹತ್ತಿರ ಮಾತಾಡಬೇಕೆಂದು ಕರೆಸಿಕೊಂಡಿದ್ದಾರೆ ಆರೋಪಿ ಉಮೇಶ ಮತ್ತು ಕಿರಣನ ನಡುವೆ ಈ ಮೊದಲೇ ಹಣಕಾಸಿನ ವಿಚಾರವಾಗಿ ಸಾಕಷ್ಟು ಬಾರಿ ಕಿರಿಕ್ ಆಗಿದೆ.ಹತ್ಯೆಯಾದ ಕಿರಣ ಆರೋಪಿಗಳ ಹೇಳಿದ ಸ್ಥಳಕ್ಕೆ ಹೋಗಿದ್ದಾನೆ ಅಲ್ಲಿ ಮಾತಿನ ನಡುವೆ ಜಗಳ ವಾಗಿದೆ. ಮೊದಲೇ ಸ್ಕೇಚ್ ಹಾಕಿದ್ದ ಉಮೇಶನ ಗ್ಯಾಂಗ್ ಮಾತಿನ ನಡುವೆ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ದಾರೆ. ಹಂತಕರ ದಾಳಿಗೆ ಕುಳ್ಳಿ ಕಿರಣ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಉಸಿರು ಚಲ್ಲಿದ್ದಾನೆ.

ಕುಳ್ಳಿ ಕಿರಣನ ಹತ್ಯೆ ಹಣಕಾಸಿನ ವ್ಯವಹಾರಕ್ಕೆ ಸಂಭವಿಸಿದಂತೆ ಅಂತ್ಯವಾಗಿದೆ.ತುಂಗಾನಗರ ಪೊಲೀಸರು ಆರೋಪಿಗಳನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಿದ್ದು ಮತ್ತಷ್ಟು ಮಾಹಿತಿ ಹೊರ ಬರಬೇಕಿದೆ.

ಅದನೇ ಇರಲಿ ಶಿವಮೊಗ್ಗ ನಗರದ ಪಾತಕ ಲೋಕದಲ್ಲಿ ನಡುಕ ಹುಟ್ಟಿದೆ,ರೌಡಿಶೀಟರ್ ಗಳು ಮತ್ತು ಕ್ರಿಮಿನಲ್ ಗಳಿಗೆ ಪೊಲೀಸರ ಗುಂಡಿನಸದ್ದು ನಿದ್ದೆ ಗೇಡಿಸುದೆ.ಇತ್ತೀಚಿನ ದಿನಗಳಲ್ಲಿ ಪೊಲೀಸರ ನಿರ್ಧಾರವು ಸರಿಯಾಗಿದ್ದು ಒಂದಷ್ಟು ಮಟ್ಟಿಗೆ ಪಾತಕೀಗಳು ಮತ್ತು ಕ್ರಿಮಿನಲ್ಗಳು ಸೈಲೆಂಟ್ ಆಗಿದ್ದಾರೆ.ಅವರಿಗೂ ಅರಿವಾಗಿದೆ ಬಾಲಬಿಚ್ಚಿದರೆ ಪೊಲೀಸರ ಗುಂಡು ಮೋರೆಯುತ್ತದೆ ಎಂದು..


