
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ” ಮಲೆನಾಡು ಸಿರಿ” ಸಹಕಾರಿ ಸಂಘದ ಅದ್ದೂರಿ ಆರಂಭ — ಆಗಸ್ಟ್ 31ರಂದು ಭವ್ಯ ಉದ್ಘಾಟನೆ.
news.ashwasurya.in
ಅಶ್ವಸೂರ್ಯ/ತೀರ್ಥಹಳ್ಳಿ : ಮಲೆನಾಡಿನ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಬಲ ತುಂಬುವ ಉದ್ದೇಶದೊಂದಿಗೆ ತೀರ್ಥಹಳ್ಳಿಯಲ್ಲಿ “ಮಲೆನಾಡು ಸಿರಿ” ಸೌಹಾರ್ದ ಸಹಕಾರಿ ಸಂಘ ನಿಯಮಿತ’ವು ತನ್ನ ಕಾರ್ಯಚಟುವಟಿಕೆಗಳಿಗೆ ಅಧಿಕೃತವಾಗಿ ಚಾಲನೆ ನೀಡಲು ಸಜ್ಜಾಗಿದೆ. ಸಂಘದ ಉದ್ಘಾಟನಾ ಸಮಾರಂಭವು ಆಗಸ್ಟ್ 31, 2026ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ತೀರ್ಥಹಳ್ಳಿಯ ಸುವರ್ಣ ಸಹಕಾರ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ “ಶ್ರೀ ಪ್ರಸನ್ನನಾಥ ಸ್ವಾಮೀಜಿ” ದಿವ್ಯ ಸಾನಿಧ್ಯ ವಹಿಸಿ ಸಹಕಾರಿ ಸಂಘವನ್ನು ಉದ್ಘಾಟಿಸಲಿದ್ದಾರೆ.

ಸಮಾರಂಭದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವರು ಹಾಗೂ ಮಾಜಿ ಶಾಸಕರಾದ ಶ್ರೀ ಕಿಮ್ಮನೆ ರತ್ನಾಕರ್, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಹಾಲಿ ಅಧ್ಯಕ್ಷರು ಹಾಗೂ ಡಿ.ಸಿ.ಸಿ. ಬ್ಯಾಂಕ್ ಶಿವಮೊಗ್ಗದ ನಿರ್ದೇಶಕರಾದ ಡಾ. ಆರ್.ಎಂ. ಮಂಜುನಾಥಗೌಡ, ತೀರ್ಥಹಳ್ಳಿ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾದ ಶ್ರೀ ಹೆಚ್.ಎನ್. ವಿಜಯದೇವ್, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಸಹಕಾರಿಗಳ ಉಪ ನಿಬಂಧಕರಾದ ಶ್ರೀ ನಾಗಭೂಷಣ್ ಚಂದ್ರಶೇಖರ ಕಲ್ಮನೆ ಅವರು ಉಪಸ್ಥಿತರಿರಲಿದ್ದಾರೆ.
ಸಂಘದ ಅಧ್ಯಕ್ಷರಾದ ಶ್ರೀ ಬಾಳೆಹಳ್ಳಿ ಪ್ರಭಾಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಆಡಳಿತ ಮಂಡಳಿಯ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸಿಬ್ಬಂದಿ ಕಾರ್ಯಕ್ರಮದ ಯಶಸ್ಸಿಗಾಗಿ ಸಿದ್ಧತೆ ನಡೆಸಿದ್ದಾರೆ.

