ಶಿವಮೊಗ್ಗ : ರಾಮೇನಕೊಪ್ಪದಲ್ಲಿ ಹಂತಕರ ಅಟ್ಟಹಾಸ ಸೀಗೆಹಟ್ಟಿ ಕುಳ್ಳಿ ಕಿರಣನ ಬರ್ಬರ ಹತ್ಯೆ.! ಈ ಹತ್ಯೆಯ ಹಿಂದಿನ ಹಂತಕರು ಯಾರು.!
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದ ಕೂಗಳತೆ ದೂರದಲ್ಲಿರುವ ರಾಮೇನಕೊಪ್ಪದಲ್ಲಿ ನೆತ್ತರು ಹರಿದಿದೆ.! ಈ ಅಟ್ಯಾಕ್ ನಲ್ಲಿ ಸೀಗೆಹಟ್ಟಿ ಮೂಲದ ಕಿರಣ್ ಅಲಿಯಾಸ್ ಕುಳ್ಳಿ ಕಿರಣ ಉಸಿರು ಚಲ್ಲಿದ್ದಾನೆ, ರಾಮೇನಕೊಪ್ಪದ ಸರಹದ್ದಿನಲ್ಲಿ ಕುಳ್ಳಿ ಕಿರಣ್ ಎಂಬಾತನ ಹತ್ಯೆಗೆ ಹಣಕಾಸು ವಿಚಾರವೆ ಕಾರಣ ಎಂದು ಎಂದು ಹೇಳುತ್ತಿದ್ದರು ಆತನ ಮೇಲೆ ನೆಡೆದ ಅಟ್ಯಾಕ್ ನ ಗಮನಿಸಿದರೆ ಇದು ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕಿರಣ್ ಹತ್ಯೆ ನೆಡೆದಿರಬಹುದಾ ಎನ್ನುವ ಅನುಮಾನ ಕೂಡ ಬಲವಾಗಿದೆ.? ಆತನ ಮೇಲೆ ಹಂತಕರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದ್ದರು ಚಾಕುವಿನಿಂದ ಈ ರೀತಿಯ ಅಟ್ಯಾಕ್ ಮಾಡಲು ಸಾಧ್ಯವೇ ಆತನ ದೇಹದ ಮೇಲಾದ ಆಳವಾದ ಗಾಯಗಳೆ ಬೇರೆಯದೆ ಹತಾರಗಳು ಕಿರಣ್ ಹತ್ಯೆಯಲ್ಲಿ ಬಳಸಿರ ಬಹುದಾ ಎನ್ನುವ ಅನುಮಾನ ಕೂಡ ಕಾಡುತ್ತಿದೆ ಇದು ಪೊಲೀಸರ ತನಿಖೆಯಿಂದಷ್ಟೆ ಬಯಲಾಗಬೇಕಿದೆ. ಈ ಹತ್ಯೆಯ ಹಿಂದೆ 3 ರಿಂದ 4 ಮಂದಿ ಭಾಗಿಯಾಗಿರುವ ಸಾಧ್ಯತೆ ಇರಬಹುದು ಎಂದು ಶಂಕಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು ಆರೋಪಿಗಳ ಪತ್ತೆಗೆ ಪೊಲೀಸರ ತಂಡ ಕಾರ್ಯಚರಣೆಗೆ ಇಳಿದಿದೆ.ಇನ್ನೂ ಕೊಲೆಗೆ ನಿಖರ ಕಾರಣ ಏನೆಂದು ಆರೋಪಿಗಳ ಬಂಧನದ ನಂತರ ಬಯಲಾಗಲಿದೆ.

ರಾಮೇನಕೊಪ್ಪದ ಸರಹದ್ದಿನಲ್ಲಿ ಕುಳ್ಳಿ ಕಿರಣ್ನ ಎದೆಗೆ ಮತ್ತು ಮುಖಕ್ಕೆ ಮಾರಕಾಸ್ತ್ರದಿಂದ ಬಲವಾಗಿ ಇರಿಯಲಾಗಿದ್ದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಿರಣವನ್ನು ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಸಾವಿಗೆ ಶರಣಾಗಿದ್ದಾನೆ.ಈ ಹತ್ಯೆಯ ಹಿಂದೆ ಡಿಯೋ ಉಮೇಶ್ ಎಂಬಾತನ ಗ್ಯಾಂಗ್ ಇರಬಹುದೆಂದು ಶಂಕಿಸಲಾಗಿದೆ. ಈ ಹತ್ಯೆಯನ್ನು ಗಮನಿಸಿದರೆ ಹಣಕಾಸು ವಿಚಾರ ಎನ್ನುವುದಕ್ಕಿಂತ ಇದೊಂದು ಪ್ಲಾನ್ಡ್ ಮರ್ಡರ್ ಎನ್ನುವಂತಿದೆ..ಹಳೆಯ ವೈಷಮ್ಯಕ್ಕೆ ಈ ಹತ್ಯೆ ನೆಡೆದಿದೆ ಇದು ಗ್ಯಾಂಗ್ ವಾರ್ ಇರಬಹುದಾ ಎನ್ನುವ ಅನುಮಾನ ಕೂಡ ಈ ಹತ್ಯೆಯ ಭೀಕರತೆಯನ್ನು ನೋಡಿದ ಪ್ರತಿಯೊಬ್ಬರನ್ನೂ ಕಾಡುತ್ತಿದೆ.
ಅದೇನೆ ಇರಲಿ ತಣ್ಣಗೆ ಹೊದ್ದು ಮಲಗಿದ್ದ ಶಿವಮೊಗ್ಗದ ಪಾತಕ ಜಗತ್ತು ಮತ್ತೆ ಮಚ್ಚು ಮಸೆದಿದೀಯಾ….
ಈ ಹತ್ಯೆಯ ಹಿಂದಿನ ಅಸಲಿ ಸತ್ಯ ಸಧ್ಯದಲ್ಲೆ ಹೊರಬಿಳಲಿದೆ ಪತ್ರಿಕೆ ಕೂಡ ಈ ಹಾದಿಯಲ್ಲಿ ಒಂದಷ್ಟು ಮಾಹಿತಿ ಕಲೆಹಾಕಲು ಮುಂದಾಗಿದೆ ಎಲ್ಲವನ್ನೂ ನಿರೀಕ್ಷಿಸಿ…..