“ಸಹಕಾರ, ಸಮರ್ಪಣೆ, ಸೇವೆ – ನಮ್ಮ ಗುರಿ”
ಸದಸ್ಯರ ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ಸಂಘವು ವಿವಿಧ ಉಳಿತಾಯ ಹಾಗೂ ಸಾಲ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದೆ. ಸದಸ್ಯರ ಉಳಿತಾಯ ಖಾತೆ, ನಿತ್ಯ ನಿಧಿ ಸಂಗ್ರಹ, ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ಸಾಲ, ಗೃಹ ನಿರ್ಮಾಣ ಮತ್ತು ಖರೀದಿ ಸಾಲ, ನಿವೇಶನ ಖರೀದಿ ಸಾಲ, ಸ್ಥಿರಾಸ್ತಿ ಆಧಾರಿತ ಸಾಲ, ಚಾಮೀನು ಸಾಲ, ವೇತನ ಆಧಾರಿತ ಸಾಲ ಸೇರಿದಂತೆ ಹಲವು ಸೌಲಭ್ಯಗಳನ್ನು ಸಂಘದ ಮೂಲಕ ಪಡೆಯಬಹುದಾಗಿದೆ.
ಇದರ ಜೊತೆಗೆ ನಿಶ್ಚಿತ ಠೇವಣಿಗಳಿಗೆ ಆಕರ್ಷಕ ಬಡ್ಡಿದರಗಳನ್ನು ಪ್ರಕಟಿಸಲಾಗಿದೆ. 91ರಿಂದ 180 ದಿನಗಳ ಠೇವಣಿಗೆ ಶೇ.6, ಒಂದು ವರ್ಷದ ಠೇವಣಿಗೆ ಶೇ.9 ಹಾಗೂ ಎರಡು ವರ್ಷದ ಠೇವಣಿಗೆ ಶೇ.9.5 ಬಡ್ಡಿದರ ನೀಡುವುದಾಗಿ ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ.
ಸದಸ್ಯರಿಗೆ ವಿಶೇಷ ಸೂಚನೆ :
ಉದ್ಘಾಟನಾ ಸಮಾರಂಭದ ದಿನವೇ ಎಲ್ಲಾ ಸದಸ್ಯರಿಗೆ ಷೇರು ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿ (ಐಡಿ ಕಾರ್ಡ್)ಯನ್ನು ವಿತರಿಸಲಾಗುವುದರಿಂದ ಸದಸ್ಯರು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವುಗಳನ್ನು ಪಡೆದುಕೊಳ್ಳುವಂತೆ ಸಂಘದ ಆಡಳಿತ ಮಂಡಳಿ ಮನವಿ ಮಾಡಿದೆ.
ತೀರ್ಥಹಳ್ಳಿ ಹಾಗೂ ಸುತ್ತಮುತ್ತಲಿನ ಜನರ ಆರ್ಥಿಕ ಅಗತ್ಯಗಳಿಗೆ ಸಹಕಾರಿ ತತ್ವದಡಿ ಸ್ಪಂದಿಸುವ ಆಶಯದೊಂದಿಗೆ ಆರಂಭವಾಗುತ್ತಿರುವ ಮಲೆನಾಡು ಸಿರಿ ಸೌಹಾರ್ದ ಸಹಕಾರಿ ಸಂಘ, ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಹೊಸ ವೇದಿಕೆಯಾಗುವ ನಿರೀಕ್ಷೆ ಮೂಡಿಸಿದೆ.
“ಸದಸ್ಯರ ಸಹಕಾರವೇ ಸಂಘದ ಶಕ್ತಿ; ಸಂಘದ ಅಭಿವೃದ್ಧಿಯೇ ಸದಸ್ಯರ ಅಭಿವೃದ್ಧಿ” ಎಂಬ ಆಶಯದೊಂದಿಗೆ ಸಂಘವು ತನ್ನ ಪಯಣ ಆರಂಭಿಸುತ್ತಿದೆ.

ಆಡಳಿತ ಮಂಡಳಿ :
- ಬಾಳೆಹಳ್ಳಿ ಪ್ರಭಾಕರ್ ಅಧ್ಯಕ್ಷರು,
- ಬಂಡೆ ವೆಂಕಟೇಶ್ ಯು.ಡಿ. ಉಪಾಧ್ಯಕ್ಷರು,
- ವಿಶ್ವನಾಥ್ ಹೊಳೆಕೊಪ್ಪ ನಿರ್ದೇಶಕರು,
- ಕೆ.ಸಿ. ವೀರೇಂದ್ರ ಕೆರೆಕೊಪ್ಪ ನಿರ್ದೇಶಕರು,
- ಜಿ.ಎನ್. ಪ್ರಕಾಶ್, ತನಿಕಲ್, ನಿರ್ದೇಶಕರು,
- ಅರುಣ್ ಶಂಕರಮನೆ ನಿರ್ದೇಶಕರು,
- ಸತೀಶ್ ಬಿಕ್ಕೊಳ್ಳಿ ನಿರ್ದೇಶಕರು,
- ವಿಜೇತ್ ಹೆಚ್.ವಿ. ನಿರ್ದೇಶಕರು,
- ಶರತ್ಕುಮಾರ್ ಕೆ.ಕೆ. ನಿರ್ದೇಶಕರು,
- ಧನ್ಯ ಅಶ್ವಲ್ ಹಿಂಚುವಳ್ಳಿ, ನಿರ್ದೇಶಕರು,
- ಪಾವನ ಪೃಥ್ವಿ ಮಲ್ಲೇಸರ, ನಿರ್ದೇಶಕರು,
- ಟಿ.ವಿ. ರಾಮಚಂದ್ರ ನಿರ್ದೇಶಕರು,
- ಮಂಜುನಾಥ ಬಿ.ಹೆಚ್. ನಿರ್ದೇಶಕರು,
- ಸುಧೀರ್ ಹೆಗ್ಗೋಡು ನಾಮ ನಿರ್ದೇಶಿತ ನಿರ್ದೇಶಕರು,
- ರವೀಶ್ ಬಾಳೆಹಳ್ಳಿ ನಾಮ ನಿರ್ದೇಶಿತ ನಿರ್ದೇಶಕರು,
- ದೇವರಾಜ್ ಎಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿ,
- ಹರ್ಷಿತಾ ಸಹಾಯಕರು,
ಸಹಕಾರ, ಸಮರ್ಪಣೆ, ಸೇವೆ – ನಮ್ಮ ಗುರಿ
ಸ್ಥಳ: ಸುವರ್ಣ ಸಹಕಾರ ಭವನ, ತೀರ್ಥಹಳ್ಳಿ
ದಿನಾಂಕ: 31-08-2026, ಸೋಮವಾರ
ಸಮಯ: ಬೆಳಿಗ್ಗೆ 11.00 ಗಂಟೆ
🌹 🌹 ಸರ್ವರಿಗೂ ಆದರದ ಸುಸ್ವಾಗತ. 🌹🌹

